Advertisement
ಶ್ರೀನಿಧಿ ಎಚ್ ವಿ ಬರೆದ ಈ ದಿನದ ಕವಿತೆ

ಶ್ರೀನಿಧಿ ಎಚ್ ವಿ ಬರೆದ ಈ ದಿನದ ಕವಿತೆ

ಇಲ್ಲಿ ಈ ಕ್ಷಣದಲ್ಲಿ
ಒಣಗಿದ ಕೈಯಲ್ಲಿ
ತುಂಬಿದ ತಟ್ಟೆಯಲಿ
ಒಲವೆಲ್ಲಿ ಎನುವಲ್ಲಿ

ಆಕೆ ತಟ್ಟಿದ ರೊಟ್ಟಿಯ
ಬಲವೇ ರಟ್ಟೆ ತುಂಬಿರಲು
ಕೈ ತುತ್ತಿನ ನೆನಪಿನಲ್ಲೇ
ಹಸಿವು ನೀಗಿದೆ

ಶಹರದ ಗದ್ದಲದ ಮಧ್ಯೆ ಕೂಡ
ಉಸಿರ ಏರಿಳಿತದ ಸದ್ದು,
ಆಕೆಗೆ ಕೇಳಿಸಿ, ಕಳವಳದಿ
ಕೇಳುವಳು ಏನಾಗಿದೆ ಎಂದು

ದೂರದಲ್ಲಿದ್ದರೂ
ಸಂತೆಯ ಸುಡುಗಾಡಿನಲ್ಲೂ
ಚಿಂತೆಯ ಚಿತಾಗಾರದಲ್ಲೂ
ರಾತ್ರಿಯ ಕತ್ತಲೆಯಲ್ಲಿ
ತಲೆಯ ನೇವರಿಸಿದ ಕೈ,
ತಿಳಿಹೇಳಿದ ದನಿ

ಅಭಯಹಸ್ತ ಆಕೆಯದೆ

ತಿರಸ್ಕಾರ ಪುರಸ್ಕಾರಗಳಾಚೆ
ಅಹಂಕಾರ ಅಬ್ಬರಗಳೀಚೆ
ಹರಿಯುತಿದೆ ಒಲವ ನದಿ
ಅಮ್ಮನ ಎದೆ ಕಡಲಿನೆಡೆಗೆ

ಆ ಕಡಲ ನಡುವಲ್ಲಿ
ಧ್ರುವ ತಾರೆ ನಭದಲ್ಲಿ
ಉಂಟು ಶಾಶ್ವತ ಜಾಗ
ಈ ಜೀವಕೆ
ಅದುವೇ ನೆಚ್ಚಿನ ತಾಣ
ಆ ಜೀವಕೆ

ಎಚ್. ವಿ. ಶ್ರೀನಿಧಿ ದಾವಣಗೆರೆಯವರು
ಕಾರ್ಯನಿಮಿತ್ತ ಸದ್ಯದ ವಾಸ್ತವ್ಯ ಬೆಂಗಳೂರು.
ತತ್ವಶಾಸ್ತ್ರ, ವಿಜ್ಞಾನ, ಸಾಹಿತ್ಯ ಆಸಕ್ತಿಯ ವಿಷಯಗಳು.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ