Advertisement

Tag: Kannada Literature

ಕಾಡುವ ಪ್ರಶ್ನೆಗಳ ಕಾಡಿನಲ್ಲಿ ನೀಲಿ: ಸುಧಾ ಆಡುಕಳ ಅಂಕಣ

ಸೀತಜ್ಜಿ, ಗೌರಜ್ಜಿ, ಅಮ್ಮಣ್ಣೆಜ್ಜಿ ಇವರ ಕತೆಗಳೂ ಇದಕ್ಕಿಂತ ಬೇರೆಯೇನಿರಲಿಲ್ಲ. ಅವರೆಲ್ಲರೂ ತಮ್ಮ ಮದುವೆಯ ಕತೆಯನ್ನು ಯಾವುದೇ ವಿಷಾದಗಳಿಲ್ಲದೇ ಹೇಳಿಕೊಳ್ಳುತ್ತಿದ್ದರು. ಆದರೆ ಇವರ ನಂತರದ ತರುವಾಯದವರಾದ ಕೆಂಪಿ, ಗಣಪಿ, ನಾಗವೇಣಿಯರು ತಮ್ಮ ಮದುವೆಯ ಕತೆಯನ್ನು ಇಷ್ಟು ತಣ್ಣಗೆ ಹೇಳುತ್ತಿರಲಿಲ್ಲ. ಅವರ ಮಾತುಗಳಲ್ಲಿ ಕಹಿ, ಸಿಟ್ಟು, ಹತಾಶೆ ಎಲ್ಲವೂ ಮಡುಗಟ್ಟಿದ್ದವು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹದಿನೆಂಟನೆಯ ಕಂತು ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಕೆ. ಆರ್. ಸಂಧ್ಯಾರೆಡ್ಡಿ ಕತೆ

ಇಷ್ಟು ಸುಖ ಕೊಡುವ ಸಂಬಂಧ ನನ್ನ ಪಾಲಿಗೆ ಎಂದೆಂದಿಗೂ ಇಲ್ಲವಾಗುವುದು ಎಂಬ ಅರಿವಿನಿಂದ ನಾನು ತೀರಾ ವಿಹ್ವಲಳಾಗುತ್ತಿದ್ದೆ. ಆದರೆ ಅವನು? ಅವನ ಪಾಲಿಗೆ ಇದೇ ಕೊನೆಯಲ್ಲವಲ್ಲ? ಇಷ್ಟಾಗಿ ನನ್ನ ವೈಯಕ್ತಿಕ ನೋವುಗಳನ್ನು ಅವನೊಂದಿಗೆ ಹೇಳಿಕೊಳ್ಳುವುದಾಗಲೀ, ನನ್ನನ್ನೇ ಮದುವೆಯಾಗು ಎಂದು ಅತ್ತು ಕರೆಯುವುದಾಗಲೀ ನನಗೆ ಸಾಧ್ಯವಿರಲಿಲ್ಲ. ನಮ್ಮ ಸಂಬಂಧ ಎಲ್ಲ ಸಾಮಾನ್ಯ ಸಂಬಂಧಗಳಂತಾಗಿ ಬಿಡುವುದೂ ನನಗೆ ಬೇಕಾಗಿರಲಿಲ್ಲ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಕೆ. ಆರ್. ಸಂಧ್ಯಾರೆಡ್ಡಿ ಕತೆ “ಹೀಗೇ ಒಂದು ಪ್ರೇಮದ ಕಥೆ”

Read More

ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

ಯಾವಾಗ ಶಾಂತಮ್ಮ ಮೃದುಲಾಳ ಆರೈಕೆಯಲ್ಲಿ ನಾಲ್ಕು ದಿನ ಕಳೆದರೋ, ಮೃದುಲಾಳ ಮಂದಸ್ಮಿತ ಮುಖ, ಸ್ವಲ್ಪವೂ ಬೇಸರಿಸದೆ ಗಂಡನನ್ನು ಅನುಸರಿಸಿಕೊಂಡು ಹೋಗುವ ಪರಿ, ತಾನು ಗರ್ಭಿಣಿಯಾಗಿದ್ದರೂ ತನ್ನ ಕೆಲಸ ಬೊಗಸೆ ಕಡಿಮೆ ಮಾಡಿಕೊಳ್ಳದೆ ಪಾದರಸದಂತೆ ಓಡಾಡುವ ರೀತಿ, ಇವನ್ನೆಲ್ಲಾ ನೋಡುವಾಗ ತಮ್ಮ ಬಗ್ಗೆಯೇ ನಾಚಿಕೆಯಾಯಿತು ಶಾಂತಮ್ಮನವರಿಗೆ.
ವಸಂತಕುಮಾರ್‌ ಕಲ್ಯಾಣಿ ಬರೆದ ಕತೆ “ರೂಪಾಂತರ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಗುಂಡುರಾವ್ ದೇಸಾಯಿ ಬರೆದ ಈ ಭಾನುವಾರದ ಕತೆ

ಸಂಜೆ ಅಪ್ಪ ಬಾಳೆಹಣ್ಣು ತಂದಿದ್ದನ್ನು ನೋಡಿದ್ದ. ಕೂಡಲೆ ರಾತ್ರಿ ಎದ್ದು ಡಜನ್ ಬಾಳೆ ಹಣ್ಣನ್ನು ತಿಂದು ಮಲಗಿದ. ಬೆಳಿಗ್ಗೆ ಹಣ್ಣು ಇಲ್ಲದನ್ನು ನೋಡಿ ಅಮ್ಮಗ ನೋಡಿ ಗಾಭರಿಯಾಯಿತು. ಬಾಳೆ ಹಣ್ಣು ತಿಂದವರಾರು? ಸಮುನ ಮೇಲೆ ಅನುಮಾನ ಬಂದು “ಸತ್ಯ ಹೇಳು ತಿಂದವನು ನೀನು ತಾನೆ?” ಎಂದು ತರಾಟೆ ತೆಗೆದುಕೊಂಡಳು. ಸಮು ನಡೆದ ವಿಷಯವನ್ನೆಲ್ಲ ಹೇಳಿ ಬೆಳಿಗ್ಗೆ ಮಲವಿಸರ್ಜನೆ ಮಾಡುವಾಗ ಸಿಕ್ಕ ಬೀಜಗಳನ್ನು ಖುಷಿಯಿಂದ ತೋರಿಸಿ “ಅಮ್ಮಾ, ನೋಡು ನನ್ನ ಹೊಟ್ಟೆಯಲ್ಲಿ ಹುಣಸೆ ಮರ ಬೆಳೆಯಲು ಸಾಧ್ಯನ ಇಲ್ಲ?” ಎಂದು ಗೆಲುವಿನಿಂದ ತೋರಿಸಿದ.
ಗುಂಡುರಾವ್‌ ದೇಸಾಯಿ ಬರೆದ ಮಕ್ಕಳ ಕತೆ “ಸಮು ಮತ್ತು ಹುಣಸೆ ಬೀಜ”

Read More

ಡಾ. ರಾಜಶೇಖರ ನೀರಮಾನ್ವಿ ಕತೆ: “ಹಂಗಿನರಮನೆಯ ಹೊರಗೆ”

ಜೀವನದ ಘಟನೆಗಳು ನಮ್ಮಿಬ್ಬರಲ್ಲಿ ಸಾಮ್ಯವನ್ನು ತೋರಿಸಿದ್ದರೂ, ಮಾನಸಿಕವಾಗಿ ನಾವಿಬ್ಬರೂ ಒಂದೊಂದು ಧ್ರುವ. ಆದರೂ ಯಾವದೋ ಆಕರ್ಷಣ ಶಕ್ತಿ ನಮ್ಮಿಬ್ಬರನ್ನು ಬಂಧಿಸಿಬಿಟ್ಟಿದೆ.
ಮೊನ್ನೆ ಶುಕ್ರವಾರದಂದು ತೀರಿಕೊಂಡ ಕನ್ನಡದ ಅಪರೂಪದ ಕತೆಗಾರ ಡಾ. ರಾಜಶೇಖರ ನೀರಮಾನ್ವಿ ಅವರ ಪ್ರಸಿದ್ಧ ಕತೆ “ಹಂಗಿನರಮನೆಯ ಹೊರಗೆ”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ