Advertisement

Tag: ಸುಮಾವೀಣಾ

ಫ್ಲೈಟ್ ತಪ್ಪಿಸಿದ ಮೆಹೆಂದಿ ಮತ್ತು ನಾನು

ಯುವತಿಯೊಬ್ಬಳ ಭಾರೀ ಕನ್ನಡಕದಿಂದ ಪ್ರೇರಿತರಾದ ನಾವು ತಂಪು ಕನ್ನಡಕವನ್ನು ಹುಡುಕಿ ಹಾಕಿಕೊಂಡವು. ತಲೆಯನ್ನೊಮ್ಮೆ ನೇವರಿಸಿಕೊಳ್ಳಬೇಕೆಂದಾಗಲೇ ನಮಗೆ ಹೊಳೆದದ್ದು ನಮ್ಮ ತಲೆಯ ಮೆಹೆಂದಿಗೆ ಜಲಭಾಗ್ಯ ಕರುಣಿಸಿಲ್ಲವೆಂದು. ಅಷ್ಟರಲ್ಲಾಗಲೇ ನಮ್ಮ ಕೈಗೆ ಬೋರ್ಡಿಂಗ್ ಪಾಸ್ ದೊರೆಯಿತು. ಯಾವ ಲೌಂಜಿನಲ್ಲಿ ಕುಳಿತುಕೊಳ್ಳಬೇಕೆಂಬ ವಿವರ ಪಡೆದುಕೊಂಡೆವು. ಹಾಗೆ ಅತ್ತಿಗೆ ನಾದಿನಿಯರಿಬ್ಬರೂ ಒಬ್ಬರ ಮುಖವನ್ನೊಮ್ಮೆ ನೋಡಿಕೊಂಡೆವು… ನಗು ಬರಲಿಲ್ಲ. ನಮ್ಮ ಅವಾಂತರಕ್ಕೆ ಸಿಟ್ಟು ಬರುತ್ತಿತ್ತು. ಲೌಂಜಿನಲ್ಲೊಮ್ಮೆ ನಮ್ಮ ಲಗೇಜನ್ನು ಕುಕ್ಕರಿಸಿ ವಾಶ್ ರೂಮಿಗೆ ದೌಡಿಟ್ಟೆವು.
ಸುಮಾವೀಣಾ ಬರೆದ ಅನುಭವ ಕಥನ ನಿಮ್ಮ ಓದಿಗೆ

Read More

ಔದಾರ್ಯದ ಉರುಳಲ್ಲಿ ಚಿಕ್ಕೋಳೂ ಹಿರಿದಿಮ್ಮಿ

ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕೆಂಬುದು ನಿಜವಾದರೂ, ಔದಾರ್ಯವು, ನೀಡುವವನ ಬದುಕನ್ನೆ ಕಸಿದುಕೊಳ್ಳುವಷ್ಟು ಅತಿಯಾಗಿ ಇರಬಾರದೇನೋ. ಜನಪದ ಕಥನ ಕಾವ್ಯವಾದ ‘ಚಿಕ್ಕೋಳು ಹಿರಿದಿಮ್ಮಿ’ಯಲ್ಲಿ ಮನುಷ್ಯರ ಔದಾರ್ಯ, ಪ್ರಾಣಿಗಳ ಪ್ರಾಮಾಣಿಕತೆಯ ಉತ್ತುಂಗದ ಪರಿಚಯವಾದಂತೆಯೇ, ಮನುಷ್ಯರು ಮೃಗಕ್ಕಿಂತಲೂ ಕೀಳಾಗಿ ವರ್ತಿಸುವ ಮತ್ತೊಂದು ಪಾತ್ರದ ಪರಿಚಯವೂ ಆಗುತ್ತದೆ. ಈ ಖಂಡ ಕಾವ್ಯದ ಕತೆಯನ್ನು ಹೇಳಿದ್ದಾರೆ ಲೇಖಕಿ ಸುಮಾವೀಣಾ.

Read More

ಸಾಹಿತ್ಯ ಲೋಕದಲ್ಲಿ ‘ಜೋಳವಾಳಿ, ವೇಳೆವಾಳಿ’ಗಳ ಋಣಭಾವ

ದೇಶಸೇವೆಗೆ ನಿಷ್ಠರಾಗಿರುವ ಪಡೆಯನ್ನೇ ಹಿಂದಿನ ಕಾಲದಲ್ಲಿ ರಾಜರು ಕಟ್ಟುತ್ತಿದ್ದರು.‌ ಸಮಯದ ಹಂಗಿಲ್ಲದೆ ಜೀವದ ಹಂಗಿಲ್ಲದೆ ರಾಜ್ಯಕ್ಕಾಗಿ, ರಾಜನ ಕ್ಷೇ‌ಮಕ್ಕಾಗಿ ಪ್ರಾಣ ಕೊಡುವವರ ಸಮೂಹವೇ ಇರುತ್ತಿತ್ತು. ಅವರನ್ನು ಜೋಳವ್ಯಾಳಿಗಳು, ವೇಳೆವಾಳಿಗಳು ಎಂದು ಕರೆಯುತ್ತಿದ್ದರು.ಅವರ ಬಗ್ಗೆ ಅನೇಕ ಕಥೆ, ಕವನ ಲಾವಣಿಗಳು ಸೃಷ್ಟಿಯಾಗುತ್ತಿದ್ದವು, ಕನ್ನಡ ಸಾಹಿತ್ಯ ಲೋಕದಲ್ಲಿ ಈ ಎರಡು ಪದಗಳ ಬಳಕೆಯು ಯಾವೆಲ್ಲ ಸಂದರ್ಭಗಳಲ್ಲಿ…

Read More

ರಂಗೋಲಿ ಕಲಿಸಿ ಬಲಿಪಾಡ್ಯಮಿಗೆ ಹೊರಟ ಅಜ್ಜಿ

“ಪ್ರಯಾಸದಲ್ಲಿಯೇ ಏರು ದಾರಿಯನ್ನು ಏರಿ ಹೋಗುತ್ತಿರಬೇಕಾದರೆ ಅಜ್ಜಿ ಅರ್ಧಕ್ಕೆ ಸಿಕ್ಕೇ ಬಿಟ್ಟರು. “ಪೋಲಿಸರ ಕೈಗೆ ಕಳ್ಳ ಸಿಕ್ಕಂತಾಯಿತು ನನ್ನ ಪರಿಸ್ಥಿತಿ!”. “ನಾನು ಬರೋವರೆಗೂ ಕಾಯೋದಕ್ಕೇನಾಗಿತ್ತು?” ಎನ್ನುತ್ತಾ ಜೋರಾಗಿ ಕಿರುಚಲು ಪ್ರಾರಂಭ ಮಾಡಿದಳು. ನನಗೆ ಮಾತನಾಡಲು ಅವಕಾಶವೇ ಕೊಡಲಿಲ್ಲ. ಮೊದಲೆ ಅದು ರಸ್ತೆ! ಹೋಗೋರು ಬರೋರು ಎಲ್ಲ ನಮ್ಮನ್ನೆ ನೋಡೋರು ಅದಕ್ಕೆಲ್ಲಾ ಹೆದರುವ ಜಾಯಮಾನ ಆಕೆಯದ್ದಾಗಿರಲಿಲ್ಲ ಬಿಡಿ!”
ಸುಮಾವೀಣಾ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ