Advertisement
ಅರ್ಚನಾ ಎಚ್. ಬರೆದ ಈ ದಿನದ ಕವಿತೆ

ಅರ್ಚನಾ ಎಚ್. ಬರೆದ ಈ ದಿನದ ಕವಿತೆ

ನೀನೆಂಬ ಉಷ್ಣತೆ…

ಹೂಗರೆದು ಬರಸೆಳೆದು
ಹೊಂಗಿರಣ ಕೊಡಿಸಿ..
ಮಳೆಬಿಲ್ಲ ಮುಡಿಗಿರಿಸಿ
ಹನಿ ಮುತ್ತ ಸುರಿಸಿ…
ನಕ್ಷತ್ರ ಪುಂಜಗಳ
ಕಿವಿಯೋಲೆ ತೊಡಿಸಿ
ಚಂದಮನ ಶೀತಲತೆ
ಬದಿಗಿಟ್ಟು ಸುಖಿಸಿ…

ನಲ್ಲೆ ನೀನೆಂಬ ಉಷ್ಣತೆಯ
ಸಮತೋಲನಕೆ ತರಲು
ನಾ ಪಟ್ಟ ಪಾಡುಗಳ
ಅಗಣಿತ ಗುಣಿತ ಹೆಣೆತ..
ಪ್ರಾಖಂಡ ಪಾಂಡಿತ್ಯ ಅತ್ಯಗತ್ಯ…
“ಯಾಕೋ ಪ್ರೀತಿಸುತಿಲ್ಲ
ನೀವು ನನ್ನ ” ಮತ್ತೆ
ಶುರುವಾದವು ನಿನ್ನ ರಗಳೆ..!

ಹಸಿಬಿಸಿಯ ಮಾತಿಗೆ
ಎನಿತು ಮುನಿಸು..?
ಉಪವಾಸ ವನವಾಸ
ಅನವರತ ತ್ರಾಸ…!!
ಸಂಸಾರ ಬಲು ಗಡುಸು
ಬ್ರಹ್ಮಚರ್ಯವೇ ಸೊಗಸು..!

ಆ ಮಾತು ಹೆಚ್ಚು
ಈ ಮಾತು ಕಡಿಮೆ..
ಅಳೆದೂ ಹೊಯ್ದು
ತಕ್ಕಡಿಯಲಿಟ್ಟ ಬದುಕು…
ಪದಬಳಕೆಯ ಗರಿಷ್ಠವನು ಹಿಡಿದು
ಹಾಗಂದಿರಿ ನೀವು ಹೀಗಂದಿರೆನುತ
ಸಲ್ಲದ ಮಾತುಗಳ
ಮೂದಲಿಸಿ ನುಡಿದು..!

ಅದರಲದೆಷ್ಟು ತೃಪ್ತಿ ನಿನಗೆ!?
ಕ್ಷಣಕೇರಿದ ಪಿತ್ತ ಮತ್ತೆ ಮಗುವ ಚಿತ್ತ..
ಮತ್ತೆ ಸೋಲುವವನು ನಾನೇ
ಆ ಮುಂಗುರುಳ ಮಾಯೆಗೆ
ಇನಿದನಿಯ ಮೋಹಕೆ..!!
ನೀ ಹೇಗಿದ್ದರೂ ಅದುವೆ ಚೆನ್ನ..
ನಾನಷ್ಟು ಪ್ರೀತಿಸುವೆ ನಿನ್ನ ಚಿನ್ನ…!!

ಅರ್ಚನಾ ಎಚ್ ಬೆಂಗಳೂರಿನವರು
ಕತೆ ಮತ್ತು ಕವನ ರಚನೆಯಲ್ಲಿ ಆಸಕ್ತಿ ಹೊಂದಿದ್ದಾರೆ
ದಸರಾ ಕಾವ್ಯ ಪುರಸ್ಕಾರ ಸೇರಿದಂತೆ ಹಲವು ಪುರಸ್ಕಾರಗಳು ಇವರ ರಚನೆಗಳಿಗೆ ಲಭಿಸಿವೆ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ