Advertisement

Tag: Gantichores

ಶಾಕ್ತಾರಾಧನೆ, ಹನುಮಾರಾಧನೆ ಮತ್ತು ಮೊಹರಂ

`ಮೊಹರಂ’ ಎಂದರೆ ನಿಷಿದ್ಧವಾದುದು ಎಂದರ್ಥ. ಶ್ರದ್ಧಾವಂತ ಮುಸ್ಲಿಮರ ಪಾಲಿಗಿದು ಸೂತಕದ ಮಾಸ. ಈ ಮಾಸದಲ್ಲಿ ಅವರು ಮದುವೆಯಂತಹ ಶುಭಕಾರ್ಯ ಹಮ್ಮಿಕೊಳ್ಳುವುದಿಲ್ಲ. ದುರಂತ ಸಾವು ವಸ್ತುವಾಗಿರುವ ಮೊಹರಂ ಸಾಹಿತ್ಯವೂ ಒಂದರ್ಥದಲ್ಲಿ ಸೂತಕದ ಸಾಹಿತ್ಯವೇ. ವಿಶೇಷವೆಂದರೆ, ಅರಬರ ಈ ದಾಯಾದಿ ಸಂಘರ್ಷದ ರಾಜಕೀಯ ಚರಿತ್ರೆ, ಮೊಹರಂ ಆಚರಣೆಯ ರೂಪತಾಳಿದ ಬಳಿಕ, ಇಸ್ಲಾಮಿನ ಜತೆಜತೆಗೆ ಜಗತ್ತಿನ ನಾನಾ ಭಾಗಗಳಿಗೆ ಹೋಯಿತು ಮತ್ತು ಅರಬೇತರ ದೇಶಗಳಲ್ಲಿ ವಿಭಿನ್ನ ರೂಪಾಂತರ ಪಡೆಯಿತು.
ಡಾ. ಅರುಣ್ ಜೋಳದಕೂಡ್ಲಿಗಿ ಬರಹ

Read More

ಮಗುವಿನ ಹಣೆಬರಹ ಬರೆಯುವ ಸೆಟಿಗೆವ್ವ

ಅಂತರ್ಜಾತಿ ಮತ್ತು ಅಂತರ ಧರ್ಮೀಯ ವಿವಾಹಗಳು ಈ ಸಮುದಾಯದಲ್ಲಿ ಬಹು ಹಿಂದಿನಿಂದಲೆ ನಡೆದಿವೆ.  ಈ ಪರಂಪರೆ ಈಗಲೂ ವಿರಳವಾಗಿ ಮುಂದುವರಿದೆ. ತಮಗಿಂತ ಮೇಲಿನ ಸಮುದಾಯಗಳಲ್ಲಿ ಮತ್ತು ಸಮನಾಂತರ ಎಂದು ಭಾವಿಸಿದ ಸಮುದಾಯಗಳಲ್ಲಿ ಮದುವೆ ನಡೆದಿರುವುದು ಹೆಚ್ಚು. ತಮಗಿಂತ ಕೆಳಗಿನವರು ಎಂದು ಭಾವಿಸಿದ ಸಮುದಾಯಗಳ ಜತೆ ಮದುವೆ ಸಂಬಂಧಗಳು ಕಡಿಮೆ. ಹುಟ್ಟಿನಿಂದ ಸಾವಿನವರೆಗೆ ನಡೆಸುವ ಆಚರಣೆಗಳು ವಿಭಿನ್ನವಾಗಿವೆ.  ಡಾ. ಅರುಣ್ ಜೋಳದ ಕೂಡ್ಲಿಗಿ ಬರೆಯುವ ‘ಗಂಟಿಚೋರರ ಕಥನಗಳು’ ಸರಣಿಯ ಹದಿನೈದನೇ ಕಂತು. 

Read More

ಗಂಟಿಚೋರರ ಸಾಂಪ್ರದಾಯಿಕ ಶಿಕ್ಷಣ

ಈ ಬಗೆಯ ಸವಾಲು ಸೆಟ್ಲಮೆಂಟಿಗೆ ಬಂದ ಮೇಲೆ ಒಂದು ಹಂತದಲ್ಲಿ ಬದಲಾಯಿತು. ಕಾರಣ ಈ ಸೆಟ್ಲಮೆಂಟುಗಳಲ್ಲಿ ಕ್ರಿಮಿನಲ್ ಟ್ರೈಬ್ಸ್ ಎಂದು ಯಾವುದನ್ನು ಕರೆಯುತ್ತಿದ್ದರೋ ಆ ಸಮುದಾಯಗಳು ಒಟ್ಟಿಗೆ ಬಾಳುವುದಕ್ಕೆ ಆರಂಭಿಸಿದವು. ಅಂತೆಯೇ ಬ್ರಿಟಿಷರ ಕಣ್ಗಾವಲು, ಹಾರುವ ಹಕ್ಕಿಯನ್ನು ಪಂಜರದೊಳಿಟ್ಟಂತಹ ಸ್ಥಿತಿ -ಹೀಗೆ ಏನೆಲ್ಲವು ಸೆಟ್ಲಮೆಂಟಿನಲ್ಲಿದ್ದರೂ ಗ್ರಾಮೀಣ ಭಾಗದಲ್ಲಿದ್ದ ಅವಮಾನದ ಸ್ವರೂಪ ಇಲ್ಲದಾಯಿತು. ಸೆಟ್ಲಮೆಂಟಿನ ಪ್ರತ್ಯೇಕ ಶಾಲೆಗಳಲ್ಲಿ ಈ ಸಮುದಾಯವನ್ನು ಮೌಲ್ಯಮಾಪನ…

Read More

ಗಿರಣಿವಡ್ಡರ್ ಮತ್ತು ಬಾವಿ ತೋಡುವ ಗಂಟಿಚೋರರು

‘ಈಗೀಗ ಗಿರಣಿ ಕೆಲಸದ ಬಗ್ಗೆ ಬೇಸರ ಬರುತ್ತಿತ್ತು. ಶ್ವಾಸಕೋಶದಲ್ಲಿ ಹತ್ತಿ ಸೇರಿ ಕಾರ್ಮಿಕರ ಆರೋಗ್ಯ ಹದಗೆಡುತ್ತಿತ್ತು. ಹಾಗಾಗಿ ಈ ಗಿರಣಿ ಕೆಲಸ ಬಿಡುವ ಮನಸ್ಸಾಗುತ್ತಿತ್ತು. ಸೂಪರ್ವೈಸರ್  ಹೆಂಡತಿಗೆ ಹೊಡೆದಂತೆ  ನಮಗೆ ಹೊಡೆಯುತ್ತಿದ್ದ. ಅಶ್ಲೀಲವಾಗಿ ಬೈಯುತ್ತಿದ್ದ. ಮಶೀನು ಹೊಲಸಾದರೆ ಬಡಿದು ಕೆಲಸದಿಂದ ಅರ್ಧಕ್ಕೆ ಕಳಿಸುತ್ತಿದ್ದ. ಊಟ ಮುಗಿಸಿಕೊಂಡು ಬರಲು ತಡವಾದರೆ ಹಸಿ ಬರಲಿನಿಂದ ಥಳಿಸುತ್ತಿದ್ದ. ಇಂಥಹ ಎಷ್ಟೋ ಅನ್ಯಾಯಗಳು ನೂಲಿನ ಗಿರಣಿಯಲ್ಲಿ ನಡೆಯುತ್ತಿದ್ದವು. ಒಂದು ಸಂಘಟನೆ ಕಟ್ಟಿ ಈ ಅನ್ಯಾಯ ತಡೆಗಟ್ಟಬೇಕೆಂದು ಅನ್ನಿಸುತ್ತಿತ್ತು.

Read More

ಕಳ್ಳತನಕ್ಕೆ ಗುಡ್ ಬೈ ಹೇಳಿದ ಗಂಟಿಚೋರರು ಮಾಡಿದ್ದೇನು?

ಆಗ ತುಡುಗು ಮಾಡುವುದು ಅವರ ಆರ್ಥಿಕತೆಯ ಪ್ರಧಾನ ಮೂಲವಾಗಿತ್ತು. ಅಂತೆಯೇ ಹಣ ಬಂಗಾರ ಮಾತ್ರವಲ್ಲದೆ ದಿನಬಳಕೆಯ ವಸ್ತುಗಳನ್ನು ಹೆಚ್ಚು ತುಡುಗು ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಈ ಸಮುದಾಯವು ಮುಖ್ಯವಾಗಿ ತುಡುಗು ಮಾಡುವ ಉದ್ದೇಶದಲ್ಲಿ ಹೊಟ್ಟೆಪಾಡಿನ ಅನಿವಾರ್ಯತೆ ಇತ್ತು. ಹಾಗಾಗಿ ಹಿಂದೆಯೂ ಕೂಡ ಈ ಸಮುದಾಯದಲ್ಲಿ ತುಡುಗುತನ ಇದ್ದದ್ದು ಹೆಚ್ಚಾಗಿ ಹಸಿವನ್ನು ನೀಗಿಸುವ ವಸ್ತುಸಂಗತಿಗಳಿಗೆ ಸಂಬಂಧಿಸಿದ್ದು ಎನ್ನುವುದನ್ನು ಗಮನಿಸಬೇಕು.
ಡಾ.ಅರುಣ್ ಜೋಳದ ಕೂಡ್ಲಿಗಿ ಬರೆಯುವ ‘ಗಂಟಿಚೋರರ ಕಥನಗಳು’ ಸರಣಿಯ ಹತ್ತನೆಯ ಕಂತು.

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ