ಅಗಸ್ತ್ಯ: ಉಮಾರಾವ್ ಬರೆದ ಕತೆ
“ದಿನಗಳೆದಂತೆ ಶಮಿ ವರುಣನ ಜೊತೆ ಹೆಚ್ಚು ಹೆಚ್ಚು ಕಾಲ ಕಳೆಯತೊಡಗಿದ್ದಳು. ಈಗೀಗ ಹೆಚ್ಚಾಗಿ ಅವರಿಬ್ಬರೇ ತಿರುಗಾಡಲು ಹೋಗುತ್ತಿದ್ದರು. ಅಗಸ್ತ್ಯ ಜೊತೆಗಿದ್ದಾಗಲೂ; ಎಷ್ಟೋ ಸಲ ತಮ್ಮ ಪ್ರಪಂಚದಲ್ಲೇ ಮೈಮರೆತು, ಇವನ ಇರವನ್ನೇ ಮರೆತುಬಿಡುತ್ತಿದ್ದರು. ಅಂತಹ ಸಮಯದಲ್ಲಿ, ಅಗಸ್ತ್ಯನಿಗೆ ತಾನು ಹೊರಗುಳಿದ ಭಾವನೆ ಬಂದರೂ, ಎಳೆಯ ಮಗುವಿನಂತೆ ಆಡಬಾರದು, ಅವರ ಸ್ನೇಹವನ್ನು ಕಂಡು ಚಿಕ್ಕ ಹುಡುಗನಂತೆ ಅಸೂಯೆ ಪಡಬಾರದು…”
ಅಜಯ್ ವರ್ಮಾ ಅನುವಾದಿಸಿದ ‘ವಿಮುಕ್ತೆ’ ಕೃತಿಗೆ ಬಿ.ಎನ್.ಸುಮಿತ್ರಾಬಾಯಿ ಬರೆದ ಮುನ್ನುಡಿ
“ಇಂದಿನ ಸ್ತ್ರೀಯರು ಯಾತನೆ, ಶೋಷಣೆ, ಹಿಂಸೆಗಳನ್ನು ಸುಮ್ಮನೆ ಬಾಯಿಮುಚ್ಚಿಕೊಂಡು ಸಹಿಸಲಾರರು ಎನ್ನುವುದು ಸ್ಪಷ್ಟವಾಗಿಯೇ ಕಾಣುತ್ತದೆ. ರಾಮಾಯಣವನ್ನು ಮೇಲ್ಜಾತಿಗಳು ಸ್ತ್ರೀಯರ ದಮನಕ್ಕೆ ಅಸ್ತ್ರವೆಂಬಂತೆ ಶತಶತಮಾನಗಳಿಂದಲೂ ಬಳಸುತ್ತಲೇ ಬಂದಿರುತ್ತವೆ. ಗಂಡಸರಿಗೆ ಅವರ ಬಲ ಪ್ರದರ್ಶನಕ್ಕೆ, ಅಹಂಕಾರ ಬೆಳೆಸಲಿಕ್ಕೆ, ಯುದ್ಧ ದಾಹಕ್ಕೆ, ರಾಜಕೀಯ ಅಧಿಕಾರಕ್ಕೆ….”
ಶಾಸ್ತ್ರಿ ಮನೆಯ ಅಜ್ಜಿ!: ಓಬಿರಾಯನಕಾಲದ ಕಥಾ ಸರಣಿಯಲ್ಲಿ ಕಟಪಾಡಿ ಶ್ರೀನಿವಾಸ ಶೆಣೈ ಬರೆದ ಕತೆ
“ಅನ್ಯಾಯ ಬುದ್ಧಿಯ ವಕೀಲರು ನ್ಯಾಯಬುದ್ಧಿಯ ರಾಜಸಭೆಗೆ ಬಂದರು. ಬರುವಾಗ ಮೂರು ಎತ್ತಿನ ಹೊರೆ ಕಾನೂನು ಪುಸ್ತಕಗಳನ್ನು ಸಂಗಡ ತಂದಿದ್ದರು. ನ್ಯಾಯ ಬುದ್ಧಿ ಅದನ್ನು ಕಂಡು ಅಂಜಿದ. ಅವನ ರಾಜ್ಯದಲ್ಲಿ ಕಾನೂನು ಕಾಯಿದೆಗಳು ಇರಲಿಲ್ಲ. ಸತ್ಯ ಅಹಿಂಸೆಗಳೇ ಅವರ ಕಾನೂನು. ಪ್ರಜೆಗಳು ಯಾವಾಗಲೂ ನ್ಯಾಯನೀತಿಗಳಿಗೆ ಅನುಸಾರವಾಗಿ ನಡೆಯುತ್ತಿದ್ದರು.”
ಛಿದ್ರಬದುಕಿನ ಚಂದದ ನಿರೂಪಣೆಗಳು: ಎಸ್.ಗಂಗಾಧರಯ್ಯ ಕಥಾಸಂಕಲನದ ಕುರಿತು ಎಚ್.ಆರ್.ರಮೇಶ ಬರೆದ ಲೇಖನ
“ಪ್ರಸ್ತುತದ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಈ ಕಥಾಸಂಕಲನ ಅನೇಕ ಕಾರಣಗಳಿಗಾಗಿ ಮುಖ್ಯವೆನ್ನಿಸುತ್ತದೆ. ಇವು ಶುದ್ಧ ಗ್ರಾಮೀಣ ಬದುಕಿನ ಸೊಗಡಿರುವ ಕತೆಗಳು. ಇಲ್ಲಿಯ ಕತೆಗಳಿಗೆ ಯಾವ ಇಸಮ್ಮುಗಳ ಸೋಂಕು ಇಲ್ಲದೆ, ಕೇವಲ ಕತೆಗಾರ ತಾನು ಕಂಡದ್ದನ್ನು, ಅನುಭವಿಸಿದ್ದನ್ನು, ಬದುಕಿಗೆ…”
ಜಲ ಪ್ರವಾಹ ಮತ್ತು ಮೀನು ಮಾರುವ ಅಮೀನ ಸಾಹೇಬರು..: ವೈ.ಎಸ್. ಹರಗಿ ಬರೆದ ಹೊಸ ಕತೆ
“ಗಲ್ಲಿ ಗಲ್ಲಿಗೆ ಹೋಗಿ “ಮೀನು!.. ಮೀನು ತಾಜಾ ಮೀನು..!!” ಎಂದು ಶಹರದಲ್ಲಿ ಮಾರಾಟಕ್ಕೆ ಹೋಗುತ್ತಿದ್ದ ಸಾಹೇಬರಿಗೆ ಪ್ರಾರಂಭಿಕವಾಗಿ ಸಮಸ್ಯೆಗಳುಂಟಾದವು.. ಯಾವ ಏರಿಯಾದಲ್ಲಿ ಮೀನು ತಿನ್ನುವವರು ನೆಲೆಸಿದ್ದಾರೆಂದು ಗೊತ್ತಾಗಲಾರದೇ ಬ್ರಾಹ್ಮಣರ ಓಣಿಯಲ್ಲಿ ಹೋಗಿ “ಮೀನು..!! ಮೀನು ತಾಜಾ ಮೀನು.!.”
ಓಬಿರಾಯನ ಕಾಲದ ಕಥಾಸರಣಿಯಲ್ಲಿ ಕೊರಡ್ಕಲ್ ಶ್ರೀನಿವಾಸರಾವ್ ಬರೆದ ಕತೆ “ದೇವಸ್ಥಾನ ಪ್ರವೇಶ”
“ಚೀಂಕ್ರನು ಯೋಚಿಸಿ ಯೋಚಿಸಿ ಕೊನೆಗೊಂದು ಸಂಕಲ್ಪ ಮಾಡಿದನು. ತನ್ನ ಇಬ್ಬರು ಮಕ್ಕಳನ್ನು ಮಿಶನ್ ಶಾಲೆಗೆ ಕಳುಹಿಸತೊಡಗಿದ. ತಿಂಗಳು ವರ್ಷಗಳು ಕಳೆದುವು. ಮಕ್ಕಳಿಬ್ಬರೂ ವಿದ್ಯಾಭ್ಯಾಸದಲ್ಲಿ ನಿಪುಣರಾಗುತ್ತ ಹೋದರು. ಹಿರಿಯವನಾದ ಸುಂದರನು ಬಿ.ಎ. ಬಿ.ಎಲ್. ಆಗಿ ಮದ್ರಾಸಿನಲ್ಲೆ ಪ್ರಖ್ಯಾತ ವಕೀಲನೆನಿಸಿಕೊಂಡ.”
ಪುಸ್ತಕಗಳು ಎಂದಿಗೂ ಸಾಯುವುದಿಲ್ಲ: ಟೀನಾ ಶಶಿಕಾಂತ್ ಪುಸ್ತಕದಿಂದ ಒಂದು ಲೇಖನ
“ಇಪ್ಪತ್ತರ ದಶಕದಲ್ಲಿ ಈ ಮಳಿಗೆ ಎಂತಹ ಖ್ಯಾತಿಯನ್ನು ಪಡೆದಿತ್ತೆಂದರೆ ಇಲ್ಲಿ ಜೇಮ್ಸ್ ಜಾಯ್ಸ್, ಎಜ್ರಾ ಪೌಂಡ್, ಹೆಮಿಂಗ್ವೆ, ಫೋರ್ಡ್ ಮ್ಯಾಡಾಕ್ಸ್ ಫೋರ್ಡ್, ಎಫ್. ಸ್ಕಾಟ್ ಫಿಟ್ಜೆರಾಲ್ಡ್ ಮೊದಲಾದ ಲೇಖಕರು ಒಂದೆಡೆ ಕೂತು ಪಾನೀಯ ಸೇವಿಸುತ್ತ ಚರ್ಚೆ ನಡೆಸುತ್ತಿರುವ ದೃಶ್ಯ ಮಾಮೂಲಾಗಿತ್ತು. ಜೇಮ್ಸ್ ಜಾಯ್ಸ್ ಈ ಮಳಿಗೆಯಲ್ಲಿ ತನ್ನ ಆಫೀಸನ್ನೆ ಸ್ಥಾಪಿಸಿಕೊಂಡುಬಿಟ್ಟಿದ್ದ.”
ನೈದಿಲೆಯ ಒಡಲು: ನಾರಾಯಣ ಯಾಜಿ ಬರೆದ ಕತೆ
“ರಾತ್ರಿಯೆಲ್ಲ ನಿದ್ರೆಯಿಲ್ಲದೇ ಹೊರಳಾಡಿದೆ. ಬಳಸಲು ಬಂದ ನಿನ್ನನ್ನು ದೂರ ತಳ್ಳಿದ್ದು ನನ್ನೆದೆಯಲ್ಲಿನ ಜ್ವಾಲಾಮುಖಿಯಲ್ಲಿ ನೀನು ಅಪ್ಪಚ್ಚಿಯಾಗಬಾರದೆಂದು. ಮಿಹಿಕಾ ನಿದ್ರಿಸುವಾಗಲೆಲ್ಲ ನಮ್ಮಿಬರ ಕೈಗಳನ್ನು ತನ್ನ ಮುಖದಮೇಲೆ ಇರಿಸಿ ನಿದ್ರಿಸುತ್ತಿದ್ದಳು. ಅವಳನ್ನು ಆ ಸ್ಥಿತಿಯಲ್ಲಿ ದಿಟ್ಟಿಸಿ ನೋಡಿದಾಗ ಅಳುವೇ ಬಂತು. ಅಂಶುವಿನ ಮಾತು ನೆನಪಿಗೆ ಬಂದು ದುಃಖವೇ ಉಮ್ಮಳಿಸಿತು. ಅವನ ಚರ್ಯೆಗಳೆಲ್ಲದರ ಹಿಂದೆ ಏನೋ ಇರುವ ಸಂಚು ಕಂಡಿತು. ನಿನ್ನ ಮೇಲಿನ ನನ್ನ ಪೊಸೆಸಿವ್ ನೆಸ್ ಅನ್ನು ಅವ ಚನ್ನಾಗಿಯೇ ಉಪಯೋಗಿಸಿಕೊಂಡಿದ್ದ, ನಿನ್ನ ಮೋಸಕ್ಕೆ ನನ್ನದೂ ಮೋಸವೇ ಉತ್ತರವಾಗಬೇಕೆ.”
ನಾಗರಾಜ್ ನವೀಮನೆ ಪುಸ್ತಕಕ್ಕೆ ಕೃಪಾಕರ ಸೇನಾನಿ ಬರೆದ ಮುನ್ನುಡಿ
“ಈ ಎಲ್ಲಾ ಕರಾಳ ಅಧ್ಯಾಯಗಳನ್ನು ತಿಳಿದಿದ್ದರಿಂದ ಸಾಕಾನೆಗಳ ಬಗ್ಗೆಯಾಗಲಿ, ಮಾವುತರ ಬಗ್ಗೆಯಾಗಲಿ ನಮಗೆ ಹೆಚ್ಚು ಆಸಕ್ತಿ ಮೂಡಿರಲಿಲ್ಲ. ಆದರೆ, ಮಾವುತ ಮಾರ ಮತ್ತು ಮುದುಮಲೈ ಆನೆಯನ್ನು ಹತ್ತಿರದಿಂದ ಗಮನಿಸುತ್ತಿದ್ದಾಗ ನಮ್ಮ ನಿಲುವು ಸ್ವಲ್ಪ ಬದಲಾಯಿತು. ಮುದುಮಲೈ ಆನೆ ತಮಿಳುನಾಡಿನ ಮುದುಮಲೈ ಕಾಡಿನ ಸಾಕಾನೆ ಶಿಬಿರದಲ್ಲಿದ್ದ ಒಂದು ಅಪರೂಪದ ಆನೆ.”










