Advertisement

Tag: ನಾಗರಾಜ್‌ ಹೆತ್ತೂರು

ಯಾಕೆ ಸಾರ್ ನೀವು  ಎಲ್ಲವನ್ನೂ ಉಲ್ಟಾ ಬರೆಯುತ್ತೀರಿ…?

ನಾವು ನೋಡುತ್ತಿರುವುದೇ ಸತ್ಯ ಎಂದು ಯಾಕೆ ಹೇಳುತ್ತೇವೆ…? ಗೂಬೆ ಅಂದುಕೊಂಡಿರುವುದು ಸರಿ ಆಗಿರಬಹುದು… ನಾಯಿ ನೋಡುತ್ತಿರುವುದೇ ಸರಿ ಇರಬಹುದಲ್ಲ…! ಹೀಗಾಗಿ ಭೂಮಿಗೆ ಅದರದೇ ಒಂದು ಕ್ಯಾರೆಕ್ಟರ್ ಇಲ್ಲ. ಎಲ್ಲಾ ನಾವು ಮಾಡಿಕೊಂಡಿರುವುದು. ನೀರಿಗೆ ಹೆಣ್ಣಿನ ಹೆಸರನ್ನೇ ಯಾಕೆ ಇಟ್ಟಿದ್ದಾರೆ..? ಅದು ಹೇಳಿತ್ತೇ ನಾನು ಹೆಣ್ಣೆಂದು ಆದರೆ ನಾವು ಹೆಣ್ಣು ಎಂದು ಮಾಡಿಕೊಂಡಿದ್ದೇವೆ. ಇವೆಲ್ಲ ನಮ್ಮ ಕಲ್ಪನೆಗಳು ಇದನ್ನು ಮೀರಿ ಹೇಳಬೇಕು. ಈ ಪ್ರಪಂಚ ಎನ್ನುವುದು ನಾವು ನೋಡಿದಂತೆ ಅದಕ್ಕೆ ತನ್ನದೇ ಆದ ಕ್ಯಾರೆಕ್ಟರ್ ಇಲ್ಲ.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

Read More

ಕೆ.ಟಿ. ಹೇಳಿದ ನಾಲ್ಕು ಪ್ರಸಂಗಗಳು

ಸ್ವಲ್ಪ ಹೊತ್ತು ಯೋಚಿಸಿದ ನಾಗಾರ್ಜುನ ಪಂಡಿತನ ಮುಖ ನೋಡಿ ಹೇಗಿಂದ. ಅಲ್ಲಿ ಬಿಂದಿಗೆ ಇದೆ ಎಂದು ನೀವು ಹೇಳುತ್ತಿದ್ದೀರಿ. ಆದರೆ ಈಗ ನಾನು `ಇಲ್ಲ’ ಎಂದೇ ಹೇಳುತ್ತೇನೆ. ಏಕೆಂದರೆ ಅಲ್ಲಿ ಇದೆಯೇ..? ಇಲ್ಲವೇ..? ಎಂದು ನೋಡಿಲ್ಲ. ಮೇಲಾಗಿ ನನ್ನ ಸ್ಪರ್ಶಕ್ಕೆ ಬಂದಿಲ್ಲ. ಎಲ್ಲಿಯವರೆಗೆ ಅದು ನನ್ನ ಸ್ಪರ್ಷ ಜ್ಞಾನಕ್ಕೆ ಬರುವುದಿಲ್ಲವೋ ಅಲ್ಲಿಯವರೆಗೆ ಅಲ್ಲಿ ಏನೂ ಇಲ್ಲ ಎಂದೇ ಹೇಳುತ್ತೇನೆ. ಅದೇ ರೀತಿ ದೇವರು ಎಂಬುದು ನನ್ನ ಸ್ಪರ್ಶ ಜ್ಞಾನಕ್ಕೆ ಎಲ್ಲಿಯವರೆಗೆ ಸಿಗುವುದಿಲ್ಲವೋ ಅಲ್ಲಿಯವರೆಗೆ ದೇವರು ಎಂಬುದು ಇಲ್ಲ ಎಂದೇ ಅರ್ಥ.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

Read More

ಯೂ ಆರ್ ಹರ್ಟಿಂಗ್ ಮೀ ತೇಜಸ್ವಿ…

ಧ್ಯಾನಸ್ಥ ಪೀಠದ ಕಡೆ ಹಾಕಿದ್ದ ಕಲ್ಲುಗಳ ಮೇಲು ಚಪ್ಪಡಿಗಳನ್ನು ತೆಗೆಯಬೇಕೆಂದು ತೇಜಸ್ವಿಗೆ ಒತ್ತಡ ಪ್ರಾರಂಭವಾಯಿತು. ಈ ಬಗ್ಗೆ ಕೆಟಿ ಯೊಂದಿಗೆ ಸಾಕಷ್ಟು ಚರ್ಚೆ ಮಾಡಿದರೂ ಕೆಟಿ ಒಪ್ಪಲಿಲ್ಲ. ತೇಜಸ್ವಿಗೆ ಒತ್ತಡ ಅತಿಯಾದಾಗ ‘ಒಂದು ದಿನ ರಾತ್ರಿ ಹನ್ನೆರೆಡು ಗಂಟೆವರೆಗೂ ಕರೆ ಮಾಡಿ ತೆಗೆಯಲೇ ಬೇಕು ಸ್ವಲ್ಪ ಚೇಂಜ್ ಆಗಬೇಕೆಂದು ತೇಜಸ್ವಿ ಒತ್ತಡ ಹಾಕಿದಾಗ ಬೇಸತ್ತ ಕೆಟಿ ಫೋನಿನಲ್ಲಿ ‘ಯೂ ಆರ್ ಹರ್ಟಿಂಗ್ ಮೀʼ ಎಂದು ಫೋನಿಟ್ಟರಂತೆ.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

Read More

ಕುಪ್ಪಳ್ಳಿ ಪ್ರವೇಶಿಸುತ್ತಿದ್ದಂತೆ ಕೆಟಿ ಭಾವುಕ

ಕವಿ ಸಮಾಧಿಯ ಎದುರು ನಿಂತು ಒಮ್ಮೆ ನಮಿಸಿ ಧನ್ಯರಾದೆವು. ಸುತ್ತಲೂ ಹಚ್ಚಹಸಿರು. ದನಕರುಗಳು ಧನ್ಯತೆಯಿಂದ ಮೇಯುತ್ತಿದ್ದವು. ಸುತ್ತಲೂ ನಿಲ್ಲಿಸಿರುವ ಕಲ್ಲುಗಳನ್ನು ನೋಡಿ ದಂಗಾದೆವು. ಸದಾ ಚಲನೆಯನ್ನು ಸಾರುವ ಈ ಕಲ್ಲುಗಳು ಕುವೆಂಪುರ ಅನಿತ್ಯವಾದ, ಆಗು ನೀ ಅನಿಕೇತನವನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದವು. ಧ್ಯಾನಪೀಠ ನೋಡಿ ಬಂಡೆ ಮೇಲೆ ಕುವೆಂಪು ಕುಳಿತುಕೊಂಡು ಸುತ್ತಲೂ ಗಿರಿಸಾಲುಗಳ ನೋಡಿಯೇ ‘ಹಸಿರಿನ ಗಿರಿಗಳ ಸಾಲೇ ನಿನ್ನಯ ಕೊರಳಿನ ಮಾಲೆ’ ಎಂದು ಬರೆದಿದ್ದಾರೆ ಎಂದು ಕಲ್ಪಿಸಿಕೊಂಡೆವು.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

Read More

“ಎನಫ್ ಕಣೋ ಅವನ ನಗು ಮುಖ ನೋಡಿದ್ಯಲ್ಲ. ಸಾಕು ಇಷ್ಟೆ”

ಹಾಗೆ ಮುಂದೆ ಸಾಗುತ್ತಾ ಬಲಬದಿಯ ರಸ್ತೆ ಯೊಂದನ್ನು ತೋರಿಸಿ “ಇಲ್ಲೊಂದು ಮಜಾ ಇತ್ತು ಕಣಯ್ಯಾ. ಹೀಗೆ ಇಲ್ಲಿ ಒಮ್ಮೆ ಟ್ಯಾಕ್ಸಿ ಮಾಡಿಕೊಂಡು ಬಂದಿದ್ದೆ. ಆಗೆಲ್ಲ ಅಂಬಾಸಿಡರ್ ಮಾತ್ರ ಇದ್ವು. ಸಾರ್ ಈ ದಾರಿ ಚಿಕ್ಕಮಗಳೂರಿಗೆ ಹೋಗುತ್ತೆ ಷಾರ್ಟ್ ಕಟ್ ಅಂದ. ಸರಿ ನೋಡೇ ಬಿಡೋಣ ಎಂದು ಹೊರಟೆವು. ಹೋಗ್ತೀವಿ ಬರಿ ಅಪ್ಪು ಕಣೋ. ಕಾರ್ ಬೇರೆ ಹತ್ತಂಗಿಲ್ಲ ಸಾಕಾಗಿ ಹೋಯ್ತು. ನಾನು ಕಾರ್ ಇಳಿದು ವಾಪಾಸ್ ಬಾರದಿರಲು ಚಪ್ಪಡಿ ಕಲ್ಲು ಹಿಡಿದುಕೊಂಡು ಹಿಂದೆ ಕಲ್ ಇಡೋದು, ಡ್ರೈವರ್ ಹತ್ಸದು, ಸಾಕಾಗಿ ಹೋಯ್ತು ಕಣಯ್ಯ.”
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ