Advertisement

Tag: ಕೆಂಡಸಂಪಿಗೆ

ಬಸಪ್ಪ ಕಾಕಾನ ನೆನಪುಗಳು: ಶರಣಗೌಡ ಪಾಟೀಲ ಬರೆದ ಪ್ರಬಂಧ

ಬಸಪ್ಪ ಕಾಕಾನ ಮನಸ್ಸು ಕೂಡ ಬಿಳಿ ಬಟ್ಟೆಯಷ್ಟೇ ಶುಭ್ರಗಿತ್ತು. ಆತ ಬಿಳಿ ಬಟ್ಟೆ ಧರಿಸಿ ಹೊರಟರೆ ಥೇಟ ಸ್ವಾತಂತ್ರ್ಯ ಹೋರಾಟಗಾರ ಕಂಡಂತೆ ಕಾಣಿಸುತ್ತಿದ್ದ. ಎದುರಿಗೆ ಸಿಕ್ಕವರಿಗೆಲ್ಲ ಮಾತಾಡಿಸಿ ಊಟ ತಿಂಡಿ ಕೆಲಸ ಕಾರ್ಯದ ಬಗ್ಗೆ ವಿಚಾರಿಸುತ್ತಿದ್ದ. ಬಸಪ್ಪ ಕಾಕಾನ ಕುಟುಂಬವೂ ಚಿಕ್ಕದಾಗಿತ್ತು. ಒಬ್ಬನೇ ಮಗ ಆತನಿಗೆ ಅಂಗಡಿ ವ್ಯವಹಾರದ ಬಗ್ಗೆ ಯಾವದೂ ಗೊತ್ತಿರಲಿಲ್ಲ. ಬೇಕಂತಲೇ ಬಸಪ್ಪ ಕಾಕಾ ಗೊತ್ತು ಪಡಿಸಿರಲಿಲ್ಲ.
ಶರಣಗೌಡ ಬಿ. ಪಾಟೀಲ, ತಿಳಗೂಳ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ʻಕೆರೆಯಂ ಕಟ್ಟಿಸು ಬಾವಿಯಂ ಸವೆಸುʼ: ಚಂದ್ರಮತಿ ಸೋಂದಾ ಸರಣಿ

ಗದ್ದೆಯ ಕೆಲಸ ಮಾಡಿ ದಣಿದ ಎತ್ತುಗಳು ಒಮ್ಮೆ ಕೆರೆಯಲ್ಲಿ ಈಜಾಡಿ ಬಂದರೆ ದಣಿವೆಲ್ಲ ಮಾಯ. ಮೇಯಲು ಬಿಟ್ಟ ದನಗಳು ಕೆರೆಯಲ್ಲಿ ನೀರು ಕುಡಿದೇ ಮನೆಕಡೆ ಮುಖಮಾಡುತ್ತಿದ್ದವು. ಇನ್ನು ಬೇಸಿಗೆ ಕಾಲದಲ್ಲಿ ಕೆರೆಯಲ್ಲಿ ಝಾಂಡಾ ಹೊಡೆದಿರುವ ಎಮ್ಮೆಗಳನ್ನು ಕೆರೆಯಿಂದ ಎಬ್ಬಿಸುವುದೇ ಕಷ್ಟದ ಕೆಲಸ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಎಂಟನೆಯ ಕಂತು

Read More

ಕೈ ಜೋಡಿಸಿದರೆ ಹಬ್ಬವೂ ಹಗುರ: ಎಸ್.‌ ನಾಗಶ್ರೀ ಅಜಯ್‌ ಅಂಕಣ

ಸಂಸ್ಕೃತಿಯ ರಕ್ಷಣೆ, ಆಚರಣೆಗಳ ಹೊಣೆಯನ್ನು ಹೆಣ್ಣಿನ ಕುತ್ತಿಗೆಗೆ ನೇತುಹಾಕಿ, ತಾವು ಮಾತ್ರ ಹಾಯಾಗಿ ಮೊಬೈಲ್, ಲ್ಯಾಪ್ ಟಾಪ್‌ಗಳಲ್ಲಿ ಕಾಡುಹರಟೆ, ಕಛೇರಿ ಕೆಲಸದಲ್ಲಿ ಕಳೆದುಹೋದರೆ, ಚಿಕ್ಕವರು ಮಾಡುವ ಕೆಲಸದಲ್ಲಿನ ಲೋಪ ಹುಡುಕುವುದರಲ್ಲೇ ಹಿರಿಯರು ನಿರತರಾದರೆ, ಓದು ಮಾತ್ರ ಸಾಕೆಂದು ಮಕ್ಕಳನ್ನು ಕೆಲಸಕ್ಕೆ ಹಚ್ಚದಿದ್ದರೆ, ಹಬ್ಬದ ಸೊಗಸು ಅರಿವಿಗೆ ಬರುವುದೇ ಇಲ್ಲ. ಒಂದು ಕಾಲಕ್ಕೆ ಮನೆಯ ಸುತ್ತಮುತ್ತ ಅನಾಯಾಸವಾಗಿ ದೊರೆಯುತ್ತಿದ್ದ ಪತ್ರೆ, ಪುಷ್ಪ, ಮಾವು, ಬೇವು, ಬಾಳೆಕಂದು, ಹೊಂಬಾಳೆ ಇವತ್ತಿಗೆ ಚಿನ್ನದ ಬೆಲೆ ಹೊತ್ತುಕೊಂಡು, ಮಾರ್ಕೆಟ್ ಸೇರಿವೆ. ಹೊಸಕಾಲದ ತಿನಿಸಿನ ರುಚಿಕಂಡ ಮಕ್ಕಳಿಗೆ ಪಾರಂಪರಿಕ ಆಹಾರ ತಮಾಷೆಯಾಗಿ ಕಾಣುತ್ತಿದೆ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

Read More

ಪ್ರಶಾಂತ್ ಬೆಳತೂರು ಬರೆದ ಈ ಭಾನುವಾರದ ಕತೆ

ಲೋಲಿ ಮಾತ್ರ ತನ್ನ ಭಾವ ದೇವರೆಂದು ಅವನಿಲ್ಲದಿದ್ದರೆ ಈ ಮನೆ ಎಂದೋ ಸರ್ವನಾಶವಾಗಿ ಬಿಡುತ್ತಿತ್ತೆಂದೂ, ಮನೆಗೆ ಕೊಡಲಿ ಮಿತ್ತಾದ ಗಂಡನ ಹಾವಳಿಯಿಂದ ತಾನು ಪಟ್ಟ ಪರಿಪಾಟಲುಗಳನ್ನೆಲ್ಲಾ ಹೇಳುತ್ತಾ ಗಂಡ ತೀರಿ ಹೋದ ಮೇಲೆ ಹೆಣ್ಣೆಂಗಸು ಹೇಗೆ ತಾನೇ ಮನೆಯೊಗೆತನ ಮಾಡುತ್ತಾಳೆ?
ಪ್ರಶಾಂತ್‌ ಬೆಳತೂರು ಬರೆದ ಈ ಭಾನುವಾರದ ಕತೆ “ಹಂದಿಕಾಳನ ಸಿಂಗಿಯೂ..ಮತ್ತವನ ರಾಜಪರಿವಾರವೂ..!”

Read More

ಏಷ್ಯ ಕಪ್ ಕುರಿತ ಮಾಹಿತಿಗಳು: ಇ.ಆರ್. ರಾಮಚಂದ್ರನ್ ಅಂಕಣ

ಭಾರತ ಪಾಕಿಸ್ಥಾನ ಮತ್ತು ಶ್ರೀಲಂಕ 1984ರಿಂದ ಏಷ್ಯ ಕಪ್‌ನಲ್ಲಿ ಭಾಗವಹಿಸಿದೆ. 1986ರಲ್ಲಿ ಬಾಂಗ್ಲಾದೇಶ ಸೇರಿಕೊಂಡಿತು. ಹಾಂಕಾಂಗ್ ಮತ್ತು ಯುಏಇ 2004ರಲ್ಲಿ ಸೇರಿಕೊಂಡಿತು. ಆಫ್ಘಾನಿಸ್ಥಾನ 2014ರಲ್ಲಿ ಮತ್ತು ಈ ವರ್ಷ 2023ರಲ್ಲಿ ನೇಪಾಳ ಸೇರಲಿದೆ. ಬಹಳ ಕಡಿಮೆ ಸಮಯದಲ್ಲಿಯೇ ಆಫ್ಘಾನಿಸ್ಥಾನ ಒಳ್ಳೆಯ ಟೀಮ್ ಎಂದು ಹೆಸರು ಗಳಿಸಿದೆ.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಏಷ್ಯ ಕಪ್‌ ಕುರಿತ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ