Advertisement

Tag: ಅಂಕಣ

ಅಹಮ್ಮಿಗೊಂದು ಪೆಟ್ಟು ಕೊಡುವ ಸಮಯ…: ಜಯಲಕ್ಷ್ಮಿ ಪಾಟೀಲ್ ಅಂಕಣ

“ಒಮ್ಮೆ ಬ್ಯಾಸಿಗಿ ಮದ್ಯಾನದಾಗ ಆಯಿ ಹಳ್ಳಕ್ಕ ನೀರ ತರಾಕ ಹೋಗಿ, ಜೋಡಗೊಡಾ ಹೊತ್ತು ಹೊಡಮಳ್ಳಿ ಬರೂದ್ರಾಗ ಮುತ್ತ್ಯಾ ಹೊಲದಿಂದ ಬಂದಬಿಟ್ಟಾನವ್ವಿ. ನೀರಡಿಶ್ಯಾನ. ಮನ್ಯಾಗ ಕುಡ್ಯಾಕ ಮುಕ್ಕ್ ನೀರಿಲ್ಲ. ಮುತ್ತ್ಯಾ ತಾಪಗೆದ್ದು, “ಹಾಂ ಅಧೆಂಗ ನೀ ಇಟ್ಟ್ ತಡಾ ಮಾಡೀದಿ ಬರಾಕ! ನಡಿ ರಂಡಿ ನೀ ಅದ ಹಳ್ಳದ್ ದಂಡ್ಯಾಗ ಇರು. ಅಲ್ಲೇ ನಿಂದ್ರು. ದsರ್’ಕರ್ತಾ ಕೊಡಾ ಕೆಳಗಿಳಿಶಿ ಕುಂತೆಪಾ ಅಂದ್ರ ನಿನ್ನ ಸಿಗದು ಅಗಶಿ ಬಾಗಲಕ್ಕ ತೋರ್ಣಾ ಕಟ್ತತೀನಿ ಹುಶಾರ್!” ಅಂತಂದು, ಕೊಡದ ದರ್ಶಿಲೆ ಆಯಿನ್ನ ಕಾದ ಉಸಕಿನ ಮ್ಯಾಲ ಬರೆಗಾಲಿಲೇ ನಿಂದ್ರಿಶಿದ್ನಂತ.”
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣ

Read More

ಮನದ ಕಿಟಕಿ: ರವೀಂದ್ರ ನಾಯಕ್ ಸಣ್ಕಕ್ಕಿಬೆಟ್ಟು ಅಂಕಣ

ಮನೆಯ ರಾಮಾಯಣ ಮುಗಿಸಿ ಹೊರಗೆ ಬಂದು ಡ್ಯೂಟಿಗೆಂದು ಬೈಕ್ ಹತ್ತುವಾಗ ಆ ಗಂಡಸಿನ ಮುಖ ನೋಡಬೇಕು… ಯುದ್ಧ ನಂತರದ ನಿರ್ಮಲ ಶಾಂತಿ, ಆನಂದ ಅವರ ಮುಖದಲ್ಲಿ; ಜೀವಾವಧಿ ಶಿಕ್ಷೆ ಮುಗಿಸಿ ಈಗಷ್ಟೇ ಹೊರ ಬಂದ ಖೈದಿಯ ಸಂತೋಷದಂತೆ ನಿರಾಳ ಮುಖಭಾವ. ಸಂಜೆ ಮತ್ತೆ ಮನೆಯ ಬಾಗಿಲು ಬಡಿಯುವಾಗ ಮತ್ತದೇ ಬೇಸರ. “ಒಂದೇ ಮನೆಯಲ್ಲಿ ವಿಚ್ಭೇದಿತ ಮನಸ್ಸುಗಳು ಸಹಭೋಜನ ಮಾಡುತ್ತವೆ” ಎಂದು ಎಲ್ಲೋ ಓದಿದ್ದ ಮಾತು ಇವರನ್ನು ನೋಡಿದಾಗ ಅದೆಷ್ಟು ನಿಜ ಅನ್ನಿಸಿತು…
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಹನ್ನೆರಡನೆಯ ಬರಹ

Read More

ಸೆರಗ ಬಿಡು ಮರುಳೆ: ಜಯಲಕ್ಷ್ಮಿ ಪಾಟೀಲ್ ಅಂಕಣ

ಅಗತ್ಯವಿಲ್ಲದಿದ್ದರೂ, ಇಷ್ಟವಿಲ್ಲದಿದ್ದರೂ, ಪಾಲಿಸಲೇಬೇಕು ಎನ್ನುವುದು ಹೇರಿಕೆಯಾದಾಗ ಸಂಪ್ರದಾಯಗಳು ಸಂಕೋಲೆಗಳಾಗಿ ಹಿಂಸಿಸತೊಡಗುತ್ತದೆ. ಈ ಹೇರಿಕೆ ಕೇವಲ ಸಮಾಜದ್ದಲ್ಲ ನಮ್ಮೊಳಗಿನದೂ ಸಹ! ‘ಸಂಪ್ರದಾಯವನ್ನು ಬಿಟ್ಟು ನಡೆದಲ್ಲಿ ಏನಾದರೂ ಅವಘಡ ಸಂಭವಿಸಿದರೆ ಗತಿ ಏನು ಮುಂದೆ?!’ ಎನ್ನುವ ನಮ್ಮೊಳಗಿನ ಭೀತಿಯೇ ಅರ್ಧ ಮನುಷ್ಯರನ್ನು, ‘ಬಿಟ್ಟರೂ ಬಿಡಲಾರದೀ ಮಾಯೆ’ ಎಂದು ತ್ರಿಶಂಕು ಸ್ಥಿತಿಯಲ್ಲಿ ನೇತಾಡುವಂತೆ ಮಾಡುತ್ತದೆ. ಕಾಲಾಂತರದಲ್ಲಿ ಅಕ್ಷರ, ಹಣ, ಸಾರಿಗೆ ಮತ್ತು ಮಾಧ್ಯಮ ಇತ್ಯಾದಿ ಅನುಕೂಲತೆ ಎಲ್ಲರಿಗೂ ಎಟುಕತೊಡಗಿದಂತೆ, ಅಷ್ಟಿಷ್ಟು ಮೌಢ್ಯಗಳು, ಸಂಪ್ರದಾಯದ ಸಂಕೋಲೆಗಳು ಸಡಿಲಗೊಂಡರೂ, ತ್ರಿಶಂಕು ಸ್ಥಿತಿಯಿಂದ ಅಷ್ಟು ಸುಲಭದಲ್ಲಿ ಬಿಡುಗಡೆ ಸಿಗುವುದಿಲ್ಲ.
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣ

Read More

ಒಳಬಾರದು ಆ ವಸಂತ…:  ವಿನಾಯಕ ಅರಳಸುರಳಿ ಅಂಕಣ

ಮಹಾನಗರಿಯ ಏರಿಯಾಗಳುದ್ದಕ್ಕೂ ಈಗ ಹೂಬಿಟ್ಟ ಮರಗಳು. ಬೀದಿ ಬೀದಿಯಲ್ಲೂ ಉದುರಿ ಬಿದ್ದ ಲಕ್ಷಾಂತರ ಹೂವುಗಳು. ಕಾಯಿ, ಹಣ್ಣು, ಬೀಜವಾಗದೇ ಉದುರಿಹೋದ ಅವನ್ನು ನೀಲಿ ಅಂಗಿ ತೊಟ್ಟ ಬಿಬಿಎಂಪಿ ನೌಕರರು ರಾಶಿ ಮಾಡುವುದನ್ನು ನಿರ್ಭಾವುಕವಾಗಿ ನೋಡಿ ನಮ್ನಮ್ಮ ಕಂಪನಿಯ ಎಂಟ್ರಿ ಗೇಟನ್ನು ಹೊಗ್ಗುತ್ತೇವೆ.‌ ಇಲ್ಲಿ ಹೊಕ್ಕಾಗಿಂದ ಪ್ರಕೃತಿಯ ಇಂಥಾ ಅದೆಷ್ಟೋ ವಸಂತಗಳಿಗೆ ನಮ್ಮೆದೆಯಲ್ಲಿ ಎಂಟ್ರಿ ಬಂದ್ ಮಾಡಿಕೊಂಡಿದ್ದೇವೆ. ಎಷ್ಟೋ ಚೈತ್ರ, ವೈಶಾಖ, ಕಾರ್ತೀಕ, ಮಾಗಿಗಳು ನಮ್ಮನ್ನು ಸೋಕದೆಯೇ ವಿಫಲ ಹೂವಾಗಿ ಉದುರಿಹೋಗಿವೆ. ಹಾಗಾಗಿಯೇ ಆಫೀಸು ಕದ ಮುಚ್ಚಿದ ಒಂದು ಶನಿವಾರ, ಒಂದು ಭಾನುವಾರವನ್ನು ಕಳೆಯಲಾರದೆ ನಿರುಪಾಯರಾಗಿದ್ದೀವೇನೋ ಅನ್ನಿಸಿತು.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ

Read More

ಯುದ್ಧ, ಇಂಧನಗಳ ತಕ್ಕಡಿಯಲ್ಲಿ ನಾವು: ಡಾ. ವಿನತೆ ಶರ್ಮ ಅಂಕಣ

ಪೆಟ್ರೋಲ್ ಕಾರ್ ಓಡಿಸುವ ನನ್ನ ಮುಖದಲ್ಲಿ ಚಿಂತೆಯ ಗೆರೆಗಳು ಹೆಚ್ಚಾಗಿವೆ. ಹಾಗೆಯೆ ಟ್ರಂಪಣ್ಣನನ್ನು ಬಯ್ಯುವುದೂ ಜಾಸ್ತಿಯಾಗಿದೆ. ಅವರಿಗೆ ತಮ್ಮ ಮತಕೊಟ್ಟು, ಸರ್ಕಾರದ ಯಂತ್ರವನ್ನು ದುರುಪಯೋಗ ಮಾಡಲು ಅಧಿಕಾರ ಕೊಟ್ಟ ಅಮೆರಿಕನ್ನರಿಗೂ ಒಂದಷ್ಟು ಬಯ್ಗುಳ. ಕೇವಲ ಒಂದು ದೇಶವು ಇಡೀ ಪ್ರಪಂಚದ ಮೇಲೆ ವಜ್ರಮುಷ್ಠಿ ಹತೋಟಿಯನ್ನು ಇಟ್ಟುಕೊಂಡಿರುವುದು ಆಶ್ಚರ್ಯ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ