ಕೆಂಪಾದವೋ ಎಲ್ಲ ಕೆಂಪಾದವೋ: ಸುಧಾ ಆಡುಕಳ ಅಂಕಣ
ಆ ದಿನವೂ ಮಳೆಗೆ ಇನಿತೂ ಬಿಡುವಿಲ್ಲ. ಸಂಜೆಯಾಗುತ್ತಲೇ ರಾತ್ರಿಯಿಳಿದಂತ ಕತ್ತಲು. ನೀಲಿಯ ಅಮ್ಮ ಅಂಗಳಕ್ಕೆ ಇಣುಕಿ ಕ್ಷಣಕ್ಷಣವೂ ನೀಲಿ ಬಂದಳೆ? ಎಂದು ನಿರುಕಿಸುತ್ತಾಳೆ. ಈ ಹುಡುಗಿಗೆ ಯಾಕಿಷ್ಟು ಶಾಲೆಯ ಹುಚ್ಚೋ ಎಂದು ಮನದಲ್ಲಿಯೇ ಶಪಿಸುತ್ತಾಳೆ. ಹೊಳೆಯಂತೂ ಹುಚ್ಚುಹಿಡಿದು ಹರಿಯುತ್ತಿದೆ.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ನಾಲ್ಕನೆಯ ಕಂತಿನಲ್ಲಿ ನೀಲಿಯ ಓದುವ ಹುಚ್ಚಿನ ಕತೆ
ಉರಿದು ಮುಗಿದುಬಿಡುವುದಲ್ಲ ಪ್ರೀತಿ: ಎಸ್. ನಾಗಶ್ರೀ ಅಜಯ್ ಅಂಕಣ
ಓದಿ, ಬರೆದು, ಕಣ್ತೆರೆದು ಪ್ರಪಂಚ ನೋಡಿ, ತಿಳಿದು, ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾದ ವಯಸ್ಸಿನಲ್ಲಿ ಪ್ರೇಮದ ಹೆಸರಿನಲ್ಲಿ ಹುಚ್ಚಾಟಗಳಿಗೆ ಪಕ್ಕಾಗಿ, ನಮ್ಮನ್ನೇ ನಿಭಾಯಿಸಿಕೊಳ್ಳಲು ಬಾರದ ವಯಸ್ಸಿನಲ್ಲಿ ಇನ್ನೊಂದು ಜೀವವನ್ನು ನಿಭಾಯಿಸುವ, ಸಂಬಂಧ ಬೆಸೆಯುವ ಸಾಹಸ ಬೇಕಿದೆಯೆ?
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ
ಗರತಿಯ ಹಾಡು ಮತ್ತು ಸ್ತ್ರೀ ದೃಷ್ಟಿಕೋನ: ಲಿಂಗರಾಜ ಸೊಟ್ಟಪ್ಪನವರ್ ಅಂಕಣ
ಜನಪದ ಎನ್ನುವದು ಸ್ತ್ರೀ ಕೇಂದ್ರಿತವಾದ ಭಾವುಕ ನೆಲೆ. ಅವಳ ಹಂಬಲ, ಹತಾಶೆ, ಸಡಗರ ಸಂಕಟಗಳು, ಹಾತೊರಿಕೆ, ಕನವರಿಕೆ ಹಾಗೂ ಪ್ರತಿರೋಧಗಳಿಗೆ ಒಂದು ಅಭಿವ್ಯಕ್ತಿ ಮಾಧ್ಯಮವಾಗಿ ಅದು ರೂಪಗೊಂಡಿರುವಂತದ್ದಾಗಿದೆ. ಜನಪದ ಧಾರೆಯುದ್ದಕ್ಕೂ ಹೆಣ್ಣನ್ನು ಉತ್ತಮರ ಮಗಳು ಆಗಿಸುವ ಅಭೀಪ್ಸೆ ಒಂದು ಪುರುಷ ಪ್ರಣೀತವಾದ ಅನುಕೂಲಸಿಂಧು ಗರತಿ ಧರ್ಮವನ್ನು ರೂಪಿಸಿದೆ ಮತ್ತೆ ಅದು ಒಂದು ಹೆಣ್ಣಿನ ಮೂಲಕವೆ ಇನ್ನೊಂದು ಹೆಣ್ಣಿಗೆ ಧಾರೆಯೆರೆಯುವಂತೆ ಸಂಯೋಜಿಸಲಾಗಿದೆ.
ಲಿಂಗರಾಜ ಸೊಟ್ಟಪ್ಪನವರ್ ಬರೆಯುವ “ಉತ್ತರದ ಕತೆಗಳು” ಅಂಕಣ
ಯಾವುದು ಪ್ರೀತಿ?! ಯಾಕಾದರೂ ಈ ಪ್ರೀತಿ…: ಆಶಾ ಜಗದೀಶ್ ಅಂಕಣ
ಕಲ್ಲೆಸೆಯುವ ಕೈಗಳಿಗೆ ಆತ್ಮಸಾಕ್ಷಿ ಏಕೆ ಕಾಡುವುದಿಲ್ಲ?! ಕೊಂದು ಬದುಕುವುದು ಮನುಷ್ಯತ್ವವೇ ಅಲ್ಲ ಎಂದ ಮೇಲೆ ನೋಯಿಸಿ ನಗುವ ಮನಃಸ್ಥಿತಿ ಹುಟ್ಟಿದ್ದು ಎಲ್ಲಿಂದ… ಎಲ್ಲ ಪಾಠಗಳನ್ನೂ ನಮ್ಮ ಬದುಕಿನಿಂದಲೇ ಕಲಿಯುವ ಅಗತ್ಯವಿಲ್ಲ. ನಮ್ಮವರ ಬದುಕಿನಿಂದಲೂ ಕಲಿಯಬಹುದು…ಇಲ್ಲಿ ಮಲ್ಲಿಗೆ ಬಳ್ಳಿಯಂತೆ ತಬ್ಬಿ ಹಬ್ಬಿ ಬೆಳೆಯುವ ಹೊತ್ತಿನಲ್ಲೇ ಗುಲಾಬಿಯಂತೆ ಮುಳ್ಳುಗಳ ನಡುವೆಯೇ ಜಾಗ್ರತೆಯಾಗಿ ಅರಳುವುದನ್ನೂ ಕಲಿಯಬೇಕು.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಹೊಸ ಬರಹ
ಬಹುಸಂಸ್ಕೃತಿಗಳ ಆಸ್ಟ್ರೇಲಿಯಾದಲ್ಲಿ ನೆರೆಹೊರೆ: ವಿನತೆ ಶರ್ಮ ಅಂಕಣ
ಹಾಗೆ ನೋಡಿದರೆ ಆಸ್ಟ್ರೇಲಿಯಾದ ನಗರಗಳಲ್ಲಿ ವಾಸಿಸುವ ಸಾಮಾನ್ಯ ಜನರು ಮತ್ತು ಅವರ ನೆರೆಹೊರೆಯವರು ಎನ್ನುವ ವಿಷಯಕ್ಕೆ ಪುನರ್ಜೀವ ಬಂದಿದೆ. ಇದಕ್ಕೆ ಇಂಬು ಕೊಟ್ಟಿರುವುದು ವಲಸಿಗರ ಸಂಖ್ಯೆ, ಅವರ ಮೇಲ್ಮಟ್ಟದ ಉದ್ಯೋಗಗಳು, ಸಂಬಳ, ವಸತಿ ಕೊಳ್ಳುವ ಸಾಮರ್ಥ್ಯ ಇತ್ಯಾದಿ. ಈ ಸಾಮರ್ಥ್ಯದಿಂದ ಅವರು ಸಮಾಜದ ಮೇಲಿನ ಸ್ತರಗಳಿಗೆ ಬಂದು ಹೆಸರು, ಖ್ಯಾತಿ, ಸ್ಥಾನಮಾನಗಳನ್ನು ಗಳಿಸಿ ಮಿಂಚುತ್ತಿದ್ದಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಬೆಚ್ಚಿ ಬೀಳಿಸಿದ ದೆವ್ವಗಳ ಕಥೆಗಳು: ಸುಧಾ ಆಡುಕಳ ಅಂಕಣ
ಸುಮಾರು ಹೊತ್ತಿನಲ್ಲಿ ಮೊದಲು ಮಾತನಾಡಿಸಿದ ಹೆಂಗಸೇ ಹೊರಬಂದು, “ಬನ್ನಿ ಒಳಗೆ. ನಿಮಗೆ ಬಿಸಿ, ಬಿಸಿ ಚಾ ಕೊಡುವೆ.” ಎಂದಳಾದರೂ ಮಾತು ಮುಗಿಸುವಾಗ ಕಣ್ಣು ಕೆಂಡದಂತೆ ಹೊಳೆಯುತ್ತಿತ್ತು. ನಡುಮನೆಯಲ್ಲಿರುವ ಎರಡು ಕತ್ತಲೆಯ ಕೋಣೆಯನ್ನು ದಾಟಿ ಅಡುಗೆಮನೆಗೆ ಕಾಲಿಟ್ಟಿದ್ದೇ ಸೋಮಣ್ಣ ಬೆಚ್ಚಿಬಿದ್ದ! ಕಟ್ಟಿಗೆಯ ಒಲೆಯಲ್ಲಿ ಸೌದೆಯ ಬದಲು ತನ್ನ ಕಾಲನ್ನೇ ಒಟ್ಟಿ ಅಲ್ಲವಳ ಸೊಸೆ ಹಾಲು ಕಾಯಿಸುತ್ತಿದ್ದಳು!
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ
ಲೋಕದೃಷ್ಟಿಯೂ ಲೋಕಾ ರೂಢಿಗಳು: ಲಿಂಗರಾಜ ಸೊಟ್ಟಪ್ಪನವರ್ ಅಂಕಣ
ಸಿಕ್ಕೊಂಡು ಸೀರಿ ಉಟ್ಕಂಡಿಯವೂ ಹುಷಾರು..: ಮನೆಯ ಹಿರಿಯ ಹೆಂಗಸರು ಹಿರಿಯರಿಗೆ ಹೇಳಿ ಕಳಿಸುವ ಅತಿ ಎಚ್ಚರಿಕೆಯ ಮಾತು ಇದು. ಹಲವು ನೆರಿಗೆಗಳನ್ನು ಸೀರೆಗೆ ಆಧ್ಯಾರೋಪಿಸಿದಂತಹ ಕಟು ಎಚ್ಚರ ಇಲ್ಲಿ ಸಂಕೇತದಂತೆ ಇದೆ. ಎಡವದಿರುವ ಜಾರದಿರುವ ಎಚ್ಚರ ಹೆಜ್ಜೆ ಹೆಜ್ಜೆಗೂ ಗಂಟೆ ಹೊಡೆಯುತ್ತಿರುತ್ತದೆ. ಜನಪದ ಧಾರೆಯಲ್ಲಿ ಇಂಥದೊಂದು ಸ್ತ್ರೀ ಕೇಂದ್ರಿತ ಎಚ್ಚರದ ಮಾತುಗಳು ಉದ್ದಕ್ಕೂ ಸಿಗುತ್ತವೆ.
ಲಿಂಗರಾಜ ಸೊಟ್ಟಪ್ಪನವರ್ ಬರೆಯುವ “ಉತ್ತರದ ಕತೆಗಳು” ಅಂಕಣದ ಎರಡನೆಯ ಬರಹ
ಕಡಲಿನಗಲದ ಕಣ್ಣುಗಳೊಳಗಿನ ಸುನಾಮಿ…: ಆಶಾ ಜಗದೀಶ್ ಅಂಕಣ
ನಾವು ಅದೆಷ್ಟು ತೀವ್ರವಾಗಿ ಅತ್ತಿದ್ದೇವೆ, ಒಬ್ಬರನ್ನೊಬ್ಬರು ಹಂಬಲಿಸಿದ್ದೇವೆ, ಬಿಟ್ಟು ಬದುಕಲು ಸಾಧ್ಯವೇ ಇಲ್ಲ ಎನಿಸುವಷ್ಟು ಹಚ್ಚಿಕೊಂಡಿದ್ದೇವೆ. ಜೊತೆಯಲ್ಲಿರುವಂತೆ ಭ್ರಮಿಸಿದ್ದೇವೆ. ಭ್ರಮೆಯಿಂದ ತಿಳಿದೆದ್ದು ವಿಹ್ವಲಗೊಂಡಿದ್ದೇವೆ. ಅದೊಂದು ದಿನ ನಡುರಾತ್ರಿ, ಒಂದು ಕನಸು ಅರಳತೊಡಗಿತ್ತು; ನೈಜವೆನಿಸುವಷ್ಟೇ ಸಹಜವಾಗಿ. ನಾವಿಬ್ಬರೂ ಎರೆಡು ಪುಟ್ಟ ಗಿಳಿಗಳಂತೆ ಒಟ್ಟೊಟ್ಟಾಗಿ ಒತ್ತಿಕೊಂಡು ಕೂತು, ನಿಂತು, ಮಲಗಿ ಆಟವಾಡುತ್ತಿದ್ದೆವು. ಮುದ ಮತ್ತು ಮುಗ್ಧ… ಯಾರ ಸಂಚೋ ತಿಳಿಯದು. ಕನಸು ಒಡೆಯಿತು. ಕಣ್ಣು ತೆರೆದಾಗ ನೀನಿಲ್ಲ.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಹೊಸ ಬರಹ
ಮಿಶ್ರಭಾವಗಳ ಮೂರ್ತರೂಪ ‘ಆಸ್ಟ್ರೇಲಿಯಾ ಡೇʼ : ವಿನತೆ ಶರ್ಮ ಅಂಕಣ
ಮೂಲನಿವಾಸಿ ಜನಸಮುದಾಯಗಳ ಬೆಂಬಿಡದ ಪ್ರಯತ್ನಗಳಿಂದ ಅವರ ಸಂಸ್ಕೃತಿಗಳು, ಭಾಷೆಗಳ ಬಗ್ಗೆ ಗೌರವ ಹೆಚ್ಚುತ್ತಿದೆ. ಇದರ ಜೊತೆಗೆ ಆಸ್ಟ್ರೇಲಿಯಾದಲ್ಲಿ ಬೆಳೆಯುತ್ತಿರುವ ಬಹುಸಂಸ್ಕೃತಿಗಳ ಪ್ರಭಾವ, ವಲಸಿಗರ ಸಂಖ್ಯೆ ಜನರ ಮನೋಭಾವನೆಯನ್ನು ಬದಲಿಸುತ್ತಿದೆಯೇನೋ. ಇವರುಗಳ ಬಹುಸಂಸ್ಕೃತಿ ಆಚಾರ-ವಿಚಾರಗಳ, ಆಹಾರಪದ್ಧತಿಗಳ ವೈವಿಧ್ಯತೆಗಳಿಂದ, ಸಾಮ್ಯತೆಗಳಿಂದ ಪರಸ್ಪರರನ್ನು ಒಪ್ಪಿಕೊಳ್ಳುವ ಸಾಧ್ಯತೆಗಳು ವಿಸ್ತರಿಸುತ್ತಿವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”