Advertisement
ದೀಪಾವಳಿ ಹಬ್ಬಕೆ ಆಶಾ ಜಗದೀಶ್‌ ಕವಿತೆ

ದೀಪಾವಳಿ ಹಬ್ಬಕೆ ಆಶಾ ಜಗದೀಶ್‌ ಕವಿತೆ

ಬೆಳಕಿನ ಹಾಡು

ಒಂದೇ ಒಂದು ಹಣತೆ
ನಾಲ್ಕು ಕೋಣೆಯ ಒಂದೇ ಒಂದು
ಪುಟ್ಟ ಗೂಡು
ಬೆಳಗಬೇಕಿದೆ ವಿಶ್ವದೆಲ್ಲ ಬೆಳಕ ಕುಡಿದು
ಕತ್ತಲೆಯ ಚಾದರದ ತುಂಬ
ಮಿಂಚು ಹುಳುಗಳ ಲಾಟೀನು ಹಿಡಿದು

ಒಂದೇ ಒಂದು ಹಣತೆ
ಬೊಗಸೆಯ ತುಂಬ
ಕತ್ತಲೆಯ ಬಿಂದುವಿನಲ್ಲಿ
ಸುತ್ತಲೂ ತುಳುಕುವ ಬೆಳಕಿನ ಬಿಂಬ
ಯಾರ ಎದೆಯ ಕತ್ತಲೆಯೂ
ಉಳಿಯದಿಲ್ಲಿ
ಹಳೆ ಬೆಳಕು ಬೆಳಗುತಿದೆ
ಹೊಸ ಹಣತೆಯ ಕರುಳಲ್ಲಿ

ಬೇಡುವ ಕೈಗಳ ನಂಬಿಕೆಯ
ಬಿತ್ತು ಬತ್ತದೆದೆಯಲಿಮುತ್ತಿರುವ ಕತ್ತಲೆಯ ತುಂಬ
ಹರಿದ ಖೋಲಿಯ ನೂರಾರು ಕತೆಗಳು
ಬರುವ ಬೆಳಕಿನ ಬಸಿರಲಿ
ಹಲವು ಆಶೋತ್ತರಗಳು
ನನಸಾಗಿಸಿ ಉಳಿಸು ಬೆಳಕೇ
ಬೆಳಕಿನ ಸಸಿಯೊಂದನು
ಮೊಳಕೆಯೊಡೆವ ಹಸಿ ಕಾಳ
ಹರಸು ಹೊಸ ತಾವೊಂದನು

ಕೊಚ್ಚಿ ಹೋಗಲಿ ಅಜ್ಞಾನದ ಕತ್ತಲು
ಕೊಚ್ಚಿ ಹೋಗಲಿ ತಮಂಧದ ಬಾಳು
ಕೊಚ್ಚಿ ಹೋಗಲಿ ಸ್ವಾರ್ಥದ ಮಹಲು
ಕೊಚ್ಚಿ ಹೋಗಲಿ ಷಟ್ ದುಷ್ಟರ ಸವಾಲು

ನಮ್ಮ ಜೋಳಿಗೆಯ ತುಂಬ
ಬೆಳಕು ಮಾತ್ರವೇ ತುಂಬಿಕೊಳ್ಳಲಿ
ಬಳಕಿನ ತೊಟ್ಟಿಲ ಕಟ್ಟಿ
ಬೆಳಕಿನ ಜೋಗುಳ ಹಾಡಿ
ಬೆಳಕನ್ನೇ ತೂಗುವಂತಾಗಲಿ

About The Author

ಆಶಾ ಜಗದೀಶ್

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ "ಮೌನ ತಂಬೂರಿ."

1 Comment

  1. Athihallydevraj

    ತುಂಬಾ ಚೆನ್ನಾಗಿದೆ…
    ಶುಭಾಶಯಗಳು….!!!!

    Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ