Advertisement

Tag: ಸುಕನ್ಯಾ ಕನಾರಳ್ಳಿ

ಎರಡು-ನಾಲಿಗೆಗಳ ನಡುವೆ ನಾನು!: ಸುಕನ್ಯಾ ಕನಾರಳ್ಳಿ ಅಂಕಣ

ಕರ್ನಾಟಕದಲ್ಲಿ ಕಲಿಯುವ ಮಕ್ಕಳ ಜೊತೆ ಒಂದು ಭಾವನಾತ್ಮಕ ಸಂಬಂಧವನ್ನು ಕಟ್ಟಿಕೊಳ್ಳುವುದಕ್ಕೆ ನನ್ನ ಕನ್ನಡ ಇನ್ನಿಲ್ಲದಂತೆ ಸಹಾಯ ಮಾಡಿದೆ. ಕೆಲವೊಮ್ಮೆ ಪರಿಕಲ್ಪನೆಗಳನ್ನ ಅರ್ಥಮಾಡಿಸುವಾಗ ಬಳಸಿಕೊಳ್ಳುತ್ತಿದ್ದ ದಿನನಿತ್ಯದ ಉದಾಹರಣೆಗಳಿಗೆ ಮತ್ತು ಹಾಸ್ಯಕ್ಕೆ ಕನ್ನಡವೇ ಜೀವವಾಗಿರುತ್ತಿತ್ತು. ಅದನ್ನೇ ಇಂಗ್ಲೀಷಿನಲ್ಲಿ ಹೇಳಿದ್ದಿದ್ದರೆ ಮಕ್ಕಳು ನಗುವುದಿರಲಿ, ನನಗೇ ಅಳು ಬರುತ್ತಿತ್ತೋ ಏನೋ. ಆದರೂ ಹೊರನಾಡಿನಿಂದ ಬಂದಿದ್ದ ಕೆಲವು ಮಕ್ಕಳಿಗೆ ಇಂಗ್ಲೀಷಿನಲ್ಲೂ ಹೇಳುವ ಪ್ರಯತ್ನ ಮಾಡುತ್ತಿದ್ದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಹನ್ನೊಂದನೆಯ ಬರಹ

Read More

‘ಹೊಸ’ ಅಲೆ  ಮತ್ತು ‘ಹಗರಣ’: ಸುಕನ್ಯಾ ಕನಾರಳ್ಳಿ ಅಂಕಣ

‘ಸಂಸ್ಕಾರ’ ಕಾದಂಬರಿಯ ಕರ್ತೃ ಯು ಆರ್ ಅನಂತಮೂರ್ತಿ ಚಿತ್ರಕಥೆಯಲ್ಲಿ ಮಾಡಿಕೊಂಡಿದ್ದ ಬದಲಾವಣೆಗಳ ಬಗ್ಗೆ ಹೇಳಿದ್ದ ಮಾತುಗಳನ್ನು ಗಮನಿಸಿದರೆ ‘ಸ್ವ-ಸೆನ್ಸಾರಿಕರಣ’ ಅಲ್ಲಿಯೂ ಸಹ ಕೆಲಸ ಮಾಡಿದ್ದನ್ನು ಗಮನಿಸಬಹುದು. ನಾರಣಪ್ಪನ ಸಂಸ್ಕಾರ ಕಾದಂಬರಿಯ ಅರ್ಧದಲ್ಲಿಯೇ ಒಬ್ಬ ಮುಸ್ಲಿಮ್ ವ್ಯಕ್ತಿಯಿಂದ ನಡೆದು ಹೋಗಿರುತ್ತದೆ. ಆದರೆ ಚಿತ್ರ ಅದರ ಬಗ್ಗೆ ಮೌನ ತಳೆಯುತ್ತದೆ. ಈ ‘ದಿವ್ಯಮೌನ’ ಪ್ರಾಣೇಶಾಚಾರ್ಯರ ತುಮುಲಕ್ಕೆ ಇನ್ನೊಂದು ಆಯಾಮ ನೀಡುವುದರ ಜೊತೆಗೆ ಹಾಗೇನಾದರೂ ಚಿತ್ರದಲ್ಲಿ ತೋರಿಸಿದ್ದಿದ್ದರೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯೇ ಇರುತ್ತಿರಲಿಲ್ಲ ಎನ್ನುವುದೂ ನಿಜ ತಾನೇ?
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಇಲ್ಲಿರಲಾರೆ… ಅಲ್ಲಿಗೆ ಹೋಗಲಾರೆ: ಸುಕನ್ಯಾ ಕನಾರಳ್ಳಿ ಅಂಕಣ

ಕಾಸರವಳ್ಳಿಯವರೇ ಹೇಳುವಂತೆ, ‘ಹಿಂದಿನ ಕಾಲದ ಗ್ರಾಮೀಣ ಬದುಕಲ್ಲಿ ಶಾಂತಿ ಇತ್ತು, ಸೌಹಾರ್ದತೆ ಇತ್ತು ಎನ್ನುವುದು ಒಂದು ರಮ್ಯ ಕಲ್ಪನೆ ಅಷ್ಟೇ. ಇವತ್ತಿನ ನಗರ ಕೇಂದ್ರದ ಬದುಕಿಗೆ ಹೋಲಿಸಿದಾಗ ಸ್ವಲ್ಪ ಮಟ್ಟಿನ ಸೌಹಾರ್ದತೆ ಇತ್ತು ಎನ್ನುವುದು ನಿಜವಾದರೂ ಜಾತಿ, ಅಂತಸ್ತು, ವೃತ್ತಿಯ ನೆಲೆಯಲ್ಲಿ ಅನ್ಯಾಯ, ದೌರ್ಜನ್ಯ, ಹಿಂಸೆ ನಡೆಯುತ್ತಲೇ ಇದ್ದವು.’ ಅದನ್ನೇ ನಾಗರಾಜನ ಹೆಂಡತಿ, ‘ಆ ದಿನಗಳಲ್ಲಿ ಸುಖ ಇರಲಿಲ್ಲ, ನೆಮ್ಮದಿ ಇತ್ತು. ಆದರೆ ಇವತ್ತು ಸುಖ ಇದೆ, ನೆಮ್ಮದಿ ಇಲ್ಲ’ ಎಂದು ಹೇಳುತ್ತಾಳೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಒಂಭತ್ತನೆಯ ಬರಹ

Read More

ಸಾಟಿಯಿಲ್ಲದ ಬ್ಯೂಟಿ ನಿನ್ನದು, ಭೂತಾನ್!: ಸುಕನ್ಯಾ ಕನಾರಳ್ಳಿ ಅಂಕಣ

ಭೂತಾನಿಯ ಮಂದಿಯನ್ನು ನಮ್ಮ ಗೈಡ್ ತಂಡದ ಮೂಲಕ ಸಾರಂಶೀಕರಿಸಬಹುದು ಅಂತನ್ನಿಸುತ್ತದೆ. ನಿರಾಳ ಮುಖ; ಮೆದುಮಾತು; ಸ್ತೂಪ ಕಂಡಾಗೆಲ್ಲ ಮಣಮಣ ಎಂದು ಹೇಳಿಕೊಳ್ಳುವ ಪ್ರಾರ್ಥನೆ; ಅಪಾರವಾದ ರಾಜಪ್ರೇಮ; ನಮ್ಮ ಬ್ಯಾಗುಗಳನ್ನೆಲ್ಲ ಹೊತ್ತು ಸೂಕ್ಷ್ಮವಾಗಿ ಗಮನಿಸುತ್ತಲೇ ಹಿಂದೆಯಿಂದ ಬರುವ ಆದರೆ ಸ್ವಲ್ಪ ದಣಿವಾದರೂ ದುತ್ತನೆ ಎದುರಿಗೆ ಅವತರಿಸಿ, ‘ನೀರು ಬೇಕಾ? ತಿನ್ನಲು ಏನಾದರೂ ಬೇಕಾ?’ ಎಂದು ಕೇಳುವ ಕರುಣೆ ತುಂಬಿದ ಕಣ್ಣುಗಳು… ಇತ್ಯಾದಿ ವೃತ್ತಿಪರತೆಯನ್ನೂ ಮೀರಿದ ಜನಪ್ರೀತಿ ಅಂತನ್ನಿಸಿತ್ತು. ಹೇಳಿಕೇಳಿದ್ದೆಲ್ಲದಕ್ಕೂ, ‘ಓಕೆ ಲಾ…’ ಎಂದು ಹೇಳುವ ಲಲಲಾ ರೀತಿ ಭೂತಾನ್ ಬಿಟ್ಟರೂ ನಮ್ಮನ್ನು ಹಿಂಬಾಲಿಸಿತ್ತು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಎಂಟನೆಯ ಬರಹ

Read More

ಕರುಣಾಳು ಬಾ ಬೆಳಕೆ-ನವೋದಯ ಕನ್ನಡ ಕಾವ್ಯದಲ್ಲಿ ಪ್ರಾರ್ಥನೆ: ಸುಕನ್ಯಾ ಕನಾರಳ್ಳಿ ಅಂಕಣ

ನಾಗರಿಕತೆಯ ಇತಿಹಾಸ ಬರ್ಬರತೆಯ ಇತಿಹಾಸವೂ ಹೌದು ಎಂದು ಕಾರ್ಲ್ ಮಾರ್ಕ್ಸ್ ಹೇಳುತ್ತಾನೆ. ವೈಚಾರಿಕತೆ, ವಿಜ್ಞಾನ, ತಂತ್ರಜ್ಞಾನಗಳು ಹೊರಗಿಂದ ಬಂದು ಎರಡು ದಿನವಿದ್ದು ಮರಳಿ ಹೋದ ನೆಂಟರಾಗಿರಲಿಲ್ಲ. ಬದಲಿಗೆ ನಮ್ಮ ದೃಷ್ಟಿಕೋನಗಳನ್ನೇ ಪಲ್ಲಟಿಸಿದ, ಅಸಹನೆ ಮತ್ತು ಕ್ರೌರ್ಯಗಳನ್ನು ಸಾಮಾನ್ಯವಾಗಿಸಿದ ಪ್ರಚಂಡ ಶಕ್ತಿಯವು. ಯಂತ್ರವೇ ಬೃಹತ್ತಾಗಿ ಬೆಳೆದು ಮನುಷ್ಯ ಕುಲವನ್ನು ಆತ್ಮಹೀನವಾಗಿಸುವ ನಾಗರಿಕತೆ ಎಂಬ ದಮನಶಕ್ತಿಯ ಬಗ್ಗೆ ಎಚ್ಚರಿಸಲು ಇಂಗ್ಲೀಷ್ ರೊಮ್ಯಾಂಟಿಕ್ಕರು ಪ್ರಕೃತಿಯ ದನಿಯಾದ ಕಾವ್ಯವನ್ನೇ ಬಳಸಿಕೊಂಡರು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಏಳನೆಯ ಬರಹ

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ