Advertisement
ಚಾಂದ್ ಪಾಷ  ಬರೆದ ಈ ದಿನದ ಕವಿತೆ

ಚಾಂದ್ ಪಾಷ ಬರೆದ ಈ ದಿನದ ಕವಿತೆ

ಈಜುವ ಮೀನ ಹೆಜ್ಜೆ

ಕಣ್ಣ ಕಡಲಲಿ ನಕ್ಷತ್ರ ಮೀನಾದಾಗ
ರೆಪ್ಪೆಗಳ ದಡಗಳಿಗೆ ಕಂಬನಿಯದ್ದೇ ಅಲೆ.
ಸವೆದ ಪಾದಗಳಿಗೂ ರಂಗೋಲಿ ಬಿಡುವ ಕೆಲಸ,
ನಿವೃತ್ತಿ ಇರದ ದುಡುಮೆಗೆ ಕೂಲಿಯ ನೆನಪಿಲ್ಲ!
ಮೀನೊಂದು ಬೊಗಸೆಯಲಿ ಈಜುವಾಗಲೂ,
ಉದರ ಗೋರಿಯೊಳಗೆ ನಾರುವ ಚಿಂತೆ
ಬದುಕು ಮುಷ್ಠಿಗೆ ಸಿಗದ ನೀರಬೇರು!

ಹವಳಗಳ ಹಡೆವ ತಾಯಿಯೂ ನಿರಾಭರಣೆ
ಉಪ್ಪು ಸವರಿಕೊಂಡು, ಉರಿ ಸೆರಗ ಹೊದ್ದಾಗ ಕಂಬನಿಗೂ ಉಪ್ಪಿನದ್ದೇ ನೆಂಟಸ್ತಿಕೆ
ದಡದಲ್ಲೆಲ್ಲೋ ಅನಾಥ ಹೆಜ್ಜೆ ಅಳುವ ಸದ್ದು!
ಇವಳ ತುಟಿಯಲ್ಲಿ ಜೋಗುಳದ ಜೊಲ್ಲು!!

ಮರಳ ದಂಡೆಯ ಮೌನದ ಹೊರೆತು ಎಲ್ಲವೂ ಚಲಿಸುತ್ತಿದೆ.
ಮೋಡಗಳು ಕಡಲಿಗಿಳಿದು ನೀರ ಕುಡಿವ ಬಾತುಕೋಳಿಯಂತೆ ಕವಾಯತು ನಡಿಸಿವೆ.

ನಕ್ಷತ್ರದ ನೆರಳು ನುಂಗಿದ ಮೀನು,
ಗಾಳಿಯಲಿ ಹಾರುವ ಕನಸ ಕಂಡಿದೆ.
ಇದರ ಹೆಜ್ಜೆಯಲ್ಲೂ ರೆಕ್ಕೆ ಮೂಡಲು ಬಾನಿಗೂ ಕಡಲಿಗೂ ಬೇಧ ಮರೆತ ಭಗ್ನ ಕವಿ,
ನಗ್ನ ಕವಿತೆ ಬರೆದು ಬಟ್ಟೆ ತೊಡುತ್ತಾನೆ!

 

ಚಾಂದ್ ಪಾಷ ಗುಲ್ಬರ್ಗಾ ಜಿಲ್ಲೆಯ ಜೆವರ್ಗಿ ತಾಲೂಕಿನ ಮಂದೇವಾಲದವರು.
ಪ್ರಸ್ತುತ ಬೆಂಗಳೂರು ವಾಸಿ.
“ಮೌನದ ಮಳೆ” ಇವರ ಚೊಚ್ಚಲ ಕವನ ಸಂಕಲನ.

About The Author

ಚಾಂದ್ ಪಾಷ ಎನ್. ಎಸ್.

ಚಾಂದ್ ಪಾಷ ಮೂಲತಃ ಗುಲ್ಬರ್ಗಾ ಜಿಲ್ಲೆಯ ಜೆವರ್ಗಿ ತಾಲೂಕಿನ ಮಂದೇವಾಲದವರು. ಸಧ್ಯ ಬೆಂಗಳೂರು ವಾಸಿ. ಬೆಂಗಳೂರು ವಿ. ವಿ. ಯಲ್ಲಿ ಕನ್ನಡ ಎಂ. ಎ. ಪದವಿ ಪಡೆದಿದ್ದು,  ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ. "ಮೌನದ ಮಳೆ", "ಚಿತ್ರ ಚಿಗುರುವ ಹೊತ್ತು" ಮತ್ತು "ಒದ್ದೆಗಣ್ಣಿನ ದೀಪ" ಇವರ ಪ್ರಕಟಿತ ಕವನ ಸಂಕಲನಗಳು

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ