Advertisement

ಸರಣಿ

ಹಸೆಮಣೆಯೇರಿದ ತಾಯಿ…: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಹಸೆಮಣೆಯೇರಿದ ತಾಯಿ…: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಪದ್ಮನಾಭನ್, ಸುಮತಿ ಕೊರಳಿಗೆ ತಾಳಿ ಕಟ್ಟುತ್ತಾನೆ. ಮದುವೆ ನಡೆಸುತ್ತಿದ್ದ ಹಿರಿಯಾತ ಎದ್ದು ಕುಂಡದ ಸುತ್ತಲೂ ಏಳು ಸುತ್ತುಗಳನ್ನು ಹಾಕುವಂತೆ ಹೇಳುತ್ತಾರೆ. ಸೆಲ್ವಿ ನಿಧಾನವಾಗಿ ಹೊಟ್ಟೆಯನ್ನು ಹಿಡಿದುಕೊಂಡು ಎದ್ದುನಿಂತು ಗಂಡನ ಹಿಂದೆ ನಡೆಯುತ್ತಾಳೆ. ಸುತ್ತಲೂ ನೆರೆದಿದ್ದವರೆಲ್ಲ ಸೆಲ್ವಿಯ ಹೊಟ್ಟೆಯನ್ನೇ ನೋಡುತ್ತಾರೆ. ಸೆಲ್ವಿ ಕ್ಲಾಸ್‌ಮೇಟ್ ಸ್ವಾಮಿ ಗುಂಪು ಮತ್ತು ಹುಡುಗಿಯರ ಗುಂಪು ಬೆರಗಾಗಿ ನೋಡುತ್ತಾರೆ. ಮದುವೆ ಮುಗಿದು ಎಲ್ಲರೂ ಅವರನ್ನು ವಿಶ್ ಮಾಡಿ ಪಕ್ಕದಲ್ಲಿದ್ದ ಪೆಂಡಾಲ್ ಒಳಕ್ಕೆ ಊಟಕ್ಕೆ ಹೊರಡುತ್ತಾರೆ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿ

read more
ತಿರುವುಗಳ ಪಯಣದಲ್ಲೊಂದು ಒಲವಿನ ಬೆಳಕು: ರಾಮ್ ಪ್ರಕಾಶ್ ರೈ ಕೆ ಸರಣಿ

ತಿರುವುಗಳ ಪಯಣದಲ್ಲೊಂದು ಒಲವಿನ ಬೆಳಕು: ರಾಮ್ ಪ್ರಕಾಶ್ ರೈ ಕೆ ಸರಣಿ

ಮಣಿರತ್ನಂ ಜಾನರ್ ಎಂದು ಕರೆಯಬಹುದಾದ ಶೈಲಿಯ ಕಥಾನಕವಿದು. ಅಲೈಪಾಯುದೆ, ರೋಜಾ, ಓಕೆ ಕಣ್ಮಣಿ ತೆರನಾದ ಚಿತ್ರ. ಇಲ್ಲಿ ಅಬ್ಬರಗಳಿಲ್ಲ. ಅನುರಾಗದ ಅತೀ ಸರಳ ವಿಜೃಂಭಣೆಯಿದೆ. ಬದುಕಿನ ನೈಜ ಮಾಧುರ್ಯವಿದೆ. ವಿಷಾದವಿದೆ, ನಿರ್ವಾತವಿದೆ. ನೋವು ನಲಿವಿನ ಸ್ಯಾಂಡ್ ವಿಚ್ ಕೂಡ. ನಿರ್ದೇಶಕ ಅಶೋಕ್ ತಮ್ಮ ಮೊದಲ ಪ್ರಯತ್ನದಲ್ಲಿ ಕೆಂಪು ಹೊಳೆಯ ತಟದ ಮೇಲೆ ನಡೆದ ಚಾರಣಿಗರ ನಾಪತ್ತೆಯ ಬಗ್ಗೆ ಮಾತನಾಡಿದ್ದರು.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಕನ್ನಡದ ‘ದಿಯಾ’ ಸಿನಿಮಾದ ವಿಶ್ಲೇಷಣೆ

read more
ಚುಟುಕು ಹೇಳಿ ನಾನು ಎಲ್ಲರ ಮುಂದೆ ಚುಟುಕಾಗಿದ್ದು!!!: ಬಸವನಗೌಡ ಹೆಬ್ಬಳಗೆರೆ ಸರಣಿ

ಚುಟುಕು ಹೇಳಿ ನಾನು ಎಲ್ಲರ ಮುಂದೆ ಚುಟುಕಾಗಿದ್ದು!!!: ಬಸವನಗೌಡ ಹೆಬ್ಬಳಗೆರೆ ಸರಣಿ

ನಾನು ಹೀಗೆ ಹೇಳಿದ ನಂತರ ಎಲ್ಲರೂ ನನ್ನ ಚುಟುಕನ್ನು ಮೆಚ್ಚುತ್ತಾರೆ ಎಂದುಕೊಂಡಿದ್ದೆ. ಆದರೆ ಆಗಿದ್ದೆ ಬೇರೆ. ಸಾಹಿತ್ಯದ ಬಗ್ಗೆ ಆಸಕ್ತಿಯಿದ್ದ ಬಿಕೆಎಂ ಸರ್ ಎದುರಿಗೆ ಹೇಳಿದ್ದರೆ ಅವರು ಅದನ್ನು ಯಾವ ರೀತಿಯಾಗಿ ತೆಗೆದುಕೊಳ್ಳುತ್ತಿದ್ದರೋ ಗೊತ್ತಿಲ್ಲ. ಆದರೆ ಅವರು ನನಗೆ ಹಿಗ್ಗಾ ಮುಗ್ಗಾ ಬಯ್ದರು. ಹುಡುಗಿಯರು ಜಗತ್ತಿನಲ್ಲಿ ನಾನೇನೋ ದೊಡ್ಡ ತಪ್ಪು ಮಾಡಿದ್ದ ರೀತಿಯಲ್ಲಿ ನನ್ನನ್ನು ನೋಡಲು ಶುರು ಮಾಡಿದರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ನಾಲ್ಕನೆಯ ಕಂತು ನಿಮ್ಮ ಓದಿಗೆ

read more
ಬಣ್ಣವೆಂದರೆ….  ಕಲರ್ ಎಂದಷ್ಟೇ ಅಲ್ಲ!: ಸುಮಾವೀಣಾ ಸರಣಿ

ಬಣ್ಣವೆಂದರೆ…. ಕಲರ್ ಎಂದಷ್ಟೇ ಅಲ್ಲ!: ಸುಮಾವೀಣಾ ಸರಣಿ

ಪೂರ್ವಾಂಗನೆ ಪಶ್ಚಿಮಾಂಗನೆಗೆ ಬಣ್ಣಗಳ ಕುರಿತು ಕವಿ ಜಿ.ಎಸ್ ಎಸ್ ಹೇಳುತ್ತಾರಲ್ಲ… ಕಣ್ಣಿನಲ್ಲಿ ಕಪ್ಪು ವರ್ಣದ ಭಾಗ ಇಲ್ಲದೆ ಇದ್ದಿದ್ದರೆ ಹತ್ತಿಯ ನಡುವೆ ಕಪ್ಪು ಬೀಜಗಳು ಇಲ್ಲದೆ ಇದ್ದಿದ್ದರೆ, ಕಪ್ಪಾದ ಕತ್ತಲು ಇಲ್ಲದೆ ಇದ್ದಿದ್ದರೆ, ಕಪ್ಪು ಮೋಡ ಕವಿದು ಮಳೆ ಬಾರದೆ ಇದ್ದಿದ್ದರೆ ಮನುಷ್ಯ ಸುಖವಾಗಿ ಎಲ್ಲಿರುತ್ತಿದ್ದ? ಕಪ್ಪು ಕೇಶರಾಶಿ ಇಲ್ಲದೆ ಇದ್ದರೆ ಹೇಗೆ ಸುಂದರವಾಗಿ ಕಾಣುತ್ತಿದ್ದ? ಕಪ್ಪು ಬಣ್ಣವನ್ನು ವ್ಯಕ್ತಿತ್ವ ಗುರುತಿಸುವಲ್ಲಿ ಇರಬೇಕೇ ಹೊರತು ಬದುಕಿನ ಪರಿಭಾಷೆಗಳಲ್ಲಿ ಒಡಮೂಡುವ ಪರಿಪ್ರೇಕ್ಷಗಳಿಂದಲ್ಲ ಎನ್ನುವುದೆ ನನ್ನ ಅನಿಸಿಕೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹದಿನಾಲ್ಕನೆಯ ಬರಹ ನಿಮ್ಮ ಓದಿಗೆ

read more
ಮನೆ ಕಟ್ಟಿಸುವ ಗೋಜುಗಳು…: ಎಚ್.ಗೋಪಾಲಕೃಷ್ಣ ಸರಣಿ

ಮನೆ ಕಟ್ಟಿಸುವ ಗೋಜುಗಳು…: ಎಚ್.ಗೋಪಾಲಕೃಷ್ಣ ಸರಣಿ

ಮರದ ಪ್ರಾಬ್ಲಂ ಅಂದರೆ ಅದನ್ನು ಕೊಳ್ಳುವ ಮರದ ಅಂಗಡಿಯಲ್ಲಿ ಅದನ್ನು ಕತ್ತರಿಸುವ ಮತ್ತು ಅದನ್ನು ಸಾಗಿಸುವ ಒಂದು ದೊಡ್ಡ ತಲೆನೋವು ನಿವಾರಣೆ ಈ ಒಂದು ನಡೆಯಿಂದ ಅಂದರೆ ಸಿಂಗಲ್ ಸ್ಟ್ರೋಕ್‌ನಿಂದ ಆಗಿತ್ತು. ಆಗಿನ ಸಂದರ್ಭದಲ್ಲಿ ಮನೆಯ ಮರ ಮುಟ್ಟುಗಳ ವ್ಯಾಪಾರ ಹೇಗೆ ನಡೆಯುತ್ತಿತ್ತು ಎಂಬುದರ ಒಂದು ಕಿರು ಪರಿಚಯ ನಿಮಗೆ ಮಾಡಲೇ ಬೇಕು, ಕಾರಣ ಎಂತಹ ಮ್ಯಾಥ ಮಟಿಕ್ಸ್ ಜೀನಿಯಸ್‌ಗಳೂ ಹೇಗೆ ತಲೆಕೆಟ್ಟು ಗಬ್ಬೆದ್ದು ಹೋಗುತ್ತಾರೆ ಎಂದು ಒಂದು ಅರಿವು ಮೂಡಬೇಕು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ತಾರನೆಯ ಕಂತು

read more
ಭವ್ಯ ಟಿ.ಎಸ್. ಹೊಸ ಸರಣಿ “ಮಲೆನಾಡಿನ ಹಾಡು-ಪಾಡು” ಶುರು

ಭವ್ಯ ಟಿ.ಎಸ್. ಹೊಸ ಸರಣಿ “ಮಲೆನಾಡಿನ ಹಾಡು-ಪಾಡು” ಶುರು

ದಟ್ಟವಾಗಿ ಹಬ್ಬಿರುವ ಕಾಡಿನ ಹಸಿರ ನಡುವೆ ಸಂಚರಿಸುತ್ತಿರುವಾಗ ಏನೋ ಶಬ್ದ ಕೇಳಿ ಬೆಚ್ಚಿದಳು. ಅಲ್ವೇ…ಇಲ್ಲಿ ಕಾಡುಪ್ರಾಣಿಗಳಿರೋದಿಲ್ವ?? ಆಶ್ಚರ್ಯದಿಂದ ಕೇಳಿದಳು. ಇವೆ. ಆದರೆ ಅಷ್ಟೊಂದೇನೂ ಇಲ್ಲ ಅಂದೆ. ಆದರೂ ಅವಳಿಗೆ ಭಯ. ಅದು ಹೇಗೆ ನೀವೆಲ್ಲಾ ಈ ಒಂಟಿಮನೆಗಳಲ್ಲಿ ನಿರ್ಭೀತಿಯಿಂದ ಇರುತ್ತೀರಿ. ನಮ್ಮ ಕಡೆ ಮನೆಗಳೆಲ್ಲಾ ಒತ್ತೊತ್ತಾಗಿರುತ್ತವೆ. ಸುತ್ತಮುತ್ತ ಜನರಿರುತ್ತಾರೆ. ನಿಮ್ಮ ಕಡೆ ಜನ ತುಂಬಾ ಧೈರ್ಯವಂತರು.. ಅಂತ ಮೆಚ್ಚುಗೆ ವ್ಯಕ್ತಪಡಿಸಿದಳು. ನಾನು ಏನಾದರೂ ಇಲ್ಲಿ ಇದ್ದಿದ್ದರೆ ಎಲ್ಲಿ ಹುಲಿ ಬಂತೋ, ಕರಡಿ ಬಂತೋ ಎಂದು ಹೆದರಿ ಹೆದರಿ ಸಾಯುತ್ತಿದ್ದೆ… ಅಂದಳು. ಇಬ್ಬರೂ ನಗುತ್ತಾ ಸಾಗಿದೆವು.
ಭವ್ಯ ಟಿ.ಎಸ್. ಹೊಸ ಸರಣಿ “ಮಲೆನಾಡಿನ ಹಾಡು-ಪಾಡು” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ

read more
ನಗುವಿನ ನಾಡು ಥೈಲ್ಯಾಂಡ್‌: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ನಗುವಿನ ನಾಡು ಥೈಲ್ಯಾಂಡ್‌: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಆನೆಯನ್ನು ಕೇವಲ ಒಂದು ಪ್ರಾಣಿಯಾಗಿ ಪರಿಭಾವಿಸಿಕೊಳ್ಳದೆ ಅದನ್ನು ಪೂಜನೀಯ ರೀತಿಯಲ್ಲಿ ಕಂಡ ದೇಶ ಥೈಲ್ಯಾಂಡ್. ಇಲ್ಲಿನ ಸಂಸ್ಕೃತಿ ಸಂಪ್ರದಾಯಗಳಲ್ಲಿ ಆನೆಗೆ ವಿಶೇಷವಾದ ಮಹತ್ವವಿದೆ. ಆನೆ ಇಲ್ಲಿನ ರಾಷ್ಟ್ರೀಯ ಪ್ರಾಣಿ ಎನಿಸಿಕೊಂಡಿದೆ. ಆನೆಗಳನ್ನು ಪೂಜಿಸುವ ವಿಶಿಷ್ಟ ಸಂಪ್ರದಾಯ ಇಲ್ಲಿಯದ್ದು. ಆನೆಯ ಅನೇಕ ಚಿತ್ರಗಳನ್ನು, ಕಲಾಕೃತಿಗಳನ್ನು ಇಲ್ಲಿ ಕಾಣಬಹುದು. 1917ನೇ ಇಸವಿಯವರೆಗೆ ಥೈಲ್ಯಾಂಡ್‌ನ ರಾಷ್ಟ್ರಧ್ವಜದಲ್ಲಿಯೂ ಸಹ ಆನೆಯ ಚಿತ್ರವನ್ನು ಕಾಣಬಹುದಾಗಿತ್ತು. ಉಳಿದೆಲ್ಲಾ ಆನೆಗಳಿಗಿಂತಲೂ ಶ್ವೇತವರ್ಣದ ಆನೆಗೆ ಇಲ್ಲಿ ಹೆಚ್ಚಿನ ಆದ್ಯತೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಥೈಲ್ಯಾಂಡ್ ದೇಶದ ಕುರಿತ ಬರಹ ನಿಮ್ಮ ಓದಿಗೆ

read more
ಮರೆಯಲಾಗದ ರಾಜನೀತಿಜ್ಞ ಬಿ. ಸುಬ್ಬಯ್ಯ ಶೆಟ್ಟಿ: ರಂಜಾನ್ ದರ್ಗಾ ಸರಣಿ

ಮರೆಯಲಾಗದ ರಾಜನೀತಿಜ್ಞ ಬಿ. ಸುಬ್ಬಯ್ಯ ಶೆಟ್ಟಿ: ರಂಜಾನ್ ದರ್ಗಾ ಸರಣಿ

ಬಾಕ್ರಬೈಲು ಸುಬ್ಬಯ್ಯ ಶೆಟ್ಟಿ ಅವರು 1972-1977 ಮತ್ತು 1978-1983 ಈ ಎರಡು ಅವಧಿಯಲ್ಲಿ ಸುರತ್ಕಲ್ ಶಾಸಕರಾಗಿದ್ದರು. ದೇವರಾಜ ಅರಸು ಅವರ ಮಂತ್ರಿಮಂಡಲದಲ್ಲಿ ಭೂಸುಧಾರಣಾ ಸಚಿವರಾದ ನಂತರ ವಾರ್ತಾ, ಇಂಧನ ಮತ್ತು ಶಿಕ್ಷಣ ಸಚಿವರಾಗಿ ಸೇವೆಸಲ್ಲಿಸಿದರು. ಶಿಕ್ಷಣದಲ್ಲಿಯೂ ಸುಧಾರಣೆ ತಂದರು. ರಾಜ್ಯದಲ್ಲಿ ಇಷ್ಟೊಂದು ಎಂಜಿನಿಯರಿಂಗ್ ಕಾಲೇಜುಗಳಾಗಲಿಕ್ಕೂ ಅವರೇ ಕಾರಣರು. ಕರ್ನಾಟಕದ ಎಲ್ಲ ಹೈಸ್ಕೂಲ್‌ಗಳಲ್ಲಿ ಮಹಿಳಾ ಕರಾಟೆ ಪಟುಗಳ ಮೂಲಕ ಹೆಣ್ಣುಮಕ್ಕಳಿಗೆ ಕರಾಟೆ ಕಲಿಸುವ ಕನಸನ್ನು ಹೊಂದಿದ್ದ ಅವರು ಆ ಕುರಿತು ಯೋಜನೆ ರೂಪಿಸಿದ್ದರು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

read more
ಸಾವಕಾಶವಾಗಿ ಎಲ್ಲವನ್ನೂ ಹತ್ತಿರದಿಂದ ನೋಡುವ ಕವಿ: ಎಸ್. ಜಯಶ್ರೀನಿವಾಸ ರಾವ್ ಸರಣಿ

ಸಾವಕಾಶವಾಗಿ ಎಲ್ಲವನ್ನೂ ಹತ್ತಿರದಿಂದ ನೋಡುವ ಕವಿ: ಎಸ್. ಜಯಶ್ರೀನಿವಾಸ ರಾವ್ ಸರಣಿ

ವರ್ತಮಾನದ ಕಾಲದೊಳಗೆ ಇಣುಕಿ ನೋಡುವ, ಜೀವನದ ಜಾಲದಲ್ಲಿ ತನ್ನ ಸ್ಥಾನವನ್ನು ನಿರ್ಧರಿಸಿಕೊಳ್ಳುವಂತಹ ತನ್ನ ಸರಳ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಆತುರಪಡದೆ ಸಾವಕಾಶವಾಗಿ ಎಲ್ಲವನ್ನೂ ಹತ್ತಿರದಿಂದ ನೋಡುತ್ತಾರೆ, ವಸ್ತುಗಳು, ಪರಿಕಲ್ಪನೆಗಳು, ಘಟನೆಗಳನ್ನು ಸೂಕ್ಷ್ಮವಾಗಿ ಆಲಿಸುತ್ತಾರೆ ಮತ್ತು ಪ್ರತಿಯೊಂದೂ ತನ್ನ ಜ್ಞಾನವನ್ನು ತನಗೆ ಬಹಿರಂಗಪಡಿಸಲು ಅವಕಾಶ ಮಾಡಿಕೊಡುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಬಲ್ಗೇರಿಯಾ ದೇಶದ ಕವಿ ಎಕ್ಯಾಟರೀನಾ ಯೊಸಿಫೋವಾ-ರವರ
(Ekaterina Yosifova) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

read more

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ