Advertisement

Category: ಸರಣಿ

ಕಣ್ಣ ಮುಂದೆ ಕುಳಿತ ಸಾವು ಕರಗಿತ್ತು..: ರಂಜಾನ್‌ ದರ್ಗಾ ಸರಣಿ

ರಹಮಾನ್ ಖಾನ್ ಅದೇನೋ ಹೇಳಿದ. ನಂತರ ನನಗೆ ಮಾತನಾಡಲು ತಿಳಿಸಿದ. ಅದು ನನ್ನ ಕೊನೆಯ ಭಾಷಣ ಎಂದು ಭಾವಿಸಿದೆ. ಬದುಕುಳಿಯುವ ಯಾವ ಸಾಧ್ಯತೆಯೂ ಇಲ್ಲ ಎನಿಸಿತು. ಅವರೆಲ್ಲ ‘ಏನು ಮಾತನಾಡ್ತಿಯೋ ನೋಡೋಣ’ ಎಂದು ಅಂದುಕೊಂಡವರ ಹಾಗೆ ಕುಳಿತಿದ್ದರು. ಅಂದೇ ಪ್ರಕಟವಾದ ಸಾಪ್ತಾಹಿಕ ಪುರವಣಿಯ ಪ್ರತಿ ಕೈಯಲ್ಲಿತ್ತು. ಆ ನನ್ನ ಲೇಖನ ಇಡೀ ಮುಖಪುಟ ತುಂಬಿತ್ತು. ಮೇಲೆ ಕೆಂಪು ಬಣ್ಣದಲ್ಲಿ ಕಲಾವಿದ ಸೂರಿ ಬರೆದ ಮುಸ್ಲಿಂ ಮಹಿಳೆಯ ಚಿತ್ರ ಲೇಖನದಲ್ಲಿನ ನೋವಿಗೆ ಪೂರಕವಾಗಿದ್ದು ಹೃದಯಸ್ಪರ್ಶಿಯಾಗಿತ್ತು.  ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ಸರಣಿ

Read More

ಮೊದ್ಲು ಕಾರ್‌ ಓಡ್ಸಿದ್ದು ಯಾರ್‌ ಗೊತ್ತಾ?!: ಗುರುದತ್ ಅಮೃತಾಪುರ ಸರಣಿ

ಕಾರ್ಲ್ ಬೆಂಜ್ ತನ್ನ ಪರಿಶ್ರಮದಿಂದ ನಿರ್ಮಿಸಿದ ಚಲಿಸುವ ವಾಹನದ ಬಗ್ಗೆ ಅವನಿಗೆ ಅನುಮಾನವಿತ್ತು. ಜೊತೆಗೆ ಸ್ಪಾರ್ಕ್ ಪ್ಲಗ್, ಬ್ಯಾಟರಿ ತಂತ್ರಜ್ಞಾನ ಇನ್ನೂ ಇರದ ಕಾರಣ, ನಿಂತಲ್ಲೇ ಕಾರನ್ನು ಪ್ರಾರಂಭಿಸಲು ಸಾಧ್ಯವಿರಲಿಲ್ಲ. ಈ ಕಾರಿಗೆ ಸ್ಟಿಯರಿಂಗ್ ಕೂಡ ಇಲ್ಲ. ದಿಕ್ಕು ಬದಲಾಯಿಸಲು ಸೈಕಲ್ ಗಾಲಿಗೆ ಕೊಡುವ ರೀತಿಯ ಒಂದು ಹತೋಟಿ ಮಾತ್ರ ಇದೆ.
“ದೂರದ ಹಸಿರು” ಸರಣಿಯಲ್ಲಿ ಜೆರ್ಮನಿಯ ಕಾರು ಸಂಗ್ರಹಾಲಯದ ಕುರಿತು ಗುರುದತ್ ಅಮೃತಾಪುರ ಬರಹ

Read More

ಡಾ. ಚಂದ್ರಮತಿ ಸೋಂದಾ ಬರೆಯುವ ಸರಣಿ “ಮಾತು ಮಂದಲಿಗೆ” ಆರಂಭ

ಅದೃಷ್ಟದ ಪೆನ್ನು ಎಂದು ತಮ್ಮ ಪೆನ್ನಿನ ಬಗ್ಗೆ ಬಹಳ ಮುತುವರ್ಜಿವಹಿಸುವುದೂ ಇದೆ. ಅದೇನಾದರೂ ಕಳೆದುಹೋಯಿತು ಅಂದ್ರೆ ಆಗ ನೋಡಬೇಕು ಭೂಮಿ ಆಕಾಶ ಒಂದು ಮಾಡುವ ಥರಾ ಕೂಗಾಡುವುದನ್ನು. ಸಿಗಲಿಲ್ಲ ಅಂದರೆ ಮನೆಮಂದಿಗೆಲ್ಲ ಮಂತ್ರಾಕ್ಷತೆ ಬೇರೆ. ಅವರ ಅವತಾರ ನೋಡಿದ್ರೆ ಏನೋ ಆಗಬಾರದ್ದು ಆಗಿದೆ ಅನ್ನುವ ರೀತಿ ನಡವಳಿಕೆ. ಪೆನ್ನು ಕೈಗೆ ಬಂತು ಅಂದರೆ ಎಲ್ಲವೂ ತಣ್ಣಗೆ. ಕೆಲವರ ಸಹಿಯನ್ನಂತೂ ಯಾರಿಗೂ ನಕಲು ಮಾಡಲು ಆಗದಂತಹುದು.
ಡಾ. ಚಂದ್ರಮತಿ ಸೋಂದಾ ಬರೆಯುವ ಹಳೆ ಕಾಲದ ನೆನಪುಗಳ ಸರಣಿ “ಮಾತು ಮಂದಲಿಗೆ” ಇಂದಿನಿಂದ ಮೂರುವಾರಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ

Read More

ಮಾವಿನ ತೋಪಿನ ಎರಡು ಕತೆಗಳು: ಮಾರುತಿ ಗೋಪಿಕುಂಟೆ ಸರಣಿ

ಅವನು ಓಡುವುದರಲ್ಲಿ ಯಾವಾಗಲೂ ಪ್ರಥಮ.. ಹಾಗಾಗಿ ಅವನೇನೊ ತಪ್ಪಿಸಿಕೊಂಡ. ಮರವನ್ನು ಹತ್ತುವುದರಲ್ಲಿ ಅಂತಹ ಅನುಭವವೇನು ಇಲ್ಲದ ನಾನು ನಿಧಾನವಾಗಿ ಮರ ಇಳಿಯುವುದರಲ್ಲಿ ಸಿಕ್ತಿಮ್ಮಜ್ಜ ಹತ್ತಿರವಾಗಿದ್ದ. ಅವನು ಹತ್ತಿರ ಬರುವುದು ಕಂಡದ್ದೇ ಎದೆಬಡಿತ ಜೋರಾಗಿತ್ತು. ಕೈ ಕಾಲುಗಳು ನಡುಗಲು ಪ್ರಾರಂಭಿಸಿದ್ದವು. ನನಗೆ ಬೇರೆ ದಾರಿ ಇರಲಿಲ್ಲ. ನಾನು ಮರದಿಂದ ಇಳಿಯಲಿಲ್ಲ, ಬದಲು ಅದರ ಮಧ್ಯದಲ್ಲಿ ಅವಿತುಕೊಂಡೆ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಏಳನೆಯ ಕಂತು ನಿಮ್ಮ ಓದಿಗೆ

Read More

ರಾತ್ರಿ ತೀರಿಕೊಂಡ ತಾತ ಬೆಳಗ್ಗೆ ಎದ್ದು ಬಂದಿದ್ದರು!

ಎಲ್ಲರೂ ಕೂತು ತೂಕಡಿಸುತ್ತಾ ಇದ್ದೀವಿ. ಊರುಗೋಲು ಟಕ್ ಟಕ್ ಎಂದು ಹೆಜ್ಜೆ ಸಮೇತ ಶಬ್ದ ಕೇಳಿಸಿತು. ಕಣ್ಣು ಬಿಟ್ಟು ನೋಡಿದರೆ ಅದೇನು ಆಶ್ಚರ್ಯ ಅಂತೀರಿ… ತಾತ ಕೋಲು ಊರಿಕೊಂಡು ಬಚ್ಚಲಿಗೆ ಹೋಗುತ್ತಿದ್ದಾರೆ! ತಾತ ಬದುಕಿದೆ, ಸತ್ತಿಲ್ಲ. ಖುಷಿಯಿಂದ ಮೊಮ್ಮಕ್ಕಳು ಕುಣಿದಾಡಿದರು. ದೊಡ್ಡವರೂ ಸಹ ದೊಡ್ಡ ನಿಟ್ಟುಸಿರುಬಿಟ್ಟು ಮುಖದಲ್ಲಿ ನಗು ತಂದುಕೊಂಡರು. ಬೆಳಿಗ್ಗೆ ಎದ್ದ ಕೂಡಲೇ ಡಾಕ್ಟರ ಮನೆಗೆ ನನ್ನನ್ನೇ ಕಳಿಸಿದರು. ತಾತ ಬದುಕಿದೆ, ಹೀಗೆ ರಾತ್ರಿ ಒಂದೂವರೆಗೆ ಅವರೇ ಎದ್ದು ಒಂದಕ್ಕೆ ಹೋದರು ಅಂತ ಹಾವಭಾವ ಸಮೇತ ವಿವರಿಸಿದೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಏಳನೆಯ ಕಂತು ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ