Advertisement

ಅಂಕಣ

ಸೇನಾಪಡೆ ನಿವೃತ್ತಿ ಜೀವನದ ಕಥೆಗಳು

ಸೇನಾಪಡೆ ನಿವೃತ್ತಿ ಜೀವನದ ಕಥೆಗಳು

ಸೇನೆಯು ಸೈನಿಕರ ದಿನನಿತ್ಯ ಜೀವನದ ಆಗುಹೋಗುಗಳ ಮೇಲೆ ಹದ್ದಿನಂತೆ ಕಣ್ಣಿಟ್ಟಿರುತ್ತದೆ, ಅವರು ಎಲ್ಲೇ ಹೋಗಲಿ ಬರಲಿ, ಯಾರನ್ನೇ ಭೇಟಿಯಾಗಲಿ, ಎಲ್ಲವೂ ದಾಖಲಾಗುತ್ತದೆ. ರಜೆ ಪಡೆದು ಮನೆಗೆ ಹೋದರು ಕೂಡ ಅವರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ಮತ್ತೊಬ್ಬರು ಖಾತ್ರಿ ಪಡಿಸಿಕೊಳ್ಳುತ್ತಾರೆ. ಸದಾಕಾಲ ಕಾಲಿನ ಬೆರಳುಗಳ ಮೇಲೆ ನಿಂತಿರುವುದು ಮಾನಸಿಕ ಕ್ಷೋಭೆಗೆ ದಾರಿ ಮಾಡಿಕೊಡುತ್ತದೆ. ಖಾಸಗಿತನವೇ ಇಲ್ಲದೆ ಜೀವನ ಮಾಡುವ ಅವರ ಮಾನಸಿಕ ಸ್ಥಿತಿ ಹೇಗಿರುತ್ತದೆ…

read more
ಸೂರ್ಯನ ಕೃಪೆ ಧರಿಸುವ ಕ್ಲಾರಾ

ಸೂರ್ಯನ ಕೃಪೆ ಧರಿಸುವ ಕ್ಲಾರಾ

ಚೇತರಿಸಿಕೊಳ್ಳಲೇ ಸಾಧ್ಯವಾಗದಷ್ಟು ಬಲಹೀನಳಾಗಿದ್ದ ಜೋಸಿ ಒಮ್ಮೆ ಸೂರ್ಯನ ಕಿರಣ ತಾಕಿದ್ದೇ ಚೈತನ್ಯಶೀಲಳಾಗಿದ್ದು ಹೇಗೆ? ಅವಳು ನಿಜದ ಜೋಸಿಯೇ ಅಥವಾ ರೋಬೋ ಜೋಸಿಯೇ? ಮನುಷ್ಯ ಚೈತನ್ಯವನ್ನು ಎಷ್ಟರ ಮಟ್ಟಿಗೆ ಅನುಕರಿಸಬಹುದು? ವ್ಯಕ್ತಿಯೊಬ್ಬಳ ಇರುವು ಆಕೆಗೆ ಮಾತ್ರ ಸಂಬಂಧಿಸಿದ್ದೋ ಅಥವಾ ಅದು ಆಕೆಯ ಸುತ್ತಲಿರುವ, ಆಕೆಯನ್ನು ಬಹುವಾಗಿ ಪ್ರೀತಿಸುವ ಸಮುದಾಯಕ್ಕೆ ಸಂಬಂಧಿಸಿದ್ದೋ? ಮುಂತಾದ ಸಂಕೀರ್ಣ ಪ್ರಶ್ನೆಗಳಿಗೆ ಈ ಕಾದಂಬರಿ ಒಡ್ಡಿಕೊಳ್ಳುತ್ತದೆ.

read more
ಸದೃಢ ವ್ಯವಸ್ಥೆಯೊಂದರ ನಿರ್ಮಾಣಕ್ಕೆ ಸರಳತೆಯೇ ಅಡಿಪಾಯ

ಸದೃಢ ವ್ಯವಸ್ಥೆಯೊಂದರ ನಿರ್ಮಾಣಕ್ಕೆ ಸರಳತೆಯೇ ಅಡಿಪಾಯ

ಹಣವಿಲ್ಲದವರು ಸಿನಿಮಾ ನೋಡಲು ಮುಂದಗಡೆ ಸಾಲಿನಲ್ಲಿ ನೆಲದ ಮೇಲೆ ಕುಳಿತು ನೋಡುವ ವಿಭಾಗಕ್ಕೆ ಗಾಂಧಿ ಕ್ಲಾಸ್ ಎಂದೆ ಹೆಸರು. ಅದು ಮೊದ ಮೊದಲು ವ್ಯಂಗ್ಯ ಮಾಡುವ ಹಾಗೆ ಇದ್ದರೂ, ಈಗ ಅದೇ ನಿಜವಾಗಿ ಹೋಗಿದೆ. ಯಾರಾದರೂ ನ್ಯಾಯವಾದ ಮಾರ್ಗದಲ್ಲಿ ನಡೆದರೆ, ಗಾಂಧಿ ತರ ಆಡಬೇಡ ಎಂದು ಹಂಗಿಸುತ್ತಾರೆ. ದುಂದು ವೆಚ್ಚ ಮಾಡದೆ, ಸಾಧಾರಣ ಜೀವನ ನಡೆಸಿದರೆ ಅವರಿಗೆ ಗಾಂಧಿ ಎನ್ನುವ ಹಣೆಪಟ್ಟಿ ಹಚ್ಚಿ ನಗುತ್ತಾರೆ.

read more
ಶೇಕ್ಸ್ ಪಿಯರನ್ನು ಪ್ರೀತಿಸುತ್ತಿದ್ದ ಜಿಕೆಜಿ ಸರ್ ನೆನಪುಗಳು

ಶೇಕ್ಸ್ ಪಿಯರನ್ನು ಪ್ರೀತಿಸುತ್ತಿದ್ದ ಜಿಕೆಜಿ ಸರ್ ನೆನಪುಗಳು

ಜೋಸೆಫ್ ಕಾಲೇಜಿನ ಕನ್ನಡ ಸಂಘದಿಂದ ಪ್ರಕಟಗೊಂಡಿದ್ದ ಪುಸ್ತಕ ‘ನಡೆನುಡಿ’.  ಜಿ.ಕೆ. ಗೋವಿಂದ ರಾವ್  ಅವರು ಹಲವು ಪತ್ರಿಕೆಗಳಲ್ಲಿ ಬರೆದ ಲೇಖನಗಳನ್ನ ಒಟ್ಟು ಮಾಡಿ ಎಚ್.ಎಸ್.ವಿ. ಸರ್ ಕಾಲೇಜಿನ ಕನ್ನಡ ಸಂಘದಿಂದ ಪ್ರಕಟಿಸಿದ್ದರು. ‘ಅರೆರೆ ಇವರು ಟಿವಿಯಲ್ಲಿ ಕಾಣಿಸಿಕೊಳ್ತಾರಲ್ಲ..’ ಎನ್ನುವ ಕುತೂಹಲದಲ್ಲೇ ಪುಸ್ತಕ ತೆರೆದೆ. ಅಲ್ಲಿಂದಾಚೆಗೆ ಜಿಕೆಜಿ ಸರ್ ನನಗೆ ಸ್ಪಷ್ಟವಾಗಲು ಆರಂಭಿಸಿದರು. ಅವರ ಬರವಣಿಗೆಗಳು ನನ್ನಲ್ಲಿ ಹೊಸ ಆಲೋಚನಾ ಕ್ರಮವನ್ನು ರೂಪಿಸಿಕೊಳ್ಳಲು ನೆರವಾದವು.
‘ರಂಗ ವಠಾರ’ ಅಂಕಣದಲ್ಲಿ ಎನ್. ಸಿ. ಮಹೇಶ್  ಲೇಖನ

read more
ಆಕ್ಸಿಡೆಂಟಿನ ಆಲದಮರ ಮತ್ತು ತೇಜಸ್ವಿಯ ‘ಮಾಯಾಮೃಗ’

ಆಕ್ಸಿಡೆಂಟಿನ ಆಲದಮರ ಮತ್ತು ತೇಜಸ್ವಿಯ ‘ಮಾಯಾಮೃಗ’

ಗೆಳೆಯರೆಲ್ಲ ಸೇರಿ ಏನೇನೋ ಸವಾಲು ಹಾಕಿಕೊಂಡು, ಅವರಲ್ಲಿ ಇಬ್ಬರು ಸ್ಮಶಾನಕ್ಕೆ ಹೋಗುವುದು, ದೆವ್ವ ಗೆಳೆಯನ ವೇಷ ಧರಿಸಿ ಬಂದರೆ ಪತ್ತೆ ಮಾಡಲೆಂದು ಕೋಡ್‌ವರ್ಡ್ ನಿಕ್ಕಿ ಮಾಡಿಕೊಳ್ಳುವುದು, ನಂತರ ಆಗುವ ಅವಾಂತರಗಳು, ಬೂದಿಯಲ್ಲಿ ಮುಳುಗೆದ್ದ ಕಜ್ಜಿ ನಾಯಿಯೊಂದು ಫಾಲೋ ಮಾಡುವುದು, ಧೈರ್ಯವಂತನೊಬ್ಬ ಸವಾಲು ಸ್ವೀಕರಿಸಿ ಮಧ್ಯರಾತ್ರಿಯಲ್ಲಿ ಸುಡುಗಾಡಿಗೆ ಹೋಗಿ, ಗುರುತಿಗೆಂದು ಗೂಟ ಬಡಿಯುವಾಗ ತನ್ನ ಬಟ್ಟೆಯನ್ನೂ ಸೇರಿಸಿ ಬಡಿದು…

read more
ಲಸಿಕೆ ಪರ-ವಿರೋಧಗಳ ನಡುವೆ ಹಬ್ಬ, ಮಳೆ, ಗಡಿ ತೆರವು

ಲಸಿಕೆ ಪರ-ವಿರೋಧಗಳ ನಡುವೆ ಹಬ್ಬ, ಮಳೆ, ಗಡಿ ತೆರವು

ಈ ಮಧ್ಯೆ ಒಳ್ಳೆಯ ಸುದ್ದಿಯೆಂದರೆ ಕೇಂದ್ರ ಸರಕಾರವು ದೇಶದ ಅಂತಾರಾಷ್ಟ್ರೀಯ ಗಡಿಯನ್ನು ತೆರೆಯುವುದಾಗಿ ಘೋಷಿಸಿದೆ. ರಾಜಕೀಯ ಬರಡು ವಾತಾವರಣದಲ್ಲಿ ಈ ಘೋಷಣೆ ಒಂದಷ್ಟು ಸಂಚಲನವನ್ನು ಹುಟ್ಟಿಸಿದೆ. ನವೆಂಬರ್ ತಿಂಗಳಿನಲ್ಲಿ ಕ್ರಿಸ್ಮಸ್ ಹಬ್ಬದ ತಯಾರಿ ಆರಂಭವಾಗುತ್ತ ಜನರೆಲ್ಲರೂ ಹಬ್ಬದಾಚರಣೆಯ ಗುಂಗಿಗೆ ಜಾರುತ್ತಾರೆ. ವರ್ಷವಿಡೀ ದುಡಿದು ವರ್ಷದ ಕಡೆಯಲ್ಲಿ ಬರುವ ಈ ಆಂಗ್ಲೋ-ಯೂರೋಪಿಯನ್ ಹಬ್ಬದ ಸಮಯಕ್ಕಾಗಿ ರಜೆಯನ್ನು ಕಾದಿರಿಸಿ ಕಾತರಿಸುತ್ತಾರೆ.

read more
ನದಿಯಂತೆ ಸಾಗುವ ಕತೆಗಳಿಗೆ ಮೂಲದ ಹಂಗೇಕೆ

ನದಿಯಂತೆ ಸಾಗುವ ಕತೆಗಳಿಗೆ ಮೂಲದ ಹಂಗೇಕೆ

ಎಲ್ಲವನ್ನೂ ಒಂದು ವ್ಯಾಖ್ಯಾನಕ್ಕೆ ಬಗ್ಗಿಸುವುದು, ನಮ್ಮ ಅನುಭವಕ್ಕೆಲ್ಲ ಹೆಸರಿಡುವುದು, ಖಚಿತತೆಗೆ ತಹತಹಿಸುವುದು ಅಥವಾ ಎಲ್ಲದಕ್ಕೂ ಸ್ಥಿರವಾಗಿರುವ ಕಠಿಣವಾಗಿರುವ ಉತ್ತರವೇ ಬೇಕೆಂದು ನಮಗೆ ಅನ್ನಿಸುವುದು, ಬದಲಾಗುತ್ತಿರುವ ಸಮಾಜದ ಅತಂತ್ರತೆಯನ್ನು ನಿಭಾಯಿಸುವ ತಂತ್ರಗಾರಿಕೆ ಇರಬಹುದು. ಹಿಂದಿನದನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದು ನಮ್ಮ ಅಧಿಕಾರ, ಸ್ಥಾನವನ್ನು ಉಳಿಸಿಕೊಳ್ಳುವ ಬಯಕೆಯಾಗಿಯೂ ಬಂದಿರಬಹುದು.

read more
“ಭವಿಷ್ಯದ ಕರಾಳತೆಯನ್ನು ಮುಂಗಂಡ ಎರಡು ಕಾದಂಬರಿಗಳು”

“ಭವಿಷ್ಯದ ಕರಾಳತೆಯನ್ನು ಮುಂಗಂಡ ಎರಡು ಕಾದಂಬರಿಗಳು”

ಜಾಗತಿಕ ಪ್ರಭುತ್ವದಡಿಯಲ್ಲಿರುವ ಹಕ್ಸಲೀಯ ಕಾದಂಬರಿಯಲ್ಲಿ ಗೋಚರಿಸುವ ಸಮಾಜದಲ್ಲಿ ಸಂಬಂಧಗಳಿರುವುದಿಲ್ಲ – ಅಲ್ಲಿರುವ ಸೂತ್ರವೆಂದರೆ ‘ಎಲ್ಲರೂ ಎಲ್ಲರ ಸಂಬಂಧಿ’. ಈ ಜಗತ್ತಿನಲ್ಲಿ ಮಕ್ಕಳು ತಾಯಿಯ ಗರ್ಭದಲ್ಲಲ್ಲ, ವಿಶಾಲ ಕೋಳಿಗೂಡುಗಳಂತಹ ‘ಕಾವುಮನೆ’ಗಳಲ್ಲಿ ಜನ್ಮ ಪಡೆಯುತ್ತಾರೆ. ಟ್ಯೂಬು, ಇನ್ಕ್ಯುಬೇಟರುಗಳಲ್ಲಿರುವಾಗಲೇ ಭ್ರೂಣಗಳನ್ನು ವರ್ಗಗಳಾಗಿ ವಿಂಗಡಿಸಿ, ಆಯಾ ವರ್ಗಗಳಿಗೆ ಹೊಂದುವಂತೆ ಮಾಡಲು ಅವುಗಳಿಗೆ ಹಾರ್ಮೋನುಗಳನ್ನು, ಕೆಮಿಕಲ್ಲುಗಳನ್ನು ನೀಡಲಾಗುತ್ತದೆ. ಕಮಲಾಕರ ಕಡವೆ ಅಂಕಣದಲ್ಲಿ ಬ್ರೇವ್ ನ್ಯೂ ವರ್ಲ್ಡ್ ಕಾದಂಬರಿಯ ವಿಶ್ಲೇಷಣೆ. 

read more
‘ಕಾವ್ಯಾ ಓದಿದ ಹೊತ್ತಿಗೆʼ: ಪುಟ್ಟ ಜಗತ್ತಿನ ದೇವರು ಅವನು

‘ಕಾವ್ಯಾ ಓದಿದ ಹೊತ್ತಿಗೆʼ: ಪುಟ್ಟ ಜಗತ್ತಿನ ದೇವರು ಅವನು

ಇದು ಭಾರತದ ಯಾವುದೇ ಊರಿನಲ್ಲೂ ನಡೆಯಬಹುದಾದ ಕಥೆಯೇ ಆದರೂ ಕೇರಳದ ಸಣ್ಣ ಊರಿನ ಪರಿಸರ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ನದಿ, ಮುರಿದ ದೋಣಿಗಳು, ಪಾಳು ಬಿದ್ದ ಮನೆಗಳು, ಅಂಗಡಿ ಮುಂದಿನ ಕಟ್ಟೆಗಳು, ಮಳೆ, ಕಥಕಳಿ ನೃತ್ಯ, ಜನಪದ, ಕಮ್ಯುನಿಸ್ಟ್ ಪಾರ್ಟಿ, ನಕ್ಸಲ್ ಭಯ ಇಂಥ ನೂರಾರು ಸಂಗತಿಗಳ ಜೊತೆಗೆ ಕಾದಂಬರಿ ಕುಸುರಿಗೊಂಡಿದೆ. ಎಲ್ಲಿಯೂ, ಒಂದೂ ಶಬ್ದವನ್ನು ವಾಚ್ಯವಾಗಿಸದೇ, ಮೇಲು ಮೇಲಿನ ಒಂದೂ ಸಂಗತಿಯನ್ನು ಹೇಳದೇ…”

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ