Advertisement

ಅಂಕಣ

ಹೆಬ್ಬುಲಿಯೊಂದು ಡಮಾರ್!!: ಸುಧಾ ಆಡುಕಳ ಅಂಕಣ

ಹೆಬ್ಬುಲಿಯೊಂದು ಡಮಾರ್!!: ಸುಧಾ ಆಡುಕಳ ಅಂಕಣ

ಶಾಲೆಗೆ ಹೋದರೂ ನೀಲಿಗೆ ಹುಲಿಯದೇ ಮುಖ ನೆನಪಿಗೆ ಬರುತ್ತಿತ್ತು. ತನ್ನ ಸಹಪಾಟಿಗಳಿಗೂ ಹುಲಿಯನ್ನು ತೋರಿಸಬೇಕು ಅನಿಸತೊಡಗಿತು. ಮಾಸ್ತ್ರು ಪಾಠ ಮಾಡುತ್ತಿರುವಂತೆಯೇ ಪಿಸಪಿಸನೆ ಆಚೀಚೆಗೆ ಕುಳಿತವರಿಗೆ ವಿಷಯ ಮುಟ್ಟಿಸಿದಳು. ಇಂದೇನು? ಯಾವ ಮಕ್ಕಳೂ ಪಾಠದೆಡೆಗೆ ಗಮನವನ್ನೇ ನೀಡುತ್ತಿಲ್ಲವೆಂದು ಕ್ಷಣಕಾಲ ದಿಟ್ಟಿಸಿದ ಗೌಡಾ ಮಾಸ್ತ್ರು ಸುದ್ದಿಮೂಲವನ್ನು ಪತ್ತೆ ಹಚ್ಚಿಯೇಬಿಟ್ಟರು. ನೀಲಿಯನ್ನು ನಿಲ್ಲಿಸಿ ವಿಷಯ ಕೇಳಿದ್ದೇ ತಡ ಪಟಪಟನೆ ಪಟಾಕಿ ಸರಕ್ಕೆ ಬೆಂಕಿ ಕೊಟ್ಟಂತೆ ಎಲ್ಲ ಕತೆಯನ್ನು ಹೇಳಿಬಿಟ್ಟಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ

read more
“ಕರ್ನಾಟಕದ ಕಸ್ತೂರಬಾ”: ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಅಂಕಣ

“ಕರ್ನಾಟಕದ ಕಸ್ತೂರಬಾ”: ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಅಂಕಣ

ಅಸ್ಪೃಶ್ಯತೆ ನಿವಾರಣೆಯನ್ನು ತಿಳಿಸಿಕೊಟ್ಟ ಮಹಾತ್ಮ ಗಾಂಧೀಜಿ ಅವರು ದೀನ, ದಲಿತ, ದುರ್ಬಲರ ಒಳಿತಿಗಾಗಿ ಮಾಡುವ ನಿಸ್ವಾರ್ಥ ಸೇವೆ ಅತ್ಯಂತ ಪವಿತ್ರವಾದದ್ದು ಹಾಗೂ ಅದು ದೇವರನ್ನು ಪೂಜಿಸಿದಷ್ಟೇ ಫಲ ದೊರೆಯುವ ಸೇವಾ ಕಾರ್ಯ, ಅಸ್ಪೃಶ್ಯರನ್ನು ಈ ಕಾರಣದಿಂದಲೇ ಗಾಂಧೀಜಿಯವರು ದಲಿತರು ಎಂದು ಕರೆಯುವ ಮೂಲಕ ಅವರ ಉದ್ಧಾರವೇ ಜನಾರ್ಧನನ ಸೇವೆ ಎಂಬುದನ್ನು ದೃಢವಾಗಿ ನಂಬಿದ್ದರಲ್ಲದೆ ಗಾಂಧಿಜೀಯವರ ಅನುಯಾಯಿಗಳೆಲ್ಲ ಕೇರಿಯ ಜನರಗಳಿಗಾಗಿ ಸೇವೆ ಮಾಡುವಂತಹ ವಾತಾವರಣವನ್ನು ನಿರ್ಮಿಸಿದರು.
ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ “ಹೊಸ ಓದು” ಹೊಸ ಓದು ಅಂಕಣ

read more
ಲಿಂಗರಾಜ ಸೊಟ್ಟಪ್ಪನವರ್‌ ಹೊಸ ಅಂಕಣ “ಉತ್ತರದ ಕತೆಗಳು” ಶುರು..

ಲಿಂಗರಾಜ ಸೊಟ್ಟಪ್ಪನವರ್‌ ಹೊಸ ಅಂಕಣ “ಉತ್ತರದ ಕತೆಗಳು” ಶುರು..

ನಿತ್ಯ ಬದುಕಿನ ಜಂಜಡಗಳನ್ನು ಹಗುರಗೊಳಿಸಿಕೊಳ್ಳುವ ಸಾಧನ ಮಾರ್ಗಗಳಾಗಿ ಇವು ಬಳಕೆಯಲ್ಲಿವೆ. ಇವುಗಳು ವೈಯಕ್ತಿಕ ಬದುಕನ್ನು ರಂಜಿನೀಯಗೊಳಿಸುವಲ್ಲಿ ಮತ್ತು ಸಾಮಾಜಿಕವಾದ ಪರಸ್ಪರವಾದ ಒಂದು ಬಂಧವನ್ನು ಮನುಷ್ಯ ಮನುಷ್ಯರ ನಡುವೆ ರೂಪಿಸುವಲ್ಲಿ ಮಹತ್ವವಾದವು. ಇದನ್ನು ಜಾನಪದ ದಾರಿ ಸಾಬೀತುಪಡಿಸಿದೆ.
ಲಿಂಗರಾಜ ಸೊಟ್ಟಪ್ಪನವರ್‌ ಬರೆಯುವ ಉತ್ತರ ಕರ್ನಾಟಕದ ಬದುಕು ಮತ್ತು ಸಂಸ್ಕೃತಿಯ ಕುರಿತ ಅಂಕಣ “ಉತ್ತರದ ಕತೆಗಳು”

read more
ಹೊಸ ಹಾದಿಯಲ್ಲಿ ನಡಿಗೆಯ ಸವಾಲುಗಳು..: ಎಸ್ ನಾಗಶ್ರೀ ಅಜಯ್ ಅಂಕಣ

ಹೊಸ ಹಾದಿಯಲ್ಲಿ ನಡಿಗೆಯ ಸವಾಲುಗಳು..: ಎಸ್ ನಾಗಶ್ರೀ ಅಜಯ್ ಅಂಕಣ

ಕೇಳಿದವರಿಗೆ ಏನು ಮಹಾ ಎನ್ನಿಸುವ ಸಣ್ಣಪುಟ್ಟ ವಿಚಾರಗಳು ಹೊಸ ವಾತಾವರಣದಲ್ಲಿ ಚಪ್ಪಲಿಯೊಳಗೆ ಸೇರಿದ ಮರಳಿನ ಕಣದಂತೆ ಒತ್ತುತ್ತಿರುತ್ತವೆ. ಒಂದೇ ಜಾತಿ, ಉಪಜಾತಿ, ಪಂಗಡದಲ್ಲೇ ಮದುವೆಯಾದರೂ ಮನೆಯ ಪದ್ಧತಿ, ಸಂಪ್ರದಾಯ, ಇಷ್ಟಾನಿಷ್ಟಗಳಲ್ಲಿ ಹಲವು ವ್ಯತ್ಯಾಸಗಳು. ಬೆರಳು ಚುರಕ್ಕೆನ್ನುವಷ್ಟು ಸುಡುವ, ಹಬೆಯಾಡುವ ಊಟ ಇಷ್ಟಪಡುವ ಮನೆಯಿಂದ, ತಣ್ಣಗೆ ಆರಿ ಅಕ್ಷತೆಯಾದ ಅನ್ನ, ಉಗುರುಬೆಚ್ಚಗಿನ ಸಾರು ತಿನ್ನುವ ಮನೆಗೆ ಬಂದರೆ ತುತ್ತು ಗಂಟಲಿನಿಂದ ಕೆಳಗಿಳಿಯಲ್ಲ.
ಎಸ್ ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

read more
ತಿಜೋರಿಯಿಂದ ತಪ್ಪಿಸಿಕೊಂಡ ಘಳಿಗೆಗಳೆಷ್ಟೋ…: ಆಶಾ ಜಗದೀಶ್ ಅಂಕಣ

ತಿಜೋರಿಯಿಂದ ತಪ್ಪಿಸಿಕೊಂಡ ಘಳಿಗೆಗಳೆಷ್ಟೋ…: ಆಶಾ ಜಗದೀಶ್ ಅಂಕಣ

ಸುಮ್ಮನೇ ತಟ್ಟೆಯ ಮುಂದೆ ಕುಳಿತು ಸಮಯ ಉರುಳದಂತೆ, ಈ ತುತ್ತು ಮತ್ತಾರದೋ ಚೀಲ ಸೇರಲಿ ಎಂದಷ್ಟೇ ಪ್ರಾರ್ಥಿಸುತ್ತಾ… ಇಷ್ಟೇ ಅಲ್ಲವಾ ಈ ಬದುಕು ಎನ್ನುವ ಅಂತಿಮ ಸತ್ಯದ ದರ್ಶನವಾದಾಗ ಯಾವುದೆಲ್ಲವನ್ನು ಬೇಕು ಎಂದುಕೊಳ್ಳುತ್ತಿದ್ದೇವೋ ಅದಾವುದೂ ನಮ್ಮ ಆತ್ಯಂತಿಕ ಜರೂರತ್ತಿನ ಪಟ್ಟಿಯಲ್ಲಿ ಇರಲೇ ಇಲ್ಲ ಎನ್ನುವುದನ್ನು ಪ್ರಯಾಸದಿಂದ ಮನಗಾಣುತ್ತಾ… ಯಾವುದೂ ಪೂರ್ಣವಲ್ಲ ಇಲ್ಲಿ… ಈ ರೈಲು ಬಂಡಿ, ನಾವು ಹತ್ತುವ ಮುಂಚೆಯೇ ಪಯಣ ಆರಂಭಿಸಿತ್ತು ಮತ್ತು ನಾವು ಇಳಿದ ನಂತರವೂ ಪಯಣಿಸುತ್ತಲೇ ಇರುತ್ತದೆ..
ಆಶಾ ಜಗದೀಶ್ ಅಂಕಣ “ಆಶಾ ಲಹರಿ”

read more
ಕಾಲಕ್ಕೆ ಶರಣು ಎನ್ನೋಣ: ವಿನತೆ ಶರ್ಮ ಅಂಕಣ

ಕಾಲಕ್ಕೆ ಶರಣು ಎನ್ನೋಣ: ವಿನತೆ ಶರ್ಮ ಅಂಕಣ

ವಾರಾಂತ್ಯಗಳಲ್ಲಿ ದೇಶದ ರಾಜಧಾನಿ ನಗರಗಳಲ್ಲಿ ನಡೆಸುವ ಸಾರ್ವಜನಿಕ ಪ್ರದರ್ಶನಗಳು, ಬಹುಸಂಸ್ಕೃತಿಗಳವರ ಕಾರ್ಯಕ್ರಮಗಳು ಹೆಚ್ಚಾಗಿವೆ. ೨೦೨೩ ರ ಕೊನೆಯಲ್ಲಿ ನಾವು ಮೂರು, ನಾಲ್ಕು ಬಾರಿ ಇಸ್ರೇಲ್, ಪ್ಯಾಲೆಸ್ಟೈನ್-ಗಾಝಾ, ಯೂಕ್ರೇನ್ ಮೂಲಗಳ ಜನರು ನಡೆಸುತ್ತಿದ್ದ ಪ್ರದರ್ಶನಗಳ ಪರಿಣಾಮಕ್ಕೆ ಸಿಲುಕಿದ್ದೆವು. ಅದೇನೂ ದೊಡ್ಡ ವಿಷಯವಲ್ಲ ಬಿಡಿ. ಪ್ರದರ್ಶನದಲ್ಲಿ ಭಾಗವಹಿಸಿದ್ದ ಪ್ರತಿರೋಧಿಗಳು ಘೋಷಣೆಗಳನ್ನು ಕೂಗುತ್ತಾ ರಸ್ತೆಗಿಳಿದಾಗ ಪೊಲೀಸರು ರಸ್ತೆ ಬಂದ್ ಮಾಡಿದರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

read more
ಸುಧಾ ಆಡುಕಳ ಹೊಸ ಅಂಕಣ “ಹೊಳೆಸಾಲು” ಇಂದಿನಿಂದ ಆರಂಭ

ಸುಧಾ ಆಡುಕಳ ಹೊಸ ಅಂಕಣ “ಹೊಳೆಸಾಲು” ಇಂದಿನಿಂದ ಆರಂಭ

ಪ್ರಯಾಣದ ಕನಸಿನಿಂದ ಥಟ್ಟನೆ ವಾಸ್ತವಕ್ಕಿಳಿದ ನೀಲಿ ನೀರಿನಾಳದಲ್ಲಿ ಹೊಳೆಯುತ್ತಿರುವ ನಾಣ್ಯಗಳನ್ನು ನೋಡುತ್ತಾ ನಡುಹೊಳೆಯಲ್ಲಿ ನಿಂತುಬಿಟ್ಟಳು. ಅವಳಿಗೀಗ ಇರುವುದು ಎರಡೇ ಅವಕಾಶಗಳು. ಒಂದೋ ದುಡ್ಡನ್ನು ಹೊಳೆಯಲ್ಲಿಯೇ ಬಿಟ್ಟು ಶಾಲೆಗೆ ಹೋಗುವುದು, ಇಲ್ಲವೆಂದರೆ ಅಂಗಿ ಒದ್ದೆಯಾಗುವ ಪರಿವೆಯಿಲ್ಲದೇ ಹೊಳೆಯೊಳಗೆ ಒಮ್ಮೆ ಮುಳುಗಿ ದುಡ್ಡನ್ನು ಹೆಕ್ಕಿಕೊಳ್ಳುವುದು. ಒದ್ದೆಯಾದ ಅಂಗಿಯನ್ನು ಬದಲಿಸಿ ಬರಲು ಮನೆಗೆ ಹೋಗುವಷ್ಟು ಸಮಯವಿಲ್ಲ.
ಸುಧಾ ಆಡುಕಳ ಹೊಸ ಅಂಕಣ “ಹೊಳೆಸಾಲು” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ

read more
ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಹೊಸ ಅಂಕಣ “ಹೊಸ ಓದು” ಆರಂಭ

ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಹೊಸ ಅಂಕಣ “ಹೊಸ ಓದು” ಆರಂಭ

ಶತಮಾನಗಳ ಹಿಂದಿನ ಕಥೆಗಳ ಆಶಯಕ್ಕೆ ಈ ಕಾಲಘಟ್ಟದ ಉತ್ತರಗಳ ಮಾದರಿಯ ಕಥೆಗಳನ್ನು ಬಯಲು ಮತ್ತು ಬೆಳಕು ಎಂಬರ್ಥದಲ್ಲಿ ಕತೆಗಾರ ನಿರೂಪಣೆಯ ಕ್ಯೂರೆಟರ್ ಮತ್ತು ದೃಷ್ಟಿಕೋನದ ಗ್ರಾಫರ್ ಆಗಿರಬೇಕೆನ್ನುವ ಪೊನ್ನಾಚಿ ಅವರ ಕಥೆಗಳು ಪ್ರತಿಪಾದಿತ ಮತ್ತು ಸಾಧಿತ ಕಥೆಗಳು ಪ್ರತಿನಿಧಿಸುವ ವಸ್ತು ಹಳೆಯದಾದರೂ ಕಥೆಗಳ ಅಂತ್ಯ ಪ್ರಗತಿಪರತೆಯನ್ನು ಎತ್ತಿ ಹಿಡಿದಿವೆ.
ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಬರೆಯುವ ಹೊಸ ಕೃತಿಗಳ ಪರಿಚಯಿಸುವ ಹೊಸ ಅಂಕಣ

read more
ದಕ್ಕಿದ್ದಕ್ಕೆ ಕೃತಜ್ಞತೆ ಇರಲಿ : ಎಸ್ ನಾಗಶ್ರೀ ಅಜಯ್ ಅಂಕಣ

ದಕ್ಕಿದ್ದಕ್ಕೆ ಕೃತಜ್ಞತೆ ಇರಲಿ : ಎಸ್ ನಾಗಶ್ರೀ ಅಜಯ್ ಅಂಕಣ

ತಮಗೆ ಬೇಕಾದ ಕೋರ್ಸಿಗೆ ಪ್ರವೇಶ ದೊರೆಯಲಿಲ್ಲ, ಅಂದುಕೊಂಡಷ್ಟು ಅಂಕ ಬರಲಿಲ್ಲ, ಪ್ರೀತಿಸಿದ ಹುಡುಗಿ ಕರೆ ಸ್ವೀಕರಿಸಲಿಲ್ಲ, ಮದುವೆಗೆ ಮನೆಯಲ್ಲಿ ಒಪ್ಪಿಗೆಯಿಲ್ಲ, ವರ್ಷದೊಳಗೆ ಮಕ್ಕಳಾಗಲಿಲ್ಲ ಎಂಬ ‘ಇಲ್ಲ’ಗಳಿಗೆ ಜೀವತೆರುವ, ಬದುಕಿದ್ದರೂ ಉತ್ಸಾಹ, ಆಶಾವಾದವನ್ನೇ ಕಳೆದುಕೊಳ್ಳುವವರಿದ್ದಾರೆ. ಮುಂದೇನು? ಮುಂದೇನು?
ಎಸ್ ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣದ ಬರಹ ನಿಮ್ಮ ಓದಿಗೆ

read more

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ