Advertisement

Tag: ಕೋಡಿಬೆಟ್ಟು ರಾಜಲಕ್ಷ್ಮಿ

ಹಾಗಾದರೆ ನಾನು ನಿಮಗೆ ಬೇಡವಾ.. ಮಳೆಯದ್ದೊಂದು ಪ್ರಶ್ನೆ

ಈ ಮಳೆಯೋ ಜೀವ ಸಂಕುಲವನ್ನು ಉಳಿಸಲೆಂದೇ ದೇವರು ಬಂದಂತೆ ಪ್ರತೀ ವರ್ಷ ನಮ್ಮ ಮೇಲೆ ನಂಬಿಕೆಯಿಟ್ಟು ಬರುತ್ತದೆ. ಅದು ಕೊಡುವ ಖುಷಿಯಿಂದ ಕವನವೊಂದು ಮೊಳಕೆಯೊಡೆದರೆ ಆ ಸಾಲುಗಳನ್ನು ಯಾರೊಡನೆ ಹಂಚಿಕೊಳ್ಳಬೇಕು ಎಂದು ತಿಳಿಯದೇ ಮನಸ್ಸು ತಬ್ಬಿಬ್ಬಾಗುತ್ತದೆ. ಎಲ್ಲಿಯೂ ಹರಿದು ಹೋಗಲು ಒಂದಿಷ್ಟು ಜಾಗವಿಲ್ಲದೇ, ಬಂಧಿಯಾದಂತೆ ಚಡಪಡಿಸುವ ಮಳೆನೀರಿಗೆ ‘ಪ್ರವಾಹ’ವೆಂಬ ನಾಮಕರಣವಾಗಿದೆ. ಆದರೂ ಈ ಮಳೆಯೋ ನಿಸ್ವಾರ್ಥಿ ಪ್ರೇಮಿಯಂತೆ ನಮ್ಮನ್ನು ಹಚ್ಚಿಕೊಂಡು, ಮುದ್ದಿಸುತ್ತ ಸುಮ್ಮನೇ ಸುರಿಯುತ್ತಿದೆ. ಕೋಡಿಬೆಟ್ಟು ರಾಜಲಕ್ಷ್ಮಿ ಬರಹ ನಿಮ್ಮ ಇಂದಿನ ಓದಿಗಾಗಿ.

Read More

ಪುರಸ್ಕಾರ ದೊಡ್ಡದೋ ನಗದು ದೊಡ್ಡದೋ: ಒಂದು ಸಾಹಿತ್ಯಿಕ ಜಿಜ್ಞಾಸೆ

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ರೀತಿಯ ಪ್ರಶಸ್ತಿಗಳಿವೆ. ಕನ್ನಡ ಸಾಹಿತ್ಯ ಕ್ಷೇತ್ರವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅನೇಕ ಮಂದಿ ಹಿರಿಯರು, ಪೂರ್ವಿಕರು ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಪ್ರಶಸ್ತಿಗಳನ್ನು ನೀಡಲು ದತ್ತಿನಿಧಿಗಳನ್ನು ಸ್ಥಾಪಿಸಿದ್ದಾರೆ. ಆದರೆ ಆ ದತ್ತಿನಿಧಿಯ ಬಡ್ಡಿ ಮೊತ್ತ ಕಿರಿದಾಗುತ್ತಿರುವುದರಿಂದ, ಪ್ರಸ್ತುತ ಪ್ರಶಸ್ತಿಯ ಜೊತೆಗಿರುವ ನಗದು ಬಹುಮಾನವು ತೀರಾ ಕಿರಿದಾಗಿದೆ. ಅದನ್ನು ಹೆಚ್ಚಿಸುವ ಅಥವಾ ಪ್ರಶಸ್ತಿಯ ವಿಧಾನವನ್ನು ಪರಿಷ್ಕರಿಸುವ ಪ್ರಯತ್ನಗಳಾಗಬೇಕು ಎಂಬ ನಿಟ್ಟಿನಲ್ಲಿ ಲೇಖನವೊಂದನ್ನು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದಿದ್ದಾರೆ.

Read More

ಸಾಹಿತ್ಯ ಪುರವಣಿಗಳು ಅನುತ್ಪಾದಕವೇ?

ಕನ್ನಡ ಪತ್ರಿಕೋದ್ಯಮದಲ್ಲಿ ಸಾಹಿತ್ಯಪುರವಣಿಗಳು ಕ್ಷೀಣವಾಗಿವೆ, ಅಥವಾ ಕೆಲವು ಮಾಧ್ಯಮ ಸಂಸ್ಥೆಗಳು ಪುರವಣಿಯನ್ನೇ ನಿಲ್ಲಿಸಿಬಿಟ್ಟಿವೆ. ಎರಡು ವರ್ಷಗಳ ಹಿಂದೆ ಕೋವಿಡ್‍ ಸೋಂಕು ವ್ಯಾಪಿಸದಂತೆ ಹೇರಿದ್ದ ಲಾಕ್‍ ಡೌನ್‍ ಸಂದರ್ಭದಲ್ಲಿ ಮಾಧ್ಯಮ ಸಂಸ್ಥೆಗಳು ನಷ್ಟವನ್ನು ಭರಿಸಿಕೊಳ್ಳಲು ಅನೇಕ ಪುಟಗಳನ್ನು ಕಡಿತ ಮಾಡಿದವು. ಕೋಡಿಬೆಟ್ಟು ರಾಜಲಕ್ಷ್ಮಿ ಬರಹ ಇಲ್ಲಿದೆ.

Read More

ದೇವಕಿ ಜೈನ್ ಆತ್ಮಕತೆಯ ಕೆಲವು ಪುಟಗಳು

ಮೈಸೂರು ನಾಗರಿಕ ಸೇವೆಯ ಪ್ರೊಬೇಷನರಿ ಕಲಿಕೆಯಲಿದ್ದಾಗ, ಅಪ್ಪ ಕುದುರೆ ಸವಾರಿ ಕಲಿತಿದ್ದರು. ಈ ಕತೆಯನ್ನು ಹೇಳುತ್ತ ಹೇಳುತ್ತ ಅಮ್ಮ ನಗುತ್ತಿದ್ದಳು. ‘ನೋಡು, ನಾನು ಅವರನ್ನು ಮೊದಲು ಹರಿವಾಣದಲ್ಲಿ ತುಂಬಿದ್ದ ನೀರಿನಲ್ಲಿ ನೋಡಿದ್ದೆ’. ಸಾಮಾನ್ಯವಾಗಿ ಆ ಕಾಲದಲ್ಲಿ ಸಾಂಪ್ರದಾಯಿಕ ಮದುವೆಗಳಲ್ಲಿ ಸಂಬಂಧಗಳು ಮಧುರವಾಗಿರುವುದು ಅಪರೂಪ. ಆದರೆ ನನ್ನ ಅಪ್ಪ ಅಮ್ಮನ ಸಂಬಂಧ ಬಹಳ ಮಧುರವಾಗಿ ಆರಂಭವಾಗಿ, ಅವರ ಬದುಕಿನುದ್ದಕ್ಕೂ ಮಧುರವಾಗಿಯೇ ಸಾಗಿತು. ದೇವಕಿ ಜೈನ್ ಅವರ ಆತ್ಮಕತೆ ‘ದ ಬ್ರಾಸ್ ನೋಟ್‍ ಬುಕ್’ ಅನ್ನು ಕೋಡಿಬೆಟ್ಟು ರಾಜಲಕ್ಷ್ಮಿ ‘ಹಿತ್ತಾಳೆ ಬಣ್ಣದ ಪುಸ್ತಕ’ ಎಂಬ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದು, ಆ ಪುಸ್ತಕದ ಕೆಲವು ಪುಟಗಳು ಇಲ್ಲಿವೆ.

Read More

ಬದುಕನ್ನು ಅರಸಿಕೊಂಡು ಓಡುತ್ತಲೇ ಇರಬೇಕು

ರೆಹಮಾನಿ ಅವರು ಉಕ್ರೇನ್‍ ನಲ್ಲಿ ನೆಲೆಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟು ಒಂದು ವರ್ಷವೂ ಭರ್ತಿಯಾಗಿದೆಯೋ, ಇಲ್ಲವೋ, ಅಲ್ಲಿ ಯುದ್ಧದ ಬಿಸಿಯೇರುತ್ತಿರುವುದು ಕಾಣಿಸಿತು. ತಾವು ಬಯಸಿದ ಬದುಕು ಅಲ್ಲಿಯೂ ಸಿಗುತ್ತಿಲ್ಲ ಎಂದು ಗೊತ್ತಾದ ಕೂಡಲೇ ಮತ್ತೆ ಅಲ್ಲಿಂದ ಹೊರಡಲೇಬೇಕಾಯಿತು. ರಷ್ಯಾ ಪಡೆಗಳು ಸ್ಫೋಟಿಸುತ್ತಿದ್ದ ಬಾಂಬುಗಳ ಸದ್ದಿನ ನಡುವೆಯೇ ಅವರು ಆ ದೇಶವನ್ನು ತೊರೆದರು. ಯಾರದೋ ಯುದ್ಧ ದಾಹಕ್ಕಾಗಿ ಬದುಕು ಕಳೆದುಕೊಳ್ಳುತ್ತಿರುವವರ ಕತೆಗಳಿಗೆ ದನಿಯೆಲ್ಲಿದೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ