ನಾಗಶ್ರೀ ಅಜಯ್ ಹೊಸ ಅಂಕಣ ಲೋಕ ಏಕಾಂತ ಆರಂಭ
ಮನೆ, ನೆಂಟರಿಷ್ಟರು, ಎಫ್ ಬಿ ಯಲ್ಲಿ ಸಾವಿರಾರು ಸ್ನೇಹಿತರು, ಸಹೋದ್ಯೋಗಿಗಳು ಹೀಗೆ ಪರಿಚಿತರ ಸಂಖ್ಯೆ ಹೆಚ್ಚಿರಬಹುದು. ಆದರೆ ನಮ್ಮ ಅಂತರಂಗದ ಪಿಸುಮಾತಿಗೆ ಕಿವಿಯಾಗುವವರು, ದುರ್ಬಲ ಘಳಿಗೆಯಲ್ಲಿ ಹೆಗಲಾಗುವವರು, ನೀನೇನೇ ಆಡಿದರೂ, ಮೌನವಾಗುಳಿದರೂ ಅರ್ಥಮಾಡಿಕೊಳ್ಳಬಲ್ಲೆ ಎನ್ನುವವರು ಎಷ್ಟು ಜನರಿಗಿದ್ದಾರೆ ಹೇಳಿ? ಅವರಿವರ ಮಾತು ಬಿಡಿ. ಮೊಬೈಲ್ ಬಂದ ಮೇಲಂತೂ ನಮಗೆ ನಾವು ದೊರಕುವುದೂ ಅಪರೂಪವೇ.ಯಾವುದೋ ಪುಟವೊಂದರಲ್ಲಿ ಮುಳುಗಿ ಹೋಗಿರುತ್ತೇವೆ. -ಹೀಗೆ ಬದುಕಿನ ಮಾಮೂಲಿ ಕ್ಷಣಗಳ ನಡುವೆ ನುಸುಳಿಕೊಂಡಿರುವ ಸೂಕ್ಷ್ಮಗಳನ್ನು ಗುರುತಿಸಿ ಬರೆದಿದ್ದಾರೆ ಎಸ್. ನಾಗಶ್ರೀ ಅಜಯ್.
ಇಸ್ಮಾಯಿಲ್ ಬರೆಯುವ ತಳಕಲ್ ಡೈರಿಯ ಮೊದಲ ಪುಟ
ಮಂಗಳೇಶಪ್ಪನವರ ಶ್ರೀಮತಿಯವರಾಗಿದ್ದ ದೇವಮ್ಮ ನಿಜಕ್ಕೂ ದೇವತೆಯಂತವರು. ತಮಗಿದ್ದ ನಾಲ್ಕು ಜನ ಮಕ್ಕಳ ಹಾಗೆ ನಾವು ನಾಲ್ಕು ಜನರನ್ನೂ ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಂತೆಯೇ ಎರಡು ವರ್ಷ ಜತನ ಮಾಡಿದವರು. ಅವರ ತಾಯಿಗರಳು ನಮ್ಮೆಡೆಗೆ ಸದಾ ಮಿಡಿಯುತ್ತಿತ್ತು. ಡಿ.ಇಡಿ ಓದಿದ ಆ ಎರಡೂ ವರ್ಷ ನಮ್ಮ ಊರು, ನಮ್ಮ ತಂದೆ ತಾಯಿ ಯಾರೂ ಅಂದರೆ ಯಾರೂ ನೆನಪಾಗದಂತೆ ನಮ್ಮ ಮೇಲೆ ಪ್ರೀತಿ ತೋರಿಸಿದ್ದೇಕೆಂದು ಈವರೆಗೂ ತಿಳಿದಿಲ್ಲ. ಯಾಕೆಂದರೆ ಆ ಊರಿನಲ್ಲಿ ಇವರ ಕುಟುಂಬವೆಂದರೆ ಒಂದು ಘನತೆ ಮತ್ತು ಗಾಂಭಿರ್ಯವಿತ್ತು. ನಮಗೆ ತಮ್ಮ ಎದೆಯಲ್ಲಿ ವಿಶೇಷ ಜಾಗ ಕೊಟ್ಟಿದ್ದು ನಮ್ಮ ಅದೃಷ್ಟವೆಂದೆ ಹೇಳಬೇಕು. ಮನುಷ್ಯ ಪ್ರೀತಿಯ ಸುಂದರ ಕ್ಷಣಗಳನ್ನು ಸೆರೆಹಿಡಿದು ಬರೆಯುವ ಇಸ್ಮಾಯಿಲ್ ತಳಕಲ್ ಅವರ ಹೊಸ ಅಂಕಣ ತಳಕಲ್ ಡೈರಿ
ತೇರು, ಅಲಾಯಿ ದೇವರು ಮತ್ತು ಚವಂಗಿ ಕಲ್ಲು
ರಂಜಾನ್ ಹಬ್ಬದ ದಿನ ಅಮ್ಮ ನನ್ನನ್ನು ಬೆಳಿಗ್ಗೆಯೇ ಎಬ್ಬಿಸಿ ಗುಡಿಸಲಿನ ನೆರಕೆಯ ಪುಟ್ಟ ಬಚ್ಚಲಲ್ಲಿ ಎಂಟಾಣೆ ಕ್ಲಿನಿಕ್ ಪ್ಲಸ್ ಶಾಂಪೂ ಎಂಬ ಲಕ್ಷುರಿ ಬೆರೆಸಿ ಸ್ನಾನ ಮಾಡಿಸಿ, ಸಕ್ಕರೆ ರೇಟು ಜಾಸ್ತಿ ಎಂದು ಬೆಲ್ಲ ಹಾಕಿದ ಶಾವಿಗೆ ಖೀರು ಮಾಡಿ ಒಂದು ಪುಟ್ಟ ಟಿಫನ್ ಕ್ಯಾರಿಯರಲ್ಲಿ ಇಡೀ ಓಣಿಗೆಲ್ಲಾ ತುಂಬಿಕೊಡುತ್ತಿದ್ದಳು. ಚಿಕನ್ ಕೊಳ್ಳಲು ದುಡ್ಡಿಲ್ಲದೆ ಇದ್ದರೂ ಆಲೂಗಡ್ಡೆ ಸಾರನ್ನೇ ಮಾಡಿ ಅದನ್ನೇ ಚಿಕನ್ ಎಂದು ಅಮ್ಮ ನೂರಿ ನಂಬಿಸಬಲ್ಲವಳಾಗಿದ್ದಳು. ನಮ್ಮ ಓಣಿಯ ಛಲವಾದಿಗಳಾಗಿದ್ದ ರೂಪ, ರೇಖಿ, ಪರುಸ, ಕೆಂಚತ್ತಿ, ಸುಶೀಲತ್ತಿ, ಹಾಲಪ್ಪ ಮಾಮ ಎಲ್ಲರೂ ಶಾವಿಗೆ ಖೀರಿಗಾಗಿ ಕಾಯುತ್ತಿದ್ದರು.
ದಾದಾಪೀರ್ ಜೈಮನ್ ಬರೆಯುವ ಜಂಕ್ಷನ್ ಪಾಯಿಂಟ್ ಅಂಕಣ
ಜಗತ್ತಿನಾದ್ಯಂತ ಹರಡಿಕೊಂಡ ಗಾಂಧೀಜಿಯ ಅವಿನಾಶೀ ಆತ್ಮ
“ಅದ್ಯಾಕೆ ಗಾಂಧಿಯನ್ನು ಮಾತ್ರ ನೆಲದಲ್ಲಿ ನಿಲ್ಲಿಸಿದ್ದೀರ?” ಎಂದು ಕೇಳಲು ಬಾಯಿ ತೆರೆದೆ. ಆತನೇ ಹೇಳಿ ಬಿಟ್ಟ “ಅಲ್ಲಿ ನೋಡಿ ಗಾಂಧಿ ಮತ್ತು ಮಂಡೇಲಾ ಇಬ್ಬರು ಬರೀ ನೆಲದ ಮೇಲಿದ್ದಾರೆ. ಈ ಜಗತ್ತು ಕಂಡ ಅತ್ಯಂತ ಸರಳ ಜೀವಿಗಳು. ಅಬ್ಬರ, ಆಡಂಬರದಿಂದ ದೂರವೇ ಉಳಿದ ಇವರಿಬ್ಬರು ಎಲ್ಲರಿಗಿಂತ ಎತ್ತರದಲ್ಲಿ ನಿಲ್ಲಲು ಎಂದೂ ಬಯಸರು, ಆ ಕಾರಣಕ್ಕಾಗಿಯೇ ಹೀಗೆ ನಿಲ್ಲಿಸಲಾಗಿದೆ”. ಆತನ ಮಾತನ್ನು ಕೇಳಿ ದೇವರನ್ನೂ ವೈಭವದಲ್ಲಿ ಸ್ಥಾವರಗೊಳಿಸುವ ನನ್ನ ಅಲ್ಪಮತಿಯ ತಲೆಯ ಮೇಲೊಂದು ಮೊಟಕಿಕೊಂಡು ಮುಂದ್ಮುಂದೆ ನಡೆದೆ. ʼಕಂಡಷ್ಟೂ ಪ್ರಪಂಚʼ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ
ಓದಿ ತಿಳಿ ಗಿಡವ ನೆಟ್ಟು ಕಲಿ
ಮಣ್ಣು ನಿರ್ಜೀವ ವಸ್ತು ಅಲ್ಲ ಅದು ಜೀವಂತ! ಅದರಲ್ಲಿ ಎಷ್ಟೋ ಕ್ರಿಮಿ ಕೀಟಗಳು, ಶಿಲೀಂದ್ರಗಳು, ಬಹುಮುಖ್ಯವಾಗಿ ಎರೆ ಹುಳುಗಳು ಇವೆಲ್ಲ ಇರಲೇಬೇಕು, ಅವುಗಳನ್ನು ಹೇಗೆ ಹೆಚ್ಚಿಸಬೇಕು, ಮಣ್ಣಿಗೆ ಹೊದಿಕೆ ಹೇಗೆ ಮಾಡಬೇಕು, ಸಸ್ಯಗಳನ್ನು ಸಹಜವಾಗಿ ಹೇಗೆ ಪೋಷಿಸಬೇಕು ಎಂಬೆಲ್ಲ ಹೊಸ ಹೊಸ ವಿಷಯಗಳ ಅರಿವು ನನಗೆ ಈ ಮಹಾನುಭಾವರು ಬರೆದ ಪುಸ್ತಕಗಳ ಮೂಲಕ ತಿಳಿದಿತ್ತು. ಇನ್ನೂ ಹಲವಾರು ಟಿಪ್ಪಣಿ ಮಾಡಿಟ್ಟುಕೊಂಡ ನನ್ನ ಹೊತ್ತಿಗೆಗಳು ಬೃಹದಾಕಾರವಾಗಿ ಬೆಳೆದಿದ್ದವು. ಈಗ ಗಿಡಗಳನ್ನು ಬೆಳೆಯುವ ಸಮಯ ಬಂದಿತ್ತು! ಇದು ಹೊಸದಾಗಿ ರೈತರಾಗುವವರಿಗೆ ಎದುರಾಗುವ ಸಮಸ್ಯೆ. ಸಿಕ್ಕಾಪಟ್ಟೆ ಮಾಹಿತಿಗಳ ಕೇಳಿ ತಬ್ಬಿಬ್ಬಾಗಿ ಬಿಡುತ್ತಾರೆ. ಗುರುಪ್ರಸಾದ್ ಕುರ್ತಕೋಟಿ ಬರೆಯುವ ಅಂಕಣ “ಗ್ರಾಮ ಡ್ರಾಮಾಯಣ”
ಸಮಾನತೆಯ ಆಶಯವನ್ನು ಒರೆಗೆ ಹಚ್ಚುವ ಕತೆ
ಸಿದ್ಧಾಂತಗಳು ಎಷ್ಟೇ ಉದಾತ್ತವಾಗಿದ್ದರೂ ಅದನ್ನು ಜಾರಿಗೊಳಿಸುವ ವಿಧಾನ ಸರಿಯಿಲ್ಲದಿದ್ದರೆ ಎಲ್ಲಾ ಅನರ್ಥವೇ ಆಗುತ್ತದೆ ಎಂಬುದು ಇದರ ಮುಖ್ಯ ಸಾರ. ಒಂದು ತೋಟದಲ್ಲಿರುವ ಪ್ರಾಣಿಗಳೆಲ್ಲಾ ದುಷ್ಟ ಒಡೆಯನ ವಿರುದ್ಧ ಬಂಡೆದ್ದು ತೋಟವನ್ನು ವಶಪಡಿಸಿಕೊಂಡು ಸಮಾನತೆಯ ಸಮಾಜ ಕಟ್ಟಲು ಹೊರಡುವ ಕತೆಯಿದು. ಆದರೆ ಕಾಲಕಳೆಯುತ್ತಾ ಹೋದಂತೆ ನಾಯಕನ ಆದರ್ಶಗಳೆಲ್ಲಾ ಮಣ್ಣುಪಾಲಾಗಿ ಅವನೂ ಒಬ್ಬ ಭ್ರಷ್ಟನೇ ಆಗುತ್ತಾನೆ. ಒಂದು ಕೆಟ್ಟ ಸಮಾಜದಲ್ಲಿನ ಎಲ್ಲಾ ಗುಣಗಳು ಅಲ್ಲೂ ಬರುತ್ತದೆ. ಪ್ರಬಲರಾದ ಹುದ್ದೆಯಲ್ಲಿರುವವರಿಂದ ದುರ್ಬಲರ ಶೋಷಣೆ ನಿರಂತರವಾಗಿ ನಡೆಯುತ್ತದೆ. ಗಿರಿಧರ್ ಗುಂಜಗೋಡು ಬರೆಯುವ “ಓದುವ ಸುಖ” ಅಂಕಣ
ಪ್ರಕೃತಿಯ ರಮ್ಯವಾದ ಮಾಯಾತಾಣ ಮಾರೀಷಿಯಸ್
ಅಲ್ಲಿನ ಶಾಲಾ ಕಾಲೇಜಿನ ಮಕ್ಕಳೆದುರು ಪ್ರಧಾನಮಂತ್ರಿಯೂ ರಸ್ತೆ ಕಾಯುವವನೇ. ಮಾತು ಮಾತಿಗೂ ಪರದೇಶದ ಸಂಸ್ಕೃತಿಯನ್ನು ಹಳಿದೇ ನನ್ನ ಸಂಸ್ಕೃತಿಯ ಹಿರಿಮೆಯನ್ನು ಮೆರೆಯುವ ಮನಸ್ಸಿನೊಳಗೊಂದು ಗಂಟಾನಾದ. ಅಂದಹಾಗೆ ಮಾರೀಷಿಯಸ್ಸಿನ ಅಳತೆ ನೋಡಿ ದಾರಿ ಕ್ರಮಿಸಲು ಕಡಿಮೆ ಸಮಯ ಸಾಕೆಂದು ಅಂದಾಜು ಹಾಕಿದರೆ ತಪ್ಪಾದೀತು. ಕಿರಿದಾದ ದಾರಿಗಳಲ್ಲಿ 45 ಕಿಲೋಮೀಟರ್ ಕ್ರಮಿಸಲು ಬೇಕಾದ ಸಮಯ 90 ನಿಮಿಷಗಳು! ಅಲ್ಲಿಗೆ ಹೋಗುವ ಪ್ರವಾಸ ಖಚಿತವಾಗುವವರೆಗೂ ಮಾರಿಷಿಯಸ್ ಆಫ಼್ರಿಕಾ ಖಂಡಕ್ಕೆ ಸೇರಿದ ದ್ವೀಪ ಎನ್ನುವ ಸಾಮಾನ್ಯಜ್ಞಾನ ನನಗಿರಲಿಲ್ಲ. ʼಕಂಡಷ್ಟೂ ಪ್ರಪಂಚʼ ಅಂಕಣದಲ್ಲಿ ಅಂಜಲಿ ರಾಮಣ್ಣ ಲೇಖನ.
ಕಮಿಷನ್ ಕನಕನ ನಿಧಿ ಶೋಧದ ಕಥೆ
ಅಣೋ, ನನ್ ಪ್ರೀತಿಸ್ತಾ ಇರೋ ಹುಡುಗಿ ತೋರಿಸ್ತೀನಿ.’ ಎಂದು ಫೋನಿನಲ್ಲಿ ವಿ ಪ್ಯಾಟರ್ನ್ ಹಾಕಿ ಲಾಕ್ ತೆರೆದು ‘ಇವಳೇ ನೋಡಣೋ’ ಎಂದು ತೋರಿಸಿದ. ನಾನೆ ಪೂರ್ವಗ್ರಹದಿಂದ ‘ನಿಜಕ್ಕೂ ಪ್ರೀತಿಸ್ತಾ ಇದ್ಯೇನೋ? ಅಥವಾ ಫ್ರೆಂಡ್ಸ್ ವಿಥ್ ಬೆನಿಫಿಟ್ಸ?’ ಅಂತ ಕೇಳಿದೆ. ಅದಕ್ಕವನು ತುಂಬಾ ಕ್ಲಾರಿಟಿಯಿಂದ ‘ನನಗೆ ಅವಳಿಷ್ಟ. ಅವಳಿಗೆ ನಾನಿಷ್ಟ. ಮದ್ವೆ ಯಾಕಗಬಾರದು?’ ಎಂದು ತುಂಬಾ ನಿಖರವಾಗಿ ಹೇಳಿದ. ನಾನು ನನ್ನ ಮನಸ್ಸಿನಲ್ಲಿ ‘ಎಲಾ ಚಾಲಾಕಿ!’ ಎಂದುಕೊಂಡೆ. ದಾದಾಪೀರ್ ಜೈಮನ್ ಬರೆಯುವ ಜಂಕ್ಷನ್ ಪಾಯಿಂಟ್ ಅಂಕಣ
ಕದ್ದವರು, ಕಳಕೊಂಡವರು, ಕ್ಷಮಿಸಿ ಎಂದವರು
ವಸಾಹತುಶಾಹಿ-ಸಂಬಂಧಿತ ಅನ್ಯಾಯಗಳು ಮತ್ತು ತಾರತಮ್ಯಗಳು ಆಸ್ಟ್ರೇಲಿಯದಲ್ಲಿ ನಡೆಯುತ್ತಲೇ ಬಂದಿದೆ. ಆಸ್ಟ್ರೇಲಿಯಾದ ಅಬೊರಿಜಿನಲ್ ಜನರ ಕುಟುಂಬಗಳಿಂದ ಬಲವಂತವಾಗಿ ಅವರ ಮಕ್ಕಳನ್ನು ಬೇರ್ಪಡಿಸಿ ಬಿಳಿಯರ ಕುಟುಂಬಗಳಿಗೆ ಕೊಟ್ಟು ಬಿಳಿಯರ ಸಂಸ್ಕೃತಿ, ಶಿಕ್ಷಣ, ಕ್ರೈಸ್ತಧರ್ಮಗಳಿಗೆ ಅನುಗುಣವಾಗಿ ಮಕ್ಕಳು ಬೆಳೆಯುವಂತಾಗಿದ್ದು ಎರಡು ನೂರು ವರ್ಷಗಳಿಂದ ನಡೆದ ವಿಷಯ ಕಣ್ಣಿಗೆ ರಾಚುವಂತಿದೆ. ಅಂತಹ ‘ಸ್ಟೋಲನ್ ಜನರೇಶನ್’ ನ ದನಿಯಾಗಿದ್ದ ಅಂಕಲ್ ಆರ್ಚಿ ರೋಚ್ ಕಳೆದ ವಾರಾಂತ್ಯದಲ್ಲಿ ತೀರಿಕೊಂಡರು. ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಪತ್ರ








