Advertisement
ಚಂದ್ರಮತಿ ಸೋಂದಾ  ಬರೆದ ಈ ದಿನದ ಕವಿತೆ

ಚಂದ್ರಮತಿ ಸೋಂದಾ ಬರೆದ ಈ ದಿನದ ಕವಿತೆ

ನಿರಂತರ

ಅಂಗಳದಿ ಹೊಳೆಯುತಿಹ ಪೂರ್ಣಚಂದ್ರ
ಎಲ್ಲೆಲ್ಲೂ ಪಸರಿಸಿಹ ನಗೆಯ ಬಿಂಬ
ಕಣ್ಣ ಕೊಳದಲಿ ಚಲಿಪ ಕರಿಯ ಮುತ್ತು
ಸುತ್ತಿ ಸುಳಿದಾಡುತಿಹ ಬಿಳಿಯ ಮುತ್ತು

ಕುಣಿವ ಹೆಜ್ಜೆಯ ತುಂಬ ಗೆಜ್ಜೆನಾದ
ಉಲಿಯೊಳಗೆ ತುಂಬಿಹುದು ಮನಕೆ ಮೋದ
ಇವಳು ನಲಿದಾಡುತಿರೆ ತುಂಗಭದ್ರೆಯ ನೆನಪು ಮನೆಯೊಳಗೆ ಮನದೊಳಗೆ ದೀವಿಗೆಯ ಹೊಳಪು

ಸಂಜೆಯಲಿ ಏರುವಳು ತಂದೆ ಹೆಗಲು
ಮುಂಜಾನೆ ನಲಿಯಲು ತಾಯ ಮಡಿಲು
ರಾಕ್ಷಸನ ಆರ್ಭಟಕ್ಕೆ ಅಜ್ಜನೆಡೆ ಸರಿತ
ರಾಜಕುವರಿಯ ವ್ಯಥೆಗೆ ಕಣ್ಣೀರ ಸುರಿತ

ಹೂವ ಗಿಡದೆಡೆಯಲ್ಲಿ ಒನಪು ವಯ್ಯಾರ
ಮನೆಯ ಒಳಗೂ ಹೊರಗೂ ನಗೆಯ ಚಿತ್ತಾರ ತಂಗಾಳಿ ಬೀಸುತಿರೆ ಬಿರಿದ ಮೊಗ್ಗು
ಎದೆಯ ಗೂಡಲಿ ಹರಿವ ಹೊನಲ ಹಿಗ್ಗು

ಕಾಲಚಕ್ರದ ಉರುಳು ಬದುಕ ಹೊರಳು
ಚಂದಿರನ ಕಾಣುವ ಮಲ್ಲಿಗೆಯ ಅರಳು
ಬದಲಾದ ಋತುಚಕ್ರ ತಾಯಬಿಂಬ
ಮತ್ತದೇ ಚಂದಿರನು ಮಡಿಲ ತುಂಬ

(ಕಲಾಕೃತಿ: ವಾಲಿ ಮೋಸ್ (Wally Moes)

About The Author

ಡಾ. ಚಂದ್ರಮತಿ ಸೋಂದಾ

ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ