ಮನದ ಕಿಟಕಿ: ರವೀಂದ್ರ ನಾಯಕ್ ಸಣ್ಕಕ್ಕಿಬೆಟ್ಟು ಅಂಕಣ
ಮನೆಯ ರಾಮಾಯಣ ಮುಗಿಸಿ ಹೊರಗೆ ಬಂದು ಡ್ಯೂಟಿಗೆಂದು ಬೈಕ್ ಹತ್ತುವಾಗ ಆ ಗಂಡಸಿನ ಮುಖ ನೋಡಬೇಕು… ಯುದ್ಧ ನಂತರದ ನಿರ್ಮಲ ಶಾಂತಿ, ಆನಂದ ಅವರ ಮುಖದಲ್ಲಿ; ಜೀವಾವಧಿ ಶಿಕ್ಷೆ ಮುಗಿಸಿ ಈಗಷ್ಟೇ ಹೊರ ಬಂದ ಖೈದಿಯ ಸಂತೋಷದಂತೆ ನಿರಾಳ ಮುಖಭಾವ. ಸಂಜೆ ಮತ್ತೆ ಮನೆಯ ಬಾಗಿಲು ಬಡಿಯುವಾಗ ಮತ್ತದೇ ಬೇಸರ. “ಒಂದೇ ಮನೆಯಲ್ಲಿ ವಿಚ್ಭೇದಿತ ಮನಸ್ಸುಗಳು ಸಹಭೋಜನ ಮಾಡುತ್ತವೆ” ಎಂದು ಎಲ್ಲೋ ಓದಿದ್ದ ಮಾತು ಇವರನ್ನು ನೋಡಿದಾಗ ಅದೆಷ್ಟು ನಿಜ ಅನ್ನಿಸಿತು…
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಹನ್ನೆರಡನೆಯ ಬರಹ
‘ವಿಧವೆ’ ನಿಮ್ಮನ್ನು ತುಂಬ ಕಾಡಿದಳೆ?: ಕಾಸರವಳ್ಳಿಯವರೊಂದಿಗೆ ಒಂದು ಸಂದರ್ಶನ: ಸುಕನ್ಯಾ ಕನಾರಳ್ಳಿ ಅಂಕಣ
‘ನಾಯಿನೆರಳು’ ವಿನ ಮೂರನೆಯ ಭಾಗದಲ್ಲಿ ಪ್ರಭುತ್ವ ಹೆಚ್ಚು ಹೆಚ್ಚು ಮೂಗು ತೂರಿಸೋದನ್ನ ತೋರಿಸೋದಕ್ಕೆ ಪ್ರಯತ್ನಪಟ್ಟಿದೀನಿ. ಪೋಲೀಸು, ಕೋರ್ಟು, ಕೇಸು… ಅವು ಮಂದಿಯ ವೈಯುಕ್ತಿಕ ಜೀವನದ ನಿರ್ಧಾರಗಳು ಅನ್ನೋ ಅಂಶವನ್ನ ಗಣನೆಗೇ ತಗೊಳಲ್ಲ. ವೆಂಕಟಲಕ್ಷ್ಮಿಗೆ ವ್ಯವಸ್ಥೆಯ ಆಯಾಮಗಳ ಪರಿಚಯ ಇದೆ. ಜೊತೆಗೆ, ಸಮುದಾಯದ ಒಂದು ಪಾತ್ರ ‘ಸ್ವಲ್ಪ ದಿನ ಹಿಟ್ಲರ್ ಕಾಟ ಕೊಟ್ಟ. ಈಗ ಗಾಂಧಿ ಕಾಟ,’ ಅಂತ ಹೇಳುತ್ತೆ. ಅವರಿಬ್ಬರ ನಡುವಿನ ವ್ಯತ್ಯಾಸವೂ ಅವರಿಗೆ ಗೊತ್ತಿಲ್ಲ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತೈದನೆಯ ಬರಹ
ಸೆರಗ ಬಿಡು ಮರುಳೆ: ಜಯಲಕ್ಷ್ಮಿ ಪಾಟೀಲ್ ಅಂಕಣ
ಅಗತ್ಯವಿಲ್ಲದಿದ್ದರೂ, ಇಷ್ಟವಿಲ್ಲದಿದ್ದರೂ, ಪಾಲಿಸಲೇಬೇಕು ಎನ್ನುವುದು ಹೇರಿಕೆಯಾದಾಗ ಸಂಪ್ರದಾಯಗಳು ಸಂಕೋಲೆಗಳಾಗಿ ಹಿಂಸಿಸತೊಡಗುತ್ತದೆ. ಈ ಹೇರಿಕೆ ಕೇವಲ ಸಮಾಜದ್ದಲ್ಲ ನಮ್ಮೊಳಗಿನದೂ ಸಹ! ‘ಸಂಪ್ರದಾಯವನ್ನು ಬಿಟ್ಟು ನಡೆದಲ್ಲಿ ಏನಾದರೂ ಅವಘಡ ಸಂಭವಿಸಿದರೆ ಗತಿ ಏನು ಮುಂದೆ?!’ ಎನ್ನುವ ನಮ್ಮೊಳಗಿನ ಭೀತಿಯೇ ಅರ್ಧ ಮನುಷ್ಯರನ್ನು, ‘ಬಿಟ್ಟರೂ ಬಿಡಲಾರದೀ ಮಾಯೆ’ ಎಂದು ತ್ರಿಶಂಕು ಸ್ಥಿತಿಯಲ್ಲಿ ನೇತಾಡುವಂತೆ ಮಾಡುತ್ತದೆ. ಕಾಲಾಂತರದಲ್ಲಿ ಅಕ್ಷರ, ಹಣ, ಸಾರಿಗೆ ಮತ್ತು ಮಾಧ್ಯಮ ಇತ್ಯಾದಿ ಅನುಕೂಲತೆ ಎಲ್ಲರಿಗೂ ಎಟುಕತೊಡಗಿದಂತೆ, ಅಷ್ಟಿಷ್ಟು ಮೌಢ್ಯಗಳು, ಸಂಪ್ರದಾಯದ ಸಂಕೋಲೆಗಳು ಸಡಿಲಗೊಂಡರೂ, ತ್ರಿಶಂಕು ಸ್ಥಿತಿಯಿಂದ ಅಷ್ಟು ಸುಲಭದಲ್ಲಿ ಬಿಡುಗಡೆ ಸಿಗುವುದಿಲ್ಲ.
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣ
ಈ ಬದುಕಿನ ಪ್ರೀತಿ ಪ್ರೇಮ ಪ್ರಣಯ…: ಸುಕನ್ಯಾ ಕನಾರಳ್ಳಿ ಅಂಕಣ
ಮದುವೆಯಾಗಲು ಕಾಯುತ್ತಿದ್ದ ದಿನಗಳಲ್ಲಿ ಭ್ರಮೆ ನಿಧಾನವಾಗಿ ಕರಗುತ್ತಿತ್ತು. ಈ ನನ್ನ ಮಗ ಮತ್ತು ನನ್ನ ನಡುವೆ ಇರುವ ಸಮಾನ ಆಸಕ್ತಿಗಳಾದರೂ ಏನು ಎಂದು ಉತ್ತರವೇ ಇಲ್ಲದ ಪ್ರಶ್ನೆಗಳಲ್ಲಿ ದಿನ ಕಳೆಯುತ್ತಿತ್ತು. ಹತ್ತಿರ ಬಂದರೂ ದೇಹ ಸ್ಪಂದಿಸದಿರುವಾಗ ಬದುಕೆಲ್ಲ ಸಿಕ್ಕಿ ಬಿದ್ದು ಏನು ಗತಿ ಎಂದು ಕಳವಳಿಸಲು ಪ್ರಾರಂಭಿಸಿದ್ದೆ. ಒಮ್ಮೆ ಸುಷ್ಮಾ ಸ್ವರಾಜಳ ಅವಳಿಯಂತೆ ಕಾಣಿಸುವ ಅವನ ಅಮ್ಮನನ್ನು ಭೇಟಿಯಾದೆ. ಡಿ ಎಚ್ ಲಾರೆನ್ಸನ ಸನ್ಸ್ ಅಂಡ್ ಲವರ್ಸ್ ಕಾದಂಬರಿ ನೆನಪಿಗೆ ಬಂತು. ಈಕೆ ಉಡದ ಹಿಡಿತದವಳು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ನಾಲ್ಕನೆಯ ಬರಹ
ಮನೆಮನೆ ಕೈತೋಟದಲ್ಲಿದೆ ಸಮುದಾಯ ಸೌಖ್ಯ: ಡಾ. ವಿನತೆ ಶರ್ಮ ಅಂಕಣ
ಅಂದಿನ ಸಾಮಾನ್ಯಜನರ ಸಾವಯವ ಜೀವನ ಈಗ ಒಂದು ಸಮುದಾಯ ಸಮಷ್ಠಿಪ್ರಜ್ಞೆಯಾಗಿ ಮೂಡಿದೆ. ಮಾದರಿಯಾಗಿ ಮೂಡುತ್ತಿದೆ. ನಮ್ಮದೇ ಸ್ವಾಯತ್ತತೆಯಿಂದ ಮನೆಮಟ್ಟಿಗೆ ನಾವು ಆಹಾರವನ್ನು ಬೆಳೆಸುವ ನಿರ್ಧಾರದಿಂದ ಹಿಡಿದು ನಮ್ಮ ನೆಲದ, ನಾಡಿನ, ಮೂಲಜರ ಆಹಾರವೇನಾಗಿತ್ತು, ಅದರ ಬಗ್ಗೆ ನಮಗೆಷ್ಟು ತಿಳಿದಿದೆ, ಆ ಆಹಾರ ಬೆಳೆಗಳ ವಿಧಗಳನ್ನು ಪುನರುಜ್ಜೀವಿಸಬಹುದೆ ಎನ್ನುವ ಮಾತುಕತೆಗಳು ಸಮುದಾಯ ಅಭಿವೃದ್ಧಿಯ ಸಂಕೇತ. ಇಂತಹ ಮಾತುಕತೆಗಳಿಂದ ನಮ್ಮ ನಂಬಿಕೆಗಳು, ಮನೋಭಾವ, ಚರ್ಯೆಗಳಲ್ಲಿ ಬದಲಾವಣೆ ಬರುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ದೇಹ ಮನಸ್ಸುಗಳ ಚಕ್ರಸುಳಿ……: ಡಾ. ಎಲ್.ಜಿ. ಮೀರಾ ಅಂಕಣ
ಮನಸ್ಸು ಮತ್ತು ಆತ್ಮ ಎಂದರೆ ಒಂದೆಯೇ ಅಥವಾ ಬೇರೆಬೇರೆಯೇ ಎಂಬ ನಮ್ಮ ಪ್ರಶ್ನೆಗೆ ಧರ್ಮಶಾಸ್ತ್ರ ಹಾಗೂ ತತ್ವಶಾಸ್ತ್ರಗಳು ಕೊಡುವ ಉತ್ತರ “ಇಲ್ಲ, ಅವು ಬೇರೆ ಬೇರೆ. ಆತ್ಮವು ಚಿರಂತನವಾದ, ಎಂದೂ ಬದಲಾಗದ ಮೂಲಸತ್ವ ಅಥವಾ ಶುದ್ಧಪ್ರಜ್ಞೆ” ಎಂದು. ಕಡುವಿಜ್ಞಾನವು ಆತ್ಮದ ಅಸ್ತಿತ್ವವನ್ನು – ವಾಸ್ತವಿಕ ಸಾಕ್ಷಿಗಳ ಕೊರತೆಯ ಕಾರಣಕ್ಕಾಗಿ – ಒಪ್ಪುವುದಿಲ್ಲ. ಸದ್ಯಕ್ಕೆ ಈ ಪ್ರಬಂಧದಲ್ಲಿ ಆತ್ಮವನ್ನು ಕುರಿತು ಚರ್ಚಿಸುತ್ತಿಲ್ಲ. `ಮನಸ್ಸಿನ’ ಸಂಕೀರ್ಣತೆಯೇ ಇಲ್ಲಿ ನಮಗೆ ಸಾಕಷ್ಟು ನೀರು ಕುಡಿಸುತ್ತಿದೆ!
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ನಲವತ್ತೊಂದನೆಯ ಬರಹ
ಹುಲಿವೇಷ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ
ಎರಡು ಮೂರು ಅಂಗಡಿಗೆ ಹೋಗಿ ವಾಪಾಸು ಬರುವಾಗ ಆ ಸಣ್ಣ ಹುಲಿಯನ್ನು ಹಿಡಿದುಬಿಟ್ಟೆ! ಒಂದು ಕ್ಷಣ ಹುಲಿ ಹಿಡಿದ ವೀರನ ಗತ್ತು ಗಾಂಭೀರ್ಯ ನನ್ನೊಳಗೆ ಹರಿಯಿತು. ಬೆದರಿ ಬೆವೆತು ನನ್ನ ಹಿಡಿತದಿಂದ ಪಾರಾಗಲು ಒದ್ದಾಡುತಿತ್ತು. ನೋಡಿದರೆ ಯಾರಾದರೂ ಹೇಳಬಹುದಿತ್ತು ಇದು ಫ್ರೊಫೆಷನಲ್ ಹುಲಿ ಅಲ್ಲ ಅಂತ. ಮುಖದ ಗೆರೆಗಳಲ್ಲಿ ಮಾತ್ರ ಇದು ಹುಲಿವೇಷ ಅಂತ ಗುರುತಿಸಬಹುದಾದಷ್ಟು ಮಾತ್ರ ಬಣ್ಣವನ್ನು ಹಚ್ಚಿಕೊಂಡು ಮೈಯಲ್ಲಿನ ಪಟ್ಟೆ ಬೇರೆ ಯಾವುದೊ ಪ್ರಾಣಿಯನ್ನು ಹೋಲುತ್ತಿತ್ತು.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಹನ್ನೊಂದನೆಯ ಬರಹ
ತೇಜಸ್ವಿ ನಮ್ಮನ್ನಗಲಿದ ತಿಂಗಳಲ್ಲಿ, ಅವರಿದ್ದ ಊರಿನಲ್ಲಿ…: ಸುಕನ್ಯಾ ಕನಾರಳ್ಳಿ ಅಂಕಣ
ಭಾಷೆ ಅರ್ಥ ಮಾಡಿಸುವುದಕ್ಕಿಂತ ಅಪಾರ್ಥಕ್ಕೆ ಹಾದಿಯನ್ನು ಬಿಚ್ಚುತ್ತದೆ ಎನ್ನುವುದು ನನಗೆ ಗೊತ್ತು. ಕಲೆಯ ಸೃಷ್ಟಿಗೆ ಗ್ರಾಮೀಣ ಮತ್ತು ಪ್ರಕೃತಿ ತೆರೆದುಕೊಂಡಷ್ಟು ನಗರ ಮತ್ತು ಆಧುನಿಕ ತೆರೆದುಕೊಳ್ಳುವುದಿಲ್ಲವೊ ಏನೊ ಅಂತಷ್ಟೇ ಹೇಳಬೇಕಿತ್ತು. ಯಾಕೆಂದರೆ ಗ್ರಾಮೀಣ ಮತ್ತು ಪ್ರಕೃತಿಗಳಲ್ಲಿ ಸೌಂದರ್ಯ ಇರುತ್ತದೆ. ನಾವು ಕ್ಲಿಕ್ಕಿಸಲು ಮಾಲ್ಗೆ ಹೇಗೆ ಹೋಗುವುದಿಲ್ಲವೋ ಹಾಗೆಯೇ ಸ್ಲಮ್ಮಿಗೂ ಹೋಗುವುದಿಲ್ಲ. ಅದು ಫೋಟೋಗ್ರಾಫಿಕ್ ಸೌಂದರ್ಯವನ್ನು ಶುದ್ಧನೆಲೆಯಲ್ಲಿ ಅರ್ಥ ಮಾಡಿಕೊಳ್ಳುವ ಪರಿಣಿತರಿಗೆ ಮಾತ್ರ ಸಾಧ್ಯವೋ ಏನೋ. ಯಾಕೆಂದರೆ ಫೋಟೋಗ್ರಫಿ ಕೇವಲ ಹವ್ಯಾಸವಾದಾಗ ಕಣ್ಣಿಗೆ ಹಿತವಾದದ್ದನ್ನು ಮಾತ್ರ ಆರಿಸಿಕೊಳ್ಳುತ್ತದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ
ವಚನಗಳಲ್ಲಿ ಮೌಢ್ಯಗಳ ನಿರಾಕರಣೆ: ಜಯಲಕ್ಷ್ಮಿ ಪಾಟೀಲ್ ಅಂಕಣ
ಸಾಕಷ್ಟು ಜನ ಉದಹರಿಸುವ ಜೇಡರ ದಾಸಿಮಯ್ಯನವರ, ‘ಮೊಲೆ ಮೂಡಿ ಬಂದರೆ ಹೆಣ್ಣೆಂಬರುʼ, ಅಲ್ಲಮಪ್ರಭುದೇವರ, ‘ಹೊನ್ನು ಮಾಯೆ ಎಂಬರು’ ವಚನಗಳಲ್ಲದೇ ಇನ್ನೂ ಕೆಲವು ವಚನಗಳಿವೆ. ಕೇವಲ ಶರಣರ ವಚನಗಳಲ್ಲಿ ಮಾತ್ರವಲ್ಲ, ಶರಣೆಯರ ವಚನಗಳಲ್ಲೂ ನೋಡಬೇಕಿರುವುದು ಅವಶ್ಯಕ. ಶರಣೆಯರ ಅಂಥ ವಚನಗಳನ್ನು ಓದುತ್ತಿದ್ದರೆ ಅಬ್ಬಾ ಎನಿಸುತ್ತದೆ! ಕ್ರಾಂತಿಯ ದೊಂದಿಯನ್ನು ನಂದಿಸಲು ದುಷ್ಟ ವ್ಯವಸ್ಥೆ ಯಾಕೆ ಹಪಹಪಿಸಿತು ಎನ್ನುವುದು ನಿಚ್ಚಳವಾಗುತ್ತದೆ. ಕೇವಲ ಗಂಡಸರು ಮಾತ್ರ ಬಂಡೇಳಲಿಲ್ಲ ಆಗ, ಹೆಂಗಸರೂ ವ್ಯವಸ್ಥೆಯನ್ನು ಮುಲಾಜಿಲ್ಲದೆ ಪ್ರಶ್ನಿಸಿದ್ದು, ಗಂಡು ಹೆಣ್ಣೆಂಬುದರಾಚೆ ನಿಂತು ಮಾತಾಡಿದ್ದು, ತಮ್ಮ ಅಸ್ಮಿತೆಯನ್ನು ಸ್ಪಷ್ಟಪಡಿಸಿದ್ದು ನುಂಗಲಾರದ ತುತ್ತಾಗಿರಬೇಕು.
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣ










