Advertisement
ರೇವಣಸಿದ್ದಪ್ಪ ಜಿ.ಆರ್. ಬರೆದ ಈ ದಿನದ ಕವಿತೆ

ರೇವಣಸಿದ್ದಪ್ಪ ಜಿ.ಆರ್. ಬರೆದ ಈ ದಿನದ ಕವಿತೆ

ಮಗುವಾದರೂ ಆಗದೇ?

ಬಿಳಿ ಹಾಳೆಯ ಮೇಲೆ
ಕಪ್ಪು ಶಾಯಿಯು ಗುರುತಿಸಿದ
ಅಕ್ಷರಗಳನು, ಪದಗಳನು,
ಸಾಲುಗಳನು,
ಪ್ಯಾರಾದ ಮೇಲೆ ಪ್ಯಾರಾಗಳನು,
ಪುಸ್ತಕದ ಮೇಲೆ ಪುಸ್ತಕಗಳನು,
ಅಲ್ಪ ವಿರಾಮ, ಪೂರ್ಣ ವಿರಾಮ,
ಉದ್ಧರಣ, ಆಶ್ಚರ್ಯ ಸೂಚಕ, ಪ್ರಶ್ನಾರ್ಥಕ,
ಯಾವೊಂದನೂ ಬಿಡದೆ
ವರ್ಷಾನುಗಟ್ಟಲೆ
ಕಣ್ಣ ನೆಟ್ಟು,
ಹೃದಯವಿಟ್ಟು,
ಮನಸು ಕೊಟ್ಟು,
ಕಡೆಗೆ ಗ್ರಹಿಸಿದ್ದು,
ಆಸ್ವಾದಿಸಿದ್ದು,
ಉಳಿಸಿದ್ದು,
ಬೆಳೆಸಿದ್ದು,
ಅರಳಿಸಿದ್ದು,
ಅಳವಡಿಸಿಕೊಂಡಿದ್ದು
ಏನನ್ನು!?

ಗೀತೆ, ಕುರಾನ್, ಬೈಬಲ್,
ವೇದ, ಆಗಮ, ಉಪನಿಷತ್ತು,
ರಾಮಾಯಣ, ಮಹಾಭಾರತ,
ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳಿಗೆ
ಜೈಕಾರ ಹಾಕಲದಷ್ಟೇ ಸಾಕೇ?
ನಮ್ಮ ಒಡಲು ತಣ್ಣಗಿದ್ದು
ನಮ್ಮವರು ನೋವಕಡಲಿನಲ್ಲಿ
ಬೇಯಬೇಕೇ?

ಮನುಷ್ಯನ ಮುಖದ
ಮೇಲಿನ ನೆರಿಗೆಗಳು
ಹೇಳುವ
ನೂರು ಕತೆಗಳ,
ಮನಸಿನಾಳದ ಗೆರೆಗಳು
ಸಾರುವ ಸಾಗುವ ಅಳಲಿನ
ಅರ್ಥ ಗ್ರಹಣ,
ಭಾವ ಗ್ರಹಣ,
ರಸ ಗ್ರಹಣ,
ನಮ್ಮದಾಗಲು;
ಪರರ ಪಾತ್ರಗಳಲ್ಲಿ
ಪರಕಾಯ ಪ್ರವೇಶ ಮಾಡಲು;
ಲಘುಗುರುಗಳನೊರೆವ
ಕವಿಯಾಗಬೇಕೇ?
ಪಾತ್ರ, ಕಥಾವಸ್ತು, ಸನ್ನಿವೇಶಗಳ
ಕಟ್ಟುವ
ಕತೆಗಾರ, ಕಾದಂಬರಿಕಾರನಾಗಬೇಕೇ?
ಅಳಿಸುತ್ತಾ ಮುಗಿಸುವ,
ನಗಿಸುತ್ತಾ ಮಂಗಳ ಹಾಡುವ
ನಾಟಕಕಾರನಾಗಬೇಕೇ?
ಪಾರಮಾರ್ಥವ ಒಲಿಸಿಕೊಂಡ
ಮಹಾಯೋಗಿಯೇ ಬರಬೇಕೆ?
ವಿಜ್ಞಾನ, ತಂತ್ರಜ್ಞಾನಗಳ
ಹಿಡಿತವಿರುವ ಮೇಧಾವಿಯೇ
ಇರಬೇಕೆ?

ಮನುಷ್ಯನಾದರೆ ಸಾಲದೇ?
ಮಗುವಾದರೂ ಆಗದೇ?

ರೇವಣಸಿದ್ದಪ್ಪ ಜಿ.ಆರ್. ದಾವಣಗೆರೆ ಜಿಲ್ಲೆಯ ಎಸ್ಜೆವಿಪಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲಭಾಷಾ ಉಪನ್ಯಾಸಕ.
ಕಲೆ, ಸಾಹಿತ್ಯ, ಸಂಸ್ಕೃತಿ, ಭಾಷಣ, ಚರ್ಚೆಗಳಲ್ಲಿ ಆಸಕ್ತಿ
ಸಂಕ್ರಮಣ ಸಾಹಿತ್ಯ ಸ್ಪರ್ಧೆ೨೦೧೮ರ ಕಾವ್ಯ ವಿಭಾಗದಲ್ಲಿ ಬಹುಮಾನಿತರು.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ