Advertisement

Tag: kendasampige

ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ

ತಂದೆ ಏಕೆ ಹೀಗಾದರೂ ಅಂತ ಈವತ್ತಿಗೂ ನನಗೆ ಗೊತ್ತಾಗುತ್ತಿಲ್ಲ. ಸ್ನಾನ, ಸಂಧ್ಯಾವಂದನೆ, ಪೂಜೆ, ಅಚರಣೆ, ಯಾವುದನ್ನೂ ತಂದೆ ತಪ್ಪಿಸಿದವರಲ್ಲ. ಅವರ ತಂದೆಯ ಭಯದಲ್ಲೇ ಬೆಳೆದಿದ್ದರು. ತಂದೆ ಸತ್ತು ಹೋದ ಮೇಲೆ ಹೀಗೆಲ್ಲ ಆದದ್ದು. ನಿನ್ನ ಹತ್ತಿರ ಏನು ಮುಚ್ಚು ಮರೆ. ನಮ್ಮ ತಾತನದು ಕೂಡ ಇದೇ ರೀತಿಯ ರಂಪವಂತೆ. ಆತ ಇಟ್ಟುಕೊಂಡಿದ್ದವಳೊಬ್ಬಳನ್ನು ಮನೆಗೇ ಕರೆದುಕೊಂಡು ಬಂದು ಮಂಚದ ಮೇಲೆ ಮಲಗಿಸಿಕೊಳ್ಳುತ್ತಿದ್ದರಂತೆ. ನಮ್ಮಜ್ಜಿ ಅವಳ ಎಂಜಲು ತಟ್ಟೆ ತೊಳೆಯುವುದರಿಂದ ಹಿಡಿದು ಪ್ರತಿಯೊಂದು ಸೇವೆಯನ್ನೂ ಮಾಡಬೇಕಾಗುತ್ತಿತ್ತಂತೆ.
ಕೆ. ಸತ್ಯನಾರಾಯಣ ಬರೆದ ಕಥೆ “ಪ್ರೀತಿ ಬೇಡುವ ರೀತಿ” ‌

Read More

‘ವೈನು’ಗಾರಿಕೆಯ ಸೀಮೆಯಲಿ ಸುತ್ತಾಡುತಾ…

ಮಿನೋವನ್ ನಾಗರೀಕತೆಯನ್ನು ಯೂರೋಪ್ ಖಂಡದ ಮೊದಲ ಮುಂದುವರೆದ ನಾಗರೀಕತೆ ಎಂದು ಗುರುತಿಸಲಾಗಿದೆ. ಆಧುನಿಕ ಕಲೆ, ಸುಧಾರಿತ ಒಲೆ, ಎಲ್ಲಾ ಕಾಲಕ್ಕೂ ಸಲ್ಲುವ ಒಳಚರಂಡಿ ವ್ಯವಸ್ಥೆ, ತಮ್ಮದೇ ಆದ ಭಾಷೆ, ಲಿಪಿ, ವೈದ್ಯ ಪದ್ಧತಿ ಎಲ್ಲವನ್ನೂ ಹೊಂದಿದ್ದ ಜನ. ವಿಶೇಷತೆ ಎಂದರೆ ಅವರ ದ್ರಾಕ್ಷಿ ಮತ್ತು ಅಂಜೂರದ ಕೃಷಿ. ಕ್ರಿಸ್ತ ಪೂರ್ವದಿಂದಲೂ ಒಂದು ಜಾತಿಯ ದ್ರಾಕ್ಷಿ ಗಿಡದ ಬೇರನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ ಇಲ್ಲಿನ ಜನ. ಅದರಿಂದ ತಯಾರಿಸಿದ ವೈನ್ ಪೇಯ ಇಲ್ಲಿನ ವ್ಯಾಪಾರದ ಆಕರ್ಷಣೆ.
ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ

Read More

ಕಲ್ಲು ಕಲ್ಲಿನಲಿ… ಆನೆ ಕುದುರೆ…

ಎರಡನೇ ಪ್ರತಾಪರುದ್ರ ಯಾ ರುದ್ರದೇವ ರುದ್ರಾಂಬಳ ಮೊಮ್ಮಗನಾಗಿದ್ದು, ಆಕೆಯ ಅನಂತರ ಪಟ್ಟಕ್ಕೆ ಬಂದು ಅಕ್ಕ ಪಕ್ಕದ ದಂಗೆಗಳನ್ನು ಅಣಗಿಸಿ ಪ್ರಬಲನಾದನು. ದೆಹಲಿಯ ಸುಲ್ತಾನರು ದಕ್ಷಿಣವನ್ನು ಪ್ರವೇಶಿಸಿದುದು ಇವನ ಕಾಲದಲ್ಲೇ. ವಾರಂಗಲ್ಲಿಗೆ ಲಗ್ಗೆಯಿಟ್ಟ ಮುಸ್ಲಿಮ್ ಸೈನ್ಯವನ್ನು ಮೂರು ಬಾರಿ ಅವನು ಎದುರಿಸಬೇಕಾಯಿತು. 1309ರಲ್ಲಿ ಅಲ್ಲಾ ಉದ್ದೀನ ಖಿಲ್ಜಿಯಿಂದ ದಂಡನಾಯಕನಾಗಿ ನಿಯುಕ್ತನಾದ ಮಾಲಿಕ್ ಕಾಫಿರನು ವಾರಂಗಲ್ಲಿನ ಮೇಲೆ ಲಗ್ಗೆಯಿಟ್ಟನು. ಇದರಲ್ಲಿ ಜಯಶಾಲಿಯಾದ ಕಾಫಿರನು ನಗರವನ್ನೆಲ್ಲ ಲೂಟಿ ಮಾಡಿದನು.
ಕೆ.ವಿ. ತಿರುಮಲೇಶ್ ಬರೆಯುವ ‘ನನ್ನ ಹಿಸ್ಟರಿ ಪುಸ್ತಕ’ ಸರಣಿಯ ಮತ್ತೊಂದು ಬರಹ ಇಲ್ಲಿದೆ.

Read More

ಒಲವಿನ ಬೆಳಕು ಬೆಳಗುವ ದೀಪದ ಹಬ್ಬ…

ಹಿಂದೆಲ್ಲಾ ದೀಪಾವಳಿಯೆಂದರೆ ಹೊಸ ಬಟ್ಟೆಯ ಹಬ್ಬ. ವರುಷಕ್ಕೊಮ್ಮೆ ಹೊಸ ಬಟ್ಟೆ. ಅದು ದೀಕುಂಕುಮ ಅವಿಭಕ್ತ ಕುಟುಂಬ ಪರಂಪರೆಯ ಮನೆಗಳು. ದೂರದೂರಿನಲ್ಲಿರುವ ಬಂಧುಗಳು ದೀಪಾವಳಿ ಬರುತ್ತಿದ್ದಂತೆ ಮನೆಗೆ ಬರುತ್ತಿದ್ದರು. ಜೊತೆಗೆ ಮನೆ ಮಕ್ಕಳಿಗೆ ಹೊಸ ಬಟ್ಟೆ, ಅಂಗಿ… ಹೊಸತನದ ಘಮ…. ಮನೆಯ ತುಂಬೆಲ್ಲ ಪಸರಿಸುತ್ತಿತ್ತು. ತ್ರಯೋದಶಿ ಸಂಜೆ ಗಂಗಾ ಪೂಜೆ… ನೀರು ತುಂಬುವ ಹಬ್ಬ. ಬಚ್ಚಲುಮನೆ ಶುಚಿಗೊಳಿಸಿ, ಹಂಡೆ ತಿಕ್ಕಿ ತೊಳೆದು ಫಳಫಳ ಹೊಳೆದು ಬಳಪದಿಂದ ಗೆರೆ ಎಳೆದು ಹಂಡೆಯ ಕೊರಳಿಗೆ ಗೊಂಡೆ ಹೂ(ಚೆಂಡು ಹೂ)ಗಳ ಮಾಲೆ ಹಾಕಿ….
ಬಾಲ್ಯಕಾಲದಲ್ಲಿ ದೀಪದ ಹಬ್ಬದ ಆಚರಣೆಗಳು ಹೇಗಿದ್ದವು.. ಅದರ ಮಹತ್ವವೇನು ಎಂಬುದರ ಕುರಿತು ಬರೆದಿದ್ದಾರೆ ಪೂರ್ಣಿಮಾ ಸುರೇಶ್

Read More

ಯುದ್ಧದಲ್ಲಿ ಗೆಲ್ಲುವುದು ಸಾವು ಮಾತ್ರ…

ಯುಸಿ಼ಫ್ ತನ್ನ ಹದಿನೈದು ವರ್ಷದ ಮಗ ಆದಮ್‌ನ ಹಿಂದೆ ನಿಂತ. ಅಂಬೆಗಾಲು ಹಾಕುತ್ತ ಜನರ ಕಾಲೊಳಗಿಂದ ಬಾಗಿಲ ಬಳಿ ಹೋಗಲು ಮಗನಿಗೆ ತಿಳಿಸಿದ. ಆದಮ್ ಪ್ರಯತ್ನಪಟ್ಟು ಬಾಗಿಲ ಬಳಿ ಬಂದು ಹೊರಗೆ ನುಸುಳಿ ಓಡತೊಡಗಿದ. ಆದರೆ ನಾಜಿಗಳ ಗುಂಡಿಗೆ ಗುರಿಯಾದ. ಮಗನನ್ನು ಹಿಂಬಾಲಿಸಿದ ಯುಸಿ಼ಫ್ ಮೇಲೂ ಗುಂಡು ಹಾರಿಸಲಾಯಿತು. ನಾಜಿಯೊಂದು ಓಡಿ ಬಂದು ಬಿದ್ದ ಯುಸಿ಼ಫ್‌ನನ್ನು ಬೂಟುಗಾಲಿನಿಂದ ಒದ್ದು, ಬಂದೂಕಿನಿಂದ ತಿವಿಯಲಾಯಿತು. ಖತಿನ್ ಅನುಭವಿಸಿದ ಕೊನೆ ಗಳಿಗೆಯನ್ನು ಮೂರ್ಛಾವಸ್ಥೆಯಲ್ಲಿದ್ದ ಯುಸಿ಼ಫ್ ನೋಡಲಾಗಲಿಲ್ಲ. ನಾಜಿಗಳು ಅಲ್ಲಿಂದ ಹೋದ ನಂತರ ನೆರೆ ಗ್ರಾಮದ ಜನರು ಯುಸಿ಼ಫ್‌ನನ್ನು ಬದುಕಿಸಿದರು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ