Advertisement

ವ್ಯಕ್ತಿ ವಿಶೇಷ

ನವೋದಯದ ಕವಿರಾಜಹಂಸ ಸಾಂತ್ಯಾರು ವೆಂಕಟರಾಜ

ನವೋದಯದ ಕವಿರಾಜಹಂಸ ಸಾಂತ್ಯಾರು ವೆಂಕಟರಾಜ

ಉಡುಪಿಯ ಸಾಂತ್ಯಾರು ವೆಂಕಟರಾಜರು ಪತ್ರಿಕೆಗಳಲ್ಲಿ 1930 ರಿಂದ (ತಮ್ಮ 17 ನೆಯ ವರ್ಷದಿಂದ) ನಿರಂತರವಾಗಿ ಕವಿತೆಗಳನ್ನು ಪ್ರಕಟಿಸುತ್ತಾ ಬಂದಿದ್ದರು. ಅವರ ಕಾವ್ಯದಲ್ಲಿ ಅವರ ಬದುಕಿನ ನಾಲ್ಕು ಕಾಲಘಟ್ಟದಲ್ಲಿ ನಾಲ್ಕು ಬಗೆಯ ವಸ್ತುಗಳಿಗೆ ಪ್ರಾಮುಖ್ಯ ಸಿಕ್ಕಿರುವುದನ್ನು ಅಥವಾ ವಸ್ತುವಿನ ಪರಿಶೀಲನೆಯ ಕ್ರಮದಲ್ಲಿ ಆಗಿರುವ ಬದಲಾವಣೆಯನ್ನು ಕಾಣಬಹುದು: -ಡಾ.ಬಿ. ಜನಾರ್ದನ ಭಟ್ ನವೋದಯದ ಕವಿರಾಜಹಂಸ ಸಾಂತ್ಯಾರು ವೆಂಕಟರಾಜರ ಕುರಿತು ಬರೆದಿದ್ದಾರೆ.

read more
ಕಥನ ಶಕ್ತಿಯನ್ನು ಒಲಿಸಿಕೊಂಡ ಕನ್ನಡದ ಚೇತನ ತರಾಸು

ಕಥನ ಶಕ್ತಿಯನ್ನು ಒಲಿಸಿಕೊಂಡ ಕನ್ನಡದ ಚೇತನ ತರಾಸು

ಬರೆದು ಬದುಕಿದ ಕನ್ನಡದ ಬೆರಳೆಣಿಕೆಯ ಲೇಖಕರರಲ್ಲಿ ತ.ರಾ.ಸು. ಕೂಡ ಒಬ್ಬರು. ಜೊತೆಗೆ ಜನಪರ ಹೋರಾಟಗಳಲ್ಲಿ ಪಾಲ್ಗೊಳ್ಳುವಲ್ಲಿ ಅವರು ಸದಾ ಮುಂದು. ಅವರಿಗೆ ಅದರ ಕುರಿತು ವ್ಯಸನವಿರಲಿಲ್ಲ ಬದಲಾಗಿ ಹೆಮ್ಮೆಯಿತ್ತು. ಬಾಳಿನಲ್ಲಿ ಸುಖಕ್ಕಿಂತ ಹೆಚ್ಚಾಗಿ ಕಷ್ಟಗಳನ್ನೇ ಅನುಭವಿಸಿದ  ಅವರು ಯಾವತ್ತೂ ಸುಖಕ್ಕಾಗಿ ಹಂಬಲಿಸಿದವರಲ್ಲ.”

read more
‘ಶುದ್ಧಕತ್ತಲಿಲ್ಲ, ಶುದ್ಧಬೆಳಕೂ ಇಲ್ಲ’

‘ಶುದ್ಧಕತ್ತಲಿಲ್ಲ, ಶುದ್ಧಬೆಳಕೂ ಇಲ್ಲ’

ಡೋಗ್ರಿ ನವೋದಯ ಚಳವಳಿಯ ಪ್ರಮುಖರಾದ ಪ್ರೊ. ನೀಲಾಂಬರ್ ದೇವ್ ಶರ್ಮಾ ಅವರದು ಪ್ರಶಾಂತ ವ್ಯಕ್ತಿತ್ವ. ಸುಂದರವಾದ ನಿಲುವು. ಸ್ವತಃ ಬರಹಗಾರರಾಗಿ ಗುರುತಿಸಿಕೊಂಡದ್ದಲ್ಲದೆ ಡೋಗ್ರಿ ಭಾಷೆಯಲ್ಲಿ ಸಾಹಿತ್ಯ ಸೃಷ್ಟಿಸಲು ಇತರರಿಗೆ ಪ್ರೋತ್ಸಾಹ ನೀಡಿದವರು. ಡೋಗ್ರಿ ಜನಪದ ಸಾಹಿತ್ಯದ ದಾಖಲೀಕರಣ ಯೋಜನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ವ್ಯಕ್ತಿಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ.

read more
ಸಜ್ಜನಿಕೆಗೆ ಮತ್ತೊಂದು ಹೆಸರು ಪ್ರೊ.ಜೆ. ಲಕ್ಕಪ್ಪ ಗೌಡ

ಸಜ್ಜನಿಕೆಗೆ ಮತ್ತೊಂದು ಹೆಸರು ಪ್ರೊ.ಜೆ. ಲಕ್ಕಪ್ಪ ಗೌಡ

೨೦ನೇ ಶತಮಾನದ ಉತ್ತರಾರ್ಧದಲ್ಲಿ ನಡೆದ ಶೈಕ್ಷಣಿಕ ವಲಯಗಳ ಕನ್ನಡದ ಅಭಿವೃದ್ಧಿ ಕೆಲಸಗಳಿಗೆ ಪೂರಕವಾಗಿ ಕೆಲಸ ನಿರ್ವಹಿಸಿದ ಪ್ರೊ. ಎಚ್.ಜೆ. ಲಕ್ಕಪ್ಪ ಗೌಡರು ಸೋಮವಾರ ಸಂಜೆ ನಮ್ಮನ್ನು ಅಗಲಿದ್ದಾರೆ. ಭಾರತದ ಇತರ ಪ್ರದೇಶಗಳಿಗೆ ಹೋಲಿಸಿದರೆ ಕರ್ನಾಟಕ ಜಾನಪದ ಅಧ್ಯಯನವು ಸಾಕಷ್ಟು ವಿಸ್ತೃತವೂ ಗಂಭೀರವೂ ಆಗಿರುವುದಕ್ಕೆ  ಕಾರಣಕರ್ತರಾದವರಲ್ಲಿ ಲಕ್ಕಪ್ಪ ಗೌಡರಿಗೆ ಪ್ರಮುಖ ಸ್ಥಾನವಿದೆ. ಅವರ ಸಾಧನೆಯ ಹಾದಿಯನ್ನು ಮೆಲುಕು ಹಾಕಿದ್ದಾರೆ ವಿದ್ವಾಂಸ ಪ್ರೊ. ಪುರುಷೋತ್ತಮ ಬಿಳಿಮಲೆ. 

read more
ಅಭಿನಯ ಶಾರದೆ ಜಯಂತಿಯ ಬದುಕಿನ ಪುಟಗಳು…

ಅಭಿನಯ ಶಾರದೆ ಜಯಂತಿಯ ಬದುಕಿನ ಪುಟಗಳು…

ಕಮಲಕುಮಾರಿಯಾಗಿದ್ದ ಅವರು  ಬಳ್ಳಾರಿ ಮೂಲದವರು. ಜಯಂತಿ ಎಂಬ ಹೆಸರಿನೊಂದಿಗೆ ಸಿನಿಮಾ ಲೋಕ ಪ್ರವೇಶಿಸಿದ ಬಳಿಕ, ಕನ್ನಡದ ಕ್ಲಾಸಿಕ್ಸ್ ಎಂದು ಗುರುತಿಸಿಕೊಳ್ಳುವ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿಯೂ ನಟಿಸುವ ಅವಕಾಶ ಅವರಿಗೆ ದೊರೆತಿತ್ತು. ಅವರ ಸುದೀರ್ಘವಾದ ಸಿನಿಮಾ ಪಯಣವನ್ನು ನೆನಪಿಸಿಕೊಂಡು ಭಾರತಿ ಹೆಗಡೆ ಬರೆದ ಲೇಖನ ಇಲ್ಲಿದೆ. 

read more
ಅಸಂಗತ ಸಂಭಾಷಣೆಯ ಕತೆಗಾರ

ಅಸಂಗತ ಸಂಭಾಷಣೆಯ ಕತೆಗಾರ

ವಿಶಿಷ್ಟ ಶೈಲಿಯ ಕಥೆಗಳನ್ನು ಬರೆಯುತ್ತಿದ್ದ ಸಾಹಿತಿ ಎಂ. ವ್ಯಾಸ ಅವರು ಕಾಸರಗೋಡು ಜಿಲ್ಲೆಯವರು. ತಮ್ಮ ಸಾಹಿತ್ಯ ಕೃತಿಗಳ ಕುರಿತು ಪ್ರಚಾರ ಮಾಡುವುದು, ಅವಕಾಶಗಳ ಬೆನ್ನುಬಿದ್ದು ‘ಕೀರ್ತಿಶನಿ’ಯ ಸ್ನೇಹ ಮಾಡುವುದನ್ನು ಅವರು ಇಷ್ಟಪಡುತ್ತಿರಲಿಲ್ಲ.  ಆದರೆ ಸಾರಸ್ವತ ಲೋಕದಲ್ಲಿ ಅವರು ಸೃಷ್ಟಿಸಿದ ಕಥಾಲೋಕವನ್ನು ಓದುಗರು ಮೆಚ್ಚಿದ್ದಾರೆ. 2008ರ ಜುಲೈ 23ರಂದು ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಅವರನ್ನು ನೆನಪಿಸಿಕೊಳ್ಳುತ್ತ, -ಕ್ಷಿತಿಜ್‌ ಬೀದರ್‌ ಬರೆದ ಬರಹ ಇಲ್ಲಿದೆ.

read more
ಉಧಂಪುರದಲ್ಲೊಂದು ಚಹಾಕೂಟ

ಉಧಂಪುರದಲ್ಲೊಂದು ಚಹಾಕೂಟ

ದೇಶಬಂಧು ಡೋಗ್ರಾನೂತನ್ ಡೋಗ್ರಿ ಸಾಹಿತ್ಯದಲ್ಲಿ ಕೃಷಿ ಮಾಡಿದವರು. ಸಮಕಾಲೀನ ಆಗುಹೋಗುಗಳಿಗೆ ಪ್ರತಿಕ್ರಿಯಿಸುವವರೂ ಹೌದು. ಹಾಗಾಗಿ, ಭಾಷೆ ಮತ್ತು ರಾಜಕೀಯ ವಿಚಾರಗಳ ವಿಶ್ಲೇಷಣೆಗಳತ್ತ ಕೂಡ ಗಮನ ಹರಿಸಿದವರು. ಅವರ ಮನೆಯ ಚಾವಡಿ, ಸಾಹಿತ್ಯ ಚರ್ಚೆ, ಚಹಾಕೂಟಗಳಿಗೆ ಆಸರೆ. ದೇಶವಿಭಜನೆಯ ಸಂದರ್ಭವನ್ನು, ತುರ್ತುಪರಿಸ್ಥಿತಿ ಬಿಗುವನ್ನೂ…”

read more
ಯೋಧರ ನಾಡಿನ ಕಲಾವಿದ, ಲೇಖಕ ಮೋಹನ್ ಸಿಂಗ್

ಯೋಧರ ನಾಡಿನ ಕಲಾವಿದ, ಲೇಖಕ ಮೋಹನ್ ಸಿಂಗ್

ಡೋಗ್ರಿ ಭಾಷೆಯ ಲೇಖಕರಾಗಿ, ರಂಗಭೂಮಿ ಕಲಾವಿದರಾಗಿರುವ ಮೋಹನ್ ಸಿಂಗ್ ಹೋರಾಟಗಾರ ವ್ಯಕ್ತಿತ್ವದವರು. ಗುಲಾಬಿ ಜುಬ್ಬಾ ಬಿಳಿ ಪೈಜಾಮಾ ಧರಿಸಿ ಹಳದಿ ಬಣ್ಣದ ನ್ಯಾನೋ ಕಾರು ಡ್ರೈವ್ ಮಾಡುತ್ತ ಅವರು ವಿಜಯಪುರ ಬಸ್ ನಿಲ್ದಾಣಕ್ಕೆ ಬಂದಿದ್ದರು. ವಿಶಾಲವಾದ ಹೊಲಗದ್ದೆಗಳ ನಡುವಿನ ದಾರಿಯಲ್ಲಿ ಈ ಬಣ್ಣದ ಕಾರು ಚಲಿಸುತ್ತಿರುವಾಗ, ಮೋಹನ್ ಸಿಂಗ್ ಅವರ ವ್ಯಕ್ತಿತ್ವವೂ ಅಷ್ಟೇ..”

read more
ಚನ್ನಕೇಶವ ನೆನಪಿಗೆ ಒಂದು ಹಳೆಯ ಬರಹ

ಚನ್ನಕೇಶವ ನೆನಪಿಗೆ ಒಂದು ಹಳೆಯ ಬರಹ

ಕನ್ನಡ ರಂಗಭೂಮಿಯ ಪೂರ್ಣಪ್ರಮಾಣದ ಕೃಷಿಕ  ಚನ್ನಕೇಶವ ತೀರಿಕೊಂಡಿದ್ದಾರೆ. ನಾಟಕ ಆಡುವುದು, ಆಡಿಸುವುದು,ಆಡುವುದನ್ನು ಕಲಿಸುವುದು, ನಾಟಕ ವಿನ್ಯಾಸ, ರಸಗ್ರಹಣ ಹೀಗೆ ತನ್ನ ಪೂರ್ಣ ಹೊತ್ತನ್ನು ರಂಗಭೂಮಿಯಲ್ಲೇ ಕಳೆಯುತ್ತಿದ್ದವರು ಅವರು. ಕಳೆದ ಶುಕ್ರವಾರ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಿಧನರಾದರು. ಅವರ ನೆನಪಿಗಾಗಿ ಕೆಂಡಸಂಪಿಗೆಗೆ ಅವರು ಈ ಹಿಂದೆ ಬರೆಯುತ್ತಿದ್ದ ಸರಣಿಯ ಒಂದು ತುಣುಕು..

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ