Advertisement

Tag: kendasampige

ಪ್ರಾಣಿ ಪ್ರಪಂಚದ ತರ್ಕ ಮೀರಿದ ಕತೆಗಳು

ನಮ್ಮ ಕೆಂಚಬೆಕ್ಕಿನೊಂದಿಗೆ ನಿಮ್ಮನ್ನು ಎದುರುಗೊಳ್ಳುತ್ತೇನೆ. ಇವನ ಪರಿಚಯವಾದ ನಂತರ ಕೆಂಚು-ಬಿಳಿ ಮಿಶ್ರಿತ ಎಲ್ಲಾ ಬೆಕ್ಕುಗಳೂ ನನ್ನ ಕಣ್ಣಿಗೆ ಅಪ್ಯಾಯಮಾನವಾಗಿ ಕಾಣುವಂತಾಗಿದ್ದು ಇವನ ವಿಶಿಷ್ಟ ಗುಣದಿಂದ. ಚುರುಕಿನ, ಇಲಿ ಹಿಡಿಯುವ, ಠಣ್ಣನೆ ನೆಗೆದು ಮಡಿಲಲ್ಲಿ ಕೂರುವ ಬೆಕ್ಕೊಂದು ಈಗ ನಿಮ್ಮ ಕಣ್ಮುಂದೆ ಬಂದು ನಿಂತಿರಬೇಕಲ್ಲವೇ? ಆದರೆ ಕೆಂಚ ಹಾಗಲ್ಲವೇ ಅಲ್ಲ. ಇವನು ಬಹಳ ಸೋಮಾರಿ. ಸೋಮಾರಿ ಎನ್ನುವುದಕ್ಕಿಂತ ‘ಹೆದ್‌ರ್‌ಪುಕ್ಲ’. ಬೇಟೆಗೂ ಇವನಿಗೂ ದೊಡ್ಡ ವೈರ. ಇಲಿ, ಹೆಗ್ಗಣ, ಗುಡ್ಡೆಹೆಗ್ಗಣ, ಅಳಿಲು, ಕೋಳಿ ಎಲ್ಲ ಬಿಡಿ ಒಂದು ಜಿರಳೆಯನ್ನೂ ಹಿಡಿಯಲಾರ! ಪ್ರಾಣಿಪ್ರಪಂಚದ ಲವಲವಿಕೆಯ ಕತೆಗಳನ್ನು ಬರೆದಿದ್ದಾರೆ ವಿಜಯಶ್ರೀ ಹಾಲಾಡಿ. 

Read More

ಹಬ್ಬಗಳಿರಬೇಕು… ಬದುಕನ್ನು ಸವಿಯಲು

ಹಬ್ಬಗಳ ಮಹತ್ವವನ್ನು ಇತ್ತೀಚಿನ ದಿನಗಳಲ್ಲಿ ನಾವು ಕಳೆದುಕೊಳ್ಳುತ್ತಿದ್ದೇವೆ. ಮಕ್ಕಳಿಗೆ ಹಬ್ಬಗಳ ಹೆಸರೆ ಸರಿಯಾಗಿ ಗೊತ್ತಾಗದಾಗಿರುವುದು ವಿಪರ್ಯಾಸ. ಹಬ್ಬಗಳ ಪರಿಚಯವೇ ತಿಳಿಯದಿದ್ದಾಗ, ಅದರ ಪರಂಪರೆ
ಅರಿಯುವುದು ದೂರದ ಮಾತು.  ಯಾವುದೇ ಹಬ್ಬವಿರಲಿ, ಯಾವುದೇ ಜನಾಂಗಕ್ಕೆ ಸೇರಿದ್ದಾಗಿರಲಿ, ಅದರ ಬಗ್ಗೆ ತಿಳಿದಾಗ ಆಚರಣೆ ಬಗ್ಗೆ ಗೌರವ ಹೆಚ್ಚುತ್ತದೆ. ಹಿಂದುಗಳಾದವರು ಕ್ರೈಸ್ತರ ಹಬ್ಬಕ್ಕೆ ನಿರ್ಲಕ್ಷ್ಯ ಮಾಡುವುದು, ಕ್ರೈಸ್ತರು ಮುಸಲ್ಮಾನರ ಹಬ್ಬಕ್ಕೆ ಅಗೌರವ ತೋರುವುದು, ಮುಸಲ್ಮಾನರು ಹಿಂದುಗಳ ಹಬ್ಬಕ್ಕೆ…

Read More

ಮುಸುಕಿನ ಮರೆಯ ಪಾಡು

ನಾವು ಹುಟ್ಟಿ ಬೆಳೆದಿದ್ದ ಊರಲ್ಲಿ ಚಿಕ್ಕಪ್ಪ ಎಂಬುವವನೊಬ್ಬ ಇದ್ದ. ರಭಸವಾದ ಕುಡುಕ. ಎಣ್ಣೆ ಕೊಡಿಸಿದರೆ ಎಲ್ಲಾ ನ್ಯಾಯವನ್ನು ತಲೆಕೆಳಗೆ ಮಾಡುತ್ತಿದ್ದ. ಆ ಮನೆಯಲ್ಲಿ ನನ್ನ ತಮ್ಮನಿಗೂ ನನಗೂ ಭಾಗ ಬರಬೇಕಿತ್ತು. ನಾನದರತ್ತ ತಿರುಗಿಯೂ ನೋಡಿರಲಿಲ್ಲ. ತಮ್ಮ ಬೆಂಗಳೂರು ಸೇರಿ ಅಲ್ಲೇ ಸಂಸಾರ ಹೂಡಿ ಒಂದು ಪುಟ್ಟ ಮನೆಯನ್ನು ಮಾಡಿಕೊಂಡಿದ್ದ. ಅವನಿಗೂ ಅಂತಹ ಆಸಕ್ತಿ ಇರಲಿಲ್ಲ. ಆದರೆ ನನ್ನಕ್ಕ ಬಿಟ್ಟಿರಲಿಲ್ಲ. ನಾವು ಭಾಗ ಕೊಡುವುದಿಲ್ಲ ಎಂದು ಅವನ ಮಗ ಹಾಗೂ ಹೆಂಡತಿ ಎಗರಾಡುತ್ತಿದ್ದರು.
ಮೊಗಳ್ಳಿ ಗಣೇಶ್‌ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಮೂರನೆಯ ಕಂತು

Read More

ಐಬಿಲ್ಲದ ಕೊಲೆಯ ಜಾಡು ಹಿಡಿದಾಗ ಕಂಡ ವಿಸ್ಮಯಗಳು

ಐಬಿಲ್ಲದ ಕೊಲೆ ಎಂದು ಶೀರ್ಷಿಕೆ ಕೊಟ್ಟು ಬರಹವನ್ನು ಮುಗಿಸಿದರೂ, ಅದು ನಿಜಕ್ಕೂ ಹಾಗಿರಲಿಲ್ಲ ಎಂಬುದು ನನಗೆ ಬಳಿಕ ತಿಳಿಯಿತು. ಮರಳುಗಾಡಿನಲ್ಲಿ ನಡೆದ ಕೊಲೆಯ ಪೂರ್ವಾಪರಗಳು ಎಷ್ಟೋಕಾಲದ ಬಳಿಕ ಅನಾವರಣಗೊಂಡಿದ್ದವು. ಅದು ಮೊಬೈಲು, ಕಂಪ್ಯೂಟರು ಇಲ್ಲದ ಕಾಲವಾದ್ದರಿಂದ ಪತ್ತೆದಾರಿಕೆಯು ನಿಧಾನವಾಗಿತ್ತು. ಕೊಲೆಯ ಹಿಂದಿರುವ ಕಾರಣವನ್ನು ಹುಡುಕಬೇಕಾದರೆ ಸಾಕ್ಷ್ಯಗಳು ಅಗತ್ಯವಾಗಿರುತ್ತವೆ.

Read More

ನಾಟಕದ ನ್ಯೂನತೆಗಳೂ, ಬಂಡೇಳುವ ಜೀವಿಗಳೂ..

ಬೀಚಿ ಅವರ ವಿಡಂಬನೆಗಳಲ್ಲಿ ಬದುಕಿನ ಅಪಸವ್ಯಗಳ ಬಗೆಗೆ ಗಾಢ ವಿಷಾದ ಇರುತ್ತದೆ. ಅದನ್ನ ನಗೆಯಲ್ಲಿ ದಾಟಿಸಬೇಕಾದ ಅನಿವಾರ್ಯವನ್ನ ಅವರು ಸೃಷ್ಟಿಸಿಕೊಂಡಿದ್ದಾರೆ. ವಿಷಾದವನ್ನು ಅದರ ರೂಟ್ ಲೆವೆಲ್‌ನಲ್ಲಿ ಅರ್ಥೈಸಿಕೊಂಡವ ಮಾತ್ರ ಅವರ ವಿಡಂಬನೆಗೆ ನಗಬಲ್ಲ. ಬೀಚಿ ಅವರು ಬರೆದ ವಿಡಂಬನೆಗಳು ಅರ್ಥವಾಗಬೇಕು ಅಂದರೆ ಅವರ ಸಾಹಿತ್ಯವನ್ನು ಓದ್ತಾ ಇರುವವರ ಸುತ್ತ ಇರುವ…

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ