Advertisement

ಸರಣಿ

ಈ‌ ಒಂಟೆಗೇಕೆ ಮರಿಯ ಮೇಲಿಷ್ಟು ಸಿಟ್ಟು..

ಈ‌ ಒಂಟೆಗೇಕೆ ಮರಿಯ ಮೇಲಿಷ್ಟು ಸಿಟ್ಟು..

ಚಿತ್ರದ ಕಥಾವಸ್ತು ಹುಬ್ಬೇರಿಸುವಂಥಾದ್ದು. ಒಂಟೆಯೊಂದು ಬಿಳಿ ಬಣ್ಣದ ಮರಿ ಹಾಕಲು ಎರಡು ದಿನ ತೆಗೆದುಕೊಂಡ ನಂತರ ಮರಿಗೆ ಪ್ರೀತಿ ನಿರಾಕರಿಸಿ ಹಾಲು ಕುಡಿಯಲು ಬಿಡುವುದಿಲ್ಲ. ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥವಾಗಿ ಕೊನೆಗೆ ತಾಯಿ ಒಂಟೆಗೆ ಅದರ ಮರಿಯ ಮೇಲೆ ಪ್ರೀತಿ ಹುಟ್ಟಿಸುವುದಕ್ಕೆ ಪಿಟೀಲು ವಾದನ ಕೇಳಿಸುವುದರಿಂದ ಸಮಸ್ಯೆ ನಿವಾರಣೆಯಾಗುತ್ತೆ. ಒಂದು ರೀತಿಯಲ್ಲಿ ಚಿತ್ರ ಸುಖಾಂತ.
ಎ.ಎನ್. ಪ್ರಸನ್ನ ಬರೆಯುವ ʻಲೋಕ ಸಿನಿಮಾ ಟಾಕೀಸ್‌ʼನಲ್ಲಿ ಮಂಗೋಲಿಯ ʻದ ಸ್ಟೋರಿ ಆಫ್‌ ವೀಪಿಂಗ್‌ ಕ್ಯಾಮೆಲ್‌ʼ ಸಿನಿಮಾದ ವಿಶ್ಲೇಷಣೆ

read more
ಅರುವತ್ತು ವರ್ಷಗಳ ರಾಜಕೀಯ ಅರಿವು

ಅರುವತ್ತು ವರ್ಷಗಳ ರಾಜಕೀಯ ಅರಿವು

ನನಗೆ ಬಾಲ್ಯದಲ್ಲೇ ರಾಜಕೀಯ ಪ್ರಜ್ಞೆ ಮೂಡತೊಡಗಿತು. ಆಗ ಎಲ್ಲ ರಾಜಕೀಯ ಪಕ್ಷದವರು ತಮ್ಮ ಚುನಾವಣಾ ಚಿಹ್ನೆಗಳುಳ್ಳ ಬಿಲ್ಲೆಗಳನ್ನು ಚುನಾವಣಾ ಭಾಷಣದ ಸಂದರ್ಭದಲ್ಲಿ ಹಂಚುತ್ತಿದ್ದರು. ಕಾಂಗ್ರೆಸ್ ಚಿಹ್ನೆ ನೊಗಹೊತ್ತ ಜೋಡೆತ್ತು ಇದ್ದರೆ, ಜನಸಂಘದ್ದು ಅಲ್ಲಾವುದ್ದೀನ ಚಿರಾಗದಂಥ ದೀಪದ ಚಿಹ್ನೆಯಾಗಿತ್ತು. ಸ್ವತಂತ್ರ ಪಕ್ಷದ್ದು ನಕ್ಷತ್ರ ಆಗಿತ್ತು. ಈ ಪ್ಲ್ಯಾಸ್ಟಿಕ್ ಅಥವಾ ತಗಡಿನ ಬಿಲ್ಲೆಗಳನ್ನು ಸಂಗ್ರಹಿಸುವುದಕ್ಕಾಗಿ ನಾವು ಹುಡುಗರು ಎಲ್ಲ ಪಕ್ಷಗಳ ಚುನಾವಣಾ ಸಭೆಗಳಿಗೆ ಹೋಗುತ್ತಿದ್ದೆವು. ಅವರ ಭಾಷಣಗಳನ್ನು ನಾನಂತೂ ತದೇಕಚಿತ್ತದಿಂದ ಕೇಳುತ್ತಿದ್ದೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ನೆನಪಾದಾಗಲೆಲ್ಲ ಸರಣಿಯ 40ನೆಯ ಕಂತು.

read more
ಹೆಣ್ಣನ್ನು ಮುಟ್ಟಿದ್ದೀವಾ…

ಹೆಣ್ಣನ್ನು ಮುಟ್ಟಿದ್ದೀವಾ…

ಇಂತಹ ಹತ್ತಾರು ನಿದರ್ಶನಗಳಿಂದ ಆಕೆಗೆ ಏನೂ ತಿಳಿಯುತ್ತಿರಲಿಲ್ಲ. ನಾನು ಬಿಡಿಸಿ ಹೇಳುವಂತಿರಲಿಲ್ಲ. ಬೆದರಿ ಹೋಗಿದ್ದಳು. ಇದನ್ನು ಹೇಗೆ ಇಂಗ್ಲೀಷಿನಲ್ಲಿ ಸರಳೀಕರಿಸಿ ತಿಳಿಸಬಹುದು ಎಂದು ಮನದಲ್ಲೆ ಯತ್ನಿಸಿ; ಥತ್; ಇಂತಾ ಅಲ್ಕಾ ಟ್ರಾನ್ಸ್‌ಲೇಶನ್‌ನಿಂದಾಗಿ ಆಕೆ ನನ್ನ ಬಗ್ಗೆ ಕೆಟ್ಟದಾಗಿ ಭಾವಿಸಿ; ಎಲ್ಲಿ ನನಗೆ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸುವಳೊ ಎಂದು ಆದಷ್ಟು ಅಂತರ ಕಾಯ್ದುಕೊಳ್ಳುತಿದ್ದೆ. ಆಕೆಯೊ ಲೈಬ್ರರಿಗೆ ಹುಡುಕಿ ಬಂದು ವಿವರಿಸು ಎಂದು ಒತ್ತಾಯಿಸುತ್ತಿದ್ದಳು.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ

read more
ರಾವಸಾಹೇಬ್ ಆದ ಪೊಲೀಸ್ ಅಧಿಕಾರಿ ಸಿದ್ರಾಮಪ್ಪ ಲಕ್ಷ್ಮೇಶ್ವರ

ರಾವಸಾಹೇಬ್ ಆದ ಪೊಲೀಸ್ ಅಧಿಕಾರಿ ಸಿದ್ರಾಮಪ್ಪ ಲಕ್ಷ್ಮೇಶ್ವರ

ಅಪರಾಧಿ ಬುಡಕಟ್ಟು ಎಂದು ಅಪಮಾನಕ್ಕೀಡಾದ ಯುವಕರಿಗೆ ಸಂಸ್ಕಾರ ನೀಡಿ ಸಭ್ಯ ಗೃಹಸ್ಥರನ್ನಾಗಿ ಮಾಡುವುದು ಬಹಳ ಕಷ್ಟದ ಕೆಲಸ. ಅದಕ್ಕಾಗಿ ಅಪರಿಮಿತವಾದ ತಾಳ್ಮೆ ಬೇಕು. ‘ಅವರಲ್ಲೂ ಮನುಷ್ಯತ್ವ ಇದೆ’ ಎಂಬ ಅಚಲವಾದ ನಂಬಿಕೆ ಬೇಕು. ದೈನಂದಿನ ಬದುಕಿನ ಎಲ್ಲ ಹಂತಗಳಲ್ಲಿ ಅವರನ್ನು ನಿರೀಕ್ಷಿಸುವ ಮೂಲಕ ಅವರನ್ನು ತಿದ್ದುವುದು. ಅವರಲ್ಲಿ ಹೊಸ ಕನಸುಗಳ ಸೃಷ್ಟಿ ಮಾಡುವುದು. ತಮಗೂ ಬೇರೆಯರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂಬ ಆತ್ಮವಿಶ್ವಾಸ ಮೂಡಿಸುವುದು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ಸರಣಿಯ 39ನೆಯ ಕಂತು .

read more
ನಿನ್ನ ಪ್ರೇಮ ನಿನ್ನೆಯ ವೃತ್ತಪತ್ರಿಕೆಯಂತೆ..

ನಿನ್ನ ಪ್ರೇಮ ನಿನ್ನೆಯ ವೃತ್ತಪತ್ರಿಕೆಯಂತೆ..

ಒರ್ಲಾಂಡೊ ಯಾವಾಗಲೂ ಸಮೀಪದಲ್ಲಿ ಇದ್ದಾನೆ ಎನ್ನುವ ಭಾವನೆ ಅವಳಿಗೆ. ಹೀಗಾಗಿ ಅವಳು ಕಾರಿನಲ್ಲಿ ಹೋಗುವಾಗ ಹಿಂಬದಿಯ ಸೀಟಿನಲ್ಲಿ ಅವನು ಕುಳಿತಿರುವಂತೆ ತೋರುವುದು, ಹಾಡುಗಳ ಮಧ್ಯೆ ಉಳಿದವರೆಲ್ಲ ಮಾಯವಾಗಿ ಅಷ್ಟು ದೂರದಿಂದ ತನ್ನೆಡೆಗೆ ಹಸನ್ಮುಖಿಯಾಗಿ ನಡೆದು ಬರುತ್ತಿರುವಂತೆ ಕಾಣುವುದು ಮತ್ತು ಎಲ್ಲರೂ ಮರೆಯಾಗಿ ಬೆಳ್ಳಿ ಪದರುಗಳ ರೆಕ್ಕೆಗಳು ಮೂಡಿ ಹಾರಾಡುತ್ತಿರುವ ಭಾವನೆಯಿಂದ ನರ್ತಿಸುವುದನ್ನು ಕಲ್ಪಿಸಿಕೊಳ್ಳುತ್ತಾಳೆ.
ಎ.ಎನ್‌. ಪ್ರಸನ್ನ ಬರೆಯುವ ಲೋಕ ಸಿನಿಮಾ ಟಾಕೀಸ್‌ ಸರಣಿ

read more
ಕಾಮನ ಬಿಲ್ಲ ಎದೆಗೆ ಏರಿಸಿದ್ದೆ

ಕಾಮನ ಬಿಲ್ಲ ಎದೆಗೆ ಏರಿಸಿದ್ದೆ

ಪೆಂಟೆಗೆ ಬಂದೆ. ತೋಟದ ಮರೆಯಲ್ಲೊಂದು ಮಾಯಾಲೋಕ ಅದು. ಪಡ್ಡೆ ಹುಡುಗ ಹುಡುಗಿಯರೆ ಹೆಚ್ಚಿದ್ದರು. ಕುಡುಕರ ಸ್ವರ್ಗ. ಮಾಂಸಕ್ಕೆ ಕಾರ ಮಸಾಲೆ ಹಚ್ಚಿ ಸೌದೆ ಬೆಂಕಿಯಲ್ಲಿ ಸುಟ್ಟು ಎಂಡಗುಡುಕರಿಗೆ ಮಾರುತಿದ್ದರು. ವಿಚಿತ್ರ ಕಂಟು ಕಮಟು ವಾಸನೆ. ಟಿಕೇಟು ಪಡೆದೆ. ಇಷ್ಟವಾದ ಬಟಾಣಿ, ಕಡಲೆ ಬೀಜ ತಿನ್ನುತ್ತ ಕೂತಿದ್ದೆ. ಹತ್ತು ಗಂಟೆಗೆ ಸಿನಿಮಾ ಆರಂಭವಾಗುತ್ತಿದ್ದುದು. ಮೈಸೂರಿನದೇ ನೆನಪು. ತಾತನೂ ಸರಿ ಇಲ್ಲ ಎನಿಸಿತ್ತು. ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯಲ್ಲಿ ಹೊಸ ಬರಹ

read more
ಬಹುಮಾನವಾಗಿ ಸಿಕ್ಕ ಆನೆಮರಿಯೊಂದರ ಜೀವನಗಾಥೆ

ಬಹುಮಾನವಾಗಿ ಸಿಕ್ಕ ಆನೆಮರಿಯೊಂದರ ಜೀವನಗಾಥೆ

ಕೊರೆಯುವ ನೆಲದ ಮೇಲೆ ಕಾಲಿಡುತ್ತಿದ್ದ ಆನಾಬೆಲ್‌ಳ ಪಾದಗಳಲ್ಲಿ ಗಾಯವಾಗತೊಡಗಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಆನೆಗಳಲ್ಲಿ, ಪಾದಗಳೂ ನಮ್ಮ ಕಿವಿಯೊಳಗಿನ ಇಯರ್-ಡ್ರಂಗಳಂತೆ ಕೆಲಸಮಾಡುತ್ತವೆ. ವಿಜ್ಞಾನಿಗಳು ಹೇಳುವಂತೆ, ಆನೆಯ ಗುಂಪೊಂದು ನಡೆಯುತ್ತಿದ್ದರೆ, ಆ ಗುಂಪಿನಿಂದ ಇಪ್ಪತ್ತು ಮೈಲಿ ದೂರದಲ್ಲಿರುವ ಆನೆಯೊಂದು, ಆ ಆನೆಗಳ ನಡೆತದಿಂದಾಗುವ ಕಂಪನಗಳನ್ನು ತನ್ನ ಪಾದದ ಮೂಲಕವೇ ಗುರುತಿಸಬಲ್ಲದಂತೆ.
ಶೇಷಾದ್ರಿ ಗಂಜೂರು ಬರೆಯುವ ‘ಆನೆಗೆ ಬಂದ ಮಾನ’ ಸರಣಿಯಲ್ಲಿ ಆನೆಮರಿಯ ಬದುಕಿನ ಕತೆಯೊಂದನ್ನು ಇಲ್ಲಿ ಹಂಚಿಕೊಂಡಿದ್ದಾರೆ

read more
ಕನಸುಗಾರ್ತಿಯೊಬ್ಬಳು ಬೇಹುಗಾರ್ತಿಯಾದ ಕತೆ

ಕನಸುಗಾರ್ತಿಯೊಬ್ಬಳು ಬೇಹುಗಾರ್ತಿಯಾದ ಕತೆ

ಹಿಂದೆ ಇದ್ದ ಅಬಿಂಗ್ಡನ್ ಪ್ರಾಂತ್ಯದ ಮನೆಯಲ್ಲಿ ವ್ಯರ್ಥವಾದ ಸಮಯವನ್ನು ಇಲ್ಲಿ ತುಂಬಿಸಿಕೊಳ್ಳುತ್ತಿದ್ದೇನೆ. ನೀನು ಮರಳುವಾಗ ಬಹುಶಃ ಇಲ್ಲೇ ಇರುತ್ತೇನೆ” ಎಂದು ಬರೆದಿದ್ದಳು. ಮುಂದೊಂದು ದಿನ ತಾನು ಜರ್ಮನಿಯಲ್ಲಿ ಸೆರೆಯಲ್ಲಿರುವುದನ್ನು ಅಂದು ಅವಳು ಊಹಿಸರಲಿಲ್ಲ, ಆದರೆ ಹಾಗೆ ಸೆರೆಯಲ್ಲಿರುವಾಗ, ಊಟದ ತಟ್ಟೆಯ ಮೇಲೆ ತನ್ನ ಹೆಸರನ್ನು “ನೋರಾ ಬೇಕರ್, ರೇಡಿಯೋ ನಿರ್ವಾಹಕಿ” ಎಂದು ಕೆತ್ತಿ ಜೈಲಿನಲ್ಲಿರುವ ಸಹವಾಸಿಗಳೊಡನೆ ಸಂಪರ್ಕಿಸುತ್ತಿದ್ದಳು.
ಯೋಗೀಂದ್ರ ಮರವಂತೆ ಬರೆಯುವ ‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಸರಣಿಯ ಹೊಸ ಬರಹ

read more
ನಾವು ಎತ್ತ ಸಾಗಿದ್ದೇವೆ?

ನಾವು ಎತ್ತ ಸಾಗಿದ್ದೇವೆ?

ಈ ಜಾತ್ರೆಯಲ್ಲಿ ಬಡಿಗೆಗಳನ್ನು ಕೊಳ್ಳುವುದೊಂದು ವಿಶೇಷ. ಹಿಡಿಯಲು ಅನುಕೂಲವಾಗುವಷ್ಟು ದಪ್ಪನೆಯ ಬೆತ್ತದ ಬಡಿಗೆಗಳಿಗೆ ಕೇರಿನ ರಸದಿಂದ ಡಿಸೈನ್ ಮಾಡಿ ಸಿಂಗರಿಸುತ್ತಿದ್ದರು. ಈ ಜಾತ್ರೆಯಲ್ಲಿ ಮನೆಗೆ ಮತ್ತು ಒಕ್ಕಲುತನಕ್ಕೆ ಬೇಕಾದ ಎಲ್ಲ ವಸ್ತುಗಳು ಕೂಡ ಸಿಗುತ್ತಿದ್ದವು. ಎತ್ತುಗಳ ಆಲಂಕಾರಿಕ ವಸ್ತುಗಳು ರೈತರ ಮನಸೂರೆಗೊಳ್ಳುತ್ತಿದ್ದವು. ತಮ್ಮ ದನಕರುಗಳನ್ನು ಸಿಂಗರಿಸುವುದೆಂದರೆ ರೈತರಿಗೆ ಎಲ್ಲಿಲ್ಲದ ಖುಷಿ. ಅವರು ಆ ಪರಿಯಿಂದ ಕಾಳಜಿ ವಹಿಸಿ ತಮ್ಮ ಮಕ್ಕಳ ಸಿಂಗಾರ ಮಾಡಿದ್ದನ್ನು ನಾನು ಹಳ್ಳಿಯಲ್ಲಿ ನೋಡಲಿಲ್ಲ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ