ಭಾವಸಂಯೋಗದಿಂದ ಸೃಷ್ಟಿಯಾಗುವ ‘ರಸನಿಷ್ಪತ್ತಿ’
ರಸಗಳ ಹುಟ್ಟಿಗೆ ಕಾರಣವಾದ ಸಂಗತಿಗಳು ನಾಲ್ಕು. ಅವು ಶೃಂಗಾರ, ರೌದ್ರ, ವೀರ ಮತ್ತು ಭೀಭತ್ಸಗಳು. ಇವುಗಳಲ್ಲಿ ಶೃಂಗಾರದಿಂದ ಹಾಸ್ಯವು, ರೌದ್ರದಿಂದ ಕರುಣವು, ವೀರದಿಂದ ಅದ್ಭುತವೂ, ಭೀಭತ್ಸದಿಂದ ಭಯಾನಕವು ಹುಟ್ಟುತ್ತದೆ. ಇಲ್ಲಿ ಪ್ರತಿಯೊಂದು ರಸಕ್ಕೂ ಒಂದೊಂದು ಬಣ್ಣವಿದೆ, ರಸಾಧಿಕಾರಿಗಳಾದ ದೇವತೆಗಳಿದ್ದಾರೆ. ಶೃಂಗಾರ ರಸದ ಬಣ್ಣ ಶ್ಯಾಮ, ಬಿಳಿ ಬಣ್ಣವು…”
ಗೌಜಿ ಗದ್ದಲಗಳ ನಡುವೆ ವಿವೇಕವೆಂಬ ಶ್ರುತಿ ಹಿಡಿದು…
”ಸಮಾಜವು ಯಾವುದೋ ಸಂಕಟದಲ್ಲಿ ಬೇಯುತ್ತಿರುವಾಗ ಅಥವಾ ಸಂಭ್ರಮದಲ್ಲಿ ಮುಳುಗಿರುವಾಗ, ಹುಸಿನಂಬಿಕೆಗಳ ಹಿಂದೆ ಬಿದ್ದು ಕಣ್ಕಾಪು ಕಟ್ಟಿದ ಕುದುರೆಯಂತೆ ಓಡುತ್ತಿರುವಾಗ, ವಿವೇಕದಿಂದ ವರ್ತಿಸುವ ಕೆಲವೇ ಜನರನ್ನು ನಾವು ಕಾಣುತ್ತೇವೆ. ಅಂತಹವರು, ಪ್ರವಾಹದ ಅಬ್ಬರವೇನೇ ಇರಲಿ, ತನ್ನ ಸಾಮರ್ಥ್ಯವೆಷ್ಟಿದೆಯೋ ಅದರ ಸಂಪೂರ್ಣ ವಿನಿಯೋಗದೊಂದಿಗೆ..”
ಚೌಕಟ್ಟಿನೊಳಗೆ ಕೂತ ಒಂದು ಊರಿನ ಚಿತ್ರ
ಒಂಟಿ ಪಾಲದಲ್ಲಿ, ಒಂಟಿ ಕೈತಾಂಗ ಹಿಡಿದು ದೇವರ ದಯೆಯಿಂದ ಹಳ್ಳ ಪಾಲಾಗದೆ ಇಲ್ಲಿ ತನಕ ಬಂದದ್ದೇ ವಿಶೇಷ ಅಂತ ನೆನೆದುಕೊಳ್ಳುವ ಈ ಹೊತ್ತಿನಲ್ಲಿ ಚೆಂದದ ಸೇತುವೆಯೊಂದು ನಿರ್ಮಾಣ ಆಗಿತ್ತು. ಭಯವಿಲ್ಲದೆಯೇ ಬಗ್ಗಿ ಪ್ರತಿಬಿಂಬ ನೋಡಬಹುದಿತ್ತು. ಆದರೆ ಆ ಪಾಲದ ಆಚೆ ಈಚೆ ಇದ್ದ ದೊಡ್ಡ ದೊಡ್ಡ ಮರಗಳು ಯಾಕೋ ಕಾಣೆಯಾಗಿದ್ದವು. ಆ ಎರಡು ಮರದಲ್ಲಿ ಬಂದು ಕುಳಿತುಕೊಳ್ಳುತ್ತಿದ್ದ ಹಿಂಡು ಗಿಳಿಗಳು, ಚೋರೆ ಹಕ್ಕಿಗಳು…”
ಇದು ವ್ಯಂಗ್ಯಚಿತ್ರಗಳ ಪರ್ವಕಾಲ
ಸಾಮಾಜಿಕ ಜಾಲತಾಣಗಳ ಅವಕಾಶಗಳು ಲಭ್ಯವಿರುವ ಈ ಸಂದರ್ಭದಲ್ಲಿ ವ್ಯಂಗ್ಯಚಿತ್ರಗಳು ಬಹುಸಂಖ್ಯೆಯಲ್ಲಿ ನೋಡಲು ಸಿಗುತ್ತಿವೆ. ವ್ಯಂಗ್ಯಚಿತ್ರಕಾರರ ಮೇಲೆ ದಾಳಿಗಳು ನಡೆದಾಗ, ಮತ್ತೆ ಚಿತ್ರಗಳನ್ನು ಬರೆಯುವ ಮೂಲಕವೇ ಅವರು ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ತಮ್ಮನ್ನು ಟೀಕಿಸಿದವರನ್ನು ಬಗ್ಗುಬಡಿಯಬೇಕು ಎಂಬ ಆಶಯ, ಸುಶಿಕ್ಷಿತ ವರ್ಗದಲ್ಲಿಯೇ…”
ವಿಲಾಸಿನಿ ನಾಟ್ಯ: ದೇವರೊಂದಿಗಿನ ಸಾಂಗತ್ಯ
ಓರ್ವ ಸೇವಾಕರ್ತೆ ದೇವಾಲಯದಲ್ಲಿದ್ದು ಏನೆಲ್ಲಾ ಕೈಂಕರ್ಯಗಳನ್ನು ಮಾಡಬಹುದೋ, ಅವೆಲ್ಲವನ್ನೂ ನೃತ್ಯದ ಹೆಜ್ಜೆಗಳ ಮೂಲಕವೇ ಪ್ರಸ್ತುತಪಡಿಸುವುದನ್ನು ವಿಲಾಸಿನಿ ನಾಟ್ಯ ಪ್ರಸ್ತುತಿಯಲ್ಲಿ ನಾವು ಗಮನಿಸಬಹುದು. ಪ್ರಾತಃಕಾಲದ ಕೈಂಕರ್ಯಗಳಿಂದ ಹಿಡಿದು, ದಿನವೊಂದರಲ್ಲಿ ಸಲ್ಲುವ ಎಲ್ಲ ನೃತ್ಯಸೇವೆಗಳು ವಿಲಾಸಿನಿ ನಾಟ್ಯದ ಬಂಧಗಳಾಗಿವೆ. – ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರು ಬರೆದ ಪರಿಚಯಾತ್ಮಕ ಲೇಖನ ಇಲ್ಲಿದೆ…
ʻಲೋಕ ಸಿನಿಮಾ ಟಾಕೀಸ್ʼನಲ್ಲಿ ಕೊಲಂಬಿಯದ ʻಮರಿಯಾ ಫುಲ್ ಆಫ್ ಗ್ರೇಸ್ʼ ಸಿನಿಮಾ
“ಆ ವೇಳೆಗಾಗಲೇ ಅವಳಿಗೆ ತಾನು ಗರ್ಭಿಣಿ ಎನ್ನುವುದರ ಅರಿವಾಗಿರುತ್ತದೆ. ಆದರೆ ಅವಳ ಪ್ರೇಮಿ ಎನ್ನಿಸಿಕೊಂಡವನು ಅವಳೊಡನೆ ನಡೆದುಕೊಳ್ಳುವ ರೀತಿಯಿಂದ ಇವನೊಬ್ಬ ಮನುಷ್ಯನೇ ಎಂದು ಅವಳೇಕೆ, ಎಂಥವರಿಗೂ ಅನಿಸುತ್ತದೆ.” ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್’ನಲ್ಲಿ ಕೊಲಂಬಿಯಾದ ಮರಿಯಾ ಫುಲ್ ಆಫ್ ಗ್ರೇಸ್ʼ ಸಿನಿಮಾದ ವಿಶ್ಲೇಷಣೆ
ಪತ್ರಕರ್ತರ ಸೃಜನಶೀಲ ಬರವಣಿಗೆಗೆ ಪತ್ರಿಕೋದ್ಯಮ ತೊಡಕೆ?
ಪತ್ರಿಕೆಯೊಂದರಲ್ಲಿ ಕೆಲಸ ಮಾಡುವಾಗ, ಸಾಹಿತ್ಯಾಸಕ್ತಿ ಹೊಂದಿರುವ ವ್ಯಕ್ತಿಗೆ, ತಾನು ಬರೆದ ಸೃಜನಶೀಲ ಬರಹಗಳನ್ನು ಇತರ ಪತ್ರಿಕೆಗಳಿಗೆ ಕಳುಹಿಸಿ, ಪ್ರಕಟಿಸುವ, ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಸಾಮಾನ್ಯವಾಗಿ ಇರುವುದಿಲ್ಲ. ಕೆಲಸ ಮಾಡುತ್ತಿರುವ ಪತ್ರಿಕೆಗಳಲ್ಲಿಯೂ ಅವಕಾಶಗಳು ಬಹಳ ಸೀಮಿತ. ಡಿಜಿಟಲ್ ಲೋಕದತ್ತ ದಾಪುಗಾಲಿಡುತ್ತಿರುವ…”
ಏನೂ ಆಗದೆಯೂ ಎಲ್ಲವೂ ಆಗಿದ್ದ ಈ ಹುಡುಗ
“‘ನಾತಿಚರಾಮಿ’ ಗೆ ಬರೆಯುವಾಗ ಸಹ ಸುರೇಶನ ಪಾತ್ರದಲ್ಲಿ ವಿಜಯ್ ಇರಬಹುದು ಎನ್ನುವ ಕಲ್ಪನೆ ನನಗಿರಲಿಲ್ಲ. ನಂತರ ಆ ಪಾತ್ರವನ್ನು ವಿಜಯ್ ನಿರ್ವಹಿಸುವರು ಎಂದಾಗ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನ್ನಲ್ಲಿ ಸ್ವಲ್ಪ ಅನುಮಾನವೇ ಇತ್ತು. ಏಕೆಂದರೆ ವಿಜಯ್ರನ್ನು ಸಾಫ್ಟ್ ಸಾಫ್ಟ್ ಪಾತ್ರಗಳಲ್ಲಿ ಕಲ್ಪಿಸಿಕೊಂಡಷ್ಟು ಸುಲಭವಾಗಿ ಗ್ರೇ ಶೇಡ್ ಇರುವ ಸುರೇಶನ ಪಾತ್ರದಲ್ಲಿ ಕಲ್ಪಿಸಿಕೊಳ್ಳುವುದು ನನಗೆ ಕಷ್ಟವಾಗುತ್ತಿತ್ತು. ಆದರೆ ಚಿತ್ರದ ಮೊದಲ ಪ್ರತಿ…”
ಎಷ್ಟೊಂದು ಹತ್ತಿರ ಎಷ್ಟೊಂದು ದೂರ: ಕೆವೈಎನ್ ಕಂಡಂತೆ ಸಿದ್ಧಲಿಂಗಯ್ಯ
ತುಳಿತಕ್ಕೆ ಒಳಗಾದ ಜನ ಸಮುದಾಯಗಳಲ್ಲಿ ಅರಿವಿನ ದೀಪ ಹಚ್ಚುವ, ನ್ಯಾಯಬದ್ಧವಾದ ಜೀವಿಸುವ ಹಕ್ಕುಗಳನ್ನು ಕೇಳುವ ಹೋರಾಟಗಳಿಗೆ ಅವರನ್ನು ಅಣಿಮಾಡುವ ಉದ್ದೇಶದಿಂದ ಹುಟ್ಟಿಕೊಂಡ ದಲಿತ ಸಂಘರ್ಷ ಸಮಿತಿ ಮತ್ತು ಬಂಡಾಯ ಸಾಹಿತ್ಯ ಸಂಘಟನೆಗಳನ್ನು ಮುನ್ನಡೆಸುವ ಸಾಮೂಹಿಕ ನಾಯಕತ್ವದ ಹೊಣೆಯನ್ನು ಕವಿ ಸಿದ್ಧಲಿಂಗಯ್ಯ ಅವರು ಸಮರ್ಥವಾಗಿಯೇ ನಿರ್ವಹಿಸಿದ್ದರು..”









