Advertisement

ಪುಸ್ತಕ ಸಂಪಿಗೆ

ಇರುವುದೆಲ್ಲವ ಹೇಳಿಬಿಡು…: ಸುಶೀಲಾ ಡೋಣೂರ ಕಾದಂಬರಿಯ ಪುಟಗಳು

ಇರುವುದೆಲ್ಲವ ಹೇಳಿಬಿಡು…: ಸುಶೀಲಾ ಡೋಣೂರ ಕಾದಂಬರಿಯ ಪುಟಗಳು

‘ಈ ಮಾತು ಚರ್ಚೆಗೆ ಬರದೆ ಹೋಗಿದ್ರ ನಾನು ಈ ಸುಳ್ಳು ಹೇಳಬಹುದಿತ್ತು ಪೂಣ, ಈಗ ಎಲ್ಲಾನೂ ಒಪ್ಗೊಂಡ ಮ್ಯಾಲ ಮತ್ತ ಅದೇ ಸುಳ್ಳನ್ನ ಆರಂಭದಿಂದ ಹೇಳು ಅಂದ್ರ ಹೇಳಾಕ ಆಗೂದಿಲ್ಲ. ಏನು ಶಿಕ್ಷೆ ಕೊಡ್ತೀಯೊ ಕೊಡು. ನಾ ನಿನ್ನ ಪ್ರೀತಿಸ್ತೀನಿ ಅನ್ನೂದು ಖರೆ, ಅದೇ ಅಂತಿಮ. ನೀ ಸಿಕ್ರೂ ಸರಿ, ಸಿಗಲಿಲ್ಲ ಅಂದ್ರೂ ಸರಿ. ಜೀವನಪೂರ್ತಿ ನಿನ್ನ ನೆನಪಿನ್ಯಾಗ ಸಾಗಿಸುವಷ್ಟು ಸುಂದರ ಕ್ಷಣಗಳನ್ನ ಕಳದೀನಿ ನಿನ್ನ ಜೋಡಿ, ಅವೇ ಸಾಕು’.
ಪತ್ರಕರ್ತೆ ಸುಶೀಲಾ ಡೋಣೂರ ಹೊಸ ಕಾದಂಬರಿ “ಪೀಜಿ”ಯ ಒಂದು ಅಧ್ಯಾಯ ನಿಮ್ಮ ಓದಿಗೆ

read more
ಚಪ್ಪಲಿ ಅಂಗಡಿಯಲ್ಲಿ ಕ್ಯಾಲೆಂಡರ್: ರಘುಪತಿ ತಾಮ್ಹನ್‌ಕರ್ ಅನುಭವ ಕಥನ

ಚಪ್ಪಲಿ ಅಂಗಡಿಯಲ್ಲಿ ಕ್ಯಾಲೆಂಡರ್: ರಘುಪತಿ ತಾಮ್ಹನ್‌ಕರ್ ಅನುಭವ ಕಥನ

ಮೈಸೂರಿನ ರಘುಪತಿ ತಾಮ್ಹನ್‌ಕರ್ ಅವರ ಮೊದಲ ಕೃತಿ ‘ನೋಟಿನ ನಂಟು’ ಇದೇ ಭಾನುವಾರ ಅಂದರೆ ಜುಲೈ 7ರಂದು ಮೈಸೂರಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ಬಿಡುಗಡೆಯಾಗಲಿದೆ. ಗಣೇಶ ಅಮೀನಗಡ ಅವರು ತಮ್ಮ ಕವಿತಾ ಪ್ರಕಾಶನದ ಮೂಲಕ ಇದನ್ನು ಪ್ರಕಟಿಸಿದ್ದಾರೆ. ಎಪ್ಪತ್ತು ವರ್ಷದ ರಘುಪತಿ ಅವರು ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಮ್ಯಾನೇಜರ್. ಅವರು ತಮ್ಮ ಅನುಭವಗಳನ್ನು ಕಟ್ಟಿಕೊಟ್ಟ ಕೃತಿಯ ಒಂದು ಅಧ್ಯಾಯ ನಿಮ್ಮ ಓದಿಗಾಗಿ

read more
ಆಧುನಿಕ ವಿಕಾರಕ್ಕೊಂದು ಕನ್ನಡಿ: ಕಾವ್ಯಾ ಕಡಮೆ ಕಥಾ ಸಂಕಲನಕ್ಕೆ ಶ್ರೀಧರ ಬಳಗಾರ ಮುನ್ನುಡಿ

ಆಧುನಿಕ ವಿಕಾರಕ್ಕೊಂದು ಕನ್ನಡಿ: ಕಾವ್ಯಾ ಕಡಮೆ ಕಥಾ ಸಂಕಲನಕ್ಕೆ ಶ್ರೀಧರ ಬಳಗಾರ ಮುನ್ನುಡಿ

ತೊಟ್ಟು ಕ್ರಾಂತಿ ಸಂಕಲನದ ಕಥೆಗಳಲ್ಲಿ ಕೆಲವು ಪ್ರದೇಶದ ಕನ್ನಡದ ಉಪಭಾಷೆಗಳ ಪ್ರಯೋಗವಾಗಿದೆ. ಪಾತ್ರಗಳ ಮಾತಿನ ಭಿನ್ನ ಶೈಲಿಯಲ್ಲಿ ಆಕಾರ ಪಡೆಯುವ ಕಥೆಗೆ ಹಲವು ಧ್ವನಿಗಳಿವೆ. ಭಾಷೆಯ ಮೂಲಕ ಕಥೆಯ ನಿರೂಪಣೆಯಲ್ಲ; ಭಾಷೆಯೇ ಕಥೆಯಾಗುವುದು; ಭಾಷೆ ಕಥೆಯಾಗುವುದೆಂದರೆ ಮನುಷ್ಯರಾಗುವುದು; ಭಾಷೆಯೇ ಮನುಷ್ಯರೊಡಗೂಡಿ ವಿಷಯವಾಗುವುದು ಇಲ್ಲಿ ಸಾಧ್ಯವಾಗಿದೆ; ಆದ್ದರಿಂದ ಪಾತ್ರ-ಪರಿಸರದ ಹಾಸುಹೊಕ್ಕಿನ ನೇಯ್ಗೆ ಈ ಕಥೆಗಳ ಯಶಸ್ಸಿಗೆ ಕಾರಣಗಳಲ್ಲೊಂದು.
ಕಾವ್ಯಾ ಕಡಮೆ ಕಥಾ ಸಂಕಲನ “ತೊಟ್ಟು ಕ್ರಾಂತಿ”ಗೆ ಕತೆಗಾರ ಶ್ರೀಧರ ಬಳಗಾರ ಬರೆದ ಮುನ್ನುಡಿ ನಿಮ್ಮ ಓದಿಗೆ

read more
ನಡು ಮಧ್ಯಾಹ್ನದ ಕಣ್ಣಿನ ಕಾವ್ಯ…: ವಿ.ಚಂದ್ರಶೇಖರ ನಂಗಲಿ ಬರಹ

ನಡು ಮಧ್ಯಾಹ್ನದ ಕಣ್ಣಿನ ಕಾವ್ಯ…: ವಿ.ಚಂದ್ರಶೇಖರ ನಂಗಲಿ ಬರಹ

‘ಅಡುಗೆಯಾಟದ ಹುಡುಗಿ’ ಬಾಲ್ಯದ ಅಡುಗೆಯಾಟವೇ ಕ್ರಮೇಣ ಆ ಹುಡುಗಿಯ ಜೀವನಶೈಲಿಯಾಗಿ ಬದಲಾಗುವ ಮತ್ತು ವ್ಯಕ್ತಿತ್ವ ವಿಕಸನದ ಅವಕಾಶಗಳು ಮುಚ್ಚಿಹೋಗುವ ಬಗೆಯೊಂದು ಅನಾವರಣಗೊಳ್ಳುತ್ತಾ , ಕಡೆಗೆ ಅಮ್ಮನಿಂದ ಮಗಳಿಗೆ ಹಸ್ತಾಂತರವಾಗುವ “ಚುಚ್ಚುಗ”ವು ಬರಿಯ ಅಡುಗೆಯ ಆಯುಧವಾಗಿ ಉಳಿಯದೆ, ಹೆಣ್ಣಿನ ಪಾಲಿಗೆ ಪುರುಷ ಪ್ರಧಾನ ಸಮಾಜದ “ಚುಚ್ಚುಗ”ವಾಗುವ ರೂಪಕ ಆಗಿಬಿಡುತ್ತದೆ.
ಆಶಾ ಜಗದೀಶ್‌ ಕವನ ಸಂಕಲನ “ನಡು ಮಧ್ಯಾಹ್ನದ ಕಣ್ಣು” ಕುರಿತು ಡಾ. ವಿ.ಚಂದ್ರಶೇಖರ ನಂಗಲಿ ಬರಹ

read more
ತಾರಿದಂಡೆ – ಕಳೆದು ಹೋದ ಬದುಕಿನ ಸುಂದರ ಯಾನ: ಶ್ವೇತಾ ಹೊಸಬಾಳೆ ಬರಹ

ತಾರಿದಂಡೆ – ಕಳೆದು ಹೋದ ಬದುಕಿನ ಸುಂದರ ಯಾನ: ಶ್ವೇತಾ ಹೊಸಬಾಳೆ ಬರಹ

ಈ ಮುತ್ತಿನಂಥಾ ಮಾತುಗಳ ಸರಣಿ ಮುಂದಿನ ಬರಹದಲ್ಲೂ ಮಾಲೆಯಾಗಿ ನಾಲ್ಕು ಸಾಲು ಗೀಚಿಯೋ, ಫೇಸ್ಬುಕ್, ವಾಟ್ಸ್ ಅಪ್‌ಗಳ ಸ್ಟೇಟಸ್‌ಗಳಲ್ಲಿ ಬರುವ ಕವನಗಳನ್ನೋದಿಕೊಂಡು ಬೀಗುವವರ ಕಿವಿಹಿಂಡಿದೆ. “ಕವಿತೆ ಒಂದು ಜೀವನ ದೃಷ್ಟಿ, ಎಷ್ಟೆಲ್ಲಾ ಸಂವೇದನಾಶೀಲರ ಪ್ರಜ್ಞಾ ಪ್ರವಾಹದ ಮನೋಸಂಗಮದಿಂದ ಅರಳುವ ಜೀವನ ಕಲೆ” ಎನ್ನುತ್ತಾ ಪರಂಪರೆಯನ್ನು ಅರಿತಿರುವುದರ ಜೊತೆಗೆ ಕವಿತಾರಚನೆಗೆ ಆಳವಾದ ಧ್ಯಾನ ಅಧ್ಯಯನದ ಅಗತ್ಯವಿದೆ ಎನ್ನುವದನ್ನು ಹೇಳುತ್ತದೆ. ಅವರ ಪುಟ್ಟ ಪುಟ್ಟ ವಾಕ್ಯಗಳನ್ನು ಓದುವುದೇ ಖುಷಿ.
ಜಯಂತ ಕಾಯ್ಕಿಣಿಯವರ “ತಾರಿದಂಡೆ” ಕೃತಿಯ ಕುರಿತು ಶ್ವೇತಾ ಹೊಸಬಾಳೆ ಬರಹ

read more
ಓದಿನ ಧ್ಯಾನದ ನಂತರವೂ ಕಾಡುವ ಕತೆಗಳು: ಮಾರುತಿ ಗೋಪಿಕುಂಟೆ ಬರಹ

ಓದಿನ ಧ್ಯಾನದ ನಂತರವೂ ಕಾಡುವ ಕತೆಗಳು: ಮಾರುತಿ ಗೋಪಿಕುಂಟೆ ಬರಹ

ಅರ್ಧ ನೇಯ್ದಿಟ್ಟ ಸ್ವೆಟರ್ ಯೋಧನ ಕುಟುಂಬದ ಬದುಕಿನ ಅನಾವರಣ. ಇಲ್ಲಿ ಮಹಿಳೆಯೊಬ್ಬಳ ಮಾನಸಿಕ ತುಮುಲಗಳ ಸಾಮಾಜಿಕ ಬೇಕು ಬೇಡಗಳ ಒಳಗೊಳ್ಳುವಿಕೆ ಮತ್ತು ಅದನ್ನು ಮೀರುವ ಆಕೆಯ ಕನಸು ಹರಿಯನ್ನು ಕಾಣುವ ತವಕದೊಂದಿಗೆ ಮೂರ್ತರೂಪ ಪಡೆದು ನಮ್ಮನ್ನು ಚಿಂತಿಸುವಂತೆ ಮಾಡುತ್ತದೆ.
ಸದಾಶಿವ ಸೊರಟೂರು ಅವರ ಕಥಾ ಸಂಕಲನ “ಧ್ಯಾನಕ್ಕೆ ಕೂತ ನದಿ”ಯ ಕುರಿತು ಮಾರುತಿ ಗೋಪಿಕುಂಟೆ ಬರಹ

read more
ಪೆಣ್ಣೆತ್ತ ಖುಷಿಯನು ಲೋಕಕೆ ಹಂಚಿ…: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಪೆಣ್ಣೆತ್ತ ಖುಷಿಯನು ಲೋಕಕೆ ಹಂಚಿ…: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಎಂದರೆ ಅಷ್ಟೇ ಸಾಕೆ ಎನ್ನುವಂತೆ ಇಂತಹ ಎಷ್ಟು ಸಾಹಿತ್ಯ ರಚನೆಯಾದರೂ ಹೆಣ್ಣಿನ ಕುರಿತಾದ ಸಮಾಜದ ಮನಸ್ಥಿತಿ ಬದಲಾಯಿಸಲು ಆಗುತ್ತಿಲ್ಲ. ಎಷ್ಟೋ ಹೆಣ್ಣೆತ್ತ ತಂದೆ – ತಾಯಿಯರಿಗೆ ಹೆಣ್ಣನ್ನು ಹೆತ್ತಿದ್ದೇವೆ ಎನ್ನುವ ನೋವಿಗಿಂತಲೂ ಹೆಣ್ಣೆತ್ತವರನ್ನು ಸಮಾಧಾನ ಮಾಡುವ ಸೋಗಿನಲ್ಲಿ ಆಡುವ ಮಾತುಗಳ ನೋವೇ ಹೆಚ್ಚೆಂಬುದನ್ನು ದೇಸಾಯಿಯವರು ಬಹಳ ವಿಶೇಷವಾಗಿ ಹಾಸ್ಯ ಮಿಶ್ರಿತಗೊಳಿಸಿ ಹೇಳಿದ್ದಾರೆ.
ಗುಂಡುರಾವ್ ದೇಸಾಯಿ ಲಲಿತ ಪ್ರಬಂಧಗಳ ಕೃತಿ “ಪೆಣ್ಣೆತ್ತ ಖುಷಿಗೆ.. ಕುರಿತು ಡಾ. ತಿಮ್ಮಯ್ಯ ಶೆಟ್ಟಿ ಇಲ್ಲೂರು ಬರಹ

read more
ನಾರಿಯೊಡಲಿನ ಬೇವು-ಬೆಲ್ಲ: ಎಂ.ಡಿ.ಚಿತ್ತರಗಿ ಬರಹ

ನಾರಿಯೊಡಲಿನ ಬೇವು-ಬೆಲ್ಲ: ಎಂ.ಡಿ.ಚಿತ್ತರಗಿ ಬರಹ

ಒಂದೇ ಮಾದರಿಯ ಕವಿತೆಗಳ ಕಟ್ಟನ್ನು ಇಡೀ ಸಂಕಲನದುದ್ದಕ್ಕೂ ಪೋಣಿಸಿದ ಕವಯಿತ್ರಿ ಅವಸರದ ಗಾಡಿಯನೇರದೆ ನಿಧಾನಕ್ಕೆ ಚಕ್ಕಡಿ ಹತ್ತಿದವರು. ಕಾಲುಹಾದಿಯಲ್ಲಿ ಕಡಲ ಕಂಡವರು. ಅವರೇ ಹೇಳಿಕೊಂಡಂತೆ ಮೂವತ್ತು ವರ್ಷದ ಬದುಕಿನ ಅನುಸಂಧಾನದ ಪ್ರತಿಫಲವಾಗಿ, ಕಂಡುಂಡ ಅನುಭವದ ಕಡಲನ್ನೇ ಕಡೆಕಡೆದು ನಿಲ್ಲಿಸಿದ ಐವತ್ತೇಳು ಕವಿತೆಗಳ ಗುಚ್ಛವಿದು. ಸರಳವಾದ ಭಾಷೆಯಲ್ಲಿ ತೆರೆದುಕೊಳ್ಳುವ ಕವಿತೆಗಳು ಸಹಜವಾಗಿ ಓದುಗರ ಎದೆಗಿಳಿಯುತ್ತವೆ.
ಸಾವಿತ್ರಿ ಮಜುಮದಾರ ಕವನ ಸಂಕಲನ “ನಾರಿಪದ್ಯ”ದ ಕುರಿತು ಎಂ.ಡಿ. ಚಿತ್ತರಗಿ ಬರಹ

read more
ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ ಓದುಗರ ಮನಸನ್ನ ಉಲ್ಲಾಸಗೊಳಿಸುತ್ತದೆ. ಮೊದಲ ಪುಟದ ಓದು ಆರಂಭಿಸುತ್ತಿದ್ದಂತೆ ಹಳದಿ ಬಣ್ಣದ ಅಂಬರಿ ಹೂವಿನ ಪರಿಮಳದಲ್ಲಿ ಮನಸ್ಸು ಅರಳಿ ಕಥಾನಾಯಕನಾದ ಶಾಮ ನಮ್ಮನ್ನು ನಮಗರಿವಿಲ್ಲದೆ ಆವರಿಸಿಕೊಂಡು ಬಿಡುತ್ತಾನೆ ಅಷ್ಟು ಆಪ್ತತೆ ಈ ಕಾದಂಬರಿಯಲ್ಲಿದೆ.
ಮಂಡಲಗಿರಿ ಪ್ರಸನ್ನ ಬರೆದ “ಹಳ್ಳಿ ಹಾದಿಯ ಹೂವು” ಎಂಬ ಮಕ್ಕಳ ಕಾದಂಬರಿಯ ಕುರಿತು ಡಾ. ತಿಮ್ಮಯ್ಯ ಶೆಟ್ಟಿ ಇಲ್ಲೂರು ಬರಹ

read more

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ