Advertisement

Tag: H Gopalakrishna

ಮೆಜೆಸ್ಟಿಕ್‌ ಎಂಬ ಚಿತ್ರಮಂದಿರಗಳ ನಗರ: ಎಚ್. ಗೋಪಾಲಕೃಷ್ಣ ಸರಣಿ

ಜಯಶ್ರೀ ಚಿತ್ರಮಂದಿರ ಚಾಮರಾಜಪೇಟೆ ಒಂದನೇ ರಸ್ತೆಯ ಕೊನೆಯಲ್ಲಿ ಇತ್ತು. ಅದು ಕಳ್ಳೇಕಾಯಿ ಟಾಕೀಸ್ ಎಂದೇ ಪ್ರಖ್ಯಾತವಾಗಿತ್ತು. ಸುಮಾರಾಗಿ ಹಳೆಯ ಚಿತ್ರಗಳೇ ಅಲ್ಲಿ ಪ್ರದರ್ಶನವಾಗುತ್ತಿತ್ತು. ಆ ಟಾಕೀಸ್‌ಗೆ ಬರುತ್ತಿದ್ದವರು ಬಹುತೇಕ ಕಾರ್ಮಿಕ ವರ್ಗದವರು. ದೂರದೂರದ ಪ್ರದೇಶದವರು. ಅವರು ಹಾಗೆ ಬರುವಾಗ ಟೈಮ್ ಪಾಸ್‌ಗಾಗಿ ಕಳ್ಳೇಕಾಯಿ ತಂದು ತಿನ್ನುತ್ತಿದ್ದರಂತೆ. ಒಂದೊಂದು ಪ್ರದರ್ಶನವಾದಾಗಲೂ ರಾಶಿ ರಾಶಿ ಸಿಪ್ಪೆ ಬಿದ್ದಿರುತ್ತಿತ್ತಂತೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಹದಿನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ಮರೆತುಹೋಗುತ್ತಿದ್ದೆ ಬಿಲ್ಲು ಪಾವತಿಸಲು!: ಎಚ್. ಗೋಪಾಲಕೃಷ್ಣ ಸರಣಿ

ಮದುವೆ ಆದ ಮೇಲೆ ನನ್ನಾಕೆಗೆ ಈ ಕೇಸರಿಬಾತ್ ಕತೆ ಹೇಳಿದ್ದೆ. ನಂತರ ನಾನೂ ಅವಳೂ ಬೆಳಿಗ್ಗೆ, ನನಗೆ ಸೆಕೆಂಡ್ ಶಿಫ್ಟ್ ಇದ್ದಾಗ ಕೇಸರಿ ಭಾತ್‌ಗೆ ಲಗ್ಗೆ ಹಾಕ್ತಾ ಇದ್ದೆವು. ಆಗ ತಿಂದ ಡಬರಿ ಗಟ್ಟಲೆ ಕೆಸರಿಭಾತಿನ ರುಚಿ ನನಗೆ ಈಗಲೂ ಬಾಯಿ ಸಮುದ್ರ ಮಾಡುತ್ತೆ. ಸಣ್ಣ ವಯಸ್ಸು, ಕಲ್ಲು ತಿಂದು ಅರಗಿಸಿಕೊಳ್ಳುವ ಯೌವ್ವನ ಹಾಗೂ ಸಕ್ಕರೆ ಖಾಯಿಲೆ ಅಂಟುವ ವಯಸ್ಸಲ್ಲ, ಅದರಿಂದ ಅದೆಷ್ಟೋ ಕ್ವಿಂಟಾಲ್ ಕೇಸರಿಬಾತ್‌ಗೆ ಮುಕ್ತಿ ಕಾಣಿಸಿದ್ದೆವು. ಇದು ಸುಮಾರು 83ನೇ ಇಸವಿಯವರೆಗೆ ಅನೂಚಾನವಾಗಿ ನಡೆದುಕೊಂಡು ಬಂತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ತಾವಾಗೇ ಬಿದ್ದವರು ನನ್ನ ಬೈದಿದ್ದರು!: ಎಚ್. ಗೋಪಾಲಕೃಷ್ಣ ಸರಣಿ

ಬರ್ತಾ ಬರ್ತಾ ಅಜ್ಜಿ ಒಂದು ಗುಂಡಿಯಲ್ಲಿ ನೋಡದೆ ಕಾಲು ಇಟ್ಟಿತು. ಮೊಗಚಿಕೊಂಡು ಹಳ್ಳದಲ್ಲಿ ಮುಖಾಡೆ ಬಿದ್ದು ಬಿಡ್ತು. ಎಪ್ಪತ್ತು ವರ್ಷದ ಕೆಂಪು ಸೀರೆ ಉಟ್ಟ ಮಡಿ ಹೆಂಗಸು ಅಜ್ಜಿ ಆಗ. ತೆಳು ದೇಹ, ಮುಟ್ಟಿದ ಕಡೆ ಎಲ್ಲಾ ಮೂಳೆಗಳೇ, ಬೊಚ್ಚು ಬಾಯಿ ವಟ ವಟ ವಟ ನಾನ್ ಸ್ಟಾಪ್ ಮಾತು. ಅದು ಹೇಗೋ ಅವರನ್ನು ಮೇಲೆ ಎಬ್ಬಿಸಿದೆ. ದಾರಿ ಉದ್ದಕ್ಕೂ ಅದರ ಕೈಲಿ ಸಹಸ್ರ ನಾಮ ಮಾಡಿಸಿಕೊಂಡೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಒಂಭತ್ತನೆಯ ಕಂತು ನಿಮ್ಮ ಓದಿಗೆ

Read More

ದೇವಸ್ಥಾನಗಳ ವಾಸಸ್ಥಾನ….: ಎಚ್. ಗೋಪಾಲಕೃಷ್ಣ ಸರಣಿ

ಆಗ ಮೈಸೂರು ರಾಜ್ಯದಲ್ಲಿ ಊದುಬತ್ತಿ ತಯಾರಿಕೆ ಮತ್ತು ಮಾರಾಟ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಮುದ್ದಣ್ಣ ಬ್ರಾಂಡ್‌ನ ತುಂಬಾನೇ ದೊಡ್ಡ ಬೋರ್ಡ್ (ರಸ್ತೆ ಅಗಲದ್ದು) ಒಂದು ಚಿಕ್ಕ ಪೇಟೆಯಲ್ಲಿ ನೋಡಿದ್ದ ನೆನಪು ನನಗಿದೆ. ಪ್ರಕಾಶ ನಗರ, ಶ್ರಿರಾಮಪುರದ ಪ್ರತಿ ಮನೆಯ ಮುಂದೂ ಎಲ್ಲಾ ವಯಸ್ಸಿನ ಹೆಂಗಸರು ಊದು ಬತ್ತಿ ಹೊಸೆಯುತ್ತಾ ಕುಳಿತಿರುತ್ತಿದ್ದ ಗುಂಪನ್ನು ಕಾಣಬಹುದಿತ್ತು. ಅದೆಷ್ಟೋ ಸಾವಿರ ಕಡ್ಡಿ ಹೊಸೆದರೆ ಕೆಲವು ಆಣೆ ಕೂಲಿ. ಸಂಸಾರ ತೂಗಿಸುವಲ್ಲಿ ಮಹಿಳೆಯರೂ ಸಹ ಪ್ರಮುಖ ಪಾತ್ರ ವಹಿಸುತ್ತಿದ್ದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಎಂಟನೆಯ ಕಂತು ನಿಮ್ಮ ಓದಿಗೆ

Read More

ರಾತ್ರಿ ತೀರಿಕೊಂಡ ತಾತ ಬೆಳಗ್ಗೆ ಎದ್ದು ಬಂದಿದ್ದರು!

ಎಲ್ಲರೂ ಕೂತು ತೂಕಡಿಸುತ್ತಾ ಇದ್ದೀವಿ. ಊರುಗೋಲು ಟಕ್ ಟಕ್ ಎಂದು ಹೆಜ್ಜೆ ಸಮೇತ ಶಬ್ದ ಕೇಳಿಸಿತು. ಕಣ್ಣು ಬಿಟ್ಟು ನೋಡಿದರೆ ಅದೇನು ಆಶ್ಚರ್ಯ ಅಂತೀರಿ… ತಾತ ಕೋಲು ಊರಿಕೊಂಡು ಬಚ್ಚಲಿಗೆ ಹೋಗುತ್ತಿದ್ದಾರೆ! ತಾತ ಬದುಕಿದೆ, ಸತ್ತಿಲ್ಲ. ಖುಷಿಯಿಂದ ಮೊಮ್ಮಕ್ಕಳು ಕುಣಿದಾಡಿದರು. ದೊಡ್ಡವರೂ ಸಹ ದೊಡ್ಡ ನಿಟ್ಟುಸಿರುಬಿಟ್ಟು ಮುಖದಲ್ಲಿ ನಗು ತಂದುಕೊಂಡರು. ಬೆಳಿಗ್ಗೆ ಎದ್ದ ಕೂಡಲೇ ಡಾಕ್ಟರ ಮನೆಗೆ ನನ್ನನ್ನೇ ಕಳಿಸಿದರು. ತಾತ ಬದುಕಿದೆ, ಹೀಗೆ ರಾತ್ರಿ ಒಂದೂವರೆಗೆ ಅವರೇ ಎದ್ದು ಒಂದಕ್ಕೆ ಹೋದರು ಅಂತ ಹಾವಭಾವ ಸಮೇತ ವಿವರಿಸಿದೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಏಳನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ