Advertisement

ಸಾಹಿತ್ಯ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಚೀಮನಹಳ್ಳಿ ರಮೇಶಬಾಬು ಕತೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಚೀಮನಹಳ್ಳಿ ರಮೇಶಬಾಬು ಕತೆ

ಮಳೆ ನಿಂತಿತ್ತಾದರೂ ಸಂದಿಯಲ್ಲಿರುವ ನೀರು ಖಾಲಿಯಾಗುವವರೆಗು ಮನೆಯೊಳಗೆ ನೀರು ಬರುತ್ತಲೆ ಇತ್ತು. ಹಾಗಾಗಿ ಅವಳು ಬಹುಪಾಲು ರಾತ್ರಿಯೆಲ್ಲ ಹಾಗೆ ನೀರನ್ನು ಹೊರ ಹಾಕುತ್ತಲೆ ಇದ್ದಳು. ಅದಾದ ಮೇಲೆ ಮಣ್ಣನ್ನೆಲ್ಲ ತೆಗೆದು ಒಂದಷ್ಟು ಸ್ವಚ್ಛಗೊಳಿಸಿದ್ದಳಾದರು ಮುಂಜಾವಿನವರೆಗೂ ತಾರಸಿ ಸೋರುತ್ತಲೆ ಇತ್ತು. ಅವಳು ತುಂಬಿದ ಪಾತ್ರೆಗಳಲ್ಲಿನ ನೀರನ್ನು ಆಚೆ ಚಲ್ಲಿ ಮತ್ತೆ ಅದೇ ಜಾಗದಲ್ಲಿ ಇಡುತ್ತಿದ್ದಳು. ಹೀಗೆ ರಾತ್ರಿಯೆಲ್ಲ ಎದ್ದು ಬಗ್ಗಿ ಓಡಾಡಿ ಹೈರಾಣಾಗಿದ್ದಳು. ರಾತ್ರಿಯ ಕತ್ತಲಲ್ಲಿ ಅದುಮಿಟ್ಟುಕೊಂಡಿದ್ದ ಅವಳೆಲ್ಲ ಭಾವನೆಗಳು ಬೆಳಗಾಗುತ್ತಿದ್ದಂತೆ ಸಿಡಿದು ಸದ್ದು ಮಾಡತೊಡಗಿದವು.

read more
ಎ.ಬಿ. ಪಚ್ಚು ಬರೆದ ಈ ಭಾನುವಾರದ ಕತೆ “ಮದಿಮಾಲ್”

ಎ.ಬಿ. ಪಚ್ಚು ಬರೆದ ಈ ಭಾನುವಾರದ ಕತೆ “ಮದಿಮಾಲ್”

ಮದಿಮಾಲ್ ನೆನಪಾದರೆ ಯಾಕೋ ನನ್ನ ಕಾಲ್ಗುಣದಿಂದಾಗಿ ಸಾಲು ಸಾಲಾಗಿ ಸತ್ತು ಮಲಗಿದವರೇ ನೆನಪಾಗುತ್ತಿದ್ದರು. ಮೊದಲ ಬಾರಿಗೆ ಆಸೆಯಿಂದ ಗಂಡನ ಮನೆಗೆ ಮದಿಮಾಲ್ ಮೀನು ತೆಗೆದುಕೊಂಡು ಹೋದಾಗ ಅತ್ತೆ ಅದನ್ನು ತೊಟ್ಟೆ ಸಹಿತ ಅಂಗಳಕ್ಕೆ ಬಿಸಾಡಿದ್ದು, ಜಿಮ್ಮಿ ನಾಯಿ, ಮಂಗು ಬೆಕ್ಕು ಆ ಮದಿಮಾಲ್ ಮೀನನ್ನು ಕಚ್ಚಿಕೊಂಡು ಓಡಿ ಹೋದದ್ದು, ಈ ದೃಶ್ಯಗಳೆಲ್ಲವೂ ಕಣ್ಣಿಗೆ ಕಟ್ಟಿದಂತೆಯೇ ಆ ನಂತರವೂ ನನ್ನ ಜೊತೆ ಶಾಶ್ವತವಾಗಿ ಉಳಿದು ಹೋದವು.
ಎ.ಬಿ. ಪಚ್ಚು ಬರೆದ ಈ ಭಾನುವಾರದ ಕತೆ “ಮದಿಮಾಲ್” ನಿಮ್ಮ ಓದಿಗೆ

read more
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಚಿದಾನಂದ ಸಾಲಿ ಕತೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಚಿದಾನಂದ ಸಾಲಿ ಕತೆ

ಪಿಯುಸಿಯಲ್ಲಿ ಇಮಾಂಸಾಬಿಯ ರೂಮಿನಲ್ಲಿ ಅದ್ಹೇಗೋ ಹೊಂದಿಸಿಕೊಂಡು ನಿಯರ್ ಫಸ್ಟ್‌ಕ್ಲಾಸ್‌ನಲ್ಲಿ ಪಾಸೇನೋ ಆದೆ. ಆದರೆ ಅವನು ಫೇಲಾದ ಹೊಟ್ಟೆಕಿಚ್ಚಿಗೆ ನನ್ನ ಪಾಲಿಗೆ ರೂಮಿನ ಬಾಗಿಲು ಮುಚ್ಚಿಕೊಂಡಿತು. ನಿತ್ಯ ಮನೆಯಲ್ಲಿ ಅಪ್ಪನ ಮತ್ತಿನ ಬಡಬಡಿಕೆಗಳು, ಅದಕ್ಕೆ ಪ್ರತಿಯಾಗಿ ಅಮ್ಮನ ಬೈಗುಳಗಳು ನನ್ನನ್ನು ಚಿತ್ರಹಿಂಸೆಗೆ ಈಡು ಮಾಡಿದವು. ಎದುರಿಗೆ ಕಲ್ಲುಗೋಡೆಯಂತೆ ಇಂಜಿನಿಯರಿಂಗ್. ಇಷ್ಟೆಲ್ಲದರ ನಡುವೆ ಸೋತು ಸುಣ್ಣಾಗಿ ಹೋಗಿದ್ದವನಿಗೆ ಕಾಲೇಜಿನಲ್ಲಿ ಸುರೇಶ್ ಪರಿಚಯವಾದ.

read more
ವಿಜಯಾ ಮೋಹನ್‌ ಬರೆದ ಈ ಭಾನುವಾರದ ಕತೆ

ವಿಜಯಾ ಮೋಹನ್‌ ಬರೆದ ಈ ಭಾನುವಾರದ ಕತೆ

ಅವಳು ಜೀವ್‌ಮಾನದಾಗೆ, ಅಷ್ಟೊಂದು ಬಳೆ ತೊಟ್ಟುಕೊಂಡಿರ್‍ಲಿಲ್ಲ. ಅವ್ವನ ತವರಲ್ಲಿ, ಅವಳ ಬೆನ್ನಿಂದಲ, ತಮ್ಮನೊಬ್ಬನು ಮೇಷ್ಟ್ರಾಗಿದ್ದವನು. ಊರ ಮಾರಮ್ಮನ ಜಾತ್ರೆಯೊಂದಕ್ಕೆ ಕರಿಸಿಕೊಂಡು. ಏಷ್ಟೊ ವರುಷಕ್ಕೆ ಬಂದಿದ್ದೀಯಕ್ಕ, ಮುಂದುಕ್ಕೆ ಇರೋವರ್ಯಾರೊ? ಸಾಯೋವರ್ಯಾರೊ? ನೀನು ತೊಟ್ಟೇ ತೊಟ್ಟುಕೊಬೇಕೆನುತ, ಬಳೆ ಮಲಾರದವನನ್ನ ಕರೆಸಿ. ಒಂದೊಂದು ಕ್ಯೆಗೆ ಎರೆಡೆರೆಡು ಡಸನ್ನಿನಷ್ಟು, ನೂರು ರೂಪಾಯಿನ ಬಳೆ ತೊಡಿಸಿ, ನೆಟ್ಟಗಿನ್ನ ಹದಿನೈದು ದಿನವಾಗಿರಲಿಲ್ಲ. ಏನು ತಗದ್ರು ತಗೀತೀನಿ, ಕ್ಯೆಯ್ಯಾಗಳ ಬಳೆ ಮಾತ್ರ ಬಿಚ್ಚಲ್ಲ ಸಾ, ನೋಡಿಸಾ ಮುತ್ಯೆದೆ ಬಳೆ ಬಿಚ್ಚುಸಬ್ಯಾಡಿ ಸಾ, ಒಡಿಬ್ಯಾಡ್ರಿ ಸಾ, ಅನುತ ಇನ್ನಿಲ್ಲದಂಗೆ ಬೇಡಿಕೊಂಡ್ಲು.

read more
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಛಾಯಾ ಭಟ್‌ ಕತೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಛಾಯಾ ಭಟ್‌ ಕತೆ

ಮದುವೆಯಾಗಿ ಬಂದಮೇಲೆ ಮಾಕುಚಿಕ್ಕಿಯ ಮಾತು ಸೊಟ್ಟಗಾಗಲು ಬಹಳ ದಿನ ಹಿಡಿಸಲಿಲ್ಲ, ಕರಿಮಣಿ ಕಟ್ಟಿಕೊಂಡವರೆಲ್ಲ ಉರಿದು ಬೀಳುವುದು ಸಂಪ್ರದಾಯವಿರಬೇಕು ಅಂತ ಆಶ್ಚರ್ಯ ಪರಮುಗೆ. ತನ್ನ ಹಡೆದಬ್ಬೆಯ ಪ್ರೀತಿಯಲ್ಲಿಯೂ ಹೆಚ್ಚೇನೂ ಓಲಾಡಿದವನಲ್ಲ ಪರಮು. ಅಬ್ಬೆ ವರ್ಷಕ್ಕೊಮ್ಮೆ ಹೊಟ್ಟೆ ಡುಬ್ಬ ಮಾಡಿಕೊಂಡು ಹೆರಿಗೆ ನೋವು ಬಂದೊಡನೆ ಕೊಂಕಣಿ ಅಜ್ಜಿಗೆ ಬರ ಹೇಳುವುದು, ಒಂದಲ್ಲ ಒಂದು ಕಾರಣಕ್ಕೆ ಮಗು ಹುಟ್ಟುತ್ತಲೇ ಕೈಲಾಸ ವಾಸಿಯಾಗುವುದು ಇದ್ದಿದ್ದೇ. ಮಗುವಿಲ್ಲದ ಬಾಳಂತನದಲ್ಲಿ ಅಳುವ ಅಬ್ಬೆ, ಕಂಡವರ ಶಿಶುಗಳಿಗೆಲ್ಲ ಹಾಲೂಡಿಸಿ ಎದೆ ಭಾರ ಕಳೆದ ಮೇಲೆ ಮತ್ತೆ ಮೊದಲಿನಂತೆ…

read more
ಕಾವ್ಯಾ ಕಡಮೆ ಬರೆದ ಈ ಭಾನುವಾರದ ಕತೆ

ಕಾವ್ಯಾ ಕಡಮೆ ಬರೆದ ಈ ಭಾನುವಾರದ ಕತೆ

ಮಾತನಾಡದೇ ಹೊರಹೋದವಳ ಬೆನ್ನು ದಿಟ್ಟಿಸುತ್ತ ತಟಸ್ಥಳಾಗಿ ಆಫೀಸಿನ ಸೋಫಾದ ಮೇಲೆಯೇ ಕುಸಿದುಬಿಟ್ಟೆ. ನನಗರಿವಿಲ್ಲದೇ ಎದೆಯ ಮುಂದೆ ಕೈಕಟ್ಟಿಕೊಂಡು ಕುಳಿತೆ. ಪ್ರಕಟವಾಗಿರುವ ಸಂದರ್ಶನಗಳು, ನ್ಯೂಸ್ ಪ್ರತಿಕ್ರಿಯೆಗಳನ್ನೆಲ್ಲ ಇನ್ನೊಮ್ಮೆ ತೆಗೆದು ನೋಡಿದೆ. ಎಲ್ಲಿಯೂ ಈ ಮ್ಯಾರಥಾನಿನಲ್ಲಿ ಟಾಪ್‌ಲೆಸ್ ಓಡುವುದಿಲ್ಲ ಅಂತ ನಾನು ಸ್ಪಷ್ಟವಾಗಿ ಹೇಳಿರಲಿಲ್ಲ. ಎಲ್ಲಿಯೂ ಆ ಮಾತೇ ಬಂದಿರಲಿಲ್ಲ. ಸಾವಿರದ ಸಂಖ್ಯೆಯಲ್ಲಿ ಹೆಂಗಸರು ತೆರೆದೆದೆಯಲ್ಲಿ ಓಡುವುದು, ಇದನ್ನು ಸಾಧ್ಯವಾಗಿಸಿದ್ದಕ್ಕೆ ಎಲ್ಲರೂ ನನ್ನನ್ನು…

read more
ಸುಜಯ್‌ ಪಿ. ಬರೆದ ಈ ಭಾನುವಾರದ ಕತೆ

ಸುಜಯ್‌ ಪಿ. ಬರೆದ ಈ ಭಾನುವಾರದ ಕತೆ

ಹೂವು ಎಂದರೆ ಗೆಲುವು, ಕಾಯಿ ಎಂದರೆ ಅಂದಿನ ಕೋಳಿ ಕಾದಾಟದ ಪಂದ್ಯದಲ್ಲಿ ಸೋಲು ಎಂಬುದೊಂದು ಪುರಾತನ ನಂಬಿಕೆ. ಇದು ಅಂಗಾರ ಒಬ್ಬನ ನಂಬಿಕೆಯಲ್ಲ, ಕೋಳಿಅಂಕಕ್ಕೆ ಹೋಗುವ ಎಲ್ಲರೂ ಮನೆಯ ಪುಟ್ಟ ಮಕ್ಕಳ ಬಳಿ ಈ ಪ್ರಶ್ನೆ ಕೇಳಿ‌ ಅಂಕಕ್ಕೆ ಹೊರಡುವುದು ವಾಡಿಕೆ. ಇದರ ಅರ್ಥ ತಿಳಿದ ಮೇಲೆ ಮುತ್ತ, ‘ಕಾಯಿ’ ಎಂದು ಉತ್ತರಿಸಿದ್ದೇ ಇಲ್ಲ. ಈ ದಿನ ಅಂಗಾರ ಬಲ್ನಾಡಿನ ಜಾತ್ರೆಯ ಕೊನೆಯ ದಿನದಂದು ನಡೆಯುವ ಕೋಳಿಅಂಕಕ್ಕೆ ಹೊರಟು ನಿಂತಿದ್ದ.
ಸುಜಯ್ ಪಿ. ಬರೆದ ಈ ಭಾನುವಾರದ ಕತೆ ‘ಕುಕ್ಕುಟ ಕದನ ಕಥನ’ ನಿಮ್ಮ ಓದಿಗಾಗಿ…

read more
ಸ್ತ್ರೀವೇಷ: ನಾಗಶ್ರೀ ಶ್ರೀರಕ್ಷ ಕಥೆ

ಸ್ತ್ರೀವೇಷ: ನಾಗಶ್ರೀ ಶ್ರೀರಕ್ಷ ಕಥೆ

“ಅಪ್ಪಣ್ಣ, ಸಣ್ಣಗಿನ ನಿದ್ದೆ ಮುಗಿಸಿ ಸ್ನಾನ ಮಾಡಿ ಚಿನ್ನದ ಚೈನು ಹಾಕಿಕೊಂಡು ತನಗೆ ಒಳಗೆ ಆಗುತ್ತಿರುವ ಪುಳಕವನ್ನೋ ಪುಕ್ಕಲನ್ನೋ ತೋರಿಸದೆ ನೀಟಾಗಿ ಕ್ರಾಪು ಬಾಚಿಕೊಳ್ಳುತ್ತಿದ್ದ. ಭಾಗೀರಥಮ್ಮ ಮುಖ ತೊಳೆದು ಪೌಡರ್ ಹಚ್ಚಿಕೊಳ್ಳುತ್ತಿದ್ದರು. ಸೆಖೆಗೆ ಬೆವರಿದ ಮುಖದಲ್ಲಿ ಅಲ್ಲಲ್ಲಿ ಬೆಳ್ಳಗಿನ ತೇಪೆ ಅಂಟಿಕೊಳ್ಳುತ್ತಿತ್ತು. ಹಣೆಯ ಲಾಲ್ಗಂಧವನ್ನು ಇನ್ನೂ ಉರುಟು ಮಾಡುತ್ತಾ ಮದುಮಗನಂತೆ ಕಾಣುತ್ತಿದ್ದ ಮಗನನ್ನು ನೋಡಿ “ದೇವರಿಗೊಂದು ನಮಸ್ಕಾರ ಮಾಡಿ ಹೊರಡು ಅಪ್ಪು”ಎಂದರು”

read more
ನಾನಿನ್ನು ಹೋಗಿ ಬರ್ತೀನಿ…. ಅಮ್ಮಾ…!

ನಾನಿನ್ನು ಹೋಗಿ ಬರ್ತೀನಿ…. ಅಮ್ಮಾ…!

ಹೌದು. ಅವನಿಗೆ ಸಂತೋಷಾಗಿತ್ತು. ಮನೆಯಲ್ಲಿ ಯಾರೂ ಇಲ್ಲದೆ ಇರುವುದರಿಂದ, ಅಮ್ಮನ ಜೊತೆ ಅವನೊಬ್ಬನೇ ಇದ್ದದ್ದರಿಂದ ಬಹಳ ಸಂತೋಷವಾಗಿತ್ತು. ಇದ್ದಕಿದ್ದ ಹಾಗೆ, ಇಷ್ಟೆಲ್ಲ ಭಯಂಕರ ತಿಂಗಳುಗಳ ನಂತರ ಅವನ ಮನಸ್ಸು ಬಹಳ ಮೃದುವಾಗಿತ್ತು. ಅಮ್ಮನ ಕಾಲಿಗೆ ಬಿದ್ದ, ಅಮ್ಮನ ಪಾದಕ್ಕೆ ಮುತ್ತಿಟ್ಟ. ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಅತ್ತರು. ಈಗ ಅವಳಿಗೆ ಆಶ್ಚರ್ಯವಿರಲಿಲ್ಲ, ಯಾವ ಪ್ರಶ್ನೆಯನ್ನೂ ಕೇಳಲಿಲ್ಲ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ