Advertisement

Tag: Theatre

ವಸ್ತುನಿಷ್ಠ ವಿಮರ್ಶೆ-ಟೀಕೆಗಳಿಗೆ ಜಾಗವಿಲ್ಲದ ಕಾಲ

ಸರಿಸುಮಾರು ಇಪ್ಪತ್ತು ದಿನಗಳಿಂದ ಈ ಕಥೆಯನ್ನು ರೂಪಕವಾಗಿಸಿಕೊಂಡು ಯೋಚಿಸುತ್ತಿದ್ದೇನೆ. ವಿಭೂತಿಪುರುಷರ ಉತ್ತುಂಗ ಸ್ಥಿತಿಯ ಬಗ್ಗೆ ನನಗೆ ಇಂದಿಗೂ ತಿಳಿದಿಲ್ಲ. ಅವರು ಎಲ್ಲದರಲ್ಲೂ ಸುಂದರತೆ ಕಾಣಲು ಬಯಸುವವರು. ಆದರೆ ನಾನು ಆ ಸುಂದರತೆಯ ಬಗೆಗೆ ನಿತ್ಯ ಅನುಮಾನಗಳನ್ನ ಇಟ್ಟುಕೊಂಡಿರುವವನು. ತಮಾಷೆ ಮಾಡುತ್ತ ಎಲ್ಲವನ್ನೂ ತೇಲಿಸುತ್ತ ಜಗತ್ತನ್ನು ಸುಂದರ ಗೋಳವನ್ನಾಗಿ ಪರಿವರ್ತಿಸಿಕೊಳ್ಳುವವರ ಬಗೆಗೆ ನನ್ನಲ್ಲಿ ಗೌರವವೇನೊ ಇದೆ. ಹಾಗೆಯೇ ದಾರಿಹೋಕನಿಗೆ ಜ್ಞಾನೋದಯದ ಬಗೆಗೂ ಚಕಾರಗಳಿವೆ.
ಎನ್.ಸಿ. ಮಹೇಶ್‌ ಬರೆಯುವ ‘ರಂಗ ವಠಾರ’ ಅಂಕಣ

Read More

ನಾಟಕದ ನ್ಯೂನತೆಗಳೂ, ಬಂಡೇಳುವ ಜೀವಿಗಳೂ..

ಬೀಚಿ ಅವರ ವಿಡಂಬನೆಗಳಲ್ಲಿ ಬದುಕಿನ ಅಪಸವ್ಯಗಳ ಬಗೆಗೆ ಗಾಢ ವಿಷಾದ ಇರುತ್ತದೆ. ಅದನ್ನ ನಗೆಯಲ್ಲಿ ದಾಟಿಸಬೇಕಾದ ಅನಿವಾರ್ಯವನ್ನ ಅವರು ಸೃಷ್ಟಿಸಿಕೊಂಡಿದ್ದಾರೆ. ವಿಷಾದವನ್ನು ಅದರ ರೂಟ್ ಲೆವೆಲ್‌ನಲ್ಲಿ ಅರ್ಥೈಸಿಕೊಂಡವ ಮಾತ್ರ ಅವರ ವಿಡಂಬನೆಗೆ ನಗಬಲ್ಲ. ಬೀಚಿ ಅವರು ಬರೆದ ವಿಡಂಬನೆಗಳು ಅರ್ಥವಾಗಬೇಕು ಅಂದರೆ ಅವರ ಸಾಹಿತ್ಯವನ್ನು ಓದ್ತಾ ಇರುವವರ ಸುತ್ತ ಇರುವ…

Read More

ಪ್ರೇಕ್ಷಕರ ಜೊತೆಗಿನ ಸಂಬಂಧಗಳ ಮಹತ್ವ ಅರಿಯೋಣ

ಒಂದು ಬದಲಾವಣೆ ರಂಗಭೂಮಿಯಲ್ಲಿ ಬರಬೇಕು ಎಂದು ಆಗ್ರಹಿಸುವಾಗ ನಾವು ಆಯ್ಕೆ ಮಾಡಿಕೊಳ್ಳುವ ನಾಟಕಗಳ ಕಥಾವಸ್ತು ಯಾವುದು ಮತ್ತು ಅದು ಹೇಗಿರಬೇಕು ಅನ್ನೋದು ಮುಖ್ಯ ಆಗುತ್ತದೆ. ಸೈದ್ಧಾಂತಿಕವಾಗಿ ಮತ್ತು ಪ್ರಾಯೋಗಿಕವಾಗಿ ನಾವು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದೇವೋ, ಅದು ಪ್ರೇಕ್ಷಕರಿಗೆ ಅರ್ಥ ಆಗಬೇಕಾಗಿದೆ. ಸಾಮಾನ್ಯವಾಗಿ ನಾವು ಮಾಡುವ ಎಲ್ಲಾ ನಾಟಕಗಳು ಪ್ರೇಕ್ಷಕರಿಗೆ ಅರ್ಥ ಆಗುವುದಿಲ್ಲ.
’ರಂಗಭೂಮಿಯಲ್ಲಿ ಮರುಚಿಂತನೆ’ ಕುರಿತು ಗೌರಿ ಅದಮ್ಯ ಬರೆದ ಅನಿಸಿಕೆ ಇಲ್ಲಿದೆ:

Read More

‘ಪ್ರೇಕ್ಷಕರಿಗೆ ರಂಗಭೂಮಿಯೇನೂ ಅನಿವಾರ್ಯವಲ್ಲ’

ರಂಗಭೂಮಿ ದಣಿದಿಲ್ಲ, ಬದಲಾಗಿ ತುಂಬ ಆ್ಯಕ್ಟಿವ್ ಆಗಿದೆ. ಈ ಕ್ಷೇತ್ರದಲ್ಲಿ ‘ಕೊಬ್ಬು’ ಖಂಡಿತ ಇದೆ ನಿಜ; ಆದರೆ ಅದೇ ಕೊಬ್ಬು ವಾಸ್ತವ ಮರೆಯುವಂತೆ ಮಾಡುತ್ತಿದೆ. ವಿಚಿತ್ರ ಅಂದರೆ ಇದು ರಂಗಭೂಮಿಯಲ್ಲಿ ತೊಡಗಿಸಿಕೊಂಡವರನ್ನು ದಣಿಸುವ ಬದಲು ತುಂಬ ಆ್ಯಕ್ಟಿವ್ ಮಾಡುತ್ತಿದೆ. ಯಾವ ಬಗೆಯ ಆ್ಯಕ್ಟಿವ್‌ನೆಸ್ ಅದು ಎಂದು ನಾವು ಗ್ರಹಿಸಬೇಕು.  ತಮ್ಮ ಪ್ರಯೋಗಗಳ ಮೂಲಕ ಜನರ ಎದುರು ಸೋಲುತ್ತಿರುವ ಪ್ರಕ್ರಿಯೆಯೇ ಅವರನ್ನು ವಿಚಿತ್ರ ರೀತಿಯಲ್ಲಿ ಆ್ಯಕ್ಟಿವ್ ಮಾಡುತ್ತಿದೆ.  -ರಂಗವಠಾರ ಅಂಕಣದಲ್ಲಿ ಎನ್. ಸಿ. ಮಹೇಶ್ ಅವರು ಡಾ. ಶ್ರೀಪಾದ ಭಟ್ ಅವರ ಲೇಖನಕ್ಕೆ ಪ್ರತಿಕ್ರಿಯೆ ದಾಖಲಿಸಿದ್ದಾರೆ.

Read More

ರಂಗಭೂಮಿಯಲ್ಲಿ ಮರುಚಿಂತನೆ ಮತ್ತು ಗಾಂಧಿ ನಡಿಗೆ

ನಾಟಕ !  ಹಾಗೆಂದರೇನು? ಎಂದು ನಮಗೆ ನಾವು ಕೇಳಿಕೊಳ್ಳುವದರೊಂದಿಗೆ ಆರಂಭವಾಗುವ ಚಿಂತನೆ, ಅದರ ಸಂಘಟನೆ, ತಾಂತ್ರಿಕತೆ, ವ್ಯವಹಾರ, ಪ್ರೇಕ್ಷಕ ವರ್ಗದ ಅನಿಸಿಕೆ ಇತ್ಯಾದಿ ಹಲವು ಆಯಾಮಗಳಲ್ಲಿ ಇಂದು ಮುಂದುವರಿಯಬೇಕಿದೆ. ಸತ್ಯವನ್ನು ಸರಳಮಾರ್ಗದಲ್ಲಿ ಸಾಧಿಸಹೊರಟ ಗಾಂಧಿ ಚಿಂತನೆಯ ಮಾರ್ಗ ನಮ್ಮ ಮರುಚಿಂತನೆಗೆ ಅಗತ್ಯ ಹಾದಿಗಳನ್ನು ಕಾಣಿಸಬಲ್ಲವು ಎಂಬ ನಂಬಿಕೆ ನಮ್ಮದು.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ