ಪ್ರಸ್ತುತ ಕಾಲಘಟ್ಟ ಮತ್ತು “ಬೆಂಕಿಯ ನೆರಳು”: ಎನ್.ಎಸ್. ಚಿದಂಬರರಾವ್ ಕಾದಂಬರಿಯ ಕುರಿತು ಸಿಂಧೂರಾವ್ ಟಿ. ಬರಹ
ಎಲ್ಲಾ ಕಾಲದಲ್ಲೂ ತಮ್ಮ ತಮ್ಮ ಪರಿಸ್ಥಿತಿಗಳಲ್ಲಿ ಸ್ವತಂತ್ರ ಆಲೋಚನೆ ಮತ್ತು ನಡವಳಿಕೆ ತೋರುವುದಕ್ಕೆ ಎಲ್ಲ ಯುವಜನಾಂಗವೂ ಆಶಿಸುತ್ತಲೆ ಇರುತ್ತದೆ. ಅದು ಸಹಜ ಮತ್ತು ಹಾಗೇ ಇರಬೇಕಾದ್ದು. ಕಾಲಕ್ಕೆ ತಕ್ಕಂತೆ ಅವರ ಅಭಿವ್ಯಕ್ತಿಗಳಿಗೆ ನಡವಳಿಕೆಗಳಿಗೆ ಕಡಿವಾಣಗಳು ಬಿಗಿಯಾಗಿ, ಸಡಿಲಾಗಿ, ಉದುರಿಹೋಗಿ ಎಲ್ಲಾ ಆಗಿದೆ. ಈ ಸ್ಥಿತ್ಯಂತರದ ಕಾಲವನ್ನು ಅವರು ಆತ್ಮವಿಶ್ವಾಸ, ಓದು, ಆರ್ಥಿಕ ಸ್ವಾತಂತ್ರ್ಯ ಇದ್ದಾಗ ಹೇಗೆ ನಿಭಾಯಿಸುತ್ತಾರೆ ಎಂಬುದು ಯಶಸ್ಸು ಅಥವಾ ದುರಂತದ ಪರಿಣಾಮವನ್ನು ತಂದಿಡುತ್ತದೆ. ಓದು ಬರಿದೆ ಡಿಗ್ರಿಗಳಾದಾಗ, ಕೆಲಸದ ಪದಕಗಳಾದಾಗ ಏನಾಗುತ್ತದೆ ಎಂಬ ಪರಿಣಾಮವನ್ನು ನೋಡುತ್ತಲೇ ಇದ್ದೇವೆ.
ದಿವಂಗತ ಎನ್.ಎಸ್. ಚಿದಂಬರರಾವ್ ಅವರ “ಬೆಂಕಿಯ ನೆರಳು” ಕಾದಂಬರಿಯನ್ನು ಪುಸ್ತಕ ಮನೆ ಪ್ರಕಾಶನ ಮರುಮುದ್ರಿಸಿದ್ದು, ಈ ಕೃತಿಯ ಕುರಿತು ಸಿಂಧುರಾವ್ ಟಿ. ಬರಹ ನಿಮ್ಮ ಓದಿಗೆ
ಉಪಾಸೊ: ಶ್ರೀಧರ ಬಳಗಾರ ಕಾದಂಬರಿ “ಬಲಿಪಾದ”ದ ಆಯ್ದ ಭಾಗ
ಅತ್ತ ಶಡ್ಡುವಿನ ಪ್ರೇಮ ಭಂಗಪಡಿಸಲು ಮುಂದಾಗಲಾರದೆ ಇತ್ತ ಗಂಡ ಊರಿಗೆ ಬಹಿಷ್ಕಾರ ಹಾಕುವುದನ್ನು ನೋಡಲಾರದ ಸಂಕಟದಲ್ಲಿ ಜಾನಕೆ ನರಳುತ್ತಿದ್ದಳು. ಅವಳ ಸನಿಹ ನಿದ್ದೆ ಸುಳಿಯದು. ಹೊರಳಾಡಿ ಮಗ್ಗಲು ಬದಲಿಸಿದಳು. ನಿಟ್ಟುಸಿರುಬಿಟ್ಟಳು. ಶ್ವಾಸ ಎದೆಯೊಳಗೆ ಸಿಕ್ಕಿದಂತಾಗಿ ಎದ್ದು ಕೂತಳು. ಹೊಸ್ತಿಲ ಪಕ್ಕ ಉರಿಯುತ್ತಿದ್ದ ನಂದಾದೀಪದ ಮಂದ ಬೆಳಕಿನಲ್ಲಿ ಚಾಪೆಯ ಮೇಲೆ ಅಂಗಾತ ಮಲಗಿದ್ದ ಉಪಾಸೊ ಅಂಕಣ ದಿಟ್ಟಿಸುತ್ತಿದ್ದ. ಹಗಲಲ್ಲಿ ಹಗುರಾಗಿ ಕಾಣುತ್ತಿದ್ದ ಹಗರಣಗಳು ರಾತ್ರಿ ಕತ್ತಲಲ್ಲಿ ಕಾಮದಂತೆ ತೀವ್ರವಾಗಿ ಕಾಡುತ್ತಿದ್ದವು. ನಿದ್ದೆಯಿಲ್ಲದ ನಿಶ್ಯಬ್ದ ಏಕಾಂತದಲ್ಲಿ ನೆನಪುಗಳು ಕಿಕ್ಕಿರಿಯುತ್ತಿದ್ದವು.
ಶ್ರೀಧರ ಬಳಗಾರ ಕಾದಂಬರಿ “ಬಲಿಪಾದ”ದ ಆಯ್ದ ಭಾಗ ನಿಮ್ಮ ಓದಿಗೆ
ಜಯಲಕ್ಷ್ಮೀ ಪಾಟೀಲ್ ಆತ್ಮಕಥನ “ತಿಟ್ಹತ್ತಿ ತಿರುಗಿ”ಯ ಆಯ್ದ ಭಾಗ
ಒಂದೆರಡು ದಿನಗಳ ನಂತರ ಅಪ್ಪಾ ದಾಡಿ ಮಾಡಿಟ್ಟುಕೊಂಡ ಟೋಪಾಜ್ ಬ್ಲೇಡನ್ನು ತೆಗೆದುಕೊಂಡು, ಬಲಗಡೆಯ ಮುಂದೆಲೆಯಲ್ಲಿನ ಕಿರುಬೆರಳು ಗಾತ್ರದ ಕೂದಲನ್ನು ಕಣ್ಣೆದುರು ಎಳೆದು ತಂದು ಕರ್ರ್ ಕರ್ರ್ ಎಂದು ಕತ್ತರಿಸಿಕೊಂಡು, ಶಾಂತಾ ಹೇಳಿದಂತೆ, ಅದಕ್ಕೆ ನೀರು ಸೋಕಿಸಿ ಬೆರಳಲ್ಲಿ ಸುರಳಿ ಸುತ್ತಿಹಿಡಿದು ಬಿಟ್ಟೆ. ಅವಳಂತೆ ಗುಂಗುರಾಗದೆ ಕತ್ತರಿಸಿದ ಕೂದಲು ಹಾಗೆಲ್ಲ ಸುಲಭದಲ್ಲಿ ಮಣಿಯಲಾರೆವು ಎಂದು ಸೆಟೆದು ನಿಂತಿದ್ದವು. ಮತ್ತೆ ಮತ್ತೆ ಪ್ರಯತ್ನಿಸುವ ನನ್ನ ಸರ್ಕಸ್ ಅಪ್ಪಾರ ಕಣ್ಣಿಗೆ ಬಿತ್ತು. ಏನದು? ಅಂದರು. ಯಾವುದೇ ಅಳುಕಿಲ್ಲದೇ ನಾನು, ಶಾಂತಾ ಮಾಡಿಕೊಂಡಿದ್ದನ್ನು ನೋಡಿ ನನಗೂ ಆಸೆಯಾಗಿ ಹೀಗೆ ಮಾಡಿಕೊಂಡಿದ್ದೇನೆ ಎಂದೆ.
ಜಯಲಕ್ಷ್ಮೀ ಪಾಟೀಲ್ ಆತ್ಮಕಥನ “ತಿಟ್ಹತ್ತಿ ತಿರುಗಿ”ಯ ಆಯ್ದ ಭಾಗ ನಿಮ್ಮ ಓದಿಗೆ
ನೆಲದ ಕಾವು ಮುಗಿಲ ತಾಕಿ: ರಾಜಕುಮಾರ ಮಡಿವಾಳರ ಕವನ ಸಂಕಲನಕ್ಕೆ ಸತೀಶ ಕುಲಕರ್ಣಿ ಮುನ್ನುಡಿ
ಈ ಕವಿತೆಗಳನ್ನು ಓದಿದಾಗ ಕೆ.ಎಸ್.ಎನ್ ರ ದಾಂಪತ್ಯ ಪ್ರೀತಿ, ಬೇಂದ್ರೆ ಅವರ ಭಾಷಾ ಗತ್ತು, ಕಂಬಾರರ ಜನಪದಿಯ ಕಥಾನಕಗಳು ನೆನಪಾಗದೇ ಇರುವುದಿಲ್ಲ. ಆದರೆ ಇವರನ್ನೆಲ್ಲ ಅದುಮಿ, ತಮ್ಮತನದ ಈಜುಗಾರಿಕೆಯನ್ನು ಮಡಿವಾಳರ ಕಲಿತಿದ್ದಾರೆ. ಕಾವ್ಯ ಪರಂಪರೆ ಪ್ರತಿ ಕವಿಯನ್ನು ಬೆನ್ನಟ್ಟುತ್ತದೆ. ದತ್ತಿ ದೇಣಿಗೆಯನ್ನು ನೀಡುತ್ತಲೇ ಇರುತ್ತದೆ. ಕೊನೆಗೂ ನಮ್ಮ ಹೆಜ್ಜೆ ಗುರುತುಗಳು ಬೇರೆಯವೇ ಆಗಿರಬೇಕು. ಈ ಮಾತಿನಂತೆ ರಾಜಕುಮಾರ ಗೆದ್ದಿದ್ದಾರೆ. ತುಸು ತೆಳು ಛಾಯೆ ಬಿಟ್ಟರೆ ಯಾರ ಹಂಗಿನ ನೆರಳಲ್ಲಿಲ್ಲ. ಬಾನ ಸ್ವತಂತ್ರ ಹಕ್ಕಿಯಂತೆ ಈ ನೆಲದ ಗಾಳಿ ಬೆಳಕು ಸಂವೇದನೆಗಳಲ್ಲಿ ಈಜು ಹೊಡೆದಿದ್ದಾರೆ.
ರಾಜಕುಮಾರ ಮಡಿವಾಳರ “ನೆಲದ ಕಾವು ಮುಗಿಲ ತಾಕಿ” ಕವನ ಸಂಕಲನಕ್ಕೆ ಸತೀಶ ಕುಲಕರ್ಣಿ ಬರೆದ ಮುನ್ನುಡಿ
ಶಬ್ದ ಸಂವೇದನೆಯ ಒಳ ವಿನ್ಯಾಸ “ಘಾಚರ್ ಘೋಚರ್”: ದೇವಿಕಾ ನಾಗೇಶ್ ಬರಹ
“ಘಾಚರ್ ಘೋಚರ್” ಒಂದು ‘ನೀಳ್ಗತೆ ಎಂದು ಕೃತಿಯ ಲೇಖಕ ವಿವೇಕ ಶಾನಭಾಗ ಕರೆದರೂ ಇದು ಎರಡು ತಲೆಮಾರಿನ ಜೀವನಪಯಣದ ಓಟದಲ್ಲಿನ ಏಳುಬೀಳುಗಳನ್ನು ಪಲ್ಲಟವನ್ನೂ ಅಮೂಲಾಗ್ರವಾಗಿ ದಾಖಲಿಸುತ್ತದೆ. ‘ಘಾಚರ್ ಘೋಚರ್ʼ ಈ ಯುಗಳ ಪದ ನಮ್ಮ ಇಡೀ ಬದುಕೆ ಗೋಜಲಾಗಿರುವ ಕ್ರಮಕ್ಕೆ ಭಾವ ಪ್ರತಿನಿಧಿಯಂತೆ ಅನುರಣನಗೊಳ್ಳುತ್ತದೆ’ ಎಸ್. ಆರ್. ವಿಜಯಶಂಕರ್ ಮಾತಿದು. ಆದರೆ ಎಪ್ಪತ್ತು ಪುಟಗಳ ಕಿರು ಕಾದಂಬರಿ ಗಾತ್ರದ ಈ ಕಥೆಯ ಪಾತ್ರಗಳು ಒಂದು ಕುಟುಂಬದ ಭೂಮಿಕೆಯಿಂದ ಹೊರ ಜಗತ್ತಿಗೆ ವಿಸ್ತರಿಸಿಕೊಳ್ಳುತ್ತ ಸಾಗುವ ಚಲನೆ ಮೂಡಿಸುವ ತಲ್ಲಣ ದಂಗು ಬಡಿಸುವಂತಿದೆ.
ವಿವೇಕ ಶಾನಭಾಗ ಕಥಾಸಂಕಲನ “ಘಾಚರ್ ಘೋಚರ್” ಕುರಿತು ದೇವಿಕಾ ನಾಗೇಶ್ ಬರಹ
ಸಹಜಪ್ರಕೃತಿ ದರ್ಶನದ ಕವಿತೆಗಳು: ಡಾ. ಬಿ. ಜನಾರ್ದನ ಭಟ್ ಬರಹ
ನಮ್ಮ ಕಾಲದ ದೊಡ್ಡ ದೊಡ್ಡ ಕವಿಗಳೆಲ್ಲ ಹೀಗೆ ನೇರವಾಗಿ ಧರ್ಮಬೋಧನೆ ಅಲ್ಲದಿದ್ದರೂ ಒಂದಲ್ಲ ಒಂದು ಜೀವನ ದರ್ಶನವನ್ನು – ಜೀವನ ಧರ್ಮವನ್ನು – ತಮ್ಮ ಕಾವ್ಯದ ಮೂಲಕ ಜನರಿಗೆ ನೀಡಿದವರೇ ಆಗಿದ್ದಾರೆ. ಮೊಗಸಾಲೆಯವರ ಕಾವ್ಯ ಯಾನವನ್ನೇ ಗಮನಿಸಿದರೆ ಅವರು ಪ್ರಾರಂಭದಲ್ಲಿ ನವ್ಯ ಸಾಹಿತ್ಯದ ಪ್ರೇರಣೆಯಿಂದ ಬರೆಯುತ್ತಿದ್ದರು. ನವ್ಯ ಸಾಹಿತ್ಯಕ್ಕೆ ಅಸ್ತಿತ್ವವಾದದ ಹಿನ್ನೆಲೆ ಇತ್ತು. ಆಮೇಲೆ ಮೊಗಸಾಲೆಯವರನ್ನು ಅಲ್ಲಮಪ್ರಭು ಪ್ರಭಾವಿಸಿದ. ಅಲ್ಲಮನ ಹೊಸ ರೂಪಕಗಳು, ಹೊಸತನವುಳ್ಳ ವಿಚಾರಗಳು ಅವರನ್ನು ಸೆಳೆದವು.
ಡಾ. ನಾ ಮೊಗಸಾಲೆಯವರ ಹೊಸ ಕವನ ಸಂಕಲನ “ಹೇ ರಾಮ್” ಕುರಿತು ಡಾ. ಜನಾರ್ಧನ ಭಟ್ ಬರಹ ನಿಮ್ಮ ಓದಿಗೆ
“ಅಳವು ಅರಿಯದ ಭಾಷೆ” ಎಂಬ ಸಾವಿನ ಗಂಟೆ: ಕೆ. ಪಿ. ಸುರೇಶ ಬರಹ
ಈ ಮಾತು ಎಷ್ಟು? ಬೆಳಗಿನವರೆಗೆ ಪ್ರಸಂಗವನ್ನು ಕಟ್ಟಬೇಕಾದ ಕಾರಣ ಕ್ವಚಿತ್ತಾದ ಚೌಕಟ್ಟಿನ ಮಾತು ಪಾತ್ರಧಾರಿಗೆ ಸಾಲುವುದಿಲ್ಲ. ಆತ ಅಕ್ಷಯಾಂಬರದ ತರ ಮಾತಿನ ಎಳೆಗಳನ್ನು ಪೋಣಿಸುತ್ತಾ ಹೋಗಬೇಕು. ಈ ಸ್ವಾತಂತ್ರ್ಯವೇ ಯಕ್ಷಗಾನದ ವೃತ್ತಿ ಪ್ರದರ್ಶನಗಳ ಜೀವಾಳ ಮತ್ತು ಶಾಪ. ಇದು ಕಲಾವಿದರದ್ದೂ ಕೂಡ. ಹೀಗಾದಾಗ ಮಾತು ಸಡಿಲವಾಗುತ್ತಾ ಸ್ವೇಚ್ಛೆಯಾಗುತ್ತಾ ಹೋಗುವ ವಿಧಿ ಈ ಪ್ರಕಾರದೊಳಗೇ ಅಂತರ್ಗತವಾಗಿದೆ. ಈಗ ಹರಡಿರುವ ಹತ್ತಾರು ಮೇಳಗಳ ಕಲಾವಿದರ ಸಂಖ್ಯೆ ಮತ್ತು ಅವರ ಪ್ರತಿಭಾ ಶ್ರೇಣಿಯನ್ನು ಗಮನಿಸಿದರೆ ವಿದ್ವತ್ತು ಮತ್ತು ಮಾತಿನ ಪ್ರೌಢಿಮೆಗಳೆರಡೂ ಸಮಪಾಕಗೊಂಡ ಕಲಾವಿದರ ಪ್ರಮಾಣ ತೀರ ಕಡಿಮೆ ಸಂಖ್ಯೆಯದ್ದು.
ನಿತ್ಯಾನಂದ ಬಿ. ಶೆಟ್ಟಿ ಬರೆದ “ಅಳವು ಅರಿಯದ ಭಾಷೆ” ಕೃತಿಯ ಕುರಿತು ಕೆ.ಪಿ. ಸುರೇಶ ಬರಹ
ಅಮಾಯಕ ಸ್ತ್ರೀಯರ ಬದುಕಿಗೆ “ಗ್ಲಾನಿ” ಯಾಗುವ ಗಂಡಸರು: ನಾರಾಯಣ ಯಾಜಿ ಬರಹ
ಬದುಕು ಎಂದರೆ ಎಲ್ಲರಿಗೂ ಒಂದೇ ರೀತಿಯ ಪಯಣವಲ್ಲ. ಕೆಲವರಿಗೆ ಅದು ಸಾಧನೆಯ ಮಾರ್ಗವಾಗಬಹುದು; ಕೆಲವರಿಗೆ ಅದು ಸಹನೆಯ ಪರೀಕ್ಷೆಯಾಗಬಹುದು. ‘ಗ್ಲಾನಿ’ಯ ಮಹಾಲಕ್ಷ್ಮಿ ಮತ್ತು ಅಂಬಾಬಾಯಿ ಈ ಸಹನೆಯ ಪ್ರತಿಮೆಗಳು. ಶಿವು ಆ ಸಹನೆಯ ಸಾಕ್ಷಿ. ಅವರ ಬದುಕಿನಲ್ಲಿ ಜಯವಿಲ್ಲದಿದ್ದರೂ, ಒಂದು ಗಂಭೀರವಾದ ಅರ್ಥವಿದೆ. ಆ ಅರ್ಥವೇ ಈ ಕಾದಂಬರಿಯ ಜೀವಾಳ.
ಅರುಣಕುಮಾರ ಹಬ್ಬು ಕಾದಂಬರಿ “ಗ್ಲಾನಿ” ಕುರಿತು ನಾರಾಯಣ ಯಾಜಿ ಬರಹ
ಒಡಲ ನಂಟಿಗೆ ಗಂಟು ಬಿದ್ದಾಗ: ರಾಮಲಿಂಗ ಮಾಡಗಿರಿ ಕೃತಿಯ ಕುರಿತು ಶಿವಕುಮಾರ ಕರನಂದಿ ಬರಹ
ಕವಿತೆ ಅನುಕರಿಸಿದೆ, ನಕಲಿಸದೆ, ತನ್ನ ಸುತ್ತಮುತ್ತಲಿನ ಘಟನೆಗಳ ಮೇಲೆ ಕೇಂದ್ರಿಕರಿಸಿ, ತನ್ನೊಳಗಿನ ಭಾವನೆಗಳ ಮೂಲಕ ಕವಿತೆ ಕಟ್ಟಬೇಕಿದೆ. ರೂಪಕ, ಪ್ರತಿಮೆ, ಹೋಲಿಕೆಗಳೊಂದಿಗೆ ಕಾವ್ಯವನ್ನು ರಚಿಸಬೇಕಿದೆ. ಅಂದಾಗ ಮಾತ್ರ ಆ ಮನುಷ್ಯ ಚಿಂತನಾಶೀಲ ಕವಿಯಾಗಲು ಸಾಧ್ಯ. ಹೀಗೆ ಬರೆಯುತ್ತಾ ಸಾಗಿದಾಗ ನಾಳೆಯ ಚಿಂತಕನಾಗಲು ಸಾಧ್ಯ. ಈ ಒಂದು ದಿಸೆಯಲ್ಲಿ ಗೆಳೆಯ ರಾಮಲಿಂಗ ಮಾಡಗಿರಿ ತನ್ನ ಮೊದಲ ಸಂಕಲನದಿಂದ ಪ್ರವರ್ಧಮಾನಕ್ಕೆ ಕಾಲಿಡುತ್ತಿದ್ದಾರೆ. ಇವರು ಸ್ನಾತಕೋತ್ತರ ಪದವೀಧರರಾಗಿದ್ದು ಗಿಡಮರಗಳ ನಾಡಿಮಿಡಿತ ಅರಿತ ಇವರು ಕವಿತೆಯ ಸಾರವನ್ನು ಹೆಕ್ಕಲು ಬಂದಿದ್ದಾರೆ.
ರಾಮಲಿಂಗ ಮಾಡಗಿರಿ ಕವನ ಸಂಕಲನ “”ಒಡಲಿಗಂಟಿದ ನಂಟು” ಕುರಿತು ಶಿವಕುಮಾರ ಮೋಹನ ಕರನಂದಿ ಬರಹ










