Advertisement

Tag: ಕೋಡಿಬೆಟ್ಟು ರಾಜಲಕ್ಷ್ಮಿ

ಜಗಳ ನಮ್ಮ ಮನೆದೇವರು

ಜಗಳಗಳೆಂದರೆ ಎಲ್ಲರಿಗೂ ಪ್ರತ್ಯಕ್ಷವಲ್ಲದಿದ್ದರೂ ಪರೋಕ್ಷವಾಗಿಯಾದರೂ ಇಷ್ಟವಾಗುತ್ತದೆ. ಹಸಿವು ನಿದ್ದೆಯ ಅಗತ್ಯವಿದ್ದಂತೆ, ಮನಸ್ಸಿಗೆ ಒಂದಿಷ್ಟು ಜಗಳದ ಅವಶ್ಯಕತೆಯೂ ಇದೆಯೇನೋ. ಆದರೆ ಅದು ಮನುಷ್ಯನ ಬದುಕಿಗೇ ಕುತ್ತು ತಂದಾಗ ಸಮಸ್ಯೆಗಳು ಬೆಳೆಯಲಾರಂಭಿಸುತ್ತವೆ. ಗುಬ್ಬಿಯನ್ನು ಕಂಡರೆ ಅಕ್ಕರೆ ಮೂಡಿದಂತೆ, ಬೆಕ್ಕುಗಳನ್ನು ಕಂಡರೆ ಮುದ್ದು ಬಂದಂತೆ, ಜಗಳಗಳಿಗೂ ಸಾಮಾನ್ಯವಾದುದೊಂದು ಕಾರಣವಿದೆಯೇ.. ಕೋಡಿಬೆಟ್ಟು ರಾಜಲಕ್ಷ್ಮಿ ಬರಹ

Read More

ಅಂತಿಮ ನ್ಯಾಯಾಧೀಶರು ಜನರೇ ಅಲ್ವೇ..

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕಿ ಮಹಾಶ್ವೇತಾ ದೇವಿ ಅವರು ಜನಪರ ಚಳವಳಿಗಳಲ್ಲಿ ಗುರುತಿಸಿಕೊಂಡವರು. ದೇಶದ ವಿವಿಧೆಡೆಗಳಲ್ಲಿ ಬುಡಕಟ್ಟು ಮತ್ತು ಆದಿವಾಸಿ ಸಮುದಾಯಗಳ ಜೊತೆಗೆ ದೀರ್ಘಕಾಲ ಉಳಿದುಕೊಂಡು ಅವರ ಹಾಡುಕಥೆಗಳನ್ನು ಗ್ರಹಿಸಲು ಪ್ರಯತ್ನಿಸುತ್ತ, ಅವರ ಜೀವನಮೌಲ್ಯಗಳ ಕುರಿತು ಕಾದಂಬರಿ, ಕತೆಗಳನ್ನು ಬರೆದವರು. ಅಷ್ಟು ಮಾತ್ರವಲ್ಲ, ಅವರ ಹಕ್ಕುಗಳ ಪರವಾಗಿ ಹೋರಾಡಿದರು. ಜನವರಿ ೧೪ ಅವರು ಹುಟ್ಟಿದ ದಿನ. ಅವರನ್ನು ಕೇರಳದಲ್ಲಿ ಭೇಟಿ ಮಾಡಿದ ಸಂದರ್ಭವನ್ನು ನೆನಪಿಸಿಕೊಂಡು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಬರಹ

Read More

ಸಮಯದ ಆಡಿಟಿಂಗ್ ಎಂಬೊಂದು ಲಾಭದಾಯಕ ಸಂಗತಿ

ಡಿಜಿಟಲ್ ಲೋಕವು ಬದುಕಿಗೆ ವೇಗವನ್ನು ಕೊಡುತ್ತದೆ. ಎಲ್ಲಿಗೋ ಪ್ರಯಾಣಿಸುವುದಕ್ಕಾಗಿ ಸಮಯವನ್ನು ಮೀಸಲಿಡಬೇಕಿಲ್ಲ, ಯಾವುದೋ ವಸ್ತುವನ್ನು ತರಿಸಿಕೊಳ್ಳಲು ಸಮಯವನ್ನು ಖರ್ಚು ಮಾಡಬೇಕಿಲ್ಲ. ತಿಂಡಿ ತಿನಿಸು, ಉಡುಪು, ಸಾಮಾಜಿಕ ಚರ್ಚೆಗಳು, ಕಾರ್ಯಕ್ರಮಗಳು, ಸಂಭ್ರಮಗಳೆಲ್ಲವೂ ಡಿಜಿಟಲ್ ಲೋಕವನ್ನು ಸರ ಸರನೇ ಪ್ರವೇಶಿಸಿಬಿಟ್ಟಿವೆ. ಹೀಗೆ ನಮಗೆ ಉಳಿತಾಯವಾಗುವ ಸಮಯವೆಷ್ಟು, ಅದನ್ನು ನಾವು ಹೇಗೆಲ್ಲಾ…

Read More

‘ತವರಿಗೂ ಒಂದು ತವರು ಹಿಂಬಾಗಿಲು’

ಆಧುನಿಕ ಮನೆಗಳಲ್ಲಿ ಹಿಂಬಾಗಿಲಿಗೆ ಜಾಗವೇ ಇರುವುದಿಲ್ಲ. ಒಂದುವೇಳೆ ಹಿಂಬಾಗಿಲು ಇದ್ದರೂ, ಅದರ ವಿನ್ಯಾಸದಲ್ಲಿ ಎಷ್ಟೊಂದು ಒಪ್ಪ ಓರಣ ಇರುತ್ತದೆ. ಕಾಲ ಬದಲಾದಂತೆ ಹಿಂಬಾಗಿಲ ಅವಶ್ಯಕತೆಯೂ ಇಲ್ಲವಾಗಿದೆ. ಆದರೆ ಹಿಂದಿನ ಕಾಲದ ಮನೆಗಳಲ್ಲಿ ಒಪ್ಪ ಓರಣಕ್ಕೆ ಆದ್ಯತೆಯಿಲ್ಲದ ಹಿಂಬಾಗಿಲುಗಳ ಬಳಿಯೇ ಹೃದಯ ಬಿಚ್ಚಿ ಮಾತನಾಡುವ ‘ತಾವು’ ಇರುತ್ತಿತ್ತು. ಹಿಂಬಾಗಿಲುಗಳ ಈ ಲೋಕವು…

Read More

ಈ ಜೋರು ಮಳೆಯೂ, ಬೊಬ್ಬೆಯೂ.. ನಿಮಗೇನಾದರೂ ಕೇಳಿಸುತ್ತಿದೆಯಾ ?

ಸುಂದರವಾದ ಇಂಟೀರಿಯರ್ ಡೆಕೊರೇಶನ್ ಮಾಡಿದ ಅಡುಗೆ ಮನೆಯಲ್ಲಿ ದಿನಸಿ ಸಾಮಾನು ತುಂಬಿಡಲು ಎಷ್ಟೊಂದು ಚಂದದ ಡಬ್ಬಿಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಆದರೆ ಅತ್ತ ಸುರಿಯುತ್ತಿರುವ ಭಾರೀ ಮಳೆಯೂ, ಕೃಷಿ ಕ್ಷೇತ್ರದ ಕುರಿತು ನಡೆಯುತ್ತಿರುವ ಚರ್ಚೆಗಳು, ಏರುಪೇರಾದ ಹವಾಮಾನದ ಆತಂಕಗಳು ಯಾಕೋ ಕಂಗಾಲು ಮಾಡುತ್ತಿವೆ. ಅಂತಹುದೇ ಆತಂಕಗಳನ್ನು ನಮ್ಮ ನಡುವಿನ ಕತೆ…

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ