Advertisement
ಸ್ವಾಮಿ ಪೊನ್ನಾಚಿ ಬರೆದ ಹಾಯ್ಕುಗಳು

ಸ್ವಾಮಿ ಪೊನ್ನಾಚಿ ಬರೆದ ಹಾಯ್ಕುಗಳು

ಬೇಡ ಆಯುಧ
ಅವಳ ಕುಡಿನೋಟ
ಕತ್ತಿಯ ಅಂಚು

ಚಿತ್ರ ಬೇಕಿಲ್ಲ
ಮಗುವಿನ ನಗುವೇ
ದೇವರ ಮೊಗ

ಹೋಲಿಕೆ ಬೇಡ
ಅವಳ ನಡಿಗೆಯೇ
ನಾಟ್ಯ ಪ್ರಕಾರ

ಜಲಪಾತದಂತೆ
ಅವಳೆರಡು ಜಡೆ
ದುಮ್ಮಿಕ್ಕುತ್ತಿವೆ

ಅವಳು ನದಿ
ಕವಲು ಜಲಪಾತ
ಎರಡು ಜಡೆ

ಬರವಣಿಗೆ
ಬೆತ್ತಲಾದ ಆತ್ಮದ
ಮೆರವಣಿಗೆ

ಕೊಳೆಯಾಗಲಿಲ್ಲ
ಕೆಸರಲಿ ನಿಂತರೂ
ಕಮಲದ ಹೂ

ಅವಳ ಕಣ್ಣು
ಕಡು ಕತ್ತಲಿನಲಿ
ಹಚ್ಚಿಟ್ಟ ದೀಪ

ಕಾಮನಬಿಲ್ಲು
ಆಕಾಶ ಸುಂದರಿಯ
ಮೂಗಿನ ನತ್ತು

ಕನಸುಗಳು
ನಿದ್ರೆ ಮಡಿಲಿನಿಂದ
ಎದ್ದ ಮಕ್ಕಳು

ಬೆಳ್ಳಿ ಓಡ್ಯಾಣ
ಬಳುಕಿ ಉಳುಕುವ
ಸೊಂಟದ ಬಂದಿ

ನಿನ್ನದೇ ನಗು
ಹೂವು ಅರಳಿದಾಗ
ಮೂಡಿದ ಸದ್ದು

ನಿನ್ನೀ ಬೈತಲೆ
ನನ್ನ ಕನಸುಗಳ
ಒಂಟಿ ಹೆದ್ದಾರಿ

ಚಲ್ಲಿದ ಚುಕ್ಕಿ
ಮಗುವಿನ ಕೈಯಲ್ಲಿ
ಗಿಲಕಿ ಗೆಜ್ಜೆ.

About The Author

ಸ್ವಾಮಿ ಪೊನ್ನಾಚಿ

ಸ್ವಾಮಿ ಪೊನ್ನಾಚಿ (ಮಹದೇವಸ್ವಾಮಿ ಕೆ.ಎಸ್) ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪೊನ್ನಾಚಿಯವರು.  ಪ್ರಸ್ತುತ ಚಾಮರಾಜನಗರ ಜಿಲ್ಲೆ ಯಳಂದೂರು ಇಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  "ಸಾವೊಂದನ್ನು ಬಿಟ್ಟು" (ಕವನ ಸಂಕಲನ), ಧೂಪದ ಮಕ್ಕಳು (ಕಥಾ ಸಂಕಲನ), ಕಾಡು ಹುಡುಗನ ಹಾಡುಪಾಡು (ಅನುಭವ ಕಥನ) ಇವರ ಪ್ರಕಟಿತ ಕೃತಿಗಳು. ಇವರಿಗೆ ಪಾಪು ಕಥಾ ಪುರಸ್ಕಾರ ಹಾಗೂ ಛಂದ ಪ್ರಕಾಶನ ಕೊಡಮಾಡುವ ಛಂದ ಪುಸ್ತಕ ಬಹುಮಾನ  ದೊರೆತಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ಬದುಕಿನಲ್ಲಿ....

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ