Advertisement
ದೇವರಾಜ್ ಹುಣಸಿಕಟ್ಟಿ ಬರೆದ ಈ ದಿನದ  ಕವಿತೆ

ದೇವರಾಜ್ ಹುಣಸಿಕಟ್ಟಿ ಬರೆದ ಈ ದಿನದ ಕವಿತೆ

ತಾವಿಜ್…

ಮೂರು ದೃಷ್ಟಿ ಬೊಟ್ಟಿಟ್ಟು
ತುಸು ವಿಳೆದೆಲೆ ಸುಟ್ಟು..
ಕಸಬರಿಗೆ ನಿವಾಳಿಸಿ…
ನಿವಾಳಿ ತೆಗೆಯುವ ಅವ್ವ…

ನಾನು
ತುಸು ಹಳದಿ
ತುಸು ಸಣ್ಣ
ಇಲ್ಲಾ
ತುಸುವೆ ತುಸು
ಬಿಳಿಚಿ ಕೊಂಡರೆ…
ಕೆಂಡ ತುಳಿದವಳಂತೆ…
ಚಡಪಡಿಸುತ್ತಾಳೆ…
ಇಡೀ ಈಶ್ವರನನ್ನೇ
ಒಂದು ಇಂಚಿನ ತಾವಿಜ್ ಅಲ್ಲಿ
ಹಿಡಿದಿಟ್ಟಿನೆಂದೆ ನಂಬುತ್ತಾಳೆ…
ಅವ್ವ…

ಗುಡಿ ಗುಂಡಾರ್ ಸುತ್ತಿ..
ಗೊರವಪ್ಪ ಭೂತಪ್ಪನ
ಕಟ್ಟೆ ಹತ್ತಿ ತರುತ್ತಾಳೆ ತಾವಿಜ್…

ಅವಳ ನಂಬುಗೆಯ
ಈ ಬುಗ್ಗೆ ಒಡೆದು ಆಳುವುದು..
ಸ್ವತಃ ಆ ಶಿವನಿಗೂ ಆಗಲ್ಲವೆನೋ…

ಎರಡು ಸಂಜೆ ಕಳೆದು
ಮಾರನೆಯ ದಿನಕ್ಕೆ

ಆ ಶಿವನು ವಿಲ ವಿಲನೇ ಒದ್ದಾಡಿ..
ಅವ್ವನ ನಂಬಿಕೆಯ ಜೊತೆಗೆ ಗುದ್ದಾಡಿ..
ಸೋತ ಶಿವ
ನಾನು ಚೇತರಿಸಿ ಕೊಂಡಂತೆಯೂ…
ಮಾಡಿಬಿಡುತ್ತಾನೆ…

ಎಂತದೋ ಗಾಳಿ ಶಕವಂತೆ..
ಬಾಲ ಗ್ರಹವಂತೆ…
ಇಂತಹ ಅಂತೆ ಕಂತೆಗಳ…
ಮೆದುಳ ಜೋಳಿಗೆ ತುಂಬಿ ಬಂದ…
ಸುರ್ ಸುರ್ ಬತ್ತಿಗಳಿಗೆಲ್ಲ ಮಂತ್ರದಂಡ ನನ್ನ ಅವ್ವನ ತಾವಿಜ್..
ಅದು ಏಕ ಅನೋಕಾ ಚೀಜ್….

 

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ