ನಗುವ ಹೂಗಳ ಕಿನ್ನರ ದೇಶ ನೆದರ್ ಲ್ಯಾಂಡ್ಸ್
”ಡಚ್ಚರ ದಿನನಿತ್ಯದ ಜೀವನದಲ್ಲಿ ಹೂವಿಗೊಂದು ಪಾತ್ರ ಇದ್ದೇ ಇದೆ. ಆ್ಯಮ್ಸ್ಟರ್ ಡ್ಯಾಮ್ ನಲ್ಲಿ ಸುಮಾರು ಪ್ರತಿ ಐನೂರು ಮೀಟರಿಗೊಂದರಂತೆ ಹೂವಿನ ಅಂಗಡಿ ಕಾಣಿಸುತ್ತದೆ.ಇಲ್ಲಿನ ಜನರಿಗೆ ಹೆಂಗಸರು, ಗಂಡಸರೆನ್ನದೆ ಎಲ್ಲರಿಗೂ ಹೂವಿನಮೇಲೆ ಪ್ರೀತಿ. ಮನೆಗೆ ಅತಿಥಿಗಳು ಬರುತ್ತಾರೆಂದರೆ ಟೇಬಲ್ ಮೇಲೆ ಹೂಗಳನ್ನಿಟ್ಟು ಸಿಂಗರಿಸಿರುತ್ತಾರೆ.”
ಜೀರಗಿ ಗಂಟ ಕಳ್ಳಿ:ಪ್ರಶಾಂತ್ ಆಡೂರ ಪ್ರಹಸನ
ಅಲ್ಲಾ ಹಂಗ ನನ್ನ ಲಗ್ನದಾಗೂ ಜೀರಗಿ ಗಂಟ ಕಳುವು ಮಾಡಿದ್ರು, ಹಂಗ ನಮ್ಮ ಹೆಂಡತಿ ಮನೆ ಕಡೆ ಒಬ್ಬಕ್ಕಿ ಇದ್ದಾಳ. ಅಕಿ ಪ್ರೋಫೆಶನ್ ಜೀರಗಿ ಗಂಟ ಕಳುವು ಮಾಡೋದ. ಅಕಿಗೆ ಎಲ್ಲಾರೂ ಜೀರಗಿ ಗಂಟ ಕಳ್ಳಿನ ಅಂತಾರ, ಈಗ ಏನಿಲ್ಲಾಂದರ ಅಕಿಗೆ ೩೬-೩೮ ವಯಸ್ಸ. ಆದರ ಅಕಿ ಹತ್ತ ವರ್ಷದೋಕಿ ಇದ್ದಾಗಿಂದ ಕಳ್ಳತನಾ ಶುರು ಮಾಡ್ಯಾಳ. ಇವತ್ತಿಗೂ ನನ್ನ ಹೆಂಡತಿ ಪೈಕಿ ಯಾರದರ ಲಗ್ನ ಇದ್ದರ ಅಕಿಗೆ ಒಂದ ಮದ್ವಿ ಕಾರ್ಡ ಜೊತಿ ಪತ್ಲಾ ಬಡದ ಜೀರಗಿ ಗಂಟ ಕಳುವ ಮಾಡಲಿಕ್ಕೆ ಗುತ್ತಲದಿಂದ ಗಾಡಿ ಖರ್ಚ್ ಕೊಟ್ಟ ಕರಸ್ತಾರ. “
ಹಸಿರು ನೆಲದ ಮೇಲೂ ರೊಕ್ಕದ ಕಣ್ಣು:ರೂಪಶ್ರೀ ಅಂಕಣ
ಮನೆಯ ಮುಂದೆ ಮರವಿದ್ದರೆ ಸಂತೋಷಪಡುವ ಬದಲು, ಅದರ ಮುಂದೆ ತಮ್ಮ ಮನೆಯ “ಸೌಂದರ್ಯ”! ಕಾಣುವುದಿಲ್ಲವೆಂಬ ಕಾರಣಕ್ಕೆ ಮರ ಕಡಿಸುವ ಮೂರ್ಖರಿರುವುದು ಇಂಥ ಪಟ್ಟಣಗಳಲ್ಲಿ ಮಾತ್ರವೇ ಅನ್ನಿಸುತ್ತೆ.
ಆಸ್ಟ್ರೇಲಿಯಾ ಕಲಿಸಿದ ಸಣ್ಣಪುಟ್ಟ ಜೀವನ ಪಾಠಗಳು
“ನಿನ್ನ ಪ್ರಶ್ನೆ ಅರ್ಥವಾಗಲಿಲ್ಲ. ನನಗೆ ನನ್ನ ಗಂಡನ ಜೊತೆ ಇರುವ ಸಂಬಂಧವನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂದು ನೀನು ಪ್ರಶ್ನಿಸುತ್ತೀಯಾ? ಇಬ್ಬರು ವಯಸ್ಕರ ನಡುವೆ ಇರುವ ಸಂಬಂಧಕ್ಕೆ ಅವರ ಮಧ್ಯೆ ಪರಸ್ಪರ ಒಪ್ಪಿಗೆಯಿರುವುದು ಮುಖ್ಯವೇ ಹೊರತು, ಅದನ್ನು ಅರ್ಥಮಾಡಿಕೊಳ್ಳುವ ಗೋಜು ಮೂರನೆಯ ವ್ಯಕ್ತಿಗೆ ಯಾಕೆ?
ನನ್ ಹೆಂಡ್ತಿ ನಂಗ ಅನಿವಾರ್ಯ,ಮಂದಿಗಲ್ಲಾ: ಪ್ರಶಾಂತ್ ಆಡೂರ ಪ್ರಹಸನ
”ಹಂಗ ನಾವ ದೋಸ್ತರ ಒಬ್ಬರಿಗೊಬ್ಬರ ಅರ್ಥಾ ಮಾಡ್ಕೋತಿದ್ದವಿ ನಮ್ಮ ಸುಖಃ ದುಃಖ ಇಷ್ಟ ಅಲ್ಲದ ಚಟಾನೂ ಹಂಚಗೊತ್ತಿದ್ವಿ ಅಂತ ನಮ್ಮೊಳಗ ಏನು ಸಮಸ್ಯೆ ಬರಲಿಲ್ಲ ಅನ್ರಿ. ಆದರೂ ನಾ ನಮ್ಮ ದೋಸ್ತರಿಗೆ ಒಂದ ಮಾತ ಭಾಳ ಕ್ಲೀಯರ್ ಮಾಡಿದೆ. ’ದೋಸ್ತ ನಮ್ಮಮ್ಮ ಹೆಂಡಂದಿರೂ ನಮಗ ಅನಿವಾರ್ಯ, ಬ್ಯಾರೆಯವರಿಗಲ್ಲಾ. ನಾವ ಕಟಗೊಂಡೇವಿ ನಾವ ಅನುಭವಸಬೇಕ’ ಅಂತ ಸೀದಾ ಹೇಳಿ ಈ ಇಶ್ಯುಕ್ಕೇಲ್ಲಾ ಮಂಗಳಾರತಿ ಹೇಳಿ ಬಿಟ್ಟೆ”.
ಸಾವಿರ ಸಾವಿರ ಸೇತುವೆಗಳ ನಗರಿ:ಸೀಮಾ ಅಂಕಣ
”ನಾನಂತೂ ಇಲ್ಲಿಗೆ ಬಂದ ಪ್ರಾರಂಭದಲ್ಲಿ ಸಿಕ್ಕ ಒಂದು ಅವಕಾಶವನ್ನೂ ಬಿಡದೆ ಸೇತುವೆಗಳನ್ನು ತೆರೆದು ಮುಚ್ಚುವ ಕಾರ್ಯಾಚರಣೆಯನ್ನು ತಲ್ಲೀನಳಾಗಿ ನೋಡುತ್ತಿದ್ದೆ, ಫೋಟೋ ತೆಗೆಯುತ್ತಿದ್ದೆ, ವಿಡಿಯೋ ಮಾಡುತ್ತಿದ್ದೆ. ಆದರೆ ಕೆಲ ತಿಂಗಳುಗಳ ನಂತರ ಅದು ದಿನನಿತ್ಯದ ಚಟುವಟಿಕೆ ಎಂದೆನಿಸಿ ವಿಶೇಷವಾಗಿ ಕಾಣಿಸುವುದು ನಿಂತುಹೋಯಿತು.”
ಈಸ್ಟರ್ ವಾರಾಂತ್ಯದ ಸುಖಯೋಗ:ಯೋಗೀಂದ್ರ ಅಂಕಣ
“ಚೈತ್ರಕಾಲದ ಆರಂಭವನ್ನು ಪ್ರತಿನಿಧಿಸುವ, ವಸಂತ ಮಾಸದ ದೇವತೆಯನ್ನು ಆರಾಧಿಸುವ ಹಬ್ಬ ಅಂದು ಇದಾಗಿತ್ತಂತೆ. ಇಲ್ಲಿನ ವರ್ಷದ ಆರು ತಿಂಗಳುಗಳ ಕಳೆಗೆಟ್ಟ ಪ್ರಕೃತಿಗೆ ಒಮ್ಮೆಲೇ ಚೇತನ ಬರಲಾರಂಭಿಸಿದರೆ ಅದು ಹಬ್ಬವೂ ಹೌದು ಪೂಜೆಯೂ ಹೌದು. ಅನಾದಿಕಾಲದ ಈ ಸಂಭ್ರಮ ಒಂದಾನೊಂದು ಕಾಲದಲ್ಲಿ ಪೆಗನ್ ಜನರು ಎಂದು ಕರೆಸಿಕೊಳ್ಳುವ ಯೂರೋಪಿನ ಪೂರ್ವಜ “ಮಣ್ಣಿನ ಮಕ್ಕಳ” ಹಬ್ಬ ಆಗಿತ್ತು. “
ತುಂಗೆ ಮತ್ತು ಭದ್ರೆಯ ಬಳುಕು:ಪ್ರಸಾದ್ ಶೆಣೈ ಕಥಾನಕ
“ಬೆಳಗ್ಗಿನ ಕುದುರೆಮುಖದ ನೆರಳು-ಬಿಸಿಲು ಬಿದ್ದ ಹಚ್ಚ ಹಸುರಿನ ದಾರಿ ಹಿಡಿದು ಸಾಗುವುದೇ ಎಷ್ಟು ಚೆಂದಗಿನ ಅನುಭವ!. ತಿಳಿಬಿಸಿಲು ಹಾಗೇ ದಾರಿಗೆ ಸುರಿಯುತ್ತಿರುತ್ತದೆ, ಬಾಗಿ ನಿಂತ ಮರಗಳೆಲ್ಲಾ ಗಾಳಿಗೆ ಒಂದು ಗಳಿಗೆ ತೂಗಿ ಅದರ ನೆರಳು ರಸ್ತೆಯಲ್ಲೆಲ್ಲಾ ಚೆಲ್ಲುತ್ತದೆ. ಸುಯ್ಯೆಂದು ರೆಕ್ಕೆ ಮಾತ್ರ ಕಾಣುವಂತೆ ಕಾಡಿನ ಹಕ್ಕಿಯೊಂದು ನಮ್ಮ ತಲೆ ಮೇಲಿಂದ ಹಾದು ಹೋಗುತ್ತದೆ.”
ಅಂತೂ ಇಂತು ಪ್ರಶಾಂತನ ಮಗಾ ಪಾಸ್ ಆದಾ: ಪ್ರಶಾಂತ್ ಆಡೂರ ಅಂಕಣ
“ನನ್ನ ಹೆಂಡತಿ ಅಂತೂ ತನ್ನ ಫೋನ ತೊಗೊಂಡ ತಮ್ಮ ತವರಮನಿಯವರಿಗೆಲ್ಲಾ ಫೋನ ಮಾಡಿದ್ದ ಮಾಡಿದ್ದ. ಅಕಿಗೆ ತಾ ಎಸ್.ಎಸ್.ಎಲ್.ಸಿ ಪಾಸ್ ಆದಾಗರ ಇಷ್ಟ ಖುಷಿ ಆಗಿತ್ತೊ ಇಲ್ಲೊ ಆ ದೇವರಿಗೆ ಗೊತ್ತ. ಏನ ಅಗದಿ ಮಗಗ ಕನ್ಯಾ ಗೊತ್ತಾಗಿ ಒಂದ ಹತ್ತ ತೊಲಿ ಬಂಗಾರ, ಒಂದ ಪ್ಲಾಟ್, ಐದ ಲಕ್ಷ ವರದಕ್ಷಣಿ ಸಿಕ್ಕೊರಂಗ ಎಲ್ಲಾರಿಗೂ ಹೇಳಿದ್ದ ಹೇಳಿದ್ದ.”










