ಚಾಂದಿನಿ….

‘ಗೆ’
ಪ್ರಿಯ ಚಾಂದಿನಿ

ವಿಷಯ : ಈ ಕೆಳಗಿನಂತೆ

ನಿನ್ನ ಹೆಸರು ಗೀಚದ
ಗೋಡೆಗಳೆಲ್ಲ ಬಿದ್ದು ಬಿಡಲಿ
ಹಿಡಿದಿಡಲಾರದಷ್ಟು ಒಲವಿದೆ ಬೊಗಸೆ ಹೃದಯದಲಿ
ನಿನ್ನ ಮುಂಗುರುಳ ಸೋಕದ ಗಾಳಿ ಬೀಸದಿರಲಿ

ಬಟ್ಟಲ ಕಣ್ಣುಗಳಲ್ಲಿ ಬೆಳದಿಂಗಳ ಕನಸುಗಳ ತುಂಬಿರುವೆ
ನಾವಿಬ್ಬರೂ ಕದ್ದಾಡುವ ಪಿಸುಮಾತು ಕಾಯದ ಸಂಜೆ ಸಾಯಲಿ
ನನ್ನ ಸೋಲಿಸುವ ನಿನ್ನ ನಗೆಗೆ ಮೌನದ ಸುಂಕ ಕಟ್ಟುತಿರುವೆ
ನೀನಿರದ ಕನಸುಗಳು ರಾತ್ರಿಗೆ ಬಾರದಿರಲಿ

‘ಇಂದ’
ಅಭಿ

ಗರೀಬ
ಪ್ರೇಮವನಷ್ಟೇ ಕೊಡಬಲ್ಲ
ಕಾವ್ಯವನಷ್ಟೇ ಕಟ್ಟಬಲ್ಲ

ಅಭಿಷೇಕ್ ಬಳೆ ರಾಯಚೂರು ಜಿಲ್ಲೆಯ ಮಸರಕಲ್ ಊರಿನವರು.
ಬಿ.ಎಸ್ಸಿ, ಬಿ.ಎಡ್ ವ್ಯಾಸಂಗ ಮಾಡಿದ್ದಾರೆ
ಓದು ಮತ್ತು ಕವಿತೆ ರಚನೆ ಇವರ ಹವ್ಯಾಸಗಳು