Advertisement

Tag: ಕನ್ನಡ ಸಾಹಿತ್ಯ

ಸುನಂದಾ ಕಡಮೆ ಬರೆದ ಈ ಭಾನುವಾರದ ಕತೆ “ನಿವೃತ್ತಿ”

ಕೈಯಲ್ಲಿದ್ದ ಲಾಠಿಯಿಂದ ರಬ್ಬನೆ ಅವಳ ಕಾಲಿನ ಮೇಲೆ ಒಂದೇಟು ಬಿತ್ತು, ಇದನ್ನು ಮಾತ್ರ ಶೀಲಕ್ಕ ನಿರೀಕ್ಷಿಸಿರಲಿಲ್ಲ, ‘ಅಯ್ಯ ನಮ್ಮವ್ವ.. ನನಗ ಹೊಡೀತೀರಿ? ಅಯ್ಯ ಅಯ್ಯ..’ ಅಂತ ಮುಳುಮುಳು ಮಾಡಿದಳು. ಆಗಲೇ ಪ್ರತಾಪಣ್ಣ ಬಾಗಿಲು ತೆರೆದು ಗೇಟುದಾಟಿಯಾಗಿತ್ತು. ಅವಮಾನದಿಂದ ದುಃಖ ಉಮ್ಮಳಿಸಿತು, ಯಾಕೋ ಅವನು ಮೊದಲಿನಂತಿಲ್ಲ ಅನ್ನಿಸಿತು. ಬಲಗಾಲ ಮೀನಖಂಡದಲ್ಲಿ ಎದ್ದ ನೋವನ್ನು ನೀವಿಕೊಳ್ಳುತ್ತಿರುವಾಗಲೇ ಮಗ ಕಾಲ್ ಮಾಡಿದ, ವಿಷಯ ತಿಳಿದು ‘ಮೂವತ್ತೈದ ವರ್ಷ ತೊಟ್ಕೊಂಡ ಯೂನಿಫಾರ್ಮ ಐತದ, ಅದ್ನ ನೋಡ್ಕೋತ ಇದ್ರ ಅಪ್ಪಗ ಒಂಥರಾ ಟೆಮ್ಟ್ ಆಗ್ತಿರಬೇಕ, ನಾಳಿಂದ ಅದ್ನ ತಗದ ಎಲ್ಲರ ಹುಗಸಿ ಇಟ್ಬಿಡು’ ಅಂದ.
ಸುನಂದಾ ಕಡಮೆ ಬರೆದ ಕತೆ “ನಿವೃತ್ತಿ” ನಿಮ್ಮ ಈ ಭಾನುವಾರದ ಓದಿಗೆ

Read More

ಸ. ಹರೀಶ್‌ ಬರೆದ ಈ ಭಾನುವಾರದ ಕತೆ

ಎಲ್ಲವನ್ನು ಕೇಳಿಸಿಕೊಂಡಿದ್ದ ಅವಿನಾಶ್ ಡಾಕ್ಟರಿಗೆ ಕೈ ಮುಗಿದ. ಅಲ್ಲಿ ಮಾಧವಿಗೆ ಮನಸ್ಸು ತೀರಾ ತಲ್ಲಣಿಸಿ ಹೋಯಿತು. ಯಾವಾಗ ಕೇರ್ ಟೇಕರ್ ತನ್ನ ಸುತ್ತಾಟ ಮುಗಿಸಿ ಮನೆ ಒಳಗೆ ಕಾಲಿಟ್ಟಳೊ, ಅವಳಿಗೆ ಮನುಷ್ಯರ ಬಗ್ಗೆ ನಂಬಿಕೆಯೇ ಹೊರಟು ಹೋಯಿತು. ಅವಳ ಮುಖದ ಮೇಲೆ ದುಡ್ಡು ಬಿಸಾಕಿ, `ಮುಖ ತೋರಿಸಬೇಡ, ನಿನಗೆ ಪೊಲೀಸಿಗೆ ಕೊಡದೇ ಬಿಟ್ಟಿದ್ದೀನಿ, ಗೆಟ್ ಲಾಸ್ಟ್’ ಅಂತ ನರನಾಡಿ ಕಿತ್ತುಬರುವಂತೆ ಅರಚಿದಳು.
ಸ. ಹರೀಶ್‌ ಕಥಾ ಸಂಕಲನ “ಅಮ್ಮ ಅಂದ್ರೆ ಭೂಮಿ”ಯ ಶೀರ್ಷಿಕೆ ಕತೆ, ನಿಮ್ಮ ಈ ಭಾನುವಾರದ ಓದಿಗೆ

Read More

‘ಕಾಲಾಯಾತಸ್ಮೈ ನಮಃ’: ಕೆ ಸತ್ಯನಾರಾಯಣ ಕಾದಂಬರಿಯ ಕುರಿತು ಸಿ ಬಿ ಶೈಲಾ ಜಯಕುಮಾರ್ ಬರಹ

ಮಕ್ಕಳಿಗೆ ಯಾವ ಹಂತದಲ್ಲಿ ತಾಯಿ ತಂದೆಯರು ಬೇಕೆನಿಸುವುದಿಲ್ಲ ಅಥವಾ ಸಾಕೆನಿಸುತ್ತಾರೆ? ಎಂಬ ಗೊಂದಲದ ಆದರೆ ಪ್ರಸ್ತುತ ಪ್ರಶ್ನೆಯೂ ಇಲ್ಲಿದೆ! ನಮ್ಮ ತಲೆಮಾರಿನವರು ತಂದೆ ತಾಯಿಯರ ಮಾನಸಿಕ ಜಗತ್ತಿನಿಂದ ಕ್ರಮೇಣ ದೂರವಾದರೆ, ಇಂದಿನವರದು ಧಿಡೀರ್ ದೂರವಾಗುವಿಕೆ! ಭಾವನೆಗಳ ಘರ್ಷಣೆ! ಕೋಚಿಂಗ್ ಸೆಂಟರಿನಲ್ಲಿ ಡೆಪ್ಯೂಟಿ ಕರೆಸ್ಪಾಂಡೆಂಟ್ ಆಗಿದ್ದ ಮೇಲ್ ಮಧ್ಯಮ ವರ್ಗದ ರಂಗನಾಥ್ ಮತ್ತು ಶಿಕ್ಷಕಿ ಸುಧಾ ದಂಪತಿಗಳ ಮಕ್ಕಳು ವಿಕ್ರಮ್ ಹಾಗೂ ಪ್ರಾರ್ಥನಾ.
ಕೆ ಸತ್ಯನಾರಾಯಣ ಕಾದಂಬರಿ “ಕಾಲಜಿಂಕೆ”ಯ ಕುರಿತು ಸಿ ಬಿ ಶೈಲಾ ಜಯಕುಮಾರ್ ಬರಹ

Read More

ನಮಗೊಂದು ಸೊಸೆ ಬೇಕು: ಕೆ. ಸತ್ಯನಾರಾಯಣ ಹೊಸ ಕಾದಂಬರಿಯ ಆಯ್ದ ಭಾಗ

ಸತೀಶ ದುರ್ದಾನ ತೆಗೆದುಕೊಂಡವನಂತೆ ರೂಮಿಗೆ ಹೋಗಿ ಬಾಗಿಲನ್ನು ಪಟಾರನೆ ಹಾಕಿಕೊಂಡ. ಹಾಲ್‌ನಲ್ಲೇ ಉಳಿದಿದ್ದ ಮೂರ್ತಿ-ಅನಿತಾ ಕೂಡ ಕಾಲೆಳೆದುಕೊಂಡು ರೂಮಿಗೆ ಹೋದರು. ಇಬ್ಬರೂ ಮಂಚದ ಮೇಲೆ ನೀಟಾಗಿ ಹಾಸಿದ್ದ ಹಾಸಿಗೆಯ ಮೇಲೆ ಕುಳಿತುಕೊಂಡು ಒಬ್ಬರನ್ನೊಬ್ಬರು ನೋಡುತ್ತಲೇ ಇದ್ದರು. ಮಾತೇ ಹೊರಡಲಿಲ್ಲ. ಅನಿತಾ ಹತ್ತು ಸಲ ಬಚ್ಚಲು ಮನೆಗೆ ಹೋಗಿ ಬಂದರು. ಮೂರ್ತಿ ಒಂದಿಪ್ಪತ್ತು ಸಲ ಕೂದಲನ್ನು ಕಿತ್ತು ಹಾಕಿದರು. ಬಲಗೈ ಮಧ್ಯ ಬೆರಳಿನ ಉಗುರನ್ನು ಕಡಿಯುತ್ತಲೇ ಇದ್ದರು. ದೀಪ ಆರಿಸಿ ಮಲಗಲು ಇಬ್ಬರಿಗೂ ಭಯವಾಯಿತು. ಬಲ್ಬ್‌ ಪ್ರತಿದಿವಸವೂ ಹೊರಡಿಸುವುದಕ್ಕಿಂತ ಹೆಚ್ಚಿನ ಕಾಂತಿಯನ್ನು ಹೊರಡಿಸುತ್ತಿದೆ ಅನಿಸಿತು.
ಕೆ. ಸತ್ಯನಾರಾಯಣ ಹೊಸ ಕಾದಂಬರಿ “ನಮಗೊಂದು ಸೊಸೆ ಬೇಕು” ಕೃತಿಯ ಆಯ್ದ ಭಾಗ

Read More

ಹೊಸ ಹಾದಿ ಹಿಡಿದ ಬರವಣಿಗೆ…: ಎಚ್. ಗೋಪಾಲಕೃಷ್ಣ  ಸರಣಿ

ಗೆಳೆಯರ ಪರಿಚಯದ ಮೊದಲನೇ ಭೇಟಿಯಲ್ಲೇ ಅವರು ಒಬ್ಬ ಬರಹಗಾರರು ಎಂದು ತಿಳಿಯಿತು. ಆಗಲೇ ಸುಮಾರು ಕತೆಗಳು ಮತ್ತು ಹಾಸ್ಯ ಲೇಖನ ಬರೆದಿದ್ದರು. ಸುದ್ದಿ ಹಾಗೇ ನನ್ನ ಬರವಣಿಗೆಯತ್ತ ತಿರುಗಿತು. ಒಂದೋ ಎರಡೋ ಕತೆ ಬರೆದಿರುವ ಸಂಗತಿಯನ್ನು ಕೊಂಚ ನಾಚಿಕೆಯಿಂದ ಹೇಳಿಕೊಂಡೆ. ಬರಹಗಾರರಿಗೆ ಮುಖೇಡಿತನ ಹೆಚ್ಚಾಗಿಯೇ ಇರುತ್ತದೆ ಎನ್ನುವುದು ಅನುಭವವಾಗಿತ್ತು. ಮತ್ತು ನನಗಂತೂ ಈಗಲೂ ಅದು ಮೆದುಳಿನ ಮೇಲಿನ ಸ್ತರದಲ್ಲಿ ಅಂಟಿಕೊಂಡು ಬಿಟ್ಟಿದೆ! ಮಾತಿನ ಮಧ್ಯೆ ಅವರು ಮಿಡಲ್ ವಿಷಯ ತೆಗೆದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೩ನೇ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ