ಸಾಮರಸ್ಯವೇ ಇಲ್ಲಿ ಸಲ್ಲುವುದು: ವಿನತೆ ಶರ್ಮ ಅಂಕಣ
ಆಸ್ಟ್ರೇಲಿಯಾದಲ್ಲಿ ಮುಂದಿನ ದಿನಗಳಲ್ಲಿ ಬಹಳಷ್ಟು ಬದಲಾವಣೆಗಳು ಬರಲಿವೆ. ಬಹುಸೂಕ್ಷ್ಮವಾಗಿ ಅವಲೋಕಿಸಿದರೆ ದಾಳಿಗೀಡಾದ ಧರ್ಮದ ಜನಸಮುದಾಯದ ದನಿಗೆ ಈಗಾಗಲೇ ಒಂದು ನಿರ್ದಿಷ್ಟ ಬಲ ಬಂದಿದೆ. ಇದು ಮತ್ತಷ್ಟು ಬೆಳೆಯುವ ಸೂಚನೆಗಳಿವೆ. ದೂರದ ಅಮೆರಿಕೆಯಲ್ಲಿ ಈ ಜನಸಮುದಾಯವು ಎಲ್ಲಾ ಮಟ್ಟಗಳಲ್ಲೂ ಆಳವಾದ ಪ್ರಭಾವ ಮತ್ತು ಹಿಡಿತವನ್ನು ಹೊಂದಿದೆ. ಮತ್ತೊಂದು ವಸಾಹತುಶಾಹಿ ಸಮಾಜವಾದ ಆಸ್ಟ್ರೇಲಿಯಾದಲ್ಲೂ ಹಾಗಾಗಬಹುದೆ? ದಾಳಿ ನಡೆಸಿದ ಅಪ್ಪ-ಮಗ ಜೋಡಿಯಲ್ಲಿ, ಅಪ್ಪನ ಬಳಿ ಇದ್ದದ್ದು ಭಾರತೀಯ ಪಾಸ್ಪೋರ್ಟ್. ಆತ ಭಾರತದ ಹೈದರಾಬಾದ್ ಮೂಲದವರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ಕುವೆಂಪು – ಕನ್ನಡದ ಭಾವಸೆಲೆ ಹಾಗೂ ವೈಚಾರಿಕ ದಿಕ್ಸೂಚಿ: ಎಲ್.ಜಿ.ಮೀರಾ ಅಂಕಣ
ಕವಿಯಲ್ಲದವರ ಮಟ್ಟಿಗೆ ಸಾಧಾರಣ ಬೆಟ್ಟಗುಡ್ಡ ಅನ್ನಿಸಿಬಿಡಬಹುದಿದ್ದ ಕುಪ್ಪಳ್ಳಿಯ ಒಂದು ಸ್ಥಳವು ಈ ರಸಋಷಿಯ ಕಣ್ಣಲ್ಲಿ ಅತ್ಯಂತ ಪ್ರೀತಿಯ `ಕವಿಶೈಲ’ವಾದದ್ದು ಅವರಿಗಿದ್ದ ಅಮಿತ ಪ್ರಕೃತಿಪ್ರೇಮಕ್ಕೆ ಸಾಕ್ಷಿ. ಅವರೆಲ್ಲೇ ಇದ್ದರೂ ಅವರ ಮನಸ್ಸು ಸದಾ ಕಾಲ ತಮ್ಮ ಪ್ರೀತಿಯ ಮಲೆನಾಡನ್ನು ಧ್ಯಾನಿಸುತ್ತಿತ್ತು. “ನಾನು ಭೌತಿಕವಾಗಿ ಮೈಸೂರಿನಲ್ಲಿದ್ದರೂ ಮಾನಸಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಮಲೆನಾಡಿನಲ್ಲಿರುತ್ತೇನೆ. ಪ್ರತಿ ನಿತ್ಯ ಹಲವು ಸಾರಿ ನವಿಲುಕಲ್ಲಿಗೆ ಹೋಗಿ ಬರ್ತೀನಿ, ಕವಿಶೈಲದಲ್ಲಿ ಕುಳಿತು ಧ್ಯಾನ ಮಾಡ್ತೀನಿ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ಮೂರನೆಯ ಬರಹ
ಸೀತಕ್ಕನ ವಠಾರ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ
ಸ್ವಲ್ಪ ಹೊತ್ತು ಮಸೆದ ನಂತರ ತನ್ನ ತೋರು ಬೆರಳನ್ನು ಕತ್ತಿಯ ಅಲಗಿಗೆ ತಾಗಿಸುತ್ತಾ “ಹಾಂ, ಈಗ ಹರಿತ ಆಯ್ತು. ಕತ್ತಿ ಹರಿತ ಇಲ್ಲಂದ್ರೆ ಯಾವುದಕ್ಕೂ ಉಪ್ಯೋಗಿಲ್ಲ ನೋಡು. ಒಂದು ರೀತಿಯಲ್ಲಿ ಈ ಬಿಸಿ ಚಾ ಇದ್ದ ಹಾಗೆ. ಬಿಸಿಬಿಸಿ ಇದ್ದಾಗ ಮಾತ್ರ ಕುಡಿಬಹುದು, ಆದ್ರೆ ತಣ್ಣಗಾದ್ರೆ ಕುಡಿಯೋಕೆ ಆಗಲ್ಲ ಅಲ್ವಾ? ಸ್ಥಿತಿ ಮುಖ್ಯ, ಬರೇ ಚಾ ಅಲ್ಲ…” ಅಂತ ಹೇಳಿ ನಮ್ಮಮನೆ ಹಿಂದಿನ ತೋಟಕ್ಕೆ ತಾಗಿ ಇದ್ದ ಅವರ ಗದ್ದೆಗೆ ಹೋದ್ರು.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ನಾಲ್ಕನೆಯ ಬರಹ
ಕರುಣಾಳು ಬಾ ಬೆಳಕೆ-ನವೋದಯ ಕನ್ನಡ ಕಾವ್ಯದಲ್ಲಿ ಪ್ರಾರ್ಥನೆ: ಸುಕನ್ಯಾ ಕನಾರಳ್ಳಿ ಅಂಕಣ
ನಾಗರಿಕತೆಯ ಇತಿಹಾಸ ಬರ್ಬರತೆಯ ಇತಿಹಾಸವೂ ಹೌದು ಎಂದು ಕಾರ್ಲ್ ಮಾರ್ಕ್ಸ್ ಹೇಳುತ್ತಾನೆ. ವೈಚಾರಿಕತೆ, ವಿಜ್ಞಾನ, ತಂತ್ರಜ್ಞಾನಗಳು ಹೊರಗಿಂದ ಬಂದು ಎರಡು ದಿನವಿದ್ದು ಮರಳಿ ಹೋದ ನೆಂಟರಾಗಿರಲಿಲ್ಲ. ಬದಲಿಗೆ ನಮ್ಮ ದೃಷ್ಟಿಕೋನಗಳನ್ನೇ ಪಲ್ಲಟಿಸಿದ, ಅಸಹನೆ ಮತ್ತು ಕ್ರೌರ್ಯಗಳನ್ನು ಸಾಮಾನ್ಯವಾಗಿಸಿದ ಪ್ರಚಂಡ ಶಕ್ತಿಯವು. ಯಂತ್ರವೇ ಬೃಹತ್ತಾಗಿ ಬೆಳೆದು ಮನುಷ್ಯ ಕುಲವನ್ನು ಆತ್ಮಹೀನವಾಗಿಸುವ ನಾಗರಿಕತೆ ಎಂಬ ದಮನಶಕ್ತಿಯ ಬಗ್ಗೆ ಎಚ್ಚರಿಸಲು ಇಂಗ್ಲೀಷ್ ರೊಮ್ಯಾಂಟಿಕ್ಕರು ಪ್ರಕೃತಿಯ ದನಿಯಾದ ಕಾವ್ಯವನ್ನೇ ಬಳಸಿಕೊಂಡರು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಏಳನೆಯ ಬರಹ
ಜೋಡಿಯ ಜೊತೆ, ಪ್ರಧಾನಿಯ ಮದುವೆ: ವಿನತೆ ಶರ್ಮ ಅಂಕಣ
ನಮಗೆ ಗೊತ್ತಿರುವ ಹೊಸ ಆಸ್ಟ್ರೇಲಿಯಾದ ಉಧ್ಭವ ಮತ್ತು ಬೆಳೆದಿದ್ದು ಅದೆಷ್ಟು ವಿವಾದಗಳನ್ನೊಳಗೊಂಡಿತ್ತು, ಎಂದು ಒತ್ತಿ ಹೇಳುತ್ತದೆ. ಆಸ್ಟ್ರೇಲಿಯಾದ ಬಗ್ಗೆ ಈಗಲೂ ಇರುವ ಸುಳ್ಳುಪೊರೆಗಳನ್ನು ಛೇದಿಸುತ್ತಾ ಕಾರ್ಯಕ್ರಮವು ವೀಕ್ಷಕರ ಮುಂದೆ ಅನೇಕ ಸಾಕ್ಷ್ಯಗಳನ್ನು ಇಡುತ್ತದೆ. ಹಿಂದಿನ ರಾಜಕೀಯ ನಾಯಕರು, ಪ್ರಮುಖ ಸರ್ಕಾರಿ ಅಧಿಕಾರಿಗಳು, ಚರಿತ್ರೆ-ದಾಖಲೆಗಳನ್ನು ಅಭ್ಯಸಿಸುವ ನಿಪುಣರು, ಅಬೊರಿಜಿನಲ್ ಆಸ್ಟ್ರೇಲಿಯನ್ ವಿದ್ವಾಂಸರು ಮತ್ತು ಹಿರಿಯರು ಎಂಬಂತೆ ನೂರಾರು ಜನರನ್ನು ಸಂದರ್ಶಿಸಿ ಅವರ ದೃಷ್ಟಿಕೋನಗಳನ್ನು ತೋರಿಸಿದ ಈ ಸರಣಿ ಡಾಕ್ಯುಮೆಂಟರಿ ಬಹಳ ಉಪಯುಕ್ತವಾಗಿದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ಬದಲಾಗಿದೆ ಕನ್ನಡ ನಾಡು, ಡಿಜಿಟಲ್ ಕರ್ನಾಟಕದ ಹಾಡು ಪಾಡು: ಎಲ್.ಜಿ.ಮೀರಾ ಅಂಕಣ
ಇಪ್ಪತ್ತೊಂದನೇ ಶತಮಾನದ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಎಲ್ಲ ನಾಡುಗಳಂತೆ ನಮ್ಮ ಕನ್ನಡ ನಾಡು ಸಹ ಬದಲಾಗುತ್ತಿದೆ. ನಮಗೆ ಬೇಕೋ ಬೇಡವೊ ನಮಗೆ ಪರಿಚಿತವಾಗಿದ್ದ ಬದುಕಿನ ಲಯಗಳು ನಿಧಾನವಾಗಿ ಮರೆಯಾಗುತ್ತಾ, ಅಪರಿಚಿತ, ನೂತನ ಲಯಗಳು ನಮ್ಮ ದಾರಿಯಲ್ಲಿ ಪ್ರತ್ಯಕ್ಷವಾಗುತ್ತಿವೆ. `ಅಯ್ಯೋ, ಹೇಗಿದ್ದದ್ದು ಹೇಗಾಯ್ತಪ್ಪ! ಎಲ್ಲ ಹಾಳಾಗಿ ಹೋಯಿತಲ್ಲ! ಮನುಷ್ಯ ಪ್ರಪಂಚ ಇನ್ನು ಮುಳುಗಿ ಹೋಗುತ್ತೆ! ಪ್ರಳಯವಾಗುತ್ತೆ!!’ ಎಂದು ಗೋಳಾಡುತ್ತಾ ಕೂರುವುದು ವಿವೇಕದ ಆಯ್ಕೆಯಲ್ಲ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ತೆರಡನೆಯ ಬರಹ
ಮಳೆ, ನೆನಪು ಮತ್ತು ಸಂಬಂಧ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ
ಯಾವುದೂ ಕಳೆದು ಹೋಗದ ಹೊರತಾಗಿ ಅದರ ಮೌಲ್ಯ ನಮಗೆ ಗೊತ್ತಾಗುವುದಿಲ್ಲ ಅನ್ನುವುದೇ ಈ ಬದುಕಿನ ಅತಿದೊಡ್ಡ ವಿಪರ್ಯಾಸ. ಪ್ರತೀ ಕ್ಷಣವನ್ನೂ ಉತ್ಕಟವಾಗಿ ಜೀವಿಸಬೇಕು ಅಂದುಕೊಳ್ಳುವ ಒಂದು ಫಿಲಾಸಫಿ ಶುರು ಆಗುವುದೇ ಈ ಕಳೆದುಹೋದ ಫೀಲ್ ಬಂದ ನಂತರವೇ. ಅಷ್ಟರಲ್ಲಾಗಲೇ ನಮ್ಮ ಅರ್ಧ ಆಯುಷ್ಯ ಮುಗಿದುಹೋಗಿರುತ್ತದೆ. ಇನ್ನು ದಿನಗಳು ಕಮ್ಮಿ ಅನ್ನುವ ಅರಿವಾಗುವಾಗ ಈ ಪ್ರತೀಕ್ಷಣವನ್ನೂ ಉತ್ಕಟವಾಗಿ ಬದುಕುವ ಆಸೆಯೊಂದು ಹುಟ್ಟಿಕೊಳ್ಳುತ್ತದೆ. ಆದರೆ ಹಾಗೆ ಬದುಕುತ್ತೇವಾ? ಹೇರಿಕೊಂಡ ಜವಾಬ್ದಾರಿಯ ಮೂಟೆಗಳನ್ನು ಇಳಿಸಿ ಹಗುರ ಆಗುವುದು ಸಾಧ್ಯನಾ?
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಮೂರನೆಯ ಬರಹ
ಆಧ್ಯಾತ್ಮಿಕ ಶಿಬಿರ-ಮಹಿಳೆಯರಿಗೆ: ಸುಕನ್ಯಾ ಕನಾರಳ್ಳಿ ಅಂಕಣ
ನಾನು ನೋಡಿದ್ದ ಒಂದು ಅದ್ಭುತ ತಾಳಮದ್ದಳೆ ನೆನಪಿಗೆ ಬಂತು. ಕೃಷ್ಣ ತಾನು ಸಂಧಾನಕ್ಕೆ ಹೋಗುವ ಮುನ್ನ ದ್ರೌಪದಿಯನ್ನು ಭೇಟಿ ಮಾಡುತ್ತಾನೆ. ತುಂಬಿದ ಸಭೆಯಲ್ಲಿ ತನಗೆ ಆದ ಅವಮಾನದ ಗತಿ ಏನು? ಬಿಚ್ಚಿದ ಮುಡಿಯ ಗತಿಯೇನು? ಈಗ ಆ ಗಂಡ ಧರ್ಮರಾಜ ನಿನ್ನನ್ನ ಸಂಧಾನಕ್ಕೆ ಕಳುಹಿಸುತ್ತಿದ್ದಾನೆ. ಯಾಕೆಂದರೆ ಅದು ಕೇವಲ ಹೆಣ್ಣಿಗಾದ ಅವಮಾನ ಅಲ್ಲವಾ ಕೃಷ್ಣ? ನೀನೂ ಆರಾಣೆ ಗಂಡಸಾಗಿಬಿಟ್ಟೆಯಾ? ಎಂದು ಚುಚ್ಚಿ ಕೇಳುತ್ತಾಳೆ. ಸುಮಾರು ಒಂದು ಗಂಟೆ ಅವರ ನಡುವೆ ಸಂವಾದ ನಡೆಯುತ್ತದೆ. ಅವರ ನಡುವಿನ ಆತ್ಮೀಯ ಸಲಿಗೆ, ಒಬ್ಬರಿಗೊಬ್ಬರು ಸ್ಪಂದಿಸುವ ರೀತಿ, ಚತುರ ಸಂಭಾಷಣೆಗಳನ್ನು ಬಿಟ್ಟ ಬಾಯಿ ಬಿಟ್ಟಂತೆಯೇ ನೋಡಿದ್ದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ
ಕಾಫಿ ಮತ್ತು ಕಾಫಿರರ ಕಥೆ!: ದರ್ಶನ್ ಜಯಣ್ಣ ಸರಣಿ
ಕ್ರಿಶ್ಚಿಯನ್ ದೇಶವಾದ ಇಥಿಯೋಪಿಯಾದಲ್ಲಿ ಕಾಫಿ ಉಗಮವಾದರೂ ಅದು ಪ್ರವರ್ಧಮಾನಕ್ಕೆ ಬಂದದ್ದು ಇಂದಿನ ಕಾಫಿಯಾಗಿ ರೂಪುಗೊಂಡಿದ್ದು ಮಾತ್ರ ಇಸ್ಲಾಮಿಕ್ ದೇಶಗಳಲ್ಲಿ ಅಂದರೆ ದಕ್ಷಿಣ ಅರೇಬಿಯಾ ಇಂದಿನ ಯೆಮೆನ್, ಸೌದಿಯ ದಕ್ಷಿಣನ ಅಭಾ ಪ್ರಾಂತ್ಯಗಳಲ್ಲಿ. ಒಟ್ಟೋಮನ್ ಸುಲ್ತಾನ ಕಾಫಿಯ ಶಕ್ತಿಯನ್ನು ಬಲ್ಲವನು ಈ ಬೀಜಗಳನ್ನು ರಫ್ತು ಮಾಡಬೇಕಾದರೆ ಹುರಿದೇ ಮಾಡಬೇಕೆಂಬ ಗಟ್ಟಿ ಫರ್ಮಾನು ಹೊರಡಿಸಿದ್ದ ಮತ್ತದು ಶತಮಾನಗಳ ಕಾಲ ಚಾಲ್ತಿಯಲ್ಲಿತ್ತು. ಇದಕ್ಕೆ ಕಾರಣ ಕಾಫಿ ಬೇರೆಲ್ಲೂ ಬೆಳೆಯಲು ಆಗಬಾರದು ಎಂಬ ಆಲೋಚನೆ.
ದರ್ಶನ್ ಜಯಣ್ಣ ಬರೆಯುವ “ಸೌದಿ ಡೇಟ್ಸ್” ಸರಣಿಯ ಹನ್ನೆರಡನೆಯ ಕಂತು





