Advertisement

ಅಂಕಣ

ತ್ಯಾಗಕ್ಕಿಲ್ಲಿ ಬೆಲೆಯಿದೆಯೇ?: ಜಯಲಕ್ಷ್ಮಿ ಪಾಟೀಲ್ ಅಂಕಣ

ತ್ಯಾಗಕ್ಕಿಲ್ಲಿ ಬೆಲೆಯಿದೆಯೇ?: ಜಯಲಕ್ಷ್ಮಿ ಪಾಟೀಲ್ ಅಂಕಣ

ಸಮಾಜಘಾತುಕ ಕೆಲಸಗಳಿಗಾಗಿ, ಯಾರದೋ ತೇಜೋವಧೆಗಾಗಿ, ಜಾತಿಯನ್ನು ಜರಿಯುವುದಕ್ಕಾಗಿ, ಜಾತಿಯನ್ನಿಟ್ಟುಕೊಂಡು ಮೆರೆಯುವುದಕ್ಕಾಗಿ, ಇನ್ನೊಬ್ಬರ ವಯಕ್ತಿಕ ಬದುಕಿನ ಬಗ್ಗೆ ನಮಗೇನೂ ಗೊತ್ತಿಲ್ಲದಿದ್ದರೂ ಎಲ್ಲ ಬಲ್ಲವರಂತೆ ಆಡಿಕೊಳ್ಳುವುದಕ್ಕಾಗಿ, ಸಂವಿಧಾನವು ದೇಶದ ಸುವ್ಯವಸ್ಥೆಗೊಂದು ರಾಜಮಾರ್ಗ ಎನ್ನುವುದು ತಿಳಿದಿದ್ದರೂ ಅದನ್ನು ವಿಷ’ಯ ಮಾಡಿಕೊಂಡು ಕಿತ್ತಾಡುವುದಕ್ಕಾಗಿ, ರಾಜಕೀಯ ಪಕ್ಷಗಳ ಮೇಲಿನ ಕುರುಡುಮೋಹದಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರ ಹೆಸರುಗಳಿಗೆ ಮಸಿ ಬಳಿಯುವುದರ ಮೂಲಕ ಸಾಮಾಜಿಕ ವಾತಾವರಣವನ್ನು ಹದಗೆಡಿಸಿ ದ್ವೇಷವನ್ನು ಹರಡುವುದಕ್ಕಾಗಿ, ಇತಿಹಾಸ ತಿರುಚುವ ಮೂಲಕ ಏನೋ ಮಹತ್ತರವಾದುದನ್ನು ಕಡೆದು ಗುಡ್ಡೆ ಹಾಕಿದೆ ಎಂಬಂತಾಡುವುದು, ಎಂಥಾ ನಾಚಿಗ್ಗೇಡಿತನ ಅನ್ನುವ ಅರಿವಾದರೂ ಇರಬೇಕಲ್ಲವೆ?
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣ

read more
ಅಪ್ಪಿಕೋ ಭೂತಾಯಿ ಗೌರಾದೇವಿ!: ಸುಕನ್ಯಾ ಕನಾರಳ್ಳಿ ಅಂಕಣ

ಅಪ್ಪಿಕೋ ಭೂತಾಯಿ ಗೌರಾದೇವಿ!: ಸುಕನ್ಯಾ ಕನಾರಳ್ಳಿ ಅಂಕಣ

ಅಧಿಕಾರಿಗಳಿಗೆ ಈಗ ಪೇಚಿಗಿಟ್ಟುಕೊಂಡಿತು. ಸದ್ಯಕ್ಕೆ ಅಲ್ಲಿಂದ ತೊಲಗಿ ನಂತರ ಬಂದರೆ ಹೇಗೆ? ಆದಿವಾಸಿ ಹೆಂಗಸರಿಗೆ ಸರಕಾರದ ಕುತಂತ್ರಗಳೇನೂ ಅಪರಿಚಿತವಲ್ಲ. ಅವರ ಆಯುಧಗಳನ್ನು ಹೊತ್ತೊಯ್ದು ಕೊಡುವ ನೆಪದಲ್ಲಿ ತಾತ್ಕಾಲಿಕವಾಗಿ ಕಟ್ಟಿದ್ದ ಸೇತುವೆಯನ್ನು ಅದೇ ಅಸ್ತ್ರಗಳಿಂದ ಉರುಳಿಸಿದಾಗ ಸರಕಾರ ಇತ್ತ ಕಡೆಯಲ್ಲಿ, ಇವರೆಲ್ಲ ಅತ್ತ ಕಡೆಯಲ್ಲಿ. ಇಡೀ ರಾತ್ರಿ ಸರಕಾರದ ಮಂದಿ ಮತ್ತೆ ಕಾಡೊಳಗೆ ನುಸುಳದಂತೆ ಹೆಂಗಸರು ಕಾವಲಿದ್ದರು. ಮಾರನೆಯ ದಿನ ಹಳ್ಳಿಗೆ ಹಿಂತಿರುಗಿದ ಗಂಡಸರಿಗೆ ಆಶ್ಚರ್ಯ ಕಾದಿತ್ತು. ಮಾರ್ಚ್ ೩೧, ೧೯೭೪ ರಂದು ಕಣಿವೆಯಲ್ಲಿ ತಮಟೆ ಕಹಳೆಗಳ ಸಮೇತ ಬೃಹತ್ ಪ್ರದರ್ಶನ ನಡೆಯಿತು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಹನ್ನೆರಡನೆಯ ಬರಹ

read more
ಹಿನ್ನೀರಿನಲ್ಲೊಂದು ಮುಂಜಾನೆ: ವಿನಾಯಕ ಅರಳಸುರಳಿ ಅಂಕಣ

ಹಿನ್ನೀರಿನಲ್ಲೊಂದು ಮುಂಜಾನೆ: ವಿನಾಯಕ ಅರಳಸುರಳಿ ಅಂಕಣ

ಇದೇ ಅಲೆಯ ಬುಡದಲ್ಲಿ ಒಂದು ಕಾಲದಲ್ಲಿ ಹಳ್ಳಿಯಿತ್ತು. ಗದ್ದೆಯಿತ್ತು. ಮನೆಯಿತ್ತು. ದನಕರುಗಳು ಓಡಾಡುತ್ತಿದ್ದವು. ಮನುಷ್ಯ ವಾಸವಾಗಿದ್ದ. ಅಲ್ಲೆಲ್ಲೋ ದೂರದಲ್ಲಿ ನದಿಯೊಂದರ ದಾರಿಯ ತಡೆದ ಕಾರಣಕ್ಕೆ ಇಲ್ಲಿ ಇವೆಲ್ಲವೂ ಮುಳುಗಿದವು. ಈ ನೀರಡಿಗೀಗ ಏನೇನಿರಬಹುದು? ಮುಳುಗಡೆಯಾಗುವ ಹೊತ್ತಿಗೆ ಎದ್ದು ಹೋದ ಮಗುವೊಂದು ಅರ್ಧಕ್ಕೇ ಆಡಿ ಬಿಟ್ಟ ಆಟಿಕೆಯಿರಬಹುದೇ? ರೈತನೊಬ್ಬ ನೂರಾರು ಕಟ್ಟು ಹುಲ್ಲು ಕೊಯ್ದಿರುವ ಕತ್ತಿಯಿರಬಹುದೇ? ಅಮ್ಮ ಒಬ್ಬಳು ನೂರಾರು ಬಾರಿ ಗಂಜಿ ಕಾಯಿಸಿರುವ ಪಾತ್ರೆಯಿರಬಹುದೇ? ಹಲವು ದೇವಸ್ಥಾನಗಳೂ ಇಲ್ಲಿ ಮುಳುಗಿ ಹೋಗಿವೆಯಂತೆ… ಇನ್ನಾದರೂ ಅಲ್ಲಿ ದೇವರಿರಬಹುದೇ?
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ

read more
ನ್ಯಾಯದೇವತೆಯ ತಕ್ಕಡಿಯಲ್ಲಿ ಹೊಸ, ಹಳೆ ಅಹವಾಲು: ವಿನತೆ ಶರ್ಮ ಅಂಕಣ

ನ್ಯಾಯದೇವತೆಯ ತಕ್ಕಡಿಯಲ್ಲಿ ಹೊಸ, ಹಳೆ ಅಹವಾಲು: ವಿನತೆ ಶರ್ಮ ಅಂಕಣ

ಇದೆಲ್ಲವನ್ನೂ ನೋಡುತ್ತಿರುವಾಗ ಇಗೋ ಜನವರಿ ೨೬ ಬರುತ್ತಿದೆ. ಅಂದು ಆಸ್ಟ್ರೇಲಿಯಾ ಡೇ – ಕ್ಯಾಪ್ಟನ್ ಜೇಮ್ಸ್ ಕುಕ್ ಸಿಡ್ನಿ ಸಮುದ್ರತೀರಕ್ಕೆ ಬಂದು, ಅವನ ಹಡಗು ಅಲ್ಲಿ ಲಂಗರು ಹಾಕಿ, ಓಹೋ ಈ ಜಾಗದಲ್ಲಿ ಯಾರೂ ಮನುಷ್ಯರು ಇಲ್ಲ, ಆದ್ದರಿಂದ ಇದು ತಮಗೆ ಸೇರಿದ್ದು, ಬ್ರಿಟಿಷರಿಗೆ ಸೇರಿದ ನಾಡು, ಎಂದು ಘೋಷಿತವಾದ ದಿನ. ಅಲ್ಲಿಂದ ಹೊಸ ಆಸ್ಟ್ರೇಲಿಯದ ಹುಟ್ಟು, ಬೆಳವಣಿಗೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

read more
ಉನ್ನತ ವಿಜ್ಞಾನ ಶಿಕ್ಷಣದಲ್ಲಿ ಕನ್ನಡ ಭಾಷೆ: ಡಾ.ಎಲ್.ಜಿ.ಮೀರಾ ಅಂಕಣ

ಉನ್ನತ ವಿಜ್ಞಾನ ಶಿಕ್ಷಣದಲ್ಲಿ ಕನ್ನಡ ಭಾಷೆ: ಡಾ.ಎಲ್.ಜಿ.ಮೀರಾ ಅಂಕಣ

ಮಾತೃ಼ಭಾಷೆ/ಪ್ರಾದೇಶಿಕ ಭಾಷೆಯಲ್ಲಿನ ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿ – 2020 ಈ ವಿಷಯದಲ್ಲಿ ಹೊಸ ಬಾಗಿಲುಗಳನ್ನು ತೆರೆಯುವ ಸಾಧ್ಯತೆಯನ್ನು ತೋರಿಸಿದೆ. ವಿಶ್ವೇಶ್ವರಯ್ಯ ತಂತ್ರಜ್ಞಾನ ವಿಶ್ವವಿದ್ಯಾಲಯ (ವಿಟಿಯು)ದ ಉಪಕುಲಪತಿಗಳಾದ ಡಾ.ಕರಿಸಿದ್ಧಪ್ಪನವರ ಮುಂಚೂಣಿಯಲ್ಲಿ ಯಂತ್ರಜ್ಞಾನಗಳ (ಇಂಜಿನಿಯರಿಂಗ್) ವಿಷಯಗಳಲ್ಲಿ ಕನ್ನಡ ವಿಜ್ಞಾನ ಬೋಧನೆಯ ಪ್ರಯತ್ನಗಳು ಪ್ರಾರಂಭವಾಗಿವೆ. ಇಲ್ಲಿನ ಮೊದಲನೆಯ ವರ್ಷದ ಯಂತ್ರಜ್ಞಾನ ಶಿಕ್ಷಣದ ವಿದ್ಯಾರ್ಥಿಗಳಿಗೆ ಕನ್ನಡ ಪಠ್ಯಪುಸ್ತಕಗಳನ್ನು ಮುತುವರ್ಜಿ ವಹಿಸಿ ತಯಾರಿಸುತ್ತಿರುವುದು ಒಂದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

read more

ಪಾತ್ರ ಪುರಾಣ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

ಅಕ್ಷರಶಃ ದೀಪವಾರಿದ ಮೇಲಿ ನಿಂಕ ದೀಪದ ಮಲ್ಲಿಯಾದಳು ಶಕುಂತಲೆ. ಅಷ್ಟು ದುರ್ಬಲವೇ ನಮ್ಮ ಪ್ರೇಮ? ಯಾವುದೋ ವಸ್ತುವಿನ ಅವಶ್ಯಕತೆ ಅನಿವಾರ್ಯ ಆಗುವಷ್ಚು? ದಿಕ್ಕುತಪ್ಪಿದಳು, ಏಕಾಂಗಿಯಾದಳು.ಶಕುಂತಲೆಗೆ ದುಷ್ಯಂತನ ಪರಿಚಯವಿತ್ತು.ಸಂಧಿಸಿದ ಕೂಡಲೇ ತನ್ನ ಗುರುತು ಹಿಡಿಯುವನೆಂಬ ಅಪಾರ ಆತ್ಮವಿಶ್ವಾಸವೂ ಇತ್ತು. ಅದಕ್ಕಾಗಿಯೇ, ಅವಳಿಗೆ ದುಷ್ಯಂತ ಗುರುತಿಗಾಗಿಯೇ ಕೊಟ್ಟಿದ್ದ ಉಂಗುರವನ್ನು ಅವಳು ಅಷ್ಟೊಂದು ಮಹತ್ವದ್ದಾಗಿ ಪರಿಗಣಿಸಲೇ ಇಲ್ಲ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಆರನೆಯ ಬರಹ

read more

ಎರಡು-ನಾಲಿಗೆಗಳ ನಡುವೆ ನಾನು!: ಸುಕನ್ಯಾ ಕನಾರಳ್ಳಿ ಅಂಕಣ

ಕರ್ನಾಟಕದಲ್ಲಿ ಕಲಿಯುವ ಮಕ್ಕಳ ಜೊತೆ ಒಂದು ಭಾವನಾತ್ಮಕ ಸಂಬಂಧವನ್ನು ಕಟ್ಟಿಕೊಳ್ಳುವುದಕ್ಕೆ ನನ್ನ ಕನ್ನಡ ಇನ್ನಿಲ್ಲದಂತೆ ಸಹಾಯ ಮಾಡಿದೆ. ಕೆಲವೊಮ್ಮೆ ಪರಿಕಲ್ಪನೆಗಳನ್ನ ಅರ್ಥಮಾಡಿಸುವಾಗ ಬಳಸಿಕೊಳ್ಳುತ್ತಿದ್ದ ದಿನನಿತ್ಯದ ಉದಾಹರಣೆಗಳಿಗೆ ಮತ್ತು ಹಾಸ್ಯಕ್ಕೆ ಕನ್ನಡವೇ ಜೀವವಾಗಿರುತ್ತಿತ್ತು. ಅದನ್ನೇ ಇಂಗ್ಲೀಷಿನಲ್ಲಿ ಹೇಳಿದ್ದಿದ್ದರೆ ಮಕ್ಕಳು ನಗುವುದಿರಲಿ, ನನಗೇ ಅಳು ಬರುತ್ತಿತ್ತೋ ಏನೋ. ಆದರೂ ಹೊರನಾಡಿನಿಂದ ಬಂದಿದ್ದ ಕೆಲವು ಮಕ್ಕಳಿಗೆ ಇಂಗ್ಲೀಷಿನಲ್ಲೂ ಹೇಳುವ ಪ್ರಯತ್ನ ಮಾಡುತ್ತಿದ್ದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಹನ್ನೊಂದನೆಯ ಬರಹ

read more

ಜಯಲಕ್ಷ್ಮಿ ಪಾಟೀಲ್ ಬರೆಯುವ ಹೊಸ ಅಂಕಣ “ಗರ್ದಿ ಗಮ್ಮತ್ತು” ಇಂದಿನಿಂದ

ಕೇವಲ ಕೆಲ ಬೇಸಿಗೆ ಶಿಬಿರಗಳು, ಅರೆ ವಾರ್ಷಿಕ ಕೋರ್ಸುಗಳು, ಶಾಲಾ ವಾರ್ಷಿಕೋತ್ಸವದಲ್ಲಿ ಮಕ್ಕಳು ಆಡುವ ನಾಟಕಗಳು ಮಾತ್ರವಿದ್ದರೆ ಸಾಲದು. ಇದನ್ನೂ ಮೀರಿ ಮಕ್ಕಳ ರಂಗಭೂಮಿ ಬೆಳೆಯಬೇಕಿದೆ. ಕೇವಲ ಕಲೆಯ ದೃಷ್ಟಿಯಿಂದ ಮಾತ್ರವಲ್ಲ, ಮಕ್ಕಳೊಳಗಿನ ಆತ್ಮವಿಶ್ವಾಸ ಹೆಚ್ಚಾಗಲು, ಭಾಷಾ ಕಲಿಕೆಗೆ, ಸ್ಪಷ್ಟ ಉಚ್ಚಾರಣೆಗೆ, ಪಾತ್ರಗಳ ಮೂಲಕ ಭಿನ್ನ ವ್ಯಕ್ತಿತ್ವಗಳನ್ನು ಅರಿಯುವುದಕ್ಕೆ, ನಾಲ್ಕು ಜನರೊಂದಿಗೆ ಬೆರೆಯುವುದಕ್ಕೆ, ಆರೋಗ್ಯಕರ ಮನಸ್ಥಿತಿ ಬೆಳೆಸಿಕೊಳ್ಳುವುದಕ್ಕೆ ಮಕ್ಕಳ ರಂಗಭೂಮಿ ಪೂರಕವಾಗಬಲ್ಲದು. ಬಣ್ಣ ಮತ್ತು ಬೆಳಕಿನ ಜೋಡಿಯ ಮೋಡಿ ಸಮಸ್ತ ಪ್ರಜೆಗಳ ಮೇಲಾಗಲಿ.
ಜಯಲಕ್ಷ್ಮಿ ಪಾಟೀಲ್ ಬರೆಯುವ ಹೊಸ ಅಂಕಣ “ಗರ್ದಿ ಗಮ್ಮತ್ತು”

read more

‘ಹೊಸ’ ಅಲೆ  ಮತ್ತು ‘ಹಗರಣ’: ಸುಕನ್ಯಾ ಕನಾರಳ್ಳಿ ಅಂಕಣ

‘ಸಂಸ್ಕಾರ’ ಕಾದಂಬರಿಯ ಕರ್ತೃ ಯು ಆರ್ ಅನಂತಮೂರ್ತಿ ಚಿತ್ರಕಥೆಯಲ್ಲಿ ಮಾಡಿಕೊಂಡಿದ್ದ ಬದಲಾವಣೆಗಳ ಬಗ್ಗೆ ಹೇಳಿದ್ದ ಮಾತುಗಳನ್ನು ಗಮನಿಸಿದರೆ ‘ಸ್ವ-ಸೆನ್ಸಾರಿಕರಣ’ ಅಲ್ಲಿಯೂ ಸಹ ಕೆಲಸ ಮಾಡಿದ್ದನ್ನು ಗಮನಿಸಬಹುದು. ನಾರಣಪ್ಪನ ಸಂಸ್ಕಾರ ಕಾದಂಬರಿಯ ಅರ್ಧದಲ್ಲಿಯೇ ಒಬ್ಬ ಮುಸ್ಲಿಮ್ ವ್ಯಕ್ತಿಯಿಂದ ನಡೆದು ಹೋಗಿರುತ್ತದೆ. ಆದರೆ ಚಿತ್ರ ಅದರ ಬಗ್ಗೆ ಮೌನ ತಳೆಯುತ್ತದೆ. ಈ ‘ದಿವ್ಯಮೌನ’ ಪ್ರಾಣೇಶಾಚಾರ್ಯರ ತುಮುಲಕ್ಕೆ ಇನ್ನೊಂದು ಆಯಾಮ ನೀಡುವುದರ ಜೊತೆಗೆ ಹಾಗೇನಾದರೂ ಚಿತ್ರದಲ್ಲಿ ತೋರಿಸಿದ್ದಿದ್ದರೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯೇ ಇರುತ್ತಿರಲಿಲ್ಲ ಎನ್ನುವುದೂ ನಿಜ ತಾನೇ?
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ