Advertisement

Tag: Vijayashree Halady

ನಾಯಿಕುರ್ಕನ ನೆರಳಿನಲ್ಲಿ: ವಿಜಯಶ್ರೀ ಹಾಲಾಡಿ ಕೃತಿಯ ಒಂದು ಪ್ರಬಂಧ

ಎಲ್ಲರೂ ಒಟ್ಟಾಗಿ ಅನ್ನ, ತಿಂಡಿ ತಿನ್ನುವಾಗ ಕರಿಯನ ಗಲಾಟೆಯೇ ಗಲಾಟೆ. ಯಾರಿಗೂ ತಿನ್ನಲು ಬಿಡದೆ ತಾನೇ ಎಲ್ಲವನ್ನೂ ಮುಕ್ಕಬೇಕೆನ್ನುವುದು ಅವಳ ಆಸೆ. ಎಂಥಾ ಬೊಬ್ಬೆ! ನನಗೆ ಏನು ಮಾಡಬೇಕೆಂಬುದೇ ತಿಳಿಯುತ್ತಿರಲಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಕಡೆ ಊಟ ಹಾಕುವ ವ್ಯವಸ್ಥೆ ಮಾಡಿಕೊಂಡೆ. ಆದರೆ ಎಲ್ಲ ಕಡೆಯೂ ಹೋಗಿ ತಾನೇ ಬಾಯಿಹಾಕಿ ಯಾರಿಗೂ ಸರಿಯಾಗಿ ತಿನ್ನಲು ಬಿಡದೆ, ಕರಿಯ ಅವಸ್ಥೆ ಕೊಡುತ್ತಿದ್ದಳು. ಕೊನೆಕೊನೆಗೆ ಕೋಲು ಹಿಡಿದು ಊಟ ಹಾಕುವ ಪರಿಸ್ಥಿತಿ ಬಂದಿತು. ಈ ನಡುವೆ ಪಾಪದ್ದು ದಾಸುಮರಿ ತುಂಬಾ ಕಷ್ಟ ಅನುಭವಿಸಿತು. ಅದಕ್ಕೆ ಬೇಗ ಬೇಗ ತಿನ್ನಲು ಆಗುತ್ತಿರಲಿಲ್ಲ. ಎಲ್ಲವನ್ನೂ ಕರಿಯನೇ ತಿಂದುಹಾಕುತ್ತಿತ್ತು. ಇಷ್ಟೇ ಆಗಿದ್ದರೆ ಹೋಗಲಿ ಅನ್ನಬಹುದಿತ್ತು.
ವಿಜಯಶ್ರೀ ಹಾಲಾಡಿ ಪ್ರಬಂಧಗಳ ಸಂಕಲನ “ಕಾಡಿನ ಸಂಗೀತ” ಕೃತಿಯ ಒಂದು ಪ್ರಬಂಧ ನಿಮ್ಮ ಓದಿಗೆ

Read More

ಗುಮ್ಮನ ಧ್ವನಿ ಕೇಳುವ ಆಸೆಯಿಂದ…

ನಮ್ಮ ಮನೆ ಹತ್ತಿರದ ಕಾಡುಗಳಲ್ಲಿ ಅನೇಕ ಗುಮ್ಮಗಳಿದ್ದವು. ರಾತ್ರಿಯಾದೊಡನೆ ಮೈನವಿರೇಳಿಸುವ ಅವುಗಳ ಕೂಗು ಆರಂಭವಾಗುತ್ತಿತ್ತು. ಒಂದು ಗುಮ್ಮ ‘ಊಂಹೂಂ’ ಎಂದರೆ ಇನ್ನೊಂದು ಗುಮ್ಮ ‘ಊಂಹೂಂಹೂಂ’ ಎಂದು ಉತ್ತರಿಸುತ್ತಿತ್ತು. ಈಗ ಎಣಿಸಿಕೊಂಡರೆ ಅದು ಪ್ರೇಮಸಲ್ಲಾಪ ಇರಬಹುದೆನಿಸುತ್ತದೆ! ಅದೇನು ಭಾಷೆಯೋ, ಯಾರಿಗೆ ಗೊತ್ತು! ಆ ದಿನಗಳಲ್ಲಂತೂ ಹೆದರಿಕೆಯಿಂದ ತಲೆ ಹೊರಹಾಕಲೂ ಭಯ. ಹಾಗಾಗಿ ನಾನು ಹಾಲು ಕುಡಿಯಲು ಹೋಗುವುದಿಲ್ಲವೆಂದು ಹಟ ಮಾಡುತ್ತಿದ್ದೆ. ಅಜ್ಜಿ ಕೊಂಗಾಟ ಮಾಡಿ “ನಿಧಾನ ಹರೆದುಕೊಂಡು ಹೋಗು ಮಗಾ, ಗುಮ್ಮನಿಗೆ ಕಾಣುವುದಿಲ್ಲ” ಎನ್ನುತ್ತಿದ್ದರು! ಐದಾರು ವರ್ಷಗಳ ನನಗೆ ಮುದ್ದು ಮಗುವಿನಂತೆ ಹರೆದು ಹೋಗುವುದು ಆ ಕ್ಷಣಕ್ಕೆ ಇಷ್ಟವೂ ಆಗಿಬಿಡುತ್ತಿತ್ತು.
ಗೂಬೆಯ ಬಗೆಗಿನ ರೋಚಕ ಅನುಭವಗಳನ್ನು ಬರೆದಿದ್ದಾರೆ ವಿಜಯಶ್ರೀ ಹಾಲಾಡಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ