Advertisement

ಪುಸ್ತಕ ಸಂಪಿಗೆ

‘ಅವಳ ಪಥ’ದ ಹಲವು ಪದರಗಳು: ಡಾ. ಎಲ್.ಜಿ. ಮೀರಾ ವಿಮರ್ಶೆ

‘ಅವಳ ಪಥ’ದ ಹಲವು ಪದರಗಳು: ಡಾ. ಎಲ್.ಜಿ. ಮೀರಾ ವಿಮರ್ಶೆ

ಚೇತನಾ ಹೆಗಡೆಯಂತಹ ಹೊಸ ವಿಮರ್ಶಕಿಯರು ಇವತ್ತು `ಹಿಂದಣ ಹಜ್ಜೆಯ’ ಚೈತನ್ಯವನ್ನು ಮೈಗೂಡಿಸಿಕೊಂಡು, ಆದರೆ, ಅಲ್ಲಿ ವಿರಮಿಸದೆ `ಮುಂದಣ ಹೆಜ್ಜೆ’ಯನ್ನು ಇಡಬೇಕಿದೆ, ಸ್ತ್ರೀ ಅಸ್ಮಿತೆಯ ಹೊಸ ದಿಕ್ಕುಗಳನ್ನು ಶೋಧಿಸಬೇಕಿದೆ. ನಮಗೆ ಹೊರನೋಟಕ್ಕೆ ತೋರುವ ಸ್ತ್ರೀಮಾದರಿಗಳು ಹೊಸಹೊಸದಾಗಿವೆ ಮಾತ್ರವಲ್ಲ, ಇಂದು `ಸ್ತ್ರೀ’ಎಂಬ ವ್ಯಕ್ತಿಯ ಅಸ್ಮಿತೆಯೇ ಬದಲಾಗುತ್ತಿದೆ. ಈಗ ಸ್ತ್ರೀ ಹಾಗೂ ಪುರುಷ ಎಂಬುದು ಅಚ್ಚುಕಟ್ಟಾಗಿ ಗೆರೆ ಕೊರೆದಂತೆ ಪ್ರತ್ಯೇಕಿಸಬಹುದಾದ ಎರಡು ಧ್ರುವಗಳಾಗಿ ಉಳಿದಿಲ್ಲ, ಅದೊಂದು ವರ್ಣಪಟಲ(ಸ್ಪೆಕ್ಟ್ರಮ್), ಅನೇಕ ಆಯ್ಕೆ ಮತ್ತು ಸಂಯೋಜನೆಗಳ ಒಂದು ವಿಸ್ತಾರ.
ಚೇತನಾ ಹೆಗಡೆ `ಅವಳ ಪಥ’ ಕೃತಿಯ ಕುರಿತು ಡಾ. ಎಲ್.ಜಿ. ಮೀರಾ ಬರಹ ನಿಮ್ಮ ಓದಿಗೆ

read more
ಕಲ್ಪನೆಯಿಂದ ವಾಸ್ತವಕ್ಕೆ…: ಗಿರೀಶ್‌ ಕಾಸರವಳ್ಳಿ ಕೃತಿಯ ಆಯ್ದ ಭಾಗ

ಕಲ್ಪನೆಯಿಂದ ವಾಸ್ತವಕ್ಕೆ…: ಗಿರೀಶ್‌ ಕಾಸರವಳ್ಳಿ ಕೃತಿಯ ಆಯ್ದ ಭಾಗ

ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ನನ್ನ ಸಹಪಾಠಿಯಾಗಿದ್ದ ನಾಸೀರುದ್ದೀನ್ ಶಾ ಭಾರತ ಸಿನಿ ಉದ್ಯಮದಲ್ಲಿ ನಾನು ಮೆಚ್ಚುವ ನಟರಲ್ಲಿ ಒಬ್ಬರು. ಯಾವ ಪಾತ್ರವನ್ನು ಕೊಟ್ಟರೂ ಆ ಪಾತ್ರಕ್ಕೆ ವಿಶಿಷ್ಟತೆ ತರಬಲ್ಲ ಶಕ್ತಿ ಇರುವ ಅಪರೂಪದ ನಟ. ಆದರೆ ಈ ಸಿನಿಮಾದಲ್ಲಿ ನನ್ನ ಅನುಭವ ಅಷ್ಟು ಹಿತಕರವಾಗಿರಲಿಲ್ಲ. ಕನ್ನಡದ ಸಂಭಾಷಣೆ ನೆನಪಿಟ್ಟುಕೊಳ್ಳಲು ಅಸಾಧ್ಯವಾಗಿ ಅವರಿಗೆ ಇರುಸುಮುರುಸಾಗುತ್ತಿತ್ತು. ಅದರಿಂದ ಹುಟ್ಟಿದ ಅಸಹನೆ ಚಿತ್ರೀಕರಣದ ವೇಳೆಯಲ್ಲೂ ಪ್ರತಿಧ್ವನಿಸುತ್ತಿತ್ತು.
ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಚಲನಚಿತ್ರಗಳ ಸಂಕಥನ “ಬಿಂಬ ಬಿಂಬನ” ದಿಂದ “ಮನೆ” ಚಿತ್ರದ ಕುರಿತ ಮಾತುಕತೆ ನಿಮ್ಮ ಓದಿಗೆ

read more
ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು, ಮಹಿಳೆಯು ಸಮಾಜದ ಒಂದು ಅಂಗ ಎಂಬುದು ಅಂಬೇಡ್ಕರ್ ಶಕೆ ಆರಂಭಗೊಂಡಾಗಿನಿಂದ ಅನೇಕರ ಕಣ್ಣು ತೆರೆಸಲು ಯತ್ನಿಸುತ್ತಲೇ ಬಂದಿದೆ. ಅದಕ್ಕೆ ಪೂರಕವಾಗಿ ಹಬ್ಬು ಸರ್, ಇಲ್ಲಿ ಆಚಾರ್ಯ ಕೃಪಲಾನಿ ಹೇಳಿದ ಹೀಗೊಂದು ಮಾತನ್ನು ನೆನೆಯುತ್ತಾರೆ, ‘ಹಕ್ಕಿಗೆ ಒಂದೇ ರೆಕ್ಕೆಯಿಂದ ಹೇಗೆ ಹಾರಲು ಸಾಧ್ಯವಿಲ್ಲವೋ ಹಾಗೆಯೇ ಮಹಿಳೆಯ ಅಭಿವೃದ್ಧಿಯಾಗದೇ ಇದ್ದಂತಹ ಸಮಾಜ ಕೂಡ ಅಂಥದೊಂದು ಅಂಗವಿಕಲತೆಯಿಂದ ಬಳಲುತ್ತದೆ’ ಈ ಮಾತು ಮಹಿಳೆಯರ ಸಮಾನ ಹಕ್ಕುಗಳನ್ನು ಪ್ರತಿಪಾದಿಸುತ್ತದೆ.
ಅರುಣಕುಮಾರ ಹಬ್ಬು ಅವರು ಬರೆದ “ಮಹಿಳೆ ಮತ್ತು ಮಾಧ್ಯಮ – ಒಂದು ಅವಲೋಕನ” ಕೃತಿಯ ಕುರಿತು ಸುನಂದಾ ಪ್ರಕಾಶ ಕಡಮೆ ಬರಹ

read more
ಚಲನಚಿತ್ರ ಭಾಷೆಯ ಕಲಿಕೆ ಮತ್ತು ಘಟಶ್ರಾದ್ಧ…

ಚಲನಚಿತ್ರ ಭಾಷೆಯ ಕಲಿಕೆ ಮತ್ತು ಘಟಶ್ರಾದ್ಧ…

ಸಿನಿಮಾ ಮಾಧ್ಯಮವನ್ನು ಸಶಕ್ತವಾಗಿ ದುಡಿಸಿಕೊಳ್ಳುವವರು ದೃಶ್ಯ ಬಿಂಬಗಳ ಜೊತೆಗೇ, ಶಾಬ್ದಿಕ ರೂಪದ ಬಿಂಬಗಳನ್ನೂ ಸೃಷ್ಟಿಮಾಡುತ್ತಿರುತ್ತಾರೆ. ಸಂಕಲನ ತಂತ್ರದ ಮೂಲಕವೂ ಬಿಂಬವನ್ನು ಸಂಶ್ಲೇಷಿಸುತ್ತಿರುತ್ತಾರೆ. ವಾಸ್ತು, ವೇಷಭೂಷ, ಸೂಕ್ತ ನಟ ನಟಿಯರ ಬಳಕೆ, ಇತ್ಯಾದಿ ಅಂಶಗಳು ಪರಿಣಾಮಕಾರಿಯಾದ ಬಿಂಬ ನಿರ್ಮಾಣಕ್ಕೆ ಎಷ್ಟು ಅಗತ್ಯವೋ ಸಮಯದ ನಿರ್ವಹಣೆಯಲ್ಲಿ ಕೈಗೋಲಾಗಿ ಬರುವ ಸಂಗೀತ, ಚಿತ್ರದ ಲಯ, ತಂತ್ರ ಸೌಷ್ಠವಗಳೂ ಬಿಂಬ ನಿರ್ಮಾಣದಲ್ಲಿ ಅಷ್ಟೇ ಮುಖ್ಯ ಪಾತ್ರ ವಹಿಸುತ್ತಿರುತ್ತವೆ.
ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಚಲನಚಿತ್ರಗಳ ಸಂಕಥನ “ಬಿಂಬ ಬಿಂಬನ”  ನಾಳೆ ಬಿಡುಗಡೆಯಾಗಲಿದ್ದು, ಈ ಕೃತಿಗೆ ಅವರು ಬರೆದ ಮಾತುಗಳು ಹಾಗೂ ಘಟಶ್ರಾದ್ಧ ಚಲನಚಿತ್ರದ ಕುರಿತ ಮಾತುಕತೆಯ ಆಯ್ದ ಭಾಗ ನಿಮ್ಮ ಓದಿಗೆ

read more
ಗಿರೀಶ್‌ ಕಾಸರವಳ್ಳಿ ಚಿತ್ರಗಳ ಸಂಕಥನ

ಗಿರೀಶ್‌ ಕಾಸರವಳ್ಳಿ ಚಿತ್ರಗಳ ಸಂಕಥನ

ನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್ದುದು ಒಂದೋ ಹಾಡು, ನೃತ್ಯದ ಚಿತ್ರಣದಲ್ಲಿ, ಇಲ್ಲವೇ ಫೈಟಿಂಗ್‌ಗೆ ಹಿನ್ನೆಲೆಯಾಗಿ. ಅಲ್ಲೆಲ್ಲಾ ಮಳೆಯು ನಡೆಯುತ್ತಿರುವ ಘಟನೆಗೆ ಹಿನ್ನೆಲೆ ಒದಗಿಸುತ್ತಿತ್ತು ಅಷ್ಟೇ. ಅದು ಪಾತ್ರವಾಗಿ ಬಂದ ಉದಾಹರಣೆ ಕಡಿಮೆ. ಹಾಗೆ ಮಾಡಿದಾಗಲೂ ಮಳೆಯು ಸಿನಿಮಾಕ್ಕೆ ತರುವ ರಮ್ಯತೆಗೇ ಹೆಚ್ಚು ಒತ್ತು ಇರುತ್ತಿತ್ತು. ಹಾಗಾಗದೇ ಮಳೆ ಒಂದು ಪಾತ್ರವೇ ಆಗಬೇಕು ಎಂಬ ಉದ್ದೇಶ ನಮ್ಮದಾಗಿತ್ತು.
ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಚಲನಚಿತ್ರಗಳ ಸಂಕಥನ “ಬಿಂಬ ಬಿಂಬನ” ದಿಂದ “ದ್ವೀಪ” ಚಿತ್ರದ ಕುರಿತ ಮಾತುಕತೆ ನಿಮ್ಮ ಓದಿಗೆ

read more
ಮುಳುಗಡೆಯ ವಿದ್ಯಮಾನಗಳಿಗೆ ಹಿಡಿದ ಕೈಗನ್ನಡಿ: ಕೆ.ಆರ್.ಉಮಾದೇವಿ ಉರಾಳ ಬರಹ

ಮುಳುಗಡೆಯ ವಿದ್ಯಮಾನಗಳಿಗೆ ಹಿಡಿದ ಕೈಗನ್ನಡಿ: ಕೆ.ಆರ್.ಉಮಾದೇವಿ ಉರಾಳ ಬರಹ

ಪರಿಹಾರದ ಹಣ ಕೈಗೆ ಬರುತ್ತಲೇ ಕೆಲವರು ಕೃಷಿ ವಿಚಾರ ಕೈಬಿಟ್ಟು ಬಸ್ ಅಂಗಡಿ ಹೋಟೆಲ್ ತೆರೆದಿದ್ದು ಅಭ್ಯಾಸವಿಲ್ಲದ ಈ ಉದ್ಯಮಗಳಲ್ಲಿ ಕೈಸುಟ್ಟುಕೊಂಡಿದ್ದರು. ಬಡ್ಡಿ ಆಸೆಗೆ ಬಿದ್ದು ಇದ್ದ ಹಣವನ್ನೆಲ್ಲ ಕಳೆದುಕೊಂಡಿದ್ದರು. ಕೆಲವರು ಅಂದಾದುಂದಿ ವೆಚ್ಚಮಾಡಿ ಸಾಲಗಾರರಾಗಿ ಬರಿಗೈಯಾದರು. ಇಷ್ಟಾಗಿಯೂ ನಾಲ್ಕು ದಶಕಗಳ ನಂತರವೂ ಇನ್ನೂ ಪರಿಹಾರದ ಹಣ ಬರದಿರುವ ಪ್ರಸಂಗಗಳೆಷ್ಟೋ ಇವೆ ಎನ್ನುತ್ತಾರೆ ಲೇಖಕರು.
ಎಂ. ಎಂ. ಪ್ರಭಾಕರ ಕಾರಂತ್ ಬರೆದ “ಮುಳುಗಡೆ ಒಡಲಾಳ” ಕೃತಿಯ ಕುರಿತು ಕೆ.ಆರ್.ಉಮಾದೇವಿ ಉರಾಳ ಬರಹ ನಿಮ್ಮ ಓದಿಗೆ

read more
ಆಧುನಿಕ ಮನೋಧರ್ಮದ ಭರತನ ಚರಿತ್ರೆ: ಚಂದ್ರಮತಿ ಸೋಂದಾ ಬರಹ

ಆಧುನಿಕ ಮನೋಧರ್ಮದ ಭರತನ ಚರಿತ್ರೆ: ಚಂದ್ರಮತಿ ಸೋಂದಾ ಬರಹ

ಪಿತೃಪ್ರಧಾನ ವ್ಯವಸ್ಥೆಯ ದೌರ್ಬಲ್ಯಗಳನ್ನು ಸೂಕ್ಷ್ಮವಾಗಿ ಎತ್ತಿ ತೋರಿಸುತ್ತಲೇ ಅದಕ್ಕೆ ವಿಭಿನ್ನವಾದ ಇನ್ನೊಂದು ಮುಖವೂ ಸಾಧ್ಯವಿದೆ ಎನ್ನುವ ಪಿಸುನುಡಿಯೊಂದಿಗೆ ಹೊರಡುವ ಕೃತಿ ನಿಧಾನವಾಗಿ ಅದರ ಸಾಧ್ಯತೆಯನ್ನು ಅನಾವರಣಗೊಳಿಸುತ್ತ, ಸರಿಯಾದ ದಾರಿ ಹೀಗಿರಬೇಕು ಎನ್ನುವಂತೆ ಮುಂದುವರಿಯುತ್ತದೆ. ರಾಜಸತ್ತೆಯಲ್ಲಿ ಹಿರಿಮಗನಿಗೆ ಪಟ್ಟಗಟ್ಟಿದ ಮೇಲೆ ಉಳಿದ ಅಣ್ಣತಮ್ಮಂದಿರು, ಪರಿವಾರದವರು ರಾಜನನ್ನು ಅವಲಂಬಿಸಿಯೇ ಇರಬೇಕೆನ್ನುವ ತಥಾಗತ ನಂಬಿಕೆಯಲ್ಲಿ ಉಳಿದವರ ಮನಃಸ್ಥಿತಿ ಏನಿದ್ದೀತು? ಹೇಗಿದ್ದೀತು?
ಡಾ. ಆರ್ ಸುನಂದಮ್ಮ ಬರೆದ “ಭರತಕಲ್ಪ” ಕೃತಿಯ ಕುರಿತು ಡಾ. ಚಂದ್ರಮತಿ ಸೋಂದಾ ಬರಹ ನಿಮ್ಮ ಓದಿಗೆ

read more
ಒಂದು ಆಕಾಶ, ಹಲವು ಏಣಿಗಳು: ಯೋಗೀಂದ್ರ ಮರವಂತೆ ಬರಹ

ಒಂದು ಆಕಾಶ, ಹಲವು ಏಣಿಗಳು: ಯೋಗೀಂದ್ರ ಮರವಂತೆ ಬರಹ

ವಿಮಾನಗಳ ಚರಿತ್ರೆಯನ್ನು ಬರೆದವರು ಬೇರೆಬೇರೆ ಕಾಲಘಟ್ಟದಿಂದ ಸ್ಥಳದಿಂದ ಘಟನೆಗಳಿಂದ ತಮ್ಮ ಅಧ್ಯಯನ, ಪುರಾವೆ ಹಾಗು ಅಂದಾಜುಗಳನ್ನು ವಿಶದೀಕರಿಸುವುದಿದೆ. ಆಕಾಶಕ್ಕೆ ನೆಗೆಯಬೇಕು ಎನ್ನುವ ಉತ್ಕಟ ಆಸೆ ಮನುಷ್ಯರಿಗೆ ಎಂದು ಬಂತೋ ಕರಾರುವಕ್ಕಾಗಿ ಹೇಳಿದವರಿಲ್ಲವಾದರೂ ಬಾನಿನಲ್ಲಿ ಸ್ವಚ್ಛಂದವಾಗಿ ಹಾರಿ ಇಳಿಯುವ ಹಕ್ಕಿಗಳನ್ನು ನೋಡಿ ನಮಗೂ ಹಾರುವ ಕನಸು ಹುಟ್ಟಿತು. ಮತ್ತೆ ಆ ನಿಟ್ಟಿನಲ್ಲಿ ಪ್ರಯತ್ನಗಳು ನಿರಂತರವಾಗಿ ಸಾಗಿದವು ಎನ್ನುವ ಉಲ್ಲೇಖಗಳು ಓದಿನಲ್ಲಿ ಸಿಗುತ್ತವೆ.
ಯೋಗೀಂದ್ರ ಮರವಂತೆ ಬರೆದ ವಿಮಾನ ಲೋಕದ ಅಚ್ಚರಿ, ಅನುಭವಗಳ ಕುರಿತ ಹೊಸ ಕೃತಿ “ಏರೋ ಪುರಾಣ”ದ ಒಂದು ಬರಹ ನಿಮ್ಮ ಓದಿಗೆ

read more
ಮೊಟ್ಟೆಕೋಳಿಯೇ ಬೇಕೆಂದ ಅಳಿಯರು!: ಸೂರ್ಯಕೀರ್ತಿ ಪ್ರಬಂಧ

ಮೊಟ್ಟೆಕೋಳಿಯೇ ಬೇಕೆಂದ ಅಳಿಯರು!: ಸೂರ್ಯಕೀರ್ತಿ ಪ್ರಬಂಧ

‘ಏನೇ ನಿಮ್ಮವ್ವ ಅಳಿಯಂದ್ರ ನೋಡೋ ಹುಟ್ಟೇನೆ ಇದು, ಇದೊಂದು ಬಾಳಾಟ ಅಂತ ನಾನು ಅಂದುಕೊಂಡಿರಲಿಲ್ಲ, ಅಕ್ಕಪಕ್ಕದವರೆಲ್ಲ ಎಷ್ಟು ಚೆಂದವಾಗಿ ಅಳಿಯರನ್ನು ಕರ್ದು ಕಳಿಸ್ತಾರೆ ಅನ್ನೋದ್ನ ನೋಡಿ ಕಲಿಬೇಕು’ ಎಂದೆಲ್ಲ ಅಂದಿದ್ದನ್ನು ನೋಡಿ. ಮೇಯಲು ಹೋದ ಕೋಳಿಗಳ ಬಿಡದೆ ಅಟ್ಟಾಡಿಸಿಕೊಂಡು ಹಿಡಿದು ಕೂಯ್ದು ತಿಂದು ತಮ್ಮ ಹೆಂಡತಿಯರ ಜೊತೆ ಹೊರಟು ನಿಂತರು. ಅಜ್ಜಿ ಮಕ್ಕಳ ಖುಷಿಯ ನೋಡಿ ತನ್ನೆರಡು ಕೈಗಳ ಎತ್ತಿ ಆಶೀರ್ವಾದದ ಜೊತೆ ಒಂದಿಷ್ಟು ಕಣ್ಣೀರು ಹಾಕಿದಳು. ಎಲ್ಲರಿಗೂ ತಿಂಡಿ ತಿನಸುಗಳ ಕಟ್ಟಿ ‘ಜೋಪಾನ’ ಎಂದು ಹೇಳಿದಳು.
ಇತ್ತೀಚೆಗೆ ಬಿಡುಗಡೆಯಾದ ಸೂರ್ಯಕೀರ್ತಿ ಅವರ ಪ್ರಬಂಧಗಳ ಸಂಕಲನ “ಮಳೆ”ಯ ಒಂದು ಪ್ರಬಂಧ ನಿಮ್ಮ ಓದಿಗೆ

read more

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನಮ್ಮನ್ನೂ ಮನುಷ್ಯರಂತೆ ಕಾಣಿ: ಈರಣ್ಣ ಬೆಂಗಾಲಿ ಕಾದಂಬರಿಯ ಪುಟಗಳು

“ನಾವೂ ಮನುಷ್ಯರೇ, ದಯಮಾಡಿ ನೀವು ನಮ್ಮನ್ನು ಮನುಷ್ಯರಂತೆ ಕಾಣಿ” ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಯಜಮಾನನಿಗೆ ತೀವ್ರ ಮುಜುಗರವಾಗುತ್ತದೆ. ಒಳ್ಳೆಯವರು, ಕೆಟ್ಟವರು ಎಂಬುದು ಅವರ ಜಾತಿಯಿಂದಲ್ಲ, ಬದಲಾಗಿ…

Read More

ಬರಹ ಭಂಡಾರ