Advertisement

Tag: ಜ.ನಾ. ತೇಜಶ್ರೀ

ಅವ್ವಕ್ಕನೆಂಬ ಅಚ್ಚರಿ…: ಜ.ನಾ. ತೇಜಶ್ರೀ ಹೊಸ ಕಾದಂಬರಿಯ ಪುಟಗಳು

ಈಗ ಅವಳ ದೇಹ ಮೊದಲಿಗಿಂತ ಗಟ್ಟಿಯಾಗಿತ್ತು, ಸಲಾಕೆಯಂತೆ. ಮೇಲಿನ ಕೆಲಸಕ್ಕೆ ಕೆಲಸದವರಿದ್ದರೂ ಅವಳು ಮಾಮೂಲಿನಂತೆ ಎಲ್ಲ ಕೆಲಸ ಮಾಡುತ್ತಿದ್ದಳು. ಕೆಲಸ ಮಾಡಿದಷ್ಟೂ ಅವಳಲ್ಲಿ ಕಸುವು, ತಾಳಿಕೊಂಡಷ್ಟೂ ಸುಂದರವಾಗಿ ಕಾಣುವುದನ್ನು ದೊಡ್ಡಯ್ಯ ವಿಸ್ಮಯದಲ್ಲಿ ನೋಡುತ್ತಿದ್ದ. ಮಂಜುನಾಥ ಮೂರು ತಿಂಗಳಿಗೆ ಮಗುಚಿದ, ಆಮೇಲೆ ಅಂಬೆಗಾಲಿಟ್ಟ. ಷಣ್ಮುಖ ಬೆಳೆದಿದ್ದನ್ನು ಹತ್ತಿರದಿಂದ ಗಮನಿಸದ ದೊಡ್ಡಯ್ಯನಿಗೆ ಮಂಜುನಾಥನನ್ನು ನೋಡುವಾಗ ಎಲ್ಲ ಹೊಸದೆನಿಸುತ್ತಿತ್ತು. ತಾನೂ ಮಗುವಾಗಿದ್ದಾಗ ಹೀಗೇ ಮಾಡಿದೆನ ಅಂತ ಯೋಚಿಸುತ್ತಿದ್ದ.
ಜ.ನಾ. ತೇಜಶ್ರೀ ಹೊಸ ಕಾದಂಬರಿ “ಜೀವರತಿ” ಕೃತಿಯ ಪುಟಗಳು ನಿಮ್ಮ ಓದಿಗೆ

Read More

ಖಂಡಕಾವ್ಯಕ್ಕೊಂದು ಪ್ರವೇಶ: ಯು.ಆರ್.ಅನಂತಮೂರ್ತಿ ಮುನ್ನುಡಿ

ಆತ್ಮ ಸಫಲತೆಗಾಗಿ ಆತ್ಮಾರ್ಪಣೆ ಮಾಡಿಕೊಳ್ಳುವ ಹೆಣ್ಣು ಪ್ರಣಯಿನಿಯಾಗಿಯೂ, ಹೆಂಡತಿಯಾಗಿಯೂ, ಮಗಳಾಗಿಯೂ, ತಾಯಿಯಾಗಿಯೂ, ‘ಬಜಾರಿ’ಯಾಗಿಯೂ ಅವನಿಗೆ ಒದಗುತ್ತಾಳೆ. ಇದನ್ನು ನಟಿಸಿ ತೋರಲು ತೇಜಶ್ರೀ ಕವನದಲ್ಲಿ ಒಂದು ಅಪರೂಪದ ಕಾವ್ಯ ಪ್ರಯೋಗವಿದೆ. ಇಲ್ಲಿ ಬರುವ ಅವನು ಪುರಾಣದ ಕೃಷ್ಣನೂ ಹೌದು, ನಿಜದ ಅವನೂ ಹೌದು. ಹಾಗೆಯೇ ರಾಧೆ ಪುರಾಣದ ರಾಧೆಯೂ ಹೌದು, ನಿಜದ ಅವಳೂ ಹೌದು. ಈ ಎರಡು ಸತ್ಯಗಳೂ ಒಟ್ಟಾಗಿ ನಮಗೆ ಭಾಸವಾಗುವುದರಿಂದ ಸಾಮಾಜಿಕ ಸಾಂಸಾರಿಕ ನೀತಿ ಅನೀತಿಗಳನ್ನು ಈ ಕವನ ಮೀರುತ್ತದೆ.
ಜ.ನಾ. ತೇಜಶ್ರೀ ಖಂಡಕಾವ್ಯ “ಅವನರಿವಲ್ಲಿ” ಕೃತಿಗೆ ಯು.ಆರ್.‌ ಅನಂತಮೂರ್ತಿ ಮುನ್ನುಡಿ

Read More

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ ಕಲ್ಲು ಮರಳಾಗಿ ರೂಪಾಂತರ ಹೊಂದುವ ಜಗತ್ತಿನ ವಿಸ್ಮಯದ ನಡೆಯಲ್ಲಿ ಮರಳೂ, ಕಲ್ಲೂ ದೈವವಾಗುವುದರಲ್ಲಿ ಏನು ವಿಶೇಷವಿದೆ! ಪುತಿನ ಅವರಿಲ್ಲಿ ಮೂರ್ತಿಯನ್ನೂ ದೇವರಾಗಿ ನೋಡುತ್ತಿಲ್ಲ, ದೇವರಾಗಲು ಹೊರಟಿರುವ ಕಲ್ಲು ಅವರಿಗೆ ಅಚ್ಚರಿಯಾಗಿ ಕಾಣುತ್ತದೆ.
ಜ. ನಾ. ತೇಜಶ್ರೀ ಬರೆದ `ಅರಿವು-ಇರವುಗಳ ಸನ್ನೆಗೈ ಪುತಿನ ಮಲೆದೇಗುಲ’ ಕೃತಿಯ ಕುರಿತು ದೀಪಾ ಫಡ್ಕೆ ಬರಹ

Read More

ಜ ನಾ ತೇಜಶ್ರೀ ಪುಸ್ತಕದ ಕುರಿತು ನೂತನ ದೋಶೆಟ್ಟಿ ಬರಹ

ಸೃಷ್ಟಿ ಸ್ಥಿತಿ ಲಯ – ಕವಿತೆಯನ್ನು ಈ ಮೇಲಿನ ಗಿಳಿಮರ ಕವಿತೆಯ ಇನ್ನೊಂದು ಭಾಗವಾಗಿಯೂ ಓದಬಹುದು. ಆದರೂ ಇದರ ಅರ್ಥ ಹೊಳಹು ಬೇರೆಯೇ. ಇಲ್ಲಿನ ಹಕ್ಕಿದಂಡು, ಕಪ್ಪೆ, ಈಚಲು ಮರಗಳೆಲ್ಲ ಒಂದೊಂದೂ ಒಂದು ಜಗವೇ ಆಗಿಯೂ, ಒಂದೇ ಜಗವಾಗಿಯೂ ಕಂಡು ಬೆರಗಾಗುವ ಕವಿ ಮನಸ್ಸು ತುಂಬಿ ಉಮ್ಮಳಿಸುತ್ತದೆ. ಆ ಕಣ್ಣೀರಲ್ಲಿ ಆನಂದ ತುಳುಕಿದರೂ, ಲೋಕದ ಡೊಂಕ ನೆನೆದು ಕಳವಳಿಸುತ್ತದೆ. ಮರವನ್ನು ಶಿವನಾಗಿಸಿದ್ದು ಕವಿಗೇ ಅಚ್ಚರಿಯಾಗಿ ಶಿವಶಿವಾ… ಎಂದು ಉದ್ಗರಿಸಿದ್ದಾರೆ.
ಯಕ್ಷಿಣಿ ಕನ್ನಡಿ ಕವಯತ್ರಿ ಜ.ನಾ. ತೇಜಶ್ರೀ ಬರೆದ ‘ಯಕ್ಷಿಣಿ ಕನ್ನಡಿ’ ಕವನ ಸಂಕಲನದ ಕುರಿತು ನೂತನ ದೋಶೆಟ್ಟಿ ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ