Advertisement

Tag: ವಸುಮತಿ ಉಡುಪ

ನವೀನ ತಂತ್ರಜ್ಞಾನದ ಕುರಿತ ನವೀನ ಮಾದರಿ ಕತೆಗಳು: ಗುರುರಾಜ ಕುಲಕರ್ಣಿ ಕೃತಿಯ ಕುರಿತು ವಸುಮತಿ ಉಡುಪ ಮಾತುಗಳು

ಈ ಕಥಾಸಂಕಲನದ ಕತೆಗಳು ಸಿದ್ಧ ಮಾದರಿಯ ಕತೆಗಳಿಗಿಂತ ವಿಭಿನ್ನವಾಗಿ ಚಿತ್ರಿತಗೊಂಡಿವೆ. ನವೀನ ತಂತ್ರಜ್ಞಾನದ ಕುರಿತು ಹೆಚ್ಚಿನ ಅರಿವಿಲ್ಲದವರಿಗೂ ತಿಳಿಯುವಂತೆ ಸರಳ ಭಾಷೆಯಲ್ಲಿ, ಸರಾಗವಾಗಿ ಕತೆ ಹೇಳಿದ್ದಾರೆ ಕುಲಕರ್ಣಿ, ಕತೆಗಳ ವೈವಿಧ್ಯ, ಭಾಷೆಯನ್ನು ಸಮರ್ಥವಾಗಿ, ಸುಲಲಿತವಾಗಿ ಬಳಸಿಕೊಂಡ ರೀತಿ, ಕತೆ ಹೇಳುವಲ್ಲಿನ ಲವಲವಿಕೆಯ ಗುಣದಿಂದಾಗಿ ಈ ಸಂಕಲನ ಛಂದ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದೆ. ಕನ್ನಡ ಸಾಹಿತ್ಯದ ಮಟ್ಟಿಗೆ ಅಪರೂಪ ಎನಿಸುವಂತಹ ಹಲವು ಕತೆಗಳು ಸಂಕಲನದಲ್ಲಿ ಗಮನ ಸೆಳೆಯುವಂತಿವೆ.
ಗುರುರಾಜ ಕುಲಕರ್ಣಿ ಕಥಾಸಂಕಲನ “ಹ್ಯಾಷ್‌ ಟ್ಯಾಗ್”ಗೆ ಛಂದ ಪುಸ್ತಕದ ಬಹುಮಾನ ಲಭಿಸಿದ್ದು, ಈ ಕೃತಿಯ ಕುರಿತು‌ ವಸುಮತಿ ಉಡುಪ ಮಾತುಗಳು ನಿಮ್ಮ ಓದಿಗೆ

Read More

ಸೀತಾಲಕ್ಷ್ಮಿಯ ಬದುಕಿನ ಸುತ್ತ…: ವಸುಮತಿ ಉಡುಪ ಕಾದಂಬರಿಯ ಪುಟಗಳು..

ತಂಬುಳಿಗೆ ಕಲೆಸಿದ್ದ ಅಷ್ಟೂ ಅನ್ನವನ್ನು ಬದಿಗೆ ದೂಡಿ ಹುಳಿಗೆ ಅನ್ನ ಕಲೆಸಲು ಸನ್ನದ್ಧನಾದ ಶಿವರಾಮ. ಹುಳಿ ಬಡಿಸಲು ಬಂದ ಸೀತಾಲಕ್ಷ್ಮಿಯ ಕೈಗಳು ಅಕ್ಷರಶಃ ನಡುಗುತ್ತಿದ್ದುವು. ತನ್ನ ತೌರಿನಲ್ಲಿ ಇಂತಾದ್ದೆಲ್ಲಾ ಕಂಡು ಗೊತ್ತಿಲ್ಲದ ಹುಡುಗಿಗೆ ದಿಗಿಲು, ದುಃಖ. ವಾಸ್ತವವಾಗಿ ಇದು ತನ್ನ ತಲೆಕೂದಲು ಎಂದು ಅವಳಿಗೆ ಅನುಮಾನ. ಮಂಗಳವಾರ ಅವತ್ತು. ಸೀತಾಲಕ್ಷ್ಮಿ ಅತ್ತೆ ಹೇಳಿದಂತೆ ತಲೆಗೆ ಎರೆದುಕೊಂಡಿದ್ದಳು. ಒದ್ದೆ ತಲೆಕೂದಲನ್ನು ಪಾಣಿಪಂಚೆಯಿಂದ ವರೆಸಿಕೊಂಡು ತುದಿಗಂಟು ಹಾಕಿಕೊಂಡಿದ್ದರೂ ಉಟ್ಟ ಸೀರೆಯ ಮೇಲೆ ಕೂದಲು ಉದುರಿ ಬಿದ್ದಿರಬಹುದಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ವಸುಮತಿ ಉಡುಪ ಬರೆದ ಕಾದಂಬರಿ “ಅಂತಃಪುರ”ದ ಕೆಲವು ಪುಟಗಳು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ