ಮನೆಯವರ ಮನಗಳಲ್ಲಿ ಸಾಯುವವರ ಕತೆ: ರೂಪಶ್ರೀ ಕಲ್ಲಿಗನೂರ್ ಬರಹ
ಜೊತೆಯಲ್ಲಿ ಯಾರೂ ಇಲ್ಲದ್ದರಿಂದ, ಅವರ ಜೋಬಿನಲ್ಲಿದ್ದ ಮೊಬೈಲ್ ತೆಗೆದುಕೊಂಡು ಅದಕ್ಕೆ ಬಂದ-ಹೋದ ಒಂದಷ್ಟು ನಂಬರ್ಗಳಿಗೆ ಕಾಲ್ ಮಾಡಿ ವಿಷಯ ತಿಳಿಸಿದ್ದರು. ನಂತರ ಮೃತದೇಹವನ್ನು ಊರಿಗೆ ತರಿಸಿಕೊಂಡು ಎಲ್ಲ ಕಾರ್ಯಗಳನ್ನು ಮಾಡಿ ಮನೆಗೆ ಹೋಗುವಾಗ ಯಾರ ಕಣ್ಣಲ್ಲೂ ಹನಿ ನೀರುಕಾಣಲಿಲ್ಲ… ಅವರರ್ಯಾರ ಮುಖದಲ್ಲಿ ಅಯ್ಯೋ ತಮ್ಮ ಮನೆಯ ಸದಸ್ಯನೊಬ್ಬನನ್ನು ಕಳೆದುಕೊಂಡೆವಲ್ಲ ಎನ್ನುವ ನೋವು ಕಾಣಿಸುತ್ತಿರಲಿಲ್ಲ.. ಬದಲಾಗಿ ಅಕ್ಕ-ತಂಗಿಯರಾಗಿ ಎಲ್ಲರೂ ತಮ್ಮ ಕಾರ್ಯಗಳನ್ನು ಸರಿಯಾಗಿ ಮಾಡಿ-ಮುಗಿಸಿದೆವಲ್ಲ… ದೇವರಿಗೆ ನಮ್ಮ ಮೇಲೆ ಸ್ವಲ್ಪವಾದರೂ ಕರುಣೆ ಇದೆಯಪ್ಪ.. ಎನ್ನಿಸಿತ್ತು. ಅಷ್ಟೇ.
ರೂಪಶ್ರೀ ಕಲ್ಲಿಗನೂರ್ ಬರಹ ನಿಮ್ಮ ಓದಿಗೆ
ಪೆಟ್ಟುಮಾಡಿಕೊಂಡ ಕಿಟ್ಟಪ್ಪನಿಗೆ ಸಂದ ಪೂಜೆ…: ಎಚ್. ಗೋಪಾಲಕೃಷ್ಣ ಸರಣಿ
ಇಲ್ಲಿ ನನ್ನ ಸಂಪೂರ್ಣ ತಲಾಶ್ ನಡೆಯಿತು. ಎಡಗೈ ಇನ್ನೂ ನೇತಾಡುತ್ತಾ ಇತ್ತಲ್ಲ. ಅದನ್ನ ಹೇಗೋ ಮಡಿಸಿ ಒಂದು ಪಂಚೆಯನ್ನ ಸ್ವಿಂಗ್ ತರಹ ಮಾಡಿ ಕೊರಳಿಗೆ ನೇತು ಹಾಕಿದ್ದಳು. ಇಷ್ಟು ಹೊತ್ತಿಗೆ ಮೈಮೇಲೆ ಬಂದಿದ್ದ ಚಾಮುಂಡಿ ದೇವತೆ ಕೊಂಚ ಶಾಂತವಾಗಿತ್ತು. ತಟ್ಟೆಯಲ್ಲಿ ಅನ್ನ, ದಂಟಿನ ಸೊಪ್ಪಿನ ಹುಳಿ ಕಲಸಿ ಕೊಟ್ಟಳು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಅರವತ್ತೆರಡನೆಯ ಕಂತು
ಬದುಕಿನ ಪಲಕುಗಳನ್ನು ಹಾಡಾಗಿಸಿದ ಕವಿ: ಶಿವ ಹಿತ್ತಲಮನಿ ಬರಹ
ಸಂಸಾರದ ಏರಳಿತದ ನೋವು ನಲಿವುಗಳ ಗಳಿಗೆಗಳನ್ನು ವಿವರವಾಗಿ ಹೇಳದೆಯೇ ಎಲ್ಲವನ್ನೂ ಅದೆಷ್ಟು ಸೂಕ್ಷ್ಮವಾಗಿ ತೆರೆದಿಟ್ಟರು ಹೆಚ್.ಎಸ್.ವಿ… ಸಮಯ ಹೋದಂತೆ ಸಂಸಾರ ಬೆಳೆದು, ಮಕ್ಕಳು ಪುಟ್ಟ ಪುಟ್ಟ ಹೆಜ್ಜೆಗಳಿಟ್ಟು ಮನೆ ತುಂಬಾ ಓಡಾಡಿ ತುಂಟಾಟ ಮಾಡುವಾಗ ಕವನ ಕಟ್ಟಿಕೊಟ್ಟಿದ್ದು ಮತ್ತೆ ಹೆಚ್.ಎಸ್.ವಿ.
ಎಚ್. ಎಸ್. ವೆಂಕಟೇಶಮೂರ್ತಿಯವರ ಕವಿತೆಗಳು ಹೇಗೆ ಬದುಕಿನ ಬೇರೆಬೇರೆ ಘಟ್ಟಗಳ ಕನ್ನಡಿಯಾಗಿದ್ದವು ಎಂಬುದರ ಕುರಿತು ಶಿವ ಹಿತ್ತಲಮನಿ ಬರಹ ನಿಮ್ಮ ಓದಿಗೆ
ನನ್ನಜ್ಜಿ ಬದುಕಿರುವುದು ಅವಳ ಹಾಡುಗಳಲ್ಲಿ: ಅನನ್ಯ ತುಷಿರಾ ಬರಹ
ಎಷ್ಟೋ ಬಾರಿ ಸಣ್ಣ ಪುಟ್ಟ ಸಂಗತಿಗಳಿಗೆ ಸೋತು ಹೋದಂತಾಗುತ್ತದೆ. ಏರಿ ನಿಂತ ಎತ್ತರ ಸುಲಭಕ್ಕೆ ದಕ್ಕಿಲ್ಲವಾದರೂ ನಿಭಾಯಿಸುವಲ್ಲಿ ಅಲುಗಾಡಿದಂತಾಗುತ್ತದೆ. ಅಂಥ ಸಂದರ್ಭದಲ್ಲಿ ಹುಟ್ಟುವ ಪ್ರಶ್ನೆಗಳಿಗೆ ಉತ್ತರವಾಗಿ ಒಂದು ಬೆಳಕು ಕಾಣುವುದು ನನ್ನಜ್ಜಿಯ ಬದುಕಿನಿಂದ. ಅವಳ ಹಾಡುಗಳಿಂದ. ಬದುಕು ಕಟ್ಟುವ ಹೊತ್ತಿಗೆ ಸಂಗಾತಿಯ ಸಾವು ಕಂಡೂ ಕೂಡ ಬದುಕ ಹಾಡು ಕಟ್ಟಿದವಳು ನನ್ನಜ್ಜಿ. ‘ನನ್ನಜ್ಜಿಯ ಜೀವನವನ್ನೂ, ಜನಪದ ಹಾಡುಗಳನ್ನೂ ಬಿಡಿಸಿ ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ ನನ್ನಿಂದ’ ಎನ್ನುವಷ್ಟು ಆ ಪದಗಳು ಅವಳ ಹಾದಿಯಲ್ಲಿ ಬೆರೆತು ಹೋಗಿವೆ.
ಅನನ್ಯ ತುಷಿರಾ ಬರಹ ನಿಮ್ಮ ಓದಿಗೆ
ಊರು ಕೇರಿ ಬಿಟ್ಟು ಬಂದು…: ಶುಭಶ್ರೀ ಭಟ್ಟ ಬರಹ
ತುಸುವೂ ಪರಿಚಯವೇ ಇಲ್ಲದ ಹೊಸ ಬೀದಿಯ ಅಪರಿಚಿತ ಸದ್ದಿಗೆ, ಆ ರಾತ್ರಿಯ ನೀರವತೆಗೆ, ಪರಿಮಳವಿಲ್ಲದ ಹಗಲಿಗೆ, ನಮ್ಮವರೇ ಕಾಣಿಸದ ಆಗಂತುಕ ರಸ್ತೆಯ ಚಲನೆಗೆ ವಿನಾಕಾರಣ ನಿಟ್ಟುಸಿರು ಉಮ್ಮಳಿಸಿ ಬರುತ್ತಿತ್ತು. ಅಡುಗೆ ಮನೆಯ ಬಿಡುವಿಲ್ಲದ ಕೆಲಸ, ಮಾಡಲೇ ಬೇಕಾದ ಕೆಲವು ಮನೆ ಕೆಲಸ, ಆಫೀಸಿನ ಹೊಸ ಪ್ರಾಜೆಕ್ಟಿನ ಶೆಡ್ಯೂಲ್, ಮಗನನ್ನು ಹೊಸ ಶಾಲೆಗೆ ರೂಢಿ ಮಾಡಿಸಬೇಕಾದ ಅಗತ್ಯ, ಬಿಡಲಾರದ ಬರವಣಿಗೆ-ಓದು ಹೀಗೆ ದಿನದ ಅರೆ ಕ್ಷಣವನ್ನೂ ವ್ಯಯಿಸದೆ ಎಲ್ಲವನ್ನೂ ನಿಭಾಯಿಸುತ್ತಾ ದಿನ ಕಳೆಯುತ್ತಿತ್ತು. ಆದರೂ ಕೆಲವೊಮ್ಮೆ ಸಂಜೆಯಾಗುವಷ್ಟರಲ್ಲಿ ಖಾಲಿತನ ಆವರಿಸಿಕೊಳ್ಳುತ್ತಿತ್ತು.
ಮಹಾನಗರದ ಭಾಗವಾಗಿ ವಾಸಿಸುವ ಅನುಭವದ ಕುರಿತು ಶುಭಶ್ರೀ ಭಟ್ಟ ಬರಹ ನಿಮ್ಮ ಓದಿಗೆ
ಹುಬ್ಬಳ್ಳಿಗರ ಇಂಗ್ಲೀಷ್ ವ್ಯಾಮೋಹ: ರೂಪಾ ಜೋಶಿ ಬರೆದ ಲಲಿತ ಪ್ರಬಂಧ
ಇಲ್ಲಿಯ ಭಾಷೆಯಲ್ಲಿ ಎಲ್ಲರಿಗೂ “ರೀ”…. ಎಂಬ ಅಕ್ಷರ ಹಚ್ಚಿಯೇ ಮಾತಾಡುವ ರೂಢಿಯಿದೆ. ಅಪ್ಪಾರು, ಅವ್ವಾರು, ಅಕ್ಕಾರು, ಮಾಮಾರು, ಅಣ್ಣಾರು, ಅಜ್ಜಾರು ಹೀಗೇ. ಎಲ್ಲರನ್ನೂ ಬಹುವಚನದಲ್ಲೇ ಹೆಸರಿಸುವ ಈ ಪದ್ಧತಿ ನಿಜಕ್ಕೂ ಒಳ್ಳೆಯದೇ. ಅದೇ ಕಾರಣಕ್ಕೆ ಆಂಗ್ಲ ಪದ ಬಳಕೆ ಮಾಡಿದಾಗಲೂ ಅವರು ಅದಕ್ಕೆ ಕನ್ನಡದ ‘ರೀ’ ಮತ್ತೂ ‘ರು’ ಪದ ಹಚ್ಚಿ, ” ಮೇಡಮ್ರಿ, ಸರ್ರೀ, ಮಮ್ಮೀರೀ…. ಡ್ಯಾಡಿರೀ, ಅಜ್ಜಾರ್ರೀ, ಅಂಕಲ್ರೀ ಅಂತ ರೂಪಾಂತರಿಸಿ, ಅದು ನಮ್ಮ ಕನ್ನಡದ್ದೇ ಅನ್ನುವಷ್ಟು ಸಲೀಸಾಗಿ ಬಳಸುವುದನ್ನು ನೋಡಿ, ನನಗೆ ಮೊದ ಮೊದಲು ತುಂಬಾ ವಿಸ್ಮಯವೆನ್ನಿಸುತ್ತಿತ್ತು.
ರೂಪಾ ರವೀಂದ್ರ ಜೋಷಿ ಬರೆದ ಪ್ರಬಂಧ
ಪಿತೃಪ್ರಧಾನತ್ವದ ಗೋಚರ-ಅಗೋಚರ ಹೊರೆಗಳು: ನಮ್ರತಾ ಪೊದ್ದಾರ್ ಬರಹ
ಪಿತೃಪ್ರಧಾನ ವ್ಯವಸ್ಥೆಯಿಂದ ಮಹಿಳೆಯರಿಗೆ ಹಾನಿಯಾಗುವಂತೆಯೇ ಪುರುಷರೂ ಇದರ ಹೊರೆಯನ್ನು ಅನುಭವಿಸುತ್ತಾರೆ. ಇಂದಿಗೂ ಕೂಡ ಹುಡುಗರು ಅಥವಾ ಪುರುಷರೆಂದರೆ ಭಾವನಾತ್ಮಕವಾಗಿ ಗಟ್ಟಿಯಾಗಿರಬೇಕು; ಭಾವನಾಜೀವಿಯಾಗುವುದು ಅಥವಾ ಬಹಿರಂಗವಾಗಿ ಅಳುವುದು ಇವೆಲ್ಲಾ ದೌರ್ಬಲ್ಯದ ಲಕ್ಷಣಗಳು ಎಂದೇ ಭಾವಿಸಲಾಗುತ್ತದೆ. ಇಂದು ಅನೇಕ ಹುಡುಗರಿಗೆ ಮದುವೆಯಾಗಲು ಹೆಣ್ಣುಗಳು ಸಿಗುತ್ತಿಲ್ಲ ಎನ್ನಲಾಗುತ್ತಿದೆ. ಹುಡುಗ ಎಂದರೆ ಅಷ್ಟೇ ದುಡಿಯಬೇಕು; ಇಷ್ಟೇ ದುಡಿಯಬೇಕು ಎನ್ನುವ ಅವಾಸ್ತವಿಕ ನಿರೀಕ್ಷೆಗಳನ್ನು ಪೋಷಿಸಿ ಮದುವೆಯನ್ನೇ ವ್ಯಾಪಾರದ ಸರಕನ್ನಾಗಿ ಪರಿವರ್ತಿಸಿರುವುದು ಪಿತೃಪ್ರಧಾನ ವ್ಯವಸ್ಥೆಯ ಚಿಂತನೆಯೇ!
ಮಹಿಳೆ ಮತ್ತು ಪುರುಷರ ಮೇಲಾಗುವ ಪಿತೃಪ್ರಧಾನ ವ್ಯವಸ್ಥೆಯ ಹೊರೆಗಳ ಕುರಿತು ನಮ್ರತಾ ಪೊದ್ದಾರ್ ಬರಹ ನಿಮ್ಮ ಓದಿಗೆ
ಯೇಸುವಿನ ಪ್ರೀತಿ ಔದಾರ್ಯಕ್ಕೆ ಮಿಡಿದ ಕಾವ್ಯಲೋಕ: ರಾಜೇಂದ್ರ ಕುಮಾರ್ ಕೆ ಮುದ್ನಾಳ್ ಬರಹ
ವಾಕ್ಯವೇ ದೇವರು ಎನ್ನುವ ಕ್ರಿಸ್ತನ ಅನುಯಾಯಿಗಳು ವಾಕ್ಯದ ಮುಖಾಂತರ ನಡೆಯುತ್ತೇವೆ ಎಂಬ ಭ್ರಮೆಯಲ್ಲಿ ಇರುತ್ತಾರೆ ಅದು ಅವರ ಅರಿವಿಗೆ ಬರುವಷ್ಟರಲ್ಲಿ ಪಾಪದ ಕೊಡ ತುಂಬುತ್ತಲಿರುತ್ತದೆ. ಅಂದು ಏಸುವನ್ನು ದೈಹಿಕವಾಗಿ ಶಿಲುಬೆಗೆ ಏರಿಸಿದರೆ, ಇಂದಿನ ಅನುಯಾಯಿಗಳೆಂಬ ಅಂಧ ಭಕ್ತರ ದಂಡು ಮಾನಸಿಕವಾಗಿ ಯೇಸುವನ್ನು ಶಿಲುಬೆಗೇರಿಸಿದ್ದಾರೆ ಎಂಬ ಭಾವ ಕವಿತೆಯದ್ದಾಗಿದೆ. ವಚನಕಾರರು ಅಂತರಂಗ ಶುದ್ದಿ ಬಹಿರಂಗ ಶುದ್ದಿಯನ್ನು ಇಲ್ಲಿ ವಾಕ್ಯದ ಮೂಲಕ ನೆನಪಿಸಿಕೊಳ್ಳಬಹುದು.
ಕನ್ನಡ ಸಾಹಿತ್ಯದಲ್ಲಿ ಏಸು ಕ್ರಿಸ್ತನ ಬದುಕಿನ ಕುರಿತು ರಚಿತವಾದ ಕವಿತೆಗಳ ಕುರಿತು ಡಾ. ರಾಜೇಂದ್ರ ಕುಮಾರ್ ಕೆ ಮುದ್ನಾಳ್ ಬರಹ ನಿಮ್ಮ ಓದಿಗೆ
ಕನ್ನಡವೆಂಬ ಮರೆಗುಳಿ ಮನಸು!: ದರ್ಶನ್ ಜಯಣ್ಣ ಬರಹ
ಮಧ್ಯ ಪ್ರದೇಶದಲ್ಲಿನ ಕೆಲವು ಬುಡಕಟ್ಟುಗಳು ಕನ್ನಡಕ್ಕೆ ಬಲು ಹತ್ತಿರದ ಭಾಷೆಗಳನ್ನು ಮಾತನಾಡುತ್ತಾರೆ. ಇತ್ತೀಚೆಗೆ ಅದರ ಮೂಲ ಕರ್ನಾಟಕ ಮತ್ತು ಅವರೆಲ್ಲಾ ಎಲ್ಲೆಡೆ ಹಬ್ಬಿದ್ದ ನಮ್ಮ ಸಾಮ್ರಾಜ್ಯಗಳ ಜೀವಂತ ಮನುಷ್ಯ ಉಳಿಕೆಗಳು ಎಂಬುದು ಕಂಡು ಬಂದಿದೆ. ಮಹಾರಾಷ್ಟ್ರದ ಮರಾಠಿಯ ಕೊಂಕಣಿಯ ಬೆಳವಣಿಗೆಯಲ್ಲಿ ಕನ್ನಡದ ಭಾಷೆಗಳ ಕೊಡುಗೆಯಿದೆ, ತೆಲುಗಿಗೆ ತಮಿಳಿಗೆ ಎಷ್ಟೋ ಕೊಡು-ಕೊಳ್ಳುವ ಪ್ರಕ್ರಿಯೆಗಳಾಗಿವೆ. ಅದು ನಾವು ಉಪಯೋಗಿಸುವ ಎಷ್ಟೋ ಪದಗಳಲ್ಲಿ, ಅಕ್ಷರಗಳಲ್ಲಿ ತೋರುತ್ತದೆ.
ಕನ್ನಡ ಭಾಷೆ ಮತ್ತು ಅದರ ಬಳಕೆಯ ಕುರಿತು ದರ್ಶನ್ ಜಯಣ್ಣ ಬರಹ







