Advertisement

Tag: ಗಿರಿಜಾ ರೈಕ್ವ

ಕುಂಭಮೇಳದ ನೆನಪುಗಳು….

ನನಗೆ ತಣ್ಣಗಿನ ನೀರೆಂದರೆ ನಡುಕ. ಹಾಗಾಗಿ ನೀರಿನಲ್ಲಿ ಮುಳುಗಲು ಹಿಂದು ಮುಂದು ನೋಡುತ್ತಿದ್ದೆ. ಹಾಗೇ ನೋಡಿ ವಾಪಸ್‌ ಬರುವುದು ಅಂತ ನನ್ನ ಇರಾದೆ ಇತ್ತು. ನನ್ನ ಸ್ನೇಹಿತೆ ಸಂಗಮದಲ್ಲಿ ಸ್ನಾನ ಮಾಡುವೆ ಎಂದಾಗ ಅವರ ಜೊತೆ ಹೋದೆ. ಒಂದು ದೋಣಿ ನದಿಯ ಸಂಗಮದ ಜಾಗಕ್ಕೆ ಕರೆದುಕೊಂಡು ಹೋಯಿತು. ಅಲ್ಲಿ ಬಟ್ಟೆ ಬದಲಿಸಲು ಒಂದು ತಡಿಕೆಯನ್ನು ಮಾಡಿದ್ದರು ದೋಣಿಯ ಮೇಲೆಯೇ. ನಾನೂ ನೀರಿನಲ್ಲಿ ಇಳಿದು ಮುಳುಗು ಹಾಕಿ ಬರುತ್ತೀನಿ ಅಂದುಕೊಂಡರೂ ಯಾಕೋ ಆಗುತ್ತಲೇ ಇರಲಿಲ್ಲ.
‘ದೇವಸನ್ನಿಧಿ’ ಅಂಕಣದಲ್ಲಿ ಕುಂಭಮೇಳಕ್ಕೆ ಭೇಟಿ ನೀಡಿದ ಅನುಭವದ ಕುರಿತು ಬರೆದಿದ್ದಾರೆ ಗಿರಿಜಾ ರೈಕ್ವ

Read More

ರೂಪಾತೀತ, ಗಾತ್ರಾತೀತ, ಕಾಲಾತೀತ ಶಿವ….

ಮಧ್ಯಪ್ರದೇಶದ ಭೋಜಪುರದಲ್ಲಿರುವ ಭೋಜೇಶ್ವರ, ತಮಿಳುನಾಡಿನ ತಂಜಾವೂರಿನ ಬೃಹದೇಶ್ವರ ಲಿಂಗ ನೆನಪಾಗುತ್ತದೆ. ಕೆಲವು ಮನೆತನಗಳ ಸಂಪ್ರದಾಯದಲ್ಲಿ ನದಿ ಮತ್ತು ಸಮುದ್ರ ತೀರದಲ್ಲಿ ವಾಸಿಸುವ ಜನರು ಪ್ರತಿದಿವಸ ಅದೇ ನೀರಿನಲ್ಲಿ ಸ್ನಾನ ಮಾಡಿ ಅಲ್ಲಿ ಸಿಗುವ ಮರಳಿನಲ್ಲಿ ಒಂದು ಲಿಂಗವನ್ನು ರಚಿಸಿ ಪೂಜಿಸಿ ಮತ್ತೆ ಅದನ್ನು ನೀರಿನಲ್ಲಿ ಅಂದೇ ವಿಸರ್ಜಿಸಿ ಮನೆಗೆ ಬರುವುದೂ ಉಂಟು. ಇದನ್ನು ವಿದ್ಯಾನಿವಾಸ್‌ ಮಿಶ್ರಾ ಒಂದು ಕಡೆ ಬರೆಯುತ್ತಾರೆ. ಮನುಷ್ಯ ಕಟ್ಟಿರುವ ಲಿಂಗಗಳಲ್ಲದೆ ಅನೇಕ ಕಡೆಗಳಲ್ಲಿ ಉದ್ಭವ ಲಿಂಗಗಳು ಸಿಗುತ್ತವೆ.
‘ದೇವಸನ್ನಿಧಿ’ ಅಂಕಣದಲ್ಲಿ ಶಿವನ ಹಲವು ರೂಪ, ರೂಪಕಗಳ ಕುರಿತು ಬರೆದಿದ್ದಾರೆ ಗಿರಿಜಾ ರೈಕ್ವ

Read More

ದಾರಾಸುರಂನ ಐರಾವತೇಶ್ವರ ದೇಗುಲದ ಒಳಗೂ… ಹೊರಗೂ…

ನಮಗೆ ರಥ ಅಂದ ಕೂಡಲೇ ನೆನಪಾಗುವುದು ಹಂಪಿಯ ವಿಜಯ ವಿಠ್ಠಲ ದೇವಾಲಯದ ರಥ, ಆಮೇಲೆ ಕೋನಾರ್ಕಿನ ಸೂರ್ಯ ದೇವಾಲಯದ ಚಕ್ರಗಳು. ಆದರೆ ಅದೇ ರೀತಿ ಇರುವ ರಥದ ಕಲ್ಪನೆಯಲ್ಲಿ ಕಟ್ಟಿರುವ ಇನ್ನೂ ಹಲವು ದೇವಾಲಯಗಳಿವೆ. ತಾಡಿಪತ್ರಿಯ ರಥದ ಮಾದರಿಯಲ್ಲಿರುವ ಗರುಡಗಂಬ, ಕುಂಭಕೋಣಂನ ಸಾರಂಗಪಾಣಿ ದೇವಾಲಯ ಹಾಗೂ ದಾರಾಸುರಮ್‌ನ ದೇವಾಲಯ ತಕ್ಷಣಕ್ಕೆ ನೆನಪಿಗೆ ಬರುವ ನಾನು ಕಂಡ ರಥದ ದೇವಾಲಯಗಳು.
‘ದೇವಸನ್ನಿಧಿ’ ಅಂಕಣದಲ್ಲಿ ಗಿರಿಜಾ ರೈಕ್ವ ಬರಹ

Read More

ದೇವಾಲಯಗಳಲ್ಲಿ ಮಿಥುನ ಶಿಲ್ಪಗಳು

ಇನ್ನೊಂದು ಕುತೂಹಲಕರ ವಿಷಯ ಅಂದರೆ, ಆ ಕಾಲದ ಸಾಮಾಜಿಕ ಜೀವನದ ಮೇಲೆ ಬೆಳಕು ಚೆಲ್ಲುವ ಕೃತಿಗಳನ್ನು ರಚಿಸಿರುವ, ತಮ್ಮ ಪ್ರವಾಸದ ಕಥೆ ಹೇಳುತ್ತ ಅಂದಿನ ಜೀವನದ ಬಗ್ಗೆ ತಿಳಿಸುವ ಕಲಣ, ಬಿಲ್ಲಣ ಮುಂತಾದವರ ಕೃತಿಗಳಲ್ಲೂ ಕೂಡ ಯಾವ ಕಾರಣಕ್ಕೆ ದೇವಾಲಯಗಳಲ್ಲಿ ಮಿಥುನ ಶಿಲ್ಪಗಳನ್ನು ಕೆತ್ತುತ್ತಾರೆ ಎನ್ನುವುದರ ಬಗ್ಗೆ ಏನೂ ಮಾಹಿತಿ ಸಿಗುವುದಿಲ್ಲ. ಹಾಗಾಗಿ ಇದು ಅಂದಿನ ಸಾಮಾಜಿಕ ಜೀವನದಲ್ಲಿ ತುಂಬಾ ಸಹಜವಾದ ಭಾಗವಾಗಿರಬಹುದು.
‘ದೇವಸನ್ನಿಧಿ’ ಅಂಕಣದಲ್ಲಿ ಪುರಾತನ ದೇವಸ್ಥಾನಗಳಲ್ಲಿ ಕಾಣಸಿಗುವ ಮಿಥುನ ಶಿಲ್ಪಗಳ ಕುರಿತು ಬರೆದಿದ್ದಾರೆ ಗಿರಿಜಾ ರೈಕ್ವ

Read More

ಕರಿಯಣ್ಣ ಕೆಂಚಣ್ಣರೆಂಬ ಜಾನಪದ ದೈವಗಳು

ನಿಧಾನವಾಗಿ ಜನ ಆಗ ತಾನೆ ಸ್ನಾನ ಮಾಡಿ, ಒಪ್ಪ ಓರಣ ಮಾಡಿಕೊಂಡು ಬರಲಾರಂಭಿಸಿದ್ದರು. ಭಜನೆಯ ವೇಳೆಯಲ್ಲಿ ಗುಡಿಗೆ ಬರುವಾಗ ಸ್ನಾನ ಮಾಡಿ ಬರುವ ಪದ್ಧತಿಯೂ ಗಮನಾರ್ಹ. ದಿನವಿಡೀ ಹೊಲಗದ್ದೆಗಳಲ್ಲಿ ದುಡಿಯುವ ವರ್ಗ ದುಡಿಮೆ ಮುಗಿಸಿಕೊಂಡು ಮನೆಗೆ ಬಂದು ಸ್ನಾನ ಮಾಡಿ ದೇವಾಲಯಕ್ಕೆ ಬರಲು ಸಂಜೆ ೭.೩೦ ಕಡಿಮೆ ಆಗುವುದಿಲ್ಲ ಅಂತ. ಅದಕ್ಕೇ ಇಡೀ ದೇವಾಲಯ ಗಲಗಲ ಅನ್ನಲು ೮ ಗಂಟೆ ತನಕ ಬೇಕಾಯಿತು. ನನ್ನ ವಾಪಸ್‌ ಊರಿಗೆ ಹೋಗುವ ಆತುರಕ್ಕೆ ಅರ್ಥವಿಲ್ಲ ಅಂತ ತಿಳಿದು ಮುಗಿದಾಗ ಹೊರಡೋದು ಅಂತ ತೀರ್ಮಾನಿಸಿ ವಾಚ್‌ ನೋಡಿಕೊಳ್ಳುವುದನ್ನು ಬಿಟ್ಟು ತೆಪ್ಪಗೆ ಕುಳಿತುಕೊಂಡೆ.
ಗಿರಿಜಾ ರೈಕ್ವ ಬರೆಯುವ ‘ದೇವಸನ್ನಿಧಿ’ ಅಂಕಣದಲ್ಲಿ ಹೊಸ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ