Advertisement

Tag: ಕೆಂಡಸಂಪಿಗೆ

ನಮ್ಮ ಕಾಲದ ಕೃಷಿ….: ರೂಪಾ ರವೀಂದ್ರ ಜೋಶಿ ಸರಣಿ

ಈ ಗದ್ದೆ ಕೆಲಸ ನಡೆಯುವಾಗ ನಾನಂತೂ ಮಧ್ಯಾಹ್ನ ಶಾಲೆ ಬಿಟ್ಟೊಡನೆ ಗದ್ದೆಗೆ ಓಡುತ್ತಿದ್ದೆ. ಅವೆಲ್ಲವನ್ನೂ ಕಣ್ಣು ತುಂಬಿಕೊಳ್ಳುತ್ತ, ಅವರ ಮಾತು, ಗಲಗಲ ನಗೆಗೆ ನಾನೂ ಹಲ್ಲು ಕಿಸಿಯುತ್ತ ಮೈ ಮರೆತು ನಿಂತು ಬಿಡುತ್ತಿದ್ದೆ. ತಿರುಗಾ ಆಯಿ ಜೋರಾಗಿ ಕರೆದು, “ಯೇ ಬಾರೇ. ಊಟ ಮಾಡಿ ಶಾಲೆಗೆ ಹೊರಡು” ಎಂದು ಗದರಿದಾಗ, “ಥೋ… ಇದೊಂದು ಮಳ್ಳು ಶಾಲೆ” ಎಂದು ನನ್ನೊಳಗೇ ಗೊಣಗುತ್ತ, ಅಲ್ಲಿಂದ ಕಾಲು ಕೀಳುತ್ತಿದ್ದೆ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ

Read More

ಆರಿಸಬಹುದು ಕಿಚ್ಚು; ಆರಿಸುವುದ್ಹೇಗೆ ಇದ್ದರೆ ಹೊಟ್ಟೆಕಿಚ್ಚು?!: ಬಸವನಗೌಡ ಹೆಬ್ಬಳಗೆರೆ ಸರಣಿ

ರೈತ ‘ನಾನು ಬಿತ್ತುವ ಬೀಜಗಳನ್ನೇ ನನ್ನ ನೆರೆಹೊರೆಯ ಹೊಲದ ರೈತರಿಗೂ ನೀಡುತ್ತೇನೆ’ ಎಂದು ಹೇಳಿದನಂತೆ! ಆಗ ಅವರಿಗೆ ಇನ್ನೂ ಅಚ್ಚರಿಯಾಗಿ ‘ನೀವು ನಿಮ್ಮ ಸ್ಪರ್ಧಾಳುಗಳಿಗೆ ಕೊಟ್ಟರೆ ನೀವೇ ನಿಮ್ಮ ಸ್ಪರ್ಧಿಯನ್ನು ಬೆಳೆಸಿದಂತಾಗುವುದಿಲ್ಲವೇ?’ ಎಂದಾಗ ಆ ರೈತ ‘ನಾನು ಬಿತ್ತುವ ಬೀಜಗಳನ್ನೇ ಅಕ್ಕಪಕ್ಕದವರಿಗೂ ಕೊಟ್ಟರೆ ಫಲ ಬಿಡುವ ಸಮಯದಲ್ಲಿ ಪರಾಗಸ್ಪರ್ಶದಿಂದಾಗಿ ನನ್ನ ಹೊಲದ ಫಲವು ಉತ್ತಮವಾಗುತ್ತದೆ. ಒಂದೊಮ್ಮೆ ಅಕ್ಕಪಕ್ಕದ ಹೊಲದವರು ಕಮ್ಮಿ ಗುಣಮಟ್ಟವಿರುವ ಬೀಜಗಳನ್ನು ಬಿತ್ತಿದರೆ ಫಲ ಬಿಡುವ ಸಮಯದಲ್ಲಿ ಆ ಹೊಲದ ಪರಾಗರೇಣುಗಳಿಂದ ನನ್ನ ಹೊಲದ ಫಲವೂ ಕಮ್ಮಿಯಾಗುತ್ತದೆ!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಡಾ. ವಿಶ್ವನಾಥ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

ಲೈಟ್ಸ್…ಕ್ಯಾಮರಾ…ಆ್ಯಕ್ಷನ್ ಎಂದು ನಿರ್ದೇಶಕರು ಹೇಳಿದಾಗ ನಿರ್ಮಲಾಳ ಎದೆ ಧಸಕ್ಕೆಂದಿತು. ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತಾ ಬಂದ ಕೃಷ್ಣ ಕೈಯ್ಯನ್ನು ಚಾಚಿ ಬೆಣ್ಣೆ ಗಡಿಗೆ ತೆಗೆದುಕೊಂಡವನು ಪುಟುಪುಟು ಓಡಿದ. ಹೆಜ್ಜೆಯಿಡುತ್ತಾ ಬಂದದ್ದು… ಕೈಚಾಚಿದ್ದು… ಓಡಿದ್ದು… ಇದು ನಿರ್ಮಲಾಳ ಮನಸ್ಸಿನಲ್ಲಿ ಗಿರಕಿ ಹೊಡೆಯತೊಡಗಿತ್ತು. ಅವಳು ಈಗ ಬಾಗಿಲ ಮರೆಯಿಂದ ಬೆಣ್ಣೆ ಗಡಿಗೆಯಿದ್ದ ಕಂಬದಾಚೆಗೆ ಹೋಗಬೇಕಿತ್ತು. ಆದರೆ ಅವಳು ಚಲನೆಯಿಲ್ಲದೆ ನಿಂತಿದ್ದಳು.
ಡಾ. ವಿಶ್ವನಾಥ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಲೈಟ್ಸ್… ಕ್ಯಾಮರಾ… ಆ್ಯಕ್ಷನ್” ನಿಮ್ಮ ಓದಿಗೆ

Read More

ವಸ್ತುಗಳ ಸರ್ವಾಧಿಕಾರದಿಂದ ಮುಕ್ತಿ ಪಡೆಯವುದು ಹೇಗೆ?: ಎಲ್.ಜಿ.ಮೀರಾ ಅಂಕಣ

ವಸ್ತುಗಳನ್ನು ವ್ಯವಸ್ಥಿತವಾಗಿ ಇರಿಸಿಕೊಳ್ಳುವ ವಿಷಯದ ಬಂದಾಗ, ಕೊನೆಗೂ ನಾವು ಮನುಷ್ಯರು ಅಭ್ಯಾಸಗಳ ದಾಸರು ಅನ್ನಿಸುತ್ತದೆ. ಚಿಕ್ಕದೋ ದೊಡ್ಡದೋ, ಮುಖ್ಯವೋ, ಅಮುಖ್ಯವೋ ಯಾವುದೇ ವಸ್ತುವನ್ನಾದರೂ ಯಾವಾಗಲೂ ಒಂದೇ ಜಾಗದಲ್ಲಿ ಇಡಲು ಕಲಿತೆವು ಅಂದರೆ ಅಲ್ಲೇ ಇಡುತ್ತೇವೆ, ಅಭ್ಯಾಸ ಆಗಿಬಿಟ್ಟಿತೆಂದರೆ, ಎಷ್ಟೋ ಸಲ ಅನ್ಯಮನಸ್ಕರಾಗಿಯೂ ವಸ್ತುಗಳನ್ನು ಸರಿಯಾದ ಜಾಗದಲ್ಲೇ ಇಟ್ಟುಬಿಡುತ್ತೇವೆ! ಹೀಗಾಗಿ ತುಂಬ ಮುಖ್ಯವಾದ ಸಲಕರಣೆಗಳನ್ನಾದರೂ ಒಂದೇ ಜಾಗದಲ್ಲಿ ಯಾವಾಗಲೂ ಇಡುವ ಅಭ್ಯಾಸವನ್ನು ಮಾಡಿಕೊಂಡೆವೆಂದರೆ ನಮಗೆ ನಾವೇ ದೊಡ್ಡ ಸಹಾಯ ಮಡಿಕೊಂಡೆವು ಎಂದರ್ಥ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಉಲ್ಟಾಪಲ್ಟಾ ಆದ ನನ್ನ ಪ್ಲಾನು! : ಎಚ್. ಗೋಪಾಲಕೃಷ್ಣ ಸರಣಿ

ಅವರು ಎಲೆಕ್ಟ್ರಿಕ್ ಕಾಂಟ್ರಾಕ್ಟ್ ಮಾಡ್ತಾ ಇದ್ದರು, ಪಾರ್ಟ್ ಟೈಮ್ ಆಗಿ. ನೀನೂ ಇದನ್ನೇ ಮಾಡು, ದುಡ್ಡು ಚೆನ್ನಾಗಿ ಸಿಗುತ್ತೆ, ಹೇಗಿದ್ದರೂ ನಿಮ್ಮದು ಹೊಸಾ ಏರಿಯ, ಬೇಕಾದಷ್ಟು ಜನ ಮನೆ ಕಟ್ಟುತ್ತಾರೆ, ನೀನೇ ಕಾಂಟ್ರಾಕ್ಟ್ ಮಾಡಬಹುದು ಅಂತ ಹುರಿದುಂಬಿಸಿ ಏಣಿ ಹತ್ತಿಸಿದ್ದ. ಪಾರ್ಟ್ ಟೈಮ್ ಕೆಲಸ, ಅದೂ ಚೆನ್ನಾಗಿ ದುಡ್ಡು ಮಾಡಬಹುದು ಅನ್ನುವ ಹಾಗಿದ್ದರೆ ಒಂದು ಕೈ ನೋಡೇ ಬಿಡೋಣ ಅನ್ನುವ ಉತ್ಸಾಹ ತುಂಬಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ