Advertisement

Tag: ಕೆಂಡಸಂಪಿಗೆ

ಎಲ್ಹೋದೆ ವಾಸಯ್ಯ… : ಲೈಲಾ ಪರ್ವೀನ್‌ ಬರಹ

ಸ್ವಲ್ಪ ದೊಡ್ಡವಳಾಗುತ್ತಾ ಬಂದಂತೆ ವಾಸಯ್ಯನಿಗೇನೋ ಅನ್ಯಾಯವಾಗಿದೆ, ಅದಕ್ಕೇ ಅವನು‌ ಹಾಗಿರುವುದು ಎಂದು ಬಲವಾಗಿ ಅನಿಸತೊಡಗಿತ್ತು. ಅವತ್ತೆಲ್ಲ ಅಷ್ಟು ಸಾರಿ‌ ಕೇಳಿದಾಗಲೂ‌ ಅಮ್ಮ ಹೇಳಿರಲಿಲ್ಲ. ಅಮ್ಮನಿಗೂ ಗೊತ್ತಿಲ್ಲವೇನೋ ಅಂದುಕೊಂಡಿದ್ದೆ. ನನಗೂ ಮದುವೆಯಾಗಿ ಮಕ್ಕಳಾಗಿ ಶಾಲೆ ಮನೆ ಅಂತ ನಿಭಾಯಿಸುವಾಗ ಎದುರಾಗುವ ಕಷ್ಟಗಳನ್ನು ಹೇಳಿಕೊಳ್ಳಲು ಯಾರೂ ಇರದೆ ಮನಸ್ಸು ಭಾವುಕವಾಗಿ ರಾತ್ರಿ ಕತ್ತಲೆಯಲ್ಲಿ ಕಣ್ಣೀರು ಸುರಿಸಿ ಹಗಲು ಹೊತ್ತು ಮೌನ ಆವರಿಸಿಕೊಂಡಾಗ ಈ ಮಹಾಮೌನಿ ವಾಸಯ್ಯ ನೆನಪಾಗದೇ ಇರುತ್ತಿರಲಿಲ್ಲ.
ಲೈಲಾ ಪರ್ವೀನ್‌ ಬರಹ ನಿಮ್ಮ ಓದಿಗೆ

Read More

ನವೀನ್‌ ತೇಜಸ್ವಿ ಬರೆದ ಈ ಭಾನುವಾರದ ಕತೆ “ಬಂಗಾರಕಡ್ಡಿ ಡೇರೆಹೂವು”

ನೇತ್ರಿ ಮೆಡಿಕಲ್ ಶಾಪಿನಲ್ಲಿ ಡಾಕ್ಟರ್ ಬರೆದಕ್ಕಿಂತ ಅರ್ಧರ್ಧವೆ ಮಾತ್ರೆ ತೆಗೆಸಿದಳು. ಟಾನಿಕ್ ಇರಲಿಲ್ಲ. ಸ್ವಲ್ಪ ದೂರದಲ್ಲಿ ಮತ್ತೊಂದು ಮೆಡಿಕಲ್ ಶಾಪಿತ್ತು. ಅಲ್ಲಿಗೆ ನಡೆದು ಹೋಗಿ ಅದನ್ನೂ ಕೊಂಡು ಆಸ್ಪತ್ರೆಯ ಕಡೆ ಬಂದರೆ ಕೂತ ಜಾಗದಲ್ಲಿ ಅವ್ವ ಮಗು ಇರಲಿಲ್ಲ! ಹಳದಿ ಕವರ್ರು ಮಾತ್ರವೇ ಬೆಂಚಿನ ಮೇಲಿತ್ತು. ಹೋಗಿ ಮಾತ್ರೆಯನ್ನು ನರ್ಸಿಗೆ ತೋರಿಸಿ ಮತ್ತೆ ಬೆಂಚಿನ ಬಳಿ ಬಂದಳು. ಪಕ್ಕ ಕೂತಿದ್ದ ಅಜ್ಜನೊಬ್ಬ “ತಂಗಿ ನಿಮ್ಮವ್ವ ಇಲ್ಲೆ ಎಲ್ಲೊ ಹೊರಗಡೆ ಹೋದ್ರು. ಹನುಮಂತನ ಗುಡಿ ಹತ್ರ ಇರ್ಬಕಂತೆ. ಬರ್ತಾಳಂತೆ” ಎಂದನು.
ನವೀನ್‌ ತೇಜಸ್ವಿ ಕಥಾಸಂಕಲನ “ಬಂಗಾರಕಡ್ಡಿ ಡೇರೆಹೂವು”, ಶೀರ್ಷಿಕೆ ಕತೆ

Read More

ಸುಮಾವೀಣಾ ಹೊಸ ಅಂಕಣ “ನುಡಿನಲಿವು” ಇಂದಿನಿಂದ

‘ಮಂಜಣ್ಣ ಹೇಳಿದ ಸ್ಥಳಕತೆ’ ಮಳೆಗಾಲದ ರೌದ್ರತೆಯನ್ನೆ ಹೇಳುವ ಪದ್ಯ. ಕುವೆಂಪುರವರು ಇಲ್ಲಿ ಮಳೆಯ ಭೀಕರತೆ ಎದುರಾಗುವ ಹಠಾತ್ ಸನ್ನಿವೇಶಗಳನ್ನು. ಸಿಂಗಿಯನು ಕರಿಸಿದ್ಧ ಕರೆತರಲು ಹೋಗುತ್ತಾನೆ. ಅಲ್ಲಿ ಆತಿಥ್ಯ ಸ್ವೀಕರಿಸಿ ಚಿಕ್ನೂರಿಗೆ ಹೊರಡಬೇಕು ಎನ್ನುತ್ತಾ ಹೆಂಡತಿಯನ್ನು ಕರೆದುಕೊಂಡು ಹೊರಡುವಾಗ ‘ಸಾವನೆ ಕಾರುವ ಕಾರದು ಸುರಿಯಿತು’ ಎಂದು ಅಪಾಯದ ಮುನ್ಸೂಚನೆಯನ್ನು ಹೇಳಿ ಮತ್ತಷ್ಟು ಬಲವಾಗಿ ಅಪ್ಪಿದರು ಎಂದಿದ್ದಾರೆ. ಮೃತ್ಯುವಿನ ಸೂಚನೆ ಕೊಡುವ ಹಾಗು ನಡೆದ ದುರಂತಕ್ಕೆ ವರ್ಷಗಳವರೆಗೆ ವಿಷಾದ ವ್ಯಕ್ತಪಡಿಸುವ ಈ ಪದ್ಯ ಪ್ರಸ್ತುತವಾಗಿದೆ.
ಸುಮಾವೀಣಾ ಹೊಸ ಅಂಕಣ “ನುಡಿನಲಿವು” ಇಂದಿನಿಂದ

Read More

‘ಸ್ಟಾರ್ಟ್ ಸ್ಟಾಪ್’ ಆಟ ಮತ್ತು ವಡಬಾನಲ: ಕ್ಷಮಾ ವಿ ಭಾನುಪ್ರಕಾಶ್

ಕಾವ್ಯ “ಅಷ್ಟು ಸರಳವೇ ನಮ್ಮ ದೇಹದ ಕೆಲ್ಸ? ಬಾಯಲ್ಲಿ ಫಿಸಿಕಲೀ ಆಹಾರ ನಜ್ಜುಗುಜ್ಜಾಗಿರತ್ತೆ. ಆದ್ರೆ ಕೆಮಿಕಲೀ ಅದ್ರಲ್ಲಿರೋ ಶಕ್ತಿಯನ್ನ ನಾವಿನ್ನೂ ಹೀರಿಕೊಂಡಿರಲ್ಲ. ನಮ್ಮ ಬಾಯಲ್ಲಿ ಭೌತಿಕವಾಗಿ ಅಂದ್ರೆ ಫಿಸಿಕಲಿ ಮುರಿದುಕೊಂಡ ಆಹಾರ, ಜೊಲ್ಲಿನಲ್ಲಿರೋ ‘ಎಂಝೈಮ್’ಗಳ ಸಹಾಯದಿಂದ ಕೊಂಚಕೊಂಚವಾಗಿ ರಾಸಾಯನಿಕವಾಗಿ ಡೈಜೆಸ್ಟ್ ಆಗೋಕೆ ಪ್ರಾರಂಭಿಸಿರತ್ತೆ. ಆಮೇಲೆ ಮೆಲ್ಲನೇ ನಮ್ಮ ಅನ್ನನಾಳದಲ್ಲಿ ‘ಸ್ಟಾಪ್, ಸ್ಟಾರ್ಟ್, ಸ್ಟಾಪ್, ಸ್ಟಾರ್ಟ್’ ಅಂತ ಆಟ ಆಡತ್ತೆ” ಎಂದಳು.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹದಿನೈದನೆಯ ಕತೆ

Read More

ಆಸ್ಟ್ರೇಲಿಯಾದಲ್ಲಿ ಮಹಿಳಾ ನಡಿಗೆ ಗುಂಪು: ವಿನತೆ ಶರ್ಮಾ ಅಂಕಣ

ನನಗೆ ಆಸ್ಟ್ರೇಲಿಯಾದಲ್ಲಿ ‘ಹೊರತುಪಡಿಸುವ’ ಮನೋಭಾವದ ಅನುಭವ ದಟ್ಟವಾಗಿರುವುದರಿಂದ ಈಚೀಚೆಗೆ ಆ ಮನೋಭಾವದ ಮಜಲುಗಳ, ಅದು ವ್ಯಕ್ತವಾಗುವ ಹಿನ್ನೆಲೆಗಳ ಬಗ್ಗೆ ಆಸಕ್ತಿ ಬೆಳೆದಿದೆ. ಕೆಲತಿಂಗಳ ಹಿಂದೆ ನಡಿಗೆ ಗುಂಪಿಗೆ ವಾಪಸ್ಸಾದಾಗ ನನ್ನ ಪರಿಚಯದಾಕೆ ಉತ್ಸಾಹದಿಂದ ಬರಮಾಡಿಕೊಂಡರು. ಬೇರೆಯವರಿಗೆ ನಾನು ನನ್ನ ಹೆಸರನ್ನು ಹೇಳಿಕೊಂಡು, ಕೆಲವರ್ಷಗಳ ಹಿಂದೆ ನಿಮ್ಮ ಜೊತೆ ನಡೆಯುತ್ತಿದ್ದೆ, ಎಂದೆಲ್ಲಾ ಪೀಠಿಕೆ ಕೊಟ್ಟೆ. ಇತರರಲ್ಲಿ ಅದೇ ಉದಾಸೀನತೆ. ಪುನಃ ಎಲ್ಲರೂ ಬಿಳಿಯರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ