Advertisement
ಪೂರ್ಣಿಮಾ ಸುರೇಶ್ ಬರೆದ ಈ ದಿನದ ಕವಿತೆ

ಪೂರ್ಣಿಮಾ ಸುರೇಶ್ ಬರೆದ ಈ ದಿನದ ಕವಿತೆ

ಎದೆ ಬೆಳಕಿನ‌ ಬೆಳೆ

ಮಬ್ಬು ಸಂಜೆ
ನಡು ಮಧ್ಯಾಹ್ನ
ತಿಳಿ ಮುಂಜಾವು
ಕಪ್ಪು ಇರುಳು
ಹೊಸಿಲ ಬಳಿ
ಎದುರೆದುರು
ನಾವು
ದೀಪ ಹಚ್ಚಿದ್ದೆವು

ಮಾತಿನಲಿ
ಭಾವದಲಿ
ಸಾಮಿಪ್ಯದ ಮೋಡಿಯಲಿ
ಕಾರುಣ್ಯದ ಎಣ್ಣೆ
ಬದುಕು ಬೆಳಕಿನ ಬಿತ್ತು

ಒಳ ಹೊರಗೆ
ತುಂತುರು
ಹನಿ ಹನಿದು
ಜಡಿ ಮಳೆ ಸುರಿದಿತ್ತು
ಆರದಿರಲಿ
ಕೈ ಹಿಡಿದು ಜೋಪಾನಗೊಂಡಿತು
ಎದೆ ಬೆಳಕಿನ ಬೆಳೆ

ಸಾವಿತ್ರಿ ಮಡಿಲಿನಲ್ಲಿ
ಸತ್ಯವಾನನಂತೆ
ಉತ್ತರ ಆಗದ
ಪ್ರಶ್ನೆಗಳನ್ನು ಕಾಣಿಸುತ್ತದೆ
ತಣ್ಣನೆ ಹೆದರಿಸುತ್ತದೆ
ದೀಪ ಉರಿಯುತ್ತಿದೆ

ಎಣ್ಣೆ ಸುರಿಯುತ್ತಲೇ ಇರಬೇಕು
‘ನಾನು’ ಉರಿಯುತ್ತಲೇ ಇರಬೇಕು
ಒಳಗೆ ಮಲಗಿರುವ ಸಾವನು ಮರೆಯದೆ
ಬೆಳಕ ತಬ್ಬಲಿಯಾಗಿಸದೆ..

About The Author

ಪೂರ್ಣಿಮಾ ಸುರೇಶ್

ಕವಯತ್ರಿ ಪೂರ್ಣಿಮಾ ಸುರೇಶ್ ಅವರು ಮೂಲತಃ ಉಡುಪಿಯವರು. ರಂಗ ಮತ್ತು ಧಾರಾವಾಹಿಯ ಕಲಾವಿದೆಯೂ ಆಗಿರುವ ಪೂರ್ಣಿಮಾ ಅವರಿಗೆ ಸಾಹಿತ್ಯದಲ್ಲೂ ಅಪಾರ ಆಸಕ್ತಿ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ