ಸಾಂಕೇತಿಕ ಸ್ಮರಣೆಯೂ, ವಾಸ್ತವದ ಸವಾಲುಗಳೂ: ಯೋಗೀಂದ್ರ ಮರವಂತೆ ಅಂಕಣ
“ಅಸಂಖ್ಯಾತ ಸಂಪ್ರದಾಯ ಪರಂಪರೆಗಳ ಮಣತೂಕವನ್ನು ಈಗಾಗಲೇ ಹೊತ್ತಿರುವ ಈ ಬ್ರಿಟನ್ ಗೆ ಈಗ ಈ ಪದ್ಧತಿಯ ಭಾರ ಹೆಚ್ಚೆನಿಸಲಿಕ್ಕಿಲ್ಲ. ಇಂತಹ ನೆನೆಕೆಯ ದಿನಕ್ಕೆ ಅಥವಾ ಸ್ಮರಣೆಯ ಹೊತ್ತಿಗೆ ಪ್ರತಿಮನೆಯ ಪ್ರತಿಯೊಬ್ಬರೂ ಪ್ರತೀ ಗುರುವಾರವೂ ಹೊರಬಂದು ಚಪ್ಪಾಳೆ ಸದ್ದು ಮಾಡುವುದು ಖಾತ್ರಿ ಇಲ್ಲ. ಆದರೂ ಬೀದಿಯೊಂದು ತುಂಬುವಷ್ಟು ಕೈಗಳು ಸಪ್ಪಳಗಳು ಕಂಡುಕೇಳುತ್ತವೆ..”
ಲಾಕ್ ಡೌನ್ ನಿಂದ ತುಂಬಿಕೊಂಡ ಗಂಧ: ಪ್ರಸಾದ್ ಶೆಣೈ ಅಂಕಣ
“ಕೊರೋನಾ ಬಂದ ಈ ದುರಿತ ಕಾಲದಲ್ಲೇ ಆಳುವವರು ಬುದ್ದಿ ಕಲಿಯದೇ ನಮ್ಮ ಕಾಡು, ಬೆಟ್ಟ, ನದಿಗಳನ್ನು ನಮ್ಮಿಂದ ಕಸಿಯುವ ಅಂಕೋಲ-ಹುಬ್ಬಳಿ ರೈಲ್ವೇ ಯೋಜನೆಗೆ ಅನುಮತಿ ಕೊಟ್ಟಿದ್ದಾರೆ. ಭದ್ರಾ ನದಿಗೂ ಕಂಟಕ ತರುವ ಯೋಜನೆಯೂ ನಡೆಯುತ್ತಿದೆ. ನಮ್ಮ ಪರಿಸರವನ್ನು ಕಸಿದರೆ ಭವಿಷ್ಯದಲ್ಲಿ ಕೊರೋನಾಕ್ಕಿಂತಲೂ ಭೀಕರ ಸ್ಥಿತಿ ನಿರ್ಮಾಣವಾಗಬಹುದು. ಭೂಕುಸಿತ, ಪ್ರವಾಹಕ್ಕೆ ನಾವೇ ಕಂಬಳಿಹಾಸು ಹಾಸಿದಂತಾಗಬಹುದು…”
ಮುಳ್ಳಯ್ಯನ ಗಿರಿ ಎಂಬ ಆತ್ಮಪ್ರತ್ಯಯ ಕಳಚುವ ದಾರಿ: ಲಕ್ಷ್ಮಣ ವಿ.ಎ. ಅಂಕಣ
“ಇದರ ಹಿಂದಿನ ರಾತ್ರಿ ಕೆಮ್ಮಣಗುಂಡಿಯ ಐ ಬಿ ತಲುಪಿದಾಗ ರಾತ್ರಿ ಹನ್ನೊಂದು ಗಂಟೆ. ರಾತ್ರಿ ಎಂಟುಗಂಟೆಯ ನಂತರ ಇಲ್ಲಿ ಊಟ ಸಿಗುವುದಿಲ್ಲವೆಂದು ಖಾತ್ರಿಯಾದ ಮೇಲೆ ಬೀರೂರಿಲ್ಲೇ ಊಟ ಮಾಡಿದೆವು. ಅದೂ ನಾವು ರಾತ್ರಿಯ ಕೊನೆಯ ಗಿರಾಕಿಗಳಾಗಿದ್ದರಿಂದ ಅಲ್ಲಿಯ ಮೆನು ನೋಡುವ ಗೋಜಿಗೆ ಹೋಗದೆ ಅಲ್ಲಿ ಉಳಿದಿದ್ದ ಅನ್ನ ರಸಂ ನಮ್ಮ ಪಾಲಿನ…”
ಬಿದಿರುಮೆಳೆಯಲ್ಲಿ ಹೂತ ಹೆಣ: ಮುನವ್ವರ್ ಜೋಗಿಬೆಟ್ಟು ಅಂಕಣ
“ಹೊಸ ಛತ್ರಿಯನ್ನು ತಲೆ ಕೆಳಗಾಗಿಸಿ ಅದರೊಳಗೆ ಕಲಕು ನೀರು ಹರಿಯಲು ಬಿಟ್ಟು ಪುಡಿ ಮೀನುಗಳನ್ನು ಹಿಡಿಯುತ್ತಿದ್ದ ಮಹಾ ಪೋಕಿರಿಗಳು ನಾವು. ‘ಮೀನು ಹಿಡಿಯಲಿಕ್ಕಾಗಿಯೇ ಶಾಲೆಗೆ ರಜಾ ಮಾಡುವ ನನ್ನಂತಹ ಮಕ್ಕಳ ಕಾಲವೆಲ್ಲಾ ಎಲ್ಲಿ ಹೋಯಿತು?’ ಅನಿಸತೊಡಗುವಾಗ ಸಮವಸ್ತ್ರ ಮತ್ತು ಬೂಟು ಹಾಕಿ ಬೆಳಗಿನ ಜಾವವೇ ಸ್ಕೂಲ್ ಬಸ್ಸು ಹತ್ತುವ ಮಕ್ಕಳ ಮುಖವೊಮ್ಮೆ ತೇಲಿ ಬಂತು…”
ಕಥೆಗಾರ ಕುವೆಂಪು: ಆಶಾಜಗದೀಶ್ ಅಂಕಣ
“ಇದೇ ಹೊತ್ತಿನಲ್ಲಿ ತನಗೆ ಅನ್ನಕೊಟ್ಟು ಕಾಪಾಡಿದ ಧಣಿಗಳ ಕುಟುಂಬವನ್ನು ಉಳಿಸಬೇಕೆಂದು ನಿಶ್ಚಯ ಮಾಡಿಕೊಂಡ ಲಿಂಗ, ತನ್ನ ತಬ್ಬಲಿ ಮಗನನ್ನು ನೆನೆಸಿಕೊಳ್ಳುತ್ತಲೇ ಯಾರಿಗೂ ತಿಳಿಯದಂತೆ ಹೊಳೆಗೆ ಹಾರಿಕೊಂಡುಬಿಡುತ್ತಾನೆ. ಭಯದಲ್ಲಿದ್ದ ಸುಬ್ಬಣ್ಣನ ಮನೆಯವರಿಗೆ ಅದು ತಿಳಿಯುವುದಿಲ್ಲ. ದೋಣಿ ಪಕ್ಕದೂರನ್ನು ತಲುಪುತ್ತದೆ. ಆಗ ಲಿಂಗ ಇಲ್ಲದಿರುವುದು ಗೊತ್ತಾಗಿ ಎಲ್ಲರೂ ಅವನನ್ನು ಹುಡುಕುತ್ತಾರೆ ಮತ್ತು ಅವನಿಗಾಗಿ ಕಣ್ಣೀರಿಡುತ್ತಾರೆ. ಕೊನೆಗೆ ಅವನ ಆಸೆ ಬಿಡುತ್ತಾರೆ. ಆದರೆ ಮರುದಿನ ಆಶ್ಚರ್ಯವೆಂಬಂತೆ.. “
ಕೆಂಪುಬೀದಿಯ ಹೆಣ್ಣುಮಕ್ಕಳ ಕಾಳಜಿ : ಶ್ರೀಹರ್ಷ ಸಾಲಿಮಠ ಅಂಕಣ
“ನಮ್ಮ ಗೆಳೆಯರೆಲ್ಲ ಕಾರಿನಲ್ಲಿ ತಾವು ಸಲ್ಪದರಲ್ಲಿ ಮಾಡುವುದರಿಂದ ತಪ್ಪಿಸಿಕೊಂಡ ಅನಾಹುತದ ಬಗ್ಗೆ ಹರಟತೊಡಗಿದ್ದರು. ನನ್ನ ಮನಸ್ಸು ಇನ್ನೂ ಪೋಸ್ಟರ್ ನಲ್ಲೇ ನೆಟ್ಟಿತ್ತು. ಅದು ನನ್ನ ಜೀವನದ ಮೊಟ್ಟಮೊದಲ ಮತ್ತು ಇಲ್ಲಿಯವರೆಗಿನ ಏಕೈಕ ವೇಶ್ಯಾಗೃಹಕ್ಕೆ ಕಾಲಿಟ್ಟ ಅನುಭವ. ಆದರೆ ಈ ಅನುಭವದ ಬಗ್ಗೆ ನನಗೆ ಬೇಸರವಿಲ್ಲ. ಬಹುಷಃ ಹೆಣ್ಣನ್ನು ನೋಡಬೇಕಾದ ಒಂದು ಹೊಸ ದೃಷ್ಟಿಕೋನದ ಬಗ್ಗೆ ಕಂಡುಕೊಂಡಿದ್ದೆ. ಸಂಪ್ರದಾಯಸ್ಥ ಮನೆತನದ ಗಂಡಸುಗಳು ಮಿಸೋಜಿನಿಸ್ಟ್ ಗಳಾಗಿರುವುದು…”
ಕೋವಿಡ್ ಕಾಲದ ಚಿಕ್ಕಪುಟ್ಟ ಸಮಾಧಾನಗಳು: ವಿನತೆ ಶರ್ಮಾ ಅಂಕಣ
“ಬಳ್ಳಿ ಡಿಎನ್ಎ ಸರಪಣಿಯಂತೆ ಬೆಳೆದಂತೆಲ್ಲಾ ಅದರ ಜೊತೆಗೂಡಿ ನನ್ನ ಬಾಲ್ಯದ ನೆನಪುಗಳು ಬಿಚ್ಚಿಕೊಂಡು ನಮ್ಮಜ್ಜಿ, ನಮ್ಮಪ್ಪ ಬೆಳೆಯುತ್ತಿದ್ದ ಅವರೆಕಾಯಿ ಫಸಲು ಮನಸ್ಸಿಗೆ ಬಂದು ಕಣ್ಣಮುಂದೆ ಭದ್ರವಾಗಿ ಕೂತಿತ್ತು. ಅದು ಅವರೆ ಬಳ್ಳಿಯೇ ಹೌದು ಎನ್ನುವುದು ನಿಧಾನವಾಗಿ ಖಾತ್ರಿಯಾದಂತೆಲ್ಲಾ ರೋಮಾಂಚನವಾಗಿ ನಾಲ್ಕಾರು ಜನರ ಬಳಿ ಹೇಳಿಕೊಂಡು, ಗಾರ್ಡನಿಂಗ್ ಗುಂಪಿನಲ್ಲಿ ಫೋಟೋ ಹಾಕಿ…”
ಬ್ರಿಟನ್ನಿನ ಸಂಕಟದ ಕಾಲದ ಎರಡು ಪತ್ರಗಳು: ಯೋಗೀಂದ್ರ ಮರವಂತೆ ಅಂಕಣ
“ಕಳೆದ ಮೂರ್ನಾಲ್ಕು ವಾರಗಳಿಂದ ಇಲ್ಲಿನ ಎಲ್ಲ ಸುದ್ದಿ ವಾಹಿನಿಗಳ ಮೂಲಕ ಆಡಳಿತದ ಅತ್ಯಂತ ಜವಾಬ್ದಾರಿಯುತ ಕುರ್ಚಿಯಲ್ಲಿ ಕೂರುವವರು ಆರೋಗ್ಯ ಇಲಾಖೆಯ ಹಿರಿಯ ಸಲಹೆಗಾರರು ನಿತ್ಯವೂ ಎಚ್ಚರಿಕೆಯ ಮುಂಜಾಗರೂಕತಾ ಕ್ರಮಗಳ ಬಗೆಗೆ ನೀಡುತ್ತಿದ್ದ ಸಂದೇಶ ಹಾಗು ಹದಗೆಟ್ಟ ಅರ್ಥವ್ಯವಸ್ಥೆಗೆ ಚೇತರಿಕೆ, ನಿರುದ್ಯೋಗ ಪೀಡಿತರಿಗೆ ತಾತ್ಕಾಲಿಕ ಬೆಂಬಲ ಯೋಜನೆಗಳ ಬಗ್ಗೆ ಹಣಕಾಸು ಮಂತ್ರಾಲಯ ತೆಗೆದುಕೊಂಡ ಹೆಜ್ಜೆಗಳೇ…”
ಮರೆಯಲಾಗದ ಮಠದ ಕೇರಿ ದೀಪಾವಳಿ: ಮಧುರಾಣಿ ಎಚ್ ಎಸ್ ಅಂಕಣ
“ಅಂದು ಮಲಗಿದ ಜಾನಕಮ್ಮನವರು ಮತ್ತೆ ಮೇಲೇಳಲೇ ಇಲ್ಲ. ಒಂದು ವಾರದ ನಂತರ ಇದ್ದ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. ದಿಕ್ಕು ದೆಸೆಯಿಲ್ಲದ ನರಸಿಂಹರಾಯರು ಅಮ್ಮನನ್ನು ಕಳೆದುಕೊಂಡ ಪುಟ್ಟ ಮಗುವಿನಂತೆ ಗೋಳಾಡಿದರು. ಪಕ್ಕದಲ್ಲೇ ಇದ್ದು ಎಲ್ಲವನ್ನೂ ಗಮನಿಸುತ್ತಿದ್ದ ನಮ್ಮ ಮನೆಯವರಿಗೆ ಅವರ ಒಂಟಿತನ ಕರಳು ಕಿವುಚುತ್ತಿತ್ತು.”









