Advertisement

Tag: kendasampige

ಬೆಕ್ಕಾಯಣ…. ರಾಮಾಯಣ…: ವೇದ ಭದ್ರಾವತಿ ಬರಹ

ಹುಡುಗ ಎಲ್ಲ ಕಿಟಕಿಗಳನ್ನು ಮುಚ್ಚಿ ಬಾಗಿಲು ಹಾಕಿ ಒಮ್ಮೆ ನನ್ನ ಮುಖ ನೋಡಿ ಮೆಲ್ಲಗೆ, ಎರಡೂ ಮರಿಗಳು ಸತ್ತು ಹೋಗಿರುವುದನ್ನೂ ಗಂಡು ಬೆಕ್ಕು ಒಂದನ್ನು ಅರ್ಧ ತಿಂದಿರುವುದನ್ನೂ ಹೇಳಿದ. ನನಗೆ ಜಂಘಾಬಲ ಉಡುಗಿತು! ಮರಿಗಳಿಗಾಗಿ ಹೆಣ್ಣು ಉಗ್ರವಾಗಿ ಕಾದಾಡಿದ್ದು ಸ್ಪಷ್ಟವಾಗಿತ್ತು. ತನ್ನ ಮರಿಗಳಲ್ಲಿ ಯಾವುದೂ ಉಳಿದಿಲ್ಲವೆಂದು ಅದಕ್ಕೆ ತಿಳಿಸುವುದು ಹೇಗೆ?? ಇಷ್ಟು ದಿನ ನಮ್ಮನ್ನು ಕಂಡೊಡನೆ ಮಾರು ದೂರ ಓಡುತ್ತಿದ್ದ ತಾಯಿ ಈಗ ಮುಚ್ಚಿದ್ದ ಕಿಟಕಿಯನ್ನು ಹೊಗುವ ವಿಧಾನ ಹುಡುಕುತ್ತ, ತನ್ನ ಮರಿಗಳು ಅಲ್ಲಿವೆ ಎಂದೂ ನಾವು ಕಿಟಕಿ ತೆರೆದು ದಾರಿ ಕೊಡಬೇಕೆಂದೂ ದಯನೀಯ ಸ್ವರದಲ್ಲಿ ಅಂಗಲಾಚುತ್ತ ನಮ್ಮನ್ನೇ ದಿಟ್ಟಿಸತೊಡಗಿತ್ತು.
ಬೆಕ್ಕುಗಳ ಕುರಿತು ವೇದ ಭದ್ರಾವತಿ ಬರಹ ನಿಮ್ಮ ಓದಿಗೆ

Read More

ಉಳ್ಳವರ ಜೊಳ್ಳುತನ: ವಸಂತಕುಮಾರ್‌ ಕಲ್ಯಾಣಿ ಪ್ರಬಂಧ

ಒಮ್ಮೆ ‘ಬಿಹಾರಿ ಭೈಯ್ಯ’ ಹೀಗೆ ಕರ್ಕೊಂಡ್ ಬರುವಾಗ, ಆ ಕುಡುಕ ಮಹಾಶಯನೇ ಬ್ಯಾಲೆನ್ಸ್ ತಪ್ಪಿಸಿ, ಬೈಕ್ ಬಿದ್ದು, ಇಬ್ಬರಿಗೂ ಪೆಟ್ಟಾಗಿ, ನೋಡಿದವರು ಹತ್ತಿರದ ಆಸ್ಪತ್ರೆಗೆ ಸೇರಿಸಿ, ಆ ಮಹಾಶಯನ ಮಕ್ಕಳು, ಮೊಮ್ಮಕ್ಕಳು ಬೈಕ್ ಚಾಲಕನದೇ ತಪ್ಪೆಂದು ದಬಾಯಿಸಿ, ಅವನಿಂದಲೇ ಹಣ ಪೀಕಿ, ಟ್ರೀಟ್ಮೆಂಟ್‌ಗೆ ಅದಕ್ಕೆ ಇದಕ್ಕೆ ಎಂದು ಅದರಲ್ಲಿ ಬೇಕಾದ ಬೇಡದ ಟೆಸ್ಟ್‌ಗಳನ್ನೆಲ್ಲ ಮಾಡಿಸಿ, ಆ ಬಿಹಾರಿ ಭಯ್ಯ ಈ ಊರಿನ ಸಹವಾಸವೇ ಬೇಡ ಎಂದು ಈಗ ಇಲ್ಲಿಂದ ಐದು ಕಿಲೋ ಮೀಟರ್ ದೂರದಲ್ಲಿರುವ ಗೋಣಿಪುರಕ್ಕೆ ಮನೆ ಶಿಫ್ಟ್ ಮಾಡಿದನಂತೆ!
ವಸಂತಕುಮಾರ್‌ ಕಲ್ಯಾಣಿ ಪ್ರಬಂಧ

Read More

ಬಡತನದ ಬದುಕು ಮತ್ತು ಶಾಲೆಯ ನೆನಪು: ಮಾರುತಿ ಗೋಪಿಕುಂಟೆ ಸರಣಿ

ಅವರು “ನಾವು ಬೆಳಿಗ್ಗೆ ಹೊತ್ತು ಮುಂಚೆನೆ ಹೋಗ್ತೀವಿ ನಮಗೆ ಬೆಳಗ್ಗೆ ಏನು ಅಡಿಗೆ ಮಾಡುವುದು ಬೇಡ ಎಂದರು”. ಅಮ್ಮ ನಿರಾಳವಾದಳು. ಏಕೆಂದರೆ ಬೆಳಗಿನ ಅಡಿಗೆಗೆ ಮನೆಯಲ್ಲಿ ಅಕ್ಕಿಯೆ ಇರಲಿಲ್ಲ. ಅಕ್ಕಿ ತಗೋಬೇಕು ಅಂದರೆ ಬೀಡಿಯ ಮಾಲೀಕ ಬರಬೇಕಿತ್ತು. ಹಣ ಕೊಡಬೇಕಿತ್ತು ಅನ್ನುವ ಪರಿಸ್ಥಿತಿ ನಮ್ಮದು. ಆದರೆ ಬೆಳಿಗ್ಗೆ ಸಂಬಂಧಿಕರು ಹೋಗುವುದು ತಡವಾಗಿದ್ದರಿಂದ ಬೆಳಗಿನ ಉಪಹಾರವನ್ನು ಮಾಡಬೇಕಾದ ಪರಿಸ್ಥಿತಿ ಅಮ್ಮನದಾಗಿತ್ತು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ

Read More

ಸರ್ವಶಕ್ತ ಮಹಿಳೆಯಲ್ಲ ನಾನು, ನಿಜ ಮಹಿಳೆ: ಎಲ್.ಜಿ.ಮೀರಾ ಬರಹ

ಉದ್ಯೋಗಸ್ಥ ಮಹಿಳೆಯ ಅಪರಾಧಿ ಪ್ರಜ್ಞೆಯು ಸಹ ಗಂಡಾಳಿಕೆಯ ಸಮಾಜವು ನಿರ್ಮಿಸಿದ್ದೇ ಆಗಿರುತ್ತೆ. ಸ್ತ್ರೀವಾದದ ಮಾತೃಚಿಂತಕಿಯರಲ್ಲೊಬ್ಬರಾದ ವರ್ಜೀನಿಯಾ ವೂಲ್ಫ್ ಹೇಳುವ ಗೃಹದೇವತೆಯ ಬಿಂಬ ನೆನಪಾಗುತ್ತೆ. `ಮನೆಕೆಲಸ, ಮನೆವಾಳ್ತೆ ಎಂದರೆ ಅದು ಹೆಣ್ಣಿನ ಜವಾಬ್ದಾರಿ ಮಾತ್ರ’ ಎಂದು ತಿಳಿದಿದ್ದ ಪರಿಸರದಲ್ಲಿ ಬೆಳೆದ ಹೆಂಗಸರಲ್ಲಿ, `ಮನೆಕೆಲಸವನ್ನು ಸರಿಯಾಗಿ ಮಾಡದಿರುವ ಬಗ್ಗೆ’ ಒಂದು ಅಪರಾಧಿ ಪ್ರಜ್ಞೆ ಇರುತ್ತದೆ. ಅವರ ಸುಪ್ತ ಮನಸ್ಸಿನಲ್ಲಿ ಅದು ಸೇರಿ ಹೋಗಿರುತ್ತದೇನೋ!
ಉದ್ಯೋಗಸ್ಥ ಮಹಿಳೆಯರು ಮನೆ-ಉದ್ಯೋಗ ಸಂಭಾಳಿಸುವುದರ ಕುರಿತು ಡಾ. ಎಲ್. ಜಿ. ಮೀರಾ ಬರಹ

Read More

ರವಿ ಮಡೋಡಿ ಬರೆದ ಈ ಭಾನುವಾರದ ಕತೆ

ಮುಂದೆ ಮುಂದೆ ಸಾಗಿದರೂ ಮನೆಗಳು ಮುಗಿಯುವ ಲಕ್ಷಣ ಕಾಣಿಸಿರಲಿಲ್ಲ. ರಮೇಶ ತಾನು ಈ ದಾರಿಯಲ್ಲಿ ಬರಲೇಬಾರದಿತ್ತು, ಬೇರೆಯೊಂದು ದಾರಿಯಲ್ಲಿ ಹೋಗಿದ್ದರೆ ಇಷ್ಟು ಹೊತ್ತಿಗಾಗಲೇ ತನ್ನ ಕೆಲಸವನ್ನು ಪೂರೈಸಿಕೊಳ್ಳಬಹುದಿತ್ತೋ ಏನೋ ಎಂದುಕೊಳ್ಳುತ್ತ ಹಳಿದುಕೊಂಡ. ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಯಾವಾಗಲೂ ಹೇಳಿಕೊಳ್ಳುತ್ತಿದ್ದ ಮಾತು ಸತ್ಯವೆನಿಸಿ ಯೋಚಿಸುವುದಕ್ಕೆ ತೊಡಗಿದ.
ರವಿ ಮಡೋಡಿ ಬರೆದ ಈ ಭಾನುವಾರದ ಕತೆ “ಜೀವದೊಳಗಿನ ಆಟ” ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ